ಲೈಂಗಿಕ ಕ್ರಿಯೆ ಮತ್ತು ಲಾಕ್ಡೌನ್: ಪ್ರಸಿದ್ದ ಕಾಂಡೋಮ್ ಕಂಪೆನಿ ಹೇಳಿದ್ದೇನು?
ಬೆಂಗಳೂರು, ಮೇ 4: ಕೊರೊನಾ ಹಾವಳಿಯಿಂದ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಕೊರೊನಾ ತಡೆಗಟ್ಟಲು ಲಾಕ್ಡೌನ್ ಒಂದೇ ಅಸ್ತ್ರವಾಗಿರುವುದರಿಂದ ಜನ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದಾರೆ.
Recommended Video
ಲಾಕ್ಡೌನ್ ಜಾರಿಯಾದ ನಂತರ ಜನರು ಸಾಮಾನ್ಯ ದಿನಗಳಿಗಿಂತ ಜೀವನ ನಡೆಸಲು ಆಗುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ವಿಚಿತ್ರ ಸಂಗತಿಯೊಂದು ಬೆಳಕಿಗೆ ಬಂದಿದೆ. ಲಾಕ್ಡೌನ್ ನಿಂದಾಗಿ ಜನ ಕಡಿಮೆ ಲೈಂಗಿಕ ಚಟುವಟಿಕೆ ನಡೆಸಿದ್ದಾರೆ ಎಂಬ ಸಂಗತಿ ಹೊರ ಬಿದ್ದಿದೆ. ಇದನ್ನು ನಾವು ಹೇಳುತ್ತಿಲ್ಲ. ಕಾಂಡೋಮ್ ತಯಾರಿಕೆಯಲ್ಲಿ ಖ್ಯಾತಿ ಗಳಿಸಿರುವ ಡುರೆಕ್ಸ ನ Reckitt Benckiser ಸಂಸ್ಥೆ ಬಹಿರಂಗಪಡಿಸಿದೆ.
ಲಾಕ್ಡೌನ್ ಜಾರಿಯಾದ ಮೇಲೆ ಜನರಿಗೆ ಲೈಂಗಿಕ ಚಟುವಟಿಕೆ ನಡೆಸಲು ಅನುಕೂಲಕರ ವಾತಾವರಣ ಸಿಕ್ಕದೇ ಇರುವುದೇ ಲೈಂಗಿಕ ಚಟುವಟಿಕೆ ಕಡಿಮೆಯಾಗಲು ಕಾರಣ ಎಂದು ಡುರೆಕ್ಸ ನ Reckitt Benckiser ಸಂಸ್ಥೆ ಬಹಿರಂಗಪಡಿಸಿದೆ.

ಸೀಮಿತ ಅವಕಾಶಗಳನ್ನು ನೀಡಿದ್ದರಿಂದ
ಲಾಕ್ಡೌನ್ ಲೈಂಗಿಕ ಚಟುವಟಿಕೆಗಳಿಗೆ ಸೀಮಿತ ಅವಕಾಶಗಳನ್ನು ನೀಡಿದ್ದರಿಂದ ಮಾರ್ಚ್ ನಿಂದ ಇಲ್ಲಿಯವರೆಗೆ ಭಾರತ, ಯುರೋಪ್ ಸೇರಿದಂತೆ ಹೆಚ್ಚಿನ ಮಾರುಕಟ್ಟೆಗಳಲ್ಲಿ ಕಾಂಡೋಮ್ ಮಾರಾಟ ಕುಸಿಯಿತು ಎಂದು ಡುರೆಕ್ಸ ನ ಎಂಡಿ ಲಕ್ಷ್ಮಣ ನರಸಿಂಹನ್ ಹೇಳಿದ್ದಾರೆ. ಲಾಕ್ಡೌನ್ನಿಂದ ಲೈಂಗಿಕ ಕ್ರಿಯೆ ನಡೆಸಬಹುದಾದ ಜೋಡಿಗಳು ಸಾಮಾನ್ಯಕ್ಕಿಂತ ಕಡಿಮೆ ಆತ್ಮೀಯರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಶೇ 50 ರಿಂದ 65 ರಷ್ಟು ಕುಸಿದಿದೆ
ಸಾಮಾನ್ಯ ದಿನಗಳಿಗಿಂತ ಕಾಂಡೋಮ್ ಮಾರಾಡ ಶೇ 50 ರಿಂದ 65 ರಷ್ಟು ಕುಸಿದಿದೆ. ಇದಕ್ಕೆ ಪ್ರಮುಖ ಕಾರಣವೇ ಲಾಕ್ಡೌನ್. ಜೋಡಿಗಳಿಗೆ ಲೈಂಗಿಕ ಕ್ರಿಯೆ ನಡೆಸಲು ಹೋಟೆಲ್, ವಸತಿ ಗೃಹಗಳು, ರೆಸಾರ್ಟ್ಗಳು ಸಿಕ್ಕದೇ ಇರುವುದು ಪ್ರಮುಖ ಕಾರಣ. ಲಾಕ್ಡೌನ್ ನಿಂದ ಎಲ್ಲವೂ ಬಂದ್ ಆಗಿರುವುದರಿಂದ ಇದು ಸಹಜವೇ ಆಗಿದೆ ಎಂದು ಲಕ್ಷ್ಮಣ ನರಸಿಂಹನ್ Tribune News ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕೊರೊನಾ ಆತ್ಮೀಯತೆಯ ನಂಟನ್ನು ಕಸಿದುಕೊಂಡಿದೆ
ಯುರೋಪ್ನಲ್ಲಿ ಲಾಕ್ಡೌನ್ ತೆರವುಗೊಳಿಸಿದ ನಂತರವೂ ಕಾಂಡೋಮ್ ಮಾರಾಟದಲ್ಲಿ ಏರುಗತಿ ಕಾಣಿಸಲಿಕ್ಕಿಲ್ಲ ಎಂಬ ಆತಂಕವನ್ನು ಡುರೆಕ್ಸ್ ಹೊರಹಾಕಿದ್ದಾರೆ. ಕೊರೊನಾ ಯುರೋಪ್ ದೇಶಗಳಲ್ಲಿ ಆತ್ಮೀಯತೆಯ ನಂಟನ್ನು ಕಸಿದುಕೊಂಡಿದೆ. ಇದರಿಂದ ಮುಂದೆ ಜನ ಆತ್ಮೀಯತೆ ನಂಟು ಕಳೆದುಕೊಳ್ಳಬಹುದು ಎಂಬುದಾಗಿ ಲಕ್ಷ್ಮಣ ನರಸಿಂಹನ್ ಹೇಳಿದ್ದಾರೆ.

ಬೆಲೆ ಕಟ್ಟಲಾಗದ ಸಂತೋಷವನ್ನೂ ಸಹ ಕಳೆದುಕೊಂಡಿದ್ದಾರೆ
ಕೊರೊನಾ ವೈರಸ್ ಗೆ ಸೂಕ್ತ ಔಷಧಿ ಕಂಡು ಹಿಡಿಯದ ಹೊರತು ಎಲ್ಲ ಕ್ಷೇತ್ರಗಳಿಗೂ ಅದರ ಬಿಸಿ ತಟ್ಟಲಿದೆ. ಲಾಕ್ಡೌನ್ ನಿಂದಾಗಿ ಜನ ಕೇವಲ ಲೈಂಗಿಕ ಕ್ರಿಯೆ ನಡೆಸುವುದನ್ನಷ್ಟೇ ಕಳೆದುಕೊಂಡಿಲ್ಲ. ಅವರ ಬೆಲೆ ಕಟ್ಟಲಾಗದ ಸಂತೋಷವನ್ನೂ ಸಹ ಕಳೆದುಕೊಂಡಿದ್ದಾರೆ. ಇದರಿಂದ ಕಲಿಯಬೇಕಾದ ಪಾಠವೂ ಸಾಕಷ್ಟಿದೆ ಎಂದು ಲಕ್ಷ್ಮಣ ನರಸಿಂಹನ್ Tribune news ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications