'ದೇವರ' ಲೋಕ ಈ 'ಮನೆ'; ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರಿಲ್ಲ
ಕಾಫಿನಾಡು ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, ಸಾಹಸಿಗಳ ಹಾಟ್ಸ್ಪಾಟ್ ಆಗಿದೆ. ವರ್ಷಪೂರ್ತಿ ಒಂದಿಲ್ಲೊಂದು ಕಾರಣದಿಂದ ಪ್ರವಾಸಿಗರನ್ನ ಕೈಬೀಸಿ ಕರೆಯೋ ಇಲ್ಲಿನ ಪ್ರಕೃತಿಯ ಸೊಬಗನ್ನು ಸವಿಯಲೇ ಬೇಕು. ಅದರಲ್ಲಿಯೂ ಸದಾ ಹಚ್ಚಹಸಿರಿನಿಂದ ಕಂಗೊಳಿಸುವ ಬೆಟ್ಟಗುಡ್ಡಗಳಲ್ಲಿ ಚಾರಣ ಹೋಗುವುದು ಮತ್ತಷ್ಟು ರೋಮಾಂಚಕ.
ಭೂ ಲೋಕದ ಸ್ವರ್ಗದಂತಿದೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದೇವರ ಮನೆ. ಸಮುದ್ರಮಟ್ಟದಿಂದ 2000 ಅಡಿ ಎತ್ತರದ ದೇವರಮನೆ ಗುಡ್ಡ ಪ್ರಕೃತಿಯ ಸೌಂದರ್ಯವನ್ನೆಲ್ಲಾ ತಾನೇ ಹೊದ್ದುಕೊಂಡಿರುವಂತೆ ಭಾಸವಾಗುತ್ತದೆ.
ಪ್ರವಾಸಿಗರು, ಚಾರಣ ಪ್ರಿಯರು ಆಗ್ಗಿಂದಾಗ್ಗೆ ಬಂದು ಇಲ್ಲಿನ ಪ್ರಕೃತಿ ಸೌಂದರ್ಯದಲ್ಲಿ ರಮಿಸಿ ಹೋಗುತ್ತಾರೆ. ದೇವರಮನೆ ಗ್ರಾಮದ ಐತಿಹಾಸಿಕ ಕಾಲಭೈರೇಶ್ವರ ದೇವಾಲಯದ ದರ್ಶನ ಪಡೆದ ಪ್ರವಾಸಿಗರು 20-25 ಕಿ. ಮೀ. ದೂರ ಟ್ರಕ್ಕಿಂಗ್ ಮಾಡಿ ಗುಡ್ಡವನ್ನೇರುತ್ತಾರೆ. ಮೈ ಕೊರೈಸುವ ಚಳಿ, ಜೋರಾಗಿ ಬೀಸುವ ಗಾಳಿ, ಮಂಜಿನ ಮಧ್ಯೆದಲ್ಲಿ ಸಾಗುವ ಪಯಣ ನಿಜಕ್ಕೂ ರೋಮಾಂಚನ.
ಇನ್ನೂ ಕರಾವಳಿ, ಸಕಲೇಶಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ದೇವರಮನೆ ಗುಡ್ಡದಲ್ಲೇ ನಿಂತು ವೀಕ್ಷಿಸಬಹುದು. ಇಲ್ಲಿ ವಾರದ ಎಲ್ಲ ದಿನವೂ ಚಾರಣ ಪ್ರಿಯರು ಬರುತ್ತಾರೆ. ಬೆಟ್ಟ-ಗುಡ್ಡಗಳನ್ನು ಹತ್ತಿ, ಕಾಡು-ಮೇಡು ಅಲೆದು ಟ್ರಕ್ಕಿಂಗ್ ನಡೆಸುತ್ತಾ ಸಖತ್ ಎಂಜಾಯ್ ಮಾಡುತ್ತಾರೆ.

ದಿನಂಪ್ರತಿ ಪ್ರವಾಸಿಗರ ಭೇಟಿ
ಇಲ್ಲಿಗೆ ಚಾರಣಕ್ಕೆ ಬರುವವರು ಮಲೆನಾಡಿನ ಸೌಂದರ್ಯವನ್ನು ಹಾಡಿ, ಹೊಗಳಿ, ಕಣ್ತುಂಬಿಕೊಂಡು ಹೋಗುತ್ತಾರೆ. ದಾರಿಮಧ್ಯದ ಸುತ್ತಮುತ್ತಲಿರೋ ಹಚ್ಚಹಸಿರಿನ ಬೆಟ್ಟ-ಗುಡ್ಡದ ಸೌಂದರ್ಯವನ್ನ ಸವಿಯುತ್ತಾ ಕಾಂಕ್ರಿಟ್ ನಾಡಿನಿಂದ ಬರುವ ಸಾವಿರಾರು ಪ್ರವಾಸಿಗರು ಈ ಹಸಿರು ಕಾನನದಿಂದ ಒಂದಿಷ್ಟು ರಿಲ್ಯಾಕ್ಸ್ ಆಗುತ್ತಿದ್ದಾರೆ. ಗುಡ್ಡದ ಮೇಲೇರಿ ಸೆಲ್ಫಿಗೆ ಫೋಸ್ ನೀಡುತ್ತಾ, ಕುಣಿದು ಕುಪ್ಪಳಿಸೋ ಪ್ರವಾಸಿಗರ ಸಂತಸಕ್ಕೆ ಪಾರವೇ ಇರಲ್ಲ. ವರ್ಷದ ಮೂನ್ನೂರೈವತ್ತು ದಿನವೂ ಇಲ್ಲಿಗೆ ಪ್ರವಾಸಿಗರು ಆಗಮಿಸಿ ರಮಣೀಯ ದೃಶ್ಯವನ್ನ ಕಣ್ತುಂಬಿಕೊಳ್ಳುತ್ತಾರೆ. ಸೌಂದರ್ಯವನ್ನೇ ಹೊದ್ದು ಮಲಗಿರೋ ದೇವರಮನೆ ಗುಡ್ಡವನ್ನು ವೀಕ್ಷಿಸಲು ದಿನಂಪ್ರತಿ ನೂರಾರು ಪ್ರವಾಸಿಗರು ಇತ್ತ ಹೆಜ್ಜೆ ಹಾಕುತ್ತಲೇ ಇದ್ದಾರೆ.

ಕಾಲ ಭೈರವೇಶ್ವರ ದೇವಸ್ಥಾನದ ಮೆರುಗು
ಇಳಿಯುವಾಗ, 800 ವರ್ಷಗಳಷ್ಟು ಹಳೆಯದಾದ ಸರಳವಾದ ದೇವಾಲಯವನ್ನು ಇಲ್ಲಿ ಕಾಣಬಹುದು. ಇಲ್ಲಿನ ಶ್ರೀಗಂಧದ ಸುವಾಸನೆಯು ಗಾಳಿಯಲ್ಲಿ ಉಳಿಯುತ್ತದೆ. ಇಲ್ಲಿನ ಶಿಲ್ಪಗಳು ನಿಮ್ಮನ್ನು ಮತ್ತೊಂದು ಯುಗಕ್ಕೆ ಕರೆದೊಯ್ಯುತ್ತವೆ. ಕಾಲ ಭೈರವೇಶ್ವರ ದೇವಸ್ಥಾನದ ಐತಿಹಾಸಿಕ ದೇವಾಲಯವು ಸ್ಥಳೀಯರಲ್ಲಿ ಬಹಳ ಜನಪ್ರಿಯವಾಗಿದೆ ಮತ್ತು ಅವರಲ್ಲಿ ಅನೇಕರಿಗೆ 'ಮನೆ ದೇವರು' ಆಗಿದೆ. ಪ್ರತಿ 12 ವರ್ಷಗಳಿಗೊಮ್ಮೆ ಅರಳುವ ಹಾರ್ಲು ಹೂವುಗಳನ್ನು ಇಲ್ಲಿ ನೋಡಬಹುದು.

ಛಾಯಾಗ್ರಾಯಕರಿಗೆ ಪ್ರಿಯವಾದ ಸ್ಥಳ
ದೇವರ ಮನೆ ಸಣ್ಣ ಸಣ್ಣ ಬೆಟ್ಟಗಳ ಕಣಿವೆ ಮತ್ತು ಅದರ ಹಚ್ಚ ಹಸಿರಿನ ಕಣಿವೆಗಳು ಛಾಯಾಗ್ರಾಹಕರಿಗೆ ಸ್ವರ್ಗವಾಗಿದೆ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆಟವಾಡಲು ಹತ್ತಿರವಿರುವ ನದಿ ಉತ್ತಮವಾಗಿದೆ. ದೇವರಮನೆ ಟ್ರಕ್ಕಿಂಗ್ ನಿಮಗೆ ಪ್ರಕೃತಿಯ ಹತ್ತಿರ ಮತ್ತು ಅದರ ಆಹ್ಲಾದಕರ ಅನುಭವವನ್ನು ನೀಡುತ್ತದೆ. ಚಾರಣಿಗರು ಶಿಖರಗಳನ್ನು ಏರುತ್ತಾ, ಹುಲ್ಲುಗಾವಲುಗಳಲ್ಲಿ ಅಡ್ಡಾಡುತ್ತಾ, ಗುರ್ಲಿಂಗ್ ಹೊಳೆಗಳನ್ನು ದಾಟುತ್ತಾರೆ ಮತ್ತು ಭವ್ಯವಾದ ಘಟ್ಟಗಳನ್ನು ವೀಕ್ಷಿಸುತ್ತಾರೆ. ಬೇಸಿಗೆಯಲ್ಲಿ ಈ ಪ್ರದೇಶವು ಹಸಿರಾಗಿರುತ್ತದೆ.

ಟ್ರಕ್ಕಿಂಗ್ ಮಾಡುವುದಕ್ಕೆ ಹೇಳಿ ಮಾಡಿಸಿದ ಸ್ಥಳ
ದೇವರಮನೆ ಆರಂಭಿಕ ಮತ್ತು ಹಾರ್ಡ್ಕೋರ್ ಚಾರಣಿಗರಿಗೆ ಸೂಕ್ತವಾದ ಚಾರಣ ತಾಣವಾಗಿದೆ. ಇಲ್ಲಿ ಟ್ರಕ್ಕಿಂಗ್ಗೆ ಹಲವಾರು ಬೆಟ್ಟಗಳಿವೆ, ಎತ್ತಿನಾ ಭುಜ - ಬುಲ್ಸ್ ಹಂಪ್-ಬ್ಯಾಕ್, ಇದನ್ನು ಶಿಶಿಲಾ ಗುಡ್ಡ ಎಂದೂ ಕರೆಯುತ್ತಾರೆ. ಈ ಪ್ರದೇಶದ ಉಳಿದ ಶಿಖರಗಳ ಮೇಲೆ ಗೋಪುರಗಳಿವೆ. 3000 ಅಡಿ ಎತ್ತರದಿಂದ, ಕೆಳಗೆ ಹರಿಯುವ ನದಿಯ ಸದ್ದನ್ನು ಕೇಳಿಸಬಹುದು. ಪ್ರಸಿದ್ಧ ಕಪಿಲಾ ಮೀನುಗಾರಿಕೆ ಶಿಬಿರವು ದೇವರಮನೆಯಿಂದ ಸುಮಾರು 15 ಕಿ.ಮೀ ದೂರದಲ್ಲಿದೆ.
ಪ್ರವಾಸ ಪ್ರಿಯರಿಗೆ ನೆಚ್ಚಿನ ತಾಣವಾಗಿರುವ ದೇವರಮನೆ ಮೂಡಿಗೆರೆಯಿಂದ 25 ಕಿ.ಮೀ ದೂರದಲ್ಲಿದೆ ಮತ್ತು ಇದರ ಸುತ್ತಲೂ ಅನೇಕ ಕಾಫಿ ತೋಟಗಳಿವೆ. ಇದು ಬೆಂಗಳೂರಿಗೆ 259 ಕಿಮೀ, ಚಿಕ್ಕಮಗಳೂರುನಿಂದ (30 ಕಿಮೀ, ಹಾಸನದಿಂದ 62 ಕಿಮೀ, ಮಂಗಳೂರುನಿಂದ 124 ಕಿಮೀ ಹಾಗೂ ಮೈಸೂರಿನಿಂದ 149 ಕಿಮೀ ಇದೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications