Fennel Seeds Benefits: ಅಜೀರ್ಣ, ತೂಕ ಇಳಿಕೆ ಜೊತೆಗೆ ಸೋಂಪು ಕಾಳುಗಳ ಉಪಯೋಗ ಎಷ್ಟೇಲ್ಲಾ ಇದೆ ಗೊತ್ತೆ?
ಬೆಂಗಳೂರು, ಜೂನ್. 22: ಭಾರತೀಯರ ಅಡುಗೆ ಮನೆಯನ್ನು ಆವರಿಸಿರುವ, ಪ್ರತಿಶತ ಎಲ್ಲಾ ಅಡುಗೆಯಲ್ಲೂ ಪರಿಮಳಕ್ಕಾಗಿ ಬಳಸುವ ಸೋಂಪು ಬೀಜಗಳು ಹಲವಾರು ಫೋಷಕಾಂಖಗಳ ಕಣಜವಾಗಿದ್ದು, ಆರೋಗ್ಯಕಾರಿಯಾಗಿದೆ. ಈ ಬೀಜಗಳು ಲೈಕೋರೈಸ್ಗೆ ಹೋಲುವ ಸಿಹಿ, ಶಕ್ತಿಯುತ ಪರಿಮಳವನ್ನು ಹೊಂದಿದ್ದು, ಸಾಮಾನ್ಯವಾಗಿ ಆಹಾರ ಬೇಗ ಜೀರ್ಣವಾಗಲಿ ಎಂದು ಬಳಸಲಾಗುತ್ತದೆ.
ಸೋಂಪು ಬೀಜಗಳನ್ನು ಸಾಂಪ್ರದಾಯಿಕವಾಗಿ ಇಟಾಲಿಯನ್ ಅಡುಗೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಆದರೂ, ಅವುಗಳನ್ನು ಎಲ್ಲಾ ರೀತಿಯ ಆಹಾರಗಳಲ್ಲಿ ಬಳಸಬಹುದು. ಇತ್ತೀಚಿನ ವರ್ಷಗಳಲ್ಲಿ, ಪಾಶ್ಚಿಮಾತ್ಯ ಸಂಸ್ಕೃತಿಯು ಪಾಕವಿಧಾನಗಳಲ್ಲಿ ಸೋಂಪು ಬೀಜಗಳ ವಿಶಿಷ್ಟ ಸ್ಥಾನ ಪಡೆದಿವೆ. ಹಾಗೇಯೇ ಭಾರತದಲ್ಲಿಯೂ ಅದರ ಬಳಕೆ ಹೆಚ್ಚಾಗಿದೆ.

ಸೋಂಪು ಕಾಳಿನ ಆರೋಗ್ಯ ಪ್ರಯೋಜನಗಳು
ಪ್ರಪಂಚದ ಅನೇಕ ಭಾಗಗಳಲ್ಲಿ, ಸೋಂಪು ಬೀಜಗಳನ್ನು ಮುಟ್ಟಿನ ಸೆಳೆತದಿಂದ ಹಿಡಿದು ಗ್ಯಾಸ್ ಪ್ರಾಬ್ಲಮ್ವರೆಗೆ ಚಿಕಿತ್ಸೆ ನೀಡಲು ಔಷಧೀಯವಾಗಿ ಬಳಸಲಾಗುತ್ತದೆ. ಇವುಗಳಲ್ಲಿ ಕೆಲವು ಬಳಕೆಗಳನ್ನು ಸಂಶೋಧನೆಯಿಂದ ದೃಢೀಕರಿಸಲಾಗಿದೆ .ಆದರೆ ಇತರ ಪ್ರಯೋಜನಗಳನ್ನು ಇನ್ನೂ ಪರೀಕ್ಷಿಸಲಾಗುತ್ತಿದೆ.
ತೂಕ ಇಳಿಕೆ
ಸೋಂಪು ಬೀಜಗಳನ್ನು ಕೆಲವೊಮ್ಮೆ ತೂಕ ಇಳಿಕೆಗೆ ಸಾಧನವಾಗಿ ಮಾರಾಟ ಮಾಡಲಾಗುತ್ತದೆ. ಸೋಂಪು ಬೀಜಗಳು ತೂಕ ಇಳಿಸಲು ಸಹಾಯ ಮಾಡುತ್ತದೆ ಎಂಬ ವಾದದಲ್ಲಿ ಸ್ವಲ್ಪ ಸತ್ಯವಿರಬಹುದು. ಏಕೆಂದರೆ, ಒಂದು ಆರಂಭಿಕ ಅಧ್ಯಯನದ ಪ್ರಕಾರ ಸೋಂಪು ಬೀಜಗಳನ್ನು ತಿನ್ನುವುದರಿಂದ ಹಸಿವು ಕಡಿಮೆ ಮಾಡುತ್ತದೆ ಮತ್ತು ಊಟದ ಸಮಯದಲ್ಲಿ ಅತಿಯಾಗಿ ತಿನ್ನುವುದನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಸೂಚಿಸುತ್ತದೆ.
ಆಹಾರದ ಬಯಕೆ ಮತ್ತು ಅತಿಯಾಗಿ ತಿನ್ನುವುದರಿಂದ ಉಂಟಾಗುವ ಬೊಜ್ಜು ಹೊಂದಿರುವ ಜನರಿಗೆ, ಸೋಂಪು ಬೀಜಗಳು ಸಹಾಯಕವಾಗಬಹುದು. ಆದರೂ ಇದರ ಪರಿಣಾಮವನ್ನು ಖಚಿತಪಡಿಸಲು ಹೆಚ್ಚಿನ ಅಧ್ಯಯನಗಳು ಅಗತ್ಯವಿದೆ. ತೂಕ ನಿರ್ವಹಣೆಗೆ ಸಹಾಯ ಮಾಡಲು ಸೋಂಪು ಬೀಜಗಳನ್ನು ಬಳಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು.

ಕ್ಯಾನ್ಸರ್ ತಡೆಗಟ್ಟುವಿಕೆ
ಸೋಂಪು ಬೀಜಗಳಲ್ಲಿ ಕಂಡುಬರುವ ಒಂದು ಪ್ರಮುಖ ಸಂಯುಕ್ತವೆಂದರೆ ಅನೆಥೋಲ್, ಇದು ಕ್ಯಾನ್ಸರ್ ವಿರುದ್ಧ ಹೋರಾಟದ ಗುಣಲಕ್ಷಣಗಳನ್ನು ಹೊಂದಿದೆ ಎಂದು ತಿಳಿದು ಬಂದಿದೆ. ಸ್ತನ ಕ್ಯಾನ್ಸರ್ ಕೋಶಗಳನ್ನು ನಾಶಮಾಡಲು ಮತ್ತು ಸ್ತನ ಮತ್ತು ಯಕೃತ್ತಿನ ಕ್ಯಾನ್ಸರ್ ಕೋಶಗಳ ಹರಡುವಿಕೆಯನ್ನು ನಿಲ್ಲಿಸಲು ಅನೆಥೋಲ್ ಪರಿಣಾಮಕಾರಿಯಾಗಿದೆ ಎಂದು ಸಂಶೋಧನೆ ತೋರಿಸಿದೆ.
ಬಾಣಂತಿ ಮಹಿಳೆಯರಲ್ಲಿ ಹಾಲು ಹೆಚ್ಚಳ
ಸ್ತನ್ಯಪಾನ ಮಾಡಿಸುವ ಮಹಿಳೆಯರು ಕೆಲವೊಮ್ಮೆ ತಮ್ಮ ಮಕ್ಕಳಿಗೆ ಬೇಕಾದಷ್ಟು ಹಾಲು ನೀಡಲು ಹೆಣಗಾಗಬೇಕಾಗುತ್ತದೆ. ಸೋಂಪು ಬೀಜಗಳು ಈ ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಸೋಂಪು ಬೀಜಗಳಲ್ಲಿ ಕಂಡುಬರುವ ಪ್ರಮುಖ ಸಂಯುಕ್ತವಾದ ಅನೆಥೋಲ್, ಈಸ್ಟ್ರೊಜೆನ್ ಅನ್ನು ಅನುಕರಿಸುವ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಹಾಲು ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಸೋಂಪು ಬೀಜಗಳನ್ನು ತಿನ್ನುವುದು ಪ್ರೊಲ್ಯಾಕ್ಟಿನ್ ಅನ್ನು ಹೆಚ್ಚಿಸುತ್ತದೆ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಪ್ರೊಲ್ಯಾಕ್ಟಿನ್ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ಹಾರ್ಮೋನ್ ಆಗಿದೆ.

ಸೋಂಪು ಬೀಜಗಳಲ್ಲಿರುವ ಪೋಷಕಾಂಶಗಳು ಹೀಗಿವೆ.
ವಿಟಮಿನ್ ಸಿ
ಕ್ಯಾಲ್ಸಿಯಂ
ಕಬ್ಬಿಣ
ಮೆಗ್ನೀಸಿಯಮ್
ಪೊಟ್ಯಾಸಿಯಮ್
ಒಂದು ಟೀ ಚಮಚ ಸೋಂಪು ಬೀಜಗಳಲ್ಲಿರುವ ಪೋಷಕಾಂಶಗಳು
ಕ್ಯಾಲೋರಿಗಳು: 7
ಕೊಬ್ಬು: 0 ಗ್ರಾಂ
ಕೊಲೆಸ್ಟ್ರಾಲ್: 0 ಮಿಗ್ರಾಂ
ಕಾರ್ಬೋಹೈಡ್ರೇಟ್ಗಳು: 1 ಗ್ರಾಂ
ಫೈಬರ್: 1 ಗ್ರಾಂ
ಸಕ್ಕರೆ: 0 ಗ್ರಾಂ
ಪ್ರೋಟೀನ್: 0.3 ಗ್ರಾಂ

ಸೋಂಪು ಬೀಜಗಳನ್ನು ಬಳಸುವುದು ಹೇಗೆ?
ಸೋಂಪು ಬೀಜಗಳು ಕಡಿಮೆ ಕ್ಯಾಲೋರಿ, ಕೊಲೆಸ್ಟ್ರಾಲ್ ಮುಕ್ತ ಪರಿಮಳವನ್ನು ಒದಗಿಸುತ್ತವೆ. ಈ ಕಾಳುಗಳು ಸಿಹಿ, ಘಮಘಮಿಸುವ ರುಚಿಯನ್ನು ಹೊಂದಿದೆ. ಸಾಂಪ್ರದಾಯಿಕವಾಗಿ ಪಲ್ಯಗಳು, ಕರಿಗಳು ಮತ್ತು ಇಟಾಲಿಯನ್ ಆಹಾರಗಳಲ್ಲಿ ಬಳಸಲಾಗುತ್ತದೆ. ನಿಮ್ಮ ಅಡುಗೆಯಲ್ಲಿ ನೀವು ಸೋಂಪು ಬೀಜಗಳನ್ನು ಬಳಸಬಹುದಾದ ಹಲವಾರು ವಿಧಾನಗಳಿವೆ.
ಸಲಾಡ್ಗಳು
ಬ್ರೆಡ್ಗಳು
ಸೂಪ್ಗಳು
ಮೇಲೋಗರಗಳು (ಕರಿಗಳು)
ಪಾಸ್ತಾ
ಸಿಹಿತಿಂಡಿಗಳು
ಪ್ರಪಂಚದ ಕೆಲವು ಭಾಗಗಳಲ್ಲಿ, ಹುರಿದ ಸೋಂಪು ಬೀಜಗಳನ್ನು ಹಾಗೆಯೇ ತಿನ್ನುವುದು ಜನಪ್ರಿಯವಾಗಿದೆ. ರುಚಿಕರವಾದ, ತೃಪ್ತಿಕರವಾದ ತಿಂಡಿ ಮಾಡಲು ಅವುಗಳನ್ನು ಸ್ವಲ್ಪ ಉಪ್ಪು ಅಥವಾ ಸಕ್ಕರೆಯೊಂದಿಗೆ ಹುರಿದು ತಿನ್ನಬಹುದು. ಎಲ್ಲಾ ಹೋಟೆಲ್ಗಳಲ್ಲಿ ಇದನ್ನು ಇಟ್ಟು ಗ್ರಾಹಕರಿಗೆ ನೀಡಲಾಗುತ್ತದೆ. ಊಟದ ನಂತರ ಜೀರ್ಣಕ್ರಿಯೆಗಾಗಿ ಇದನ್ನು ಬಳಸಲಾಗುತ್ತದೆ.
ಅತಿಯಾದ ಸೋಂಪು ಬೀಜಗಳನ್ನು ಸೇವಿಸುವುದರಿಂದ ಆಗುವ ಅಡ್ಡಪರಿಣಾಮಗಳು
ಸೋಂಪು ಬೀಜಗಳನ್ನು ಸಾಮಾನ್ಯವಾಗಿ ಊಟದ ನಂತರ ಬಾಯಿ ವಾಸನೆ ಬರದಂತೆ ಇರಲು ಸೇವಿಸಲಾಗುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಸಂಪೂರ್ಣ ಸೋಂಪು ಬೀಜಗಳು ಮಿತವಾಗಿ ತಿನ್ನಲು ಸುರಕ್ಷಿತವಾಗಿದ್ದರೂ, ಅನೇಕ ಪೂರಕಗಳು ಅಥವಾ ತೈಲಗಳಲ್ಲಿ ಕಂಡುಬರುವ ರಾಸಾಯನಿಕಗಳ ಕೇಂದ್ರೀಕೃತ ಮಟ್ಟಗಳು ಸುರಕ್ಷಿತವಾಗಿರುವುದಿಲ್ಲ.
* ತಜ್ಞರ ಪ್ರಕಾರ, ಗರ್ಭಿಣಿಯರು ಸೋಂಪು ಬೀಜಗಳನ್ನು ತಪ್ಪಿಸಬೇಕು ಏಕೆಂದರೆ ಬೀಜಗಳು ಗರ್ಭಾಶಯದ ಸಂಕೋಚನವನ್ನು ಉತ್ತೇಜಿಸುತ್ತದೆ ಮತ್ತು ಅಕಾಲಿಕ ಹೆರಿಗೆಗೆ ಕಾರಣವಾಗಬಹುದು.
* ಆಸ್ತಮಾ ಮತ್ತು ಇತರ ರೀತಿಯ ಅಲರ್ಜಿಯಿಂದ ಬಳಲುತ್ತಿರುವ ಜನರು ಸೋಂಪು ಬೀಜಗಳಿಂದ ದೂರವಿರಬೇಕು. ಆರೋಗ್ಯ ತಜ್ಞರ ಪ್ರಕಾರ, ಹೊಟ್ಟೆಯ ಸೆಳೆತ ಕೂಡ ಸೋಂಪು ಬೀಜಗಳ ಅಲರ್ಜಿಯ ಪ್ರತಿಕ್ರಿಯೆಯಾಗಿರಬಹುದು ಎಂದಿದ್ದಾರೆ.
*ಕಾಂಟ್ಯಾಕ್ಟ್ ಡರ್ಮಟೈಟಿಸ್ ಎಂಬುದು ಚರ್ಮದ ಸೋಂಕು. ಇದು ಚರ್ಮದ ಉರಿಯೂತ ಮತ್ತು ಗುಳ್ಳೆಗಳನ್ನು ಉಂಟುಮಾಡಬಹುದು. ಅತಿಯಾದ ಸೋಂಪು ಬೀಜಗಳು ಅಥವಾ ಸೋಂಪು ಬೀಜಗಳ ಎಣ್ಣೆ ಸೇವನೆಯಿಂದ ಇದು ಹೆಚ್ಚಾಗಿ ಸಂಭವಿಸುತ್ತದೆ.
* ಸೋಂಪುಗಳ ಅತಿಯಾದ ಸೇವನೆಯು ಅಕಾಲಿಕ ಥೆಲಾರ್ಚೆಗೆ ಕಾರಣವಾಗುತ್ತದೆ. ಅಂದರೆ, ಇದು ಪ್ರೌಢಾವಸ್ಥೆಯ ಆರಂಭದಲ್ಲಿ ಸ್ತನಗಳ ಬೆಳವಣಿಗೆಯನ್ನು ಸೂಚಿಸುತ್ತದೆ.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು












Click it and Unblock the Notifications