ಕ್ಯಾನ್ಸರ್ಪೀಡಿತ ತಾಯಿ, ಪವರ್ ಲಿಫ್ಟಿಂಗ್ನಲ್ಲಿ ಬೆಳ್ಳಿ ಗೆದ್ದ ಮಗಳು
ಹೈದರಾಬಾದ್, ಸೆಪ್ಟೆಂಬರ್ 15: ಹೈದರಾಬಾದ್ ನ 22 ವರ್ಷದ ಯುವತಿ ಭಾಗ್ಯಲಕ್ಷ್ಮಿ ವೈಷ್ಣವ್ ಅವರು ಟರ್ಕಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ವಿಶ್ವ ಕ್ಲಾಸಿಕ್ ಪವರ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಗೆದ್ದಿದ್ದಾರೆ.
ಭಾಗ್ಯಲಕ್ಷ್ಮಿ ಬಡ ಕುಟುಂಬದಿಂದ ಬಂದವರು. ತಂದೆ ಪ್ಲೈವುಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ ಮತ್ತು ತಾಯಿ ಗೃಹಿಣಿ. ಈ ತಾಯಿಯೇ ಈಗ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಅವರು 2015 ರಲ್ಲಿ ತನ್ನ ಸಹೋದರನನ್ನು ರಕ್ತದ ಕ್ಯಾನ್ಸರ್ನಿಂದ ಕಳೆದುಕೊಂಡಿದ್ದಾರೆ. ಕುಟುಂಬದಲ್ಲಿ ಅಪಾರ ನೋವು ದುಃಖ ಇದ್ದರೂ ಭಾಗಲಕ್ಷ್ಮೀ ಮಾತ್ರ ಹಿಡಿದ ಗುರಿ ಬಿಡದೆ ಕ್ರೀಡೆಯಲ್ಲಿ ಸಾಧನೆ ಮಾಡಿದ್ದಾರೆ.
ಎಎನ್ಐ ಜೊತೆ ಮಾತನಾಡಿದ ಭಾಗ್ಯಲಕ್ಷ್ಮಿ ತಮ್ಮ ಪ್ರಯಾಣದ ಕಥೆಯನ್ನು ವಿವರಿಸಿದ್ದಾರೆ. ಹೈದರಾಬಾದ್ನ ಎಲ್ಬಿ ಸ್ಟೇಡಿಯಂನಲ್ಲಿ ತರಬೇತಿಯಿಂದ ನನ್ನ ಪ್ರಯಾಣ ಪ್ರಾರಂಭವಾಯಿತು. ಬಳಿಕ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದರು. ಮುಂದೆ ರಾಷ್ಟ್ರಮಟ್ಟದಲ್ಲಿ ಆಡುವ ಅವಕಾಶ ಸಿಕ್ಕಿತು. ನಾನು ಪದಕ ಪಡೆದಾಗ ನಾನು ಮೊದಲು ಯೋಚಿಸಿದ್ದು ಪೋಷಕರ ಬಗ್ಗೆ. ನಾನು ವೀಡಿಯೊ ಕಾಲ್ ಮಾಡಿದಾಗ ನನ್ನ ತಾಯಿ ಸಂತೋಷದಿಂದ ಅಳುತ್ತಿದ್ದರು ಎಂದರು.

ತಾಯಿಗೆ ಸ್ತನ ಕ್ಯಾನ್ಸರ್ ಇತ್ತು
ನನ್ನ ತಂದೆ ಪ್ಲೈವುಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ ಮತ್ತು ತಾಯಿ ಗೃಹಿಣಿಯಾಗಿದ್ದಾರೆ. ನನ್ನ ತಂದೆ ಸ್ವಂತ ವ್ಯಾಪಾರ ಮಾಡುತ್ತಿದ್ದರು. ಆದರೆ ಅದು ನಷ್ಟಕ್ಕೆ ಒಳಗಾಯಿತು. ನಾವು ಮೂವರು ಸಹೋದರಿಯರು ಮತ್ತು ಒಬ್ಬ ಸಹೋದರ. ನನ್ನ ಸಹೋದರನಿಗೆ ಬ್ಲಡ್ ಕ್ಯಾನ್ಸರ್ ಇತ್ತು. ಹೀಗಾಗಿ ಅವನು 2015 ರಲ್ಲಿ ನಿಧನರಾದನು. ನನ್ನ ತಾಯಿಗೂ ಸ್ತನ ಕ್ಯಾನ್ಸರ್ ಇತ್ತು. ಆದರೆ ಅವರು ಈಗ ಚೆನ್ನಾಗಿದ್ದಾರೆ. ಅವರು ಕ್ಯಾನ್ಸರ್ ಅನ್ನು ಜಯಿಸುತ್ತಿದ್ದಾರೆ. ನನ್ನ ತಂದೆಯ ವ್ಯವಹಾರ ದೊಡ್ಡ ನಷ್ಟ ಅನುಭವಿಸಿದ್ದರಿಂದ ಅವರು ಪ್ಲೈವುಡ್ ಅಂಗಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ನಾವು ಆರ್ಥಿಕವಾಗಿ ಸಾಕಷ್ಟು ನಷ್ಟವನ್ನು ಅನುಭವಿಸಿದ್ದೇವೆ. ಆದರೆ ನನಗೆ ಮಾನಸಿಕವಾಗಿ ನಮ್ಮ ಕುಟುಂಬದಿಂದ ಉತ್ತಮ ಬೆಂಬಲವಿದೆ ಎಂದು ಅವರು ಹೇಳಿದರು.

ನಾವು ನಮ್ಮ ತಾಯಿಗಾಗಿ ಬದುಕುತ್ತೇವೆ
ಭಾಗ್ಯಲಕ್ಷ್ಮಿ ಅವರ ಆರ್ಥಿಕ ಸ್ಥಿತಿ ಹದಗೆಟ್ಟ ಕಾರಣ ಮಂಗಳೂರಿನಲ್ಲಿ ನಡೆಯುವ ಸ್ಪರ್ಧೆಯೊಂದರಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಭಾಗವಹಿಸಲು ಹೋಗಬೇಕೆಂದು ತಂದೆಯೇ ಸಾಲ ಮಾಡಿಕೊಂಡಿದ್ದರು. ನನ್ನ ತಾಯಿಯೇ ನನಗೆ ಸ್ಪೂರ್ತಿಯಾಗಿದ್ದು, ಅವರು ತನ್ನ ರೋಗವನ್ನು ಜಯಿಸುತ್ತಾರೆ. ಅವರು ಇಲ್ಲದಿದ್ದರೆ ತನ್ನ ಹೆಣ್ಣುಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ಯೋಚಿಸುತ್ತಾಳೆ? ಹಾಗಾಗಿ ಅವಳು ನಮಗಾಗಿ ಬದುಕುತ್ತಿದ್ದಾಳೆ ಮತ್ತು ನಾನು ಅವಳಿಗಾಗಿ ಆಡುತ್ತಿದ್ದೇನೆ. ನನ್ನ ತಾಯಿ ಮತ್ತು ನನ್ನ ತಂದೆ ನನಗೆ ಸ್ಫೂರ್ತಿ. ಟರ್ಕಿಯಲ್ಲಿ ಇತರ ಇಬ್ಬರು ಆಟಗಾರರು ಆಡುತ್ತಿದ್ದಾರೆ. ಅಲ್ಲಿ ಒಬ್ಬ ವ್ಯಕ್ತಿಗೆ ಮಧುಮೇಹ ಇತ್ತು. ಗ್ರೇಟ್ ಬ್ರಿಟನ್ನ ಒಬ್ಬ ಹುಡುಗಿ ಕ್ಯಾನ್ಸರ್ ಹೊಂದಿದ್ದಳು. ಆದರೂ ಅವಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಳು ಎಂದು ಅವರು ಹೇಳಿದರು.

ಕನಸುಗಳ ಬೆನ್ನುಹತ್ತಿ ಹೋರಾಡಿ
ಭಾಗ್ಯಲಕ್ಷ್ಮಿ ಅವರು ತಮ್ಮ ತರಬೇತುದಾರರೊಂದಿಗೆ ಕಠಿಣ ತರಬೇತಿ ಪಡೆಯುತ್ತಿದ್ದು, ಸಸ್ಯಾಹಾರಿ ಆಹಾರಕ್ಕೆ ಮಾತ್ರ ಆದ್ಯತೆ ನೀಡುವುದಾಗಿ ಹೇಳಿದರು. ನನ್ನ ಕೋಚ್ ಪ್ರವೀಣ್ ಕುಮಾರ್. ನನ್ನ ಆಹಾರವು ಸಂಪೂರ್ಣವಾಗಿ ಸಸ್ಯಾಹಾರಿಯಾಗಿದೆ. ನಾನು ಒಣ ಹಣ್ಣುಗಳು, ನೆನೆಸಿದ ಒಣದ್ರಾಕ್ಷಿ, ಬಾಳೆಹಣ್ಣುಗಳು, ಹಾಲು ಮತ್ತು ಪ್ರೋಟೀನ್ ತೆಗೆದುಕೊಳ್ಳುತ್ತೇನೆ. ನಾನು ಪನೀರ್ ಕೂಡ ಊಟ ಮಾಡುತ್ತೇನೆ. ಇತರ ಹೆಣ್ಣುಮಕ್ಕಳು ತಮ್ಮ ಮಿತಿಗಳನ್ನು ಮೀರಿ ತಮ್ಮ ಜೀವನದಲ್ಲಿ ಬಯಸಿದ್ದನ್ನು ಸಾಧಿಸಲು ಮುಂದಾಗಬೇಕು. ಅದಕ್ಕಾಗಿ ಅವರ ಮಿತಿಗಳನ್ನು ಮೀರಬೇಕು. ಅವರ ಕನಸುಗಳ ಬೆನ್ನುಹತ್ತಬೇಕು ಎಂದು ಅವರು ಹೇಳಿದರು.

ಕ್ರೀಡೆಗೆ ಕಳುಹಿಸಬೇಡ ಎಂದಿದ್ದ ನೆರೆಹೊರೆಯವರು
ಭಾಗ್ಯಲಕ್ಷ್ಮಿಯ ತಂದೆ ಧನರಾಜ್ ವೈಷ್ಣವ್ ಮಾತನಾಡಿ, ತಮ್ಮ ಮಗಳು 11ನೇ ತರಗತಿಗೆ ಪ್ರವೇಶಿಸಿದಾಗಿನಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದಳು. ಮೊದಲಿಗೆ ಕರಾಟೆಗೆ ಹೋಗುತ್ತಿದ್ದ ಅವಳು ನಂತರ ಪವರ್ಲಿಫ್ಟಿಂಗ್ಗೆ ಹೋದಳು. ಕರೀಂನಗರ ಜಿಲ್ಲಾ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದಳು. ಹುಡುಗಿಯನ್ನು ಏಕೆ ಕಳುಹಿಸುತ್ತೀಯಾ?. ಎಂದು ನನ್ನ ನೆರೆಮನೆಯವರು ನನಗೆ ಹೇಳಿದಳು. ಆದರೆ ನಾನು ಅವರ ಮಾತನ್ನು ಕೇಳಲಿಲ್ಲ. ಅವಳು ಕಾಮನ್ವೆಲ್ತ್ಗೆ ಹೋಗಲು ಅವಳನ್ನು ಸಂಪೂರ್ಣವಾಗಿ ಬೆಂಬಲಿಸಿದನು. ಅಂತಾರಾಷ್ಟ್ರೀಯ ಟರ್ಕಿ ಚಾಂಪಿಯನ್ಶಿಪ್ ಗೆದ್ದಾಗ ನನಗೆ ತುಂಬಾ ಹೆಮ್ಮೆ ಅನಿಸಿತು. ನಮ್ಮ ನೆರೆಹೊರೆಯವರು ಮತ್ತು ಎಲ್ಲರೂ ತುಂಬಾ ಸಂತೋಷಪಟ್ಟರು. ಅವರು ಹಿಂತಿರುಗಿದಾಗ ಭವ್ಯವಾದ ಸ್ವಾಗತವನ್ನು ಮಾಡಲಾಯಿತು ಎಂದು ಅವರು ಹೇಳಿದರು.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications