Pitru Paksha 2022 Pind Daan: ಪಿತೃಪಕ್ಷದಲ್ಲಿ ಹೆಣ್ಮಕ್ಕಳು ಪಿಂಡದಾನ ಮಾಡಬಹುದಾ? ಶಾಸ್ತ್ರ ಏನು ಹೇಳುತ್ತೆ?
ಸೆಪ್ಟೆಂಬರ್ 10, ನಾಳೆ ಶನಿವಾರದಿಂದ ಪಿತೃ ಪಕ್ಷ ಪ್ರಾರಂಭವಾಗುತ್ತದೆ. ಶಾಸ್ತ್ರದ ಪ್ರಕಾರ ಪ್ರತೀ ವರ್ಷವೂ ಭಾದ್ರಪದ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗೂ ಪಿತೃ ಪಕ್ಷ ಇರುತ್ತದೆ. ಅಂದರೆ 15 ದಿನಗಳವರೆಗೂ ಪಿತೃ ಪಕ್ಷ ಇರುತ್ತದೆ. ಸೆಪ್ಟೆಂಬರ್ 10ರಂದು ಶುರುವಾಗುವ ಪಿತೃ ಪಕ್ಷ ಸೆಪ್ಟೆಂಬರ್ 25ಕ್ಕೆ ಅಂತ್ಯವಾಗುತ್ತದೆ.
ಪಿತೃ ಪಕ್ಷದ ಅವಧಿಯಲ್ಲಿ ನಮ್ಮ ಮೂರು ತಲೆಮಾರಿನ ಪೂರ್ವಿಕರು ಕಾಗೆ ಅಥವಾ ಬೇರೆ ಪಕ್ಷಿ ರೂಪದಲ್ಲಿ ತಮ್ಮ ಕುಟುಂಬಗಳನ್ನು ನೋಡಲು ಬರುತ್ತಾರೆ. ಈ ಅವಧಿಯಲ್ಲಿ ಅವರಿಗೆ ಶಾಸ್ತ್ರೋಕ್ತವಾಗಿ ತರ್ಪಣ, ಪಿಂಡದಾನ, ಶ್ರಾದ್ಧ ಮಾಡಿದರೆ ಪೂರ್ವಿಕರ ಆತ್ಮಗಳಿಗೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಇದೆ. ನಾವಿಟ್ಟ ಎಡೆಯನ್ನು ಕಾಗೆಗಳು ಬಂದು ತಿಂದರೆ ನಮ್ಮ ಶ್ರಾದ್ಧ ಕಾರ್ಯ ಸಾರ್ಥಕವಾದಂತೆ ಎಂಬ ಭಾವನೆ ಇದೆ.
ನಮ್ಮ ಪೂರ್ವಿಕರ ಆತ್ಮಗಳು ಸಂತುಷ್ಟಿಗೊಂಡರೆ ನಮ್ಮ ಕುಟುಂಬಕ್ಕೆ ಸೌಖ್ಯ ಬರುತ್ತದೆ. ಪೂರ್ವಜರ ಆಶೀರ್ವಾದ ನಮಗೆ ದೊರಕುತ್ತದೆ ಎಂಬ ನಂಬಿಕೆ ಉಂಟು.

ಪಿಂಡ ದಾನ ಎಂದರೇನು?
ನಮ್ಮ ಪೂರ್ವಿಕರ ಅತ್ಮಗಳಿಗೆ ಶಾಂತಿ ಮತ್ತು ಮುಕ್ತಿ ಸಿಗುವಂತೆ ದಾನ-ದಕ್ಷಿಣೆಗಳನ್ನು ಮಾಡಲಾಗುತ್ತದೆ. ಅಕ್ಕಿ, ಬಾರ್ಲಿ ಹಿಟ್ಟು, ಕಪ್ಪು ಎಳ್ಳು ಮತ್ತು ತುಪ್ಪವನ್ನು ಮಿಶ್ರ ಮಾಡಿ ಉಂಡೆ ಮಾಡಿದರೆ ಅದು ಪಿಂಡ. ಅದನ್ನು ಪೂರ್ವಿಕರ ಆತ್ಮಗಳಿಗೆ ನೇವೇದ್ಯವಾಗಿ ಅರ್ಪಿಸುವುದೇ ಪಿಂಡದಾನ. ಅದೇ ಶ್ರಾದ್ಧ ಕರ್ಮ. ಪಿತೃಪಕ್ಷದಲ್ಲಿ ಪಿಂಡದಾನ ಬಹಳ ಮುಖ್ಯ.
ಹೆಣ್ಮಕ್ಕಳು ಪಿಂಡದಾನ ಮಾಡಬಹುದೆ?
ಶಾಸ್ತ್ರಗಳ ಪ್ರಕಾರ ಗಂಡು ಮಕ್ಕಳು ಶ್ರಾದ್ಧ ವಿಧಿ ಮಾಡಬೇಕೆಂದಿದೆ. ಪಿಂಡದಾನ ಮತ್ತು ತರ್ಪಣೆ ಆಗದಿದ್ದರೆ ನಮ್ಮ ಪೂರ್ವಿಕರ ಆತ್ಮಗಳಿಗೆ ಮುಕ್ತಿ ಸಿಗುವುದಿಲ್ಲ. ಮೃತಪಟ್ಟ ತಂದೆ ಪಿತೃಋಣವನ್ನು ನೀಗಿಸಬೇಕಾದರೆ ಗಂಡುಮಕ್ಕಳು ಪಿಂಡದಾನ ಮಾಡಬೇಕು. ಅದು ಗಂಡು ಮಕ್ಕಳ ಕರ್ತವ್ಯ ಎಂದು ಶಾಸ್ತ್ರಗಳು ಹೇಳುತ್ತವೆ.

ಆದರೆ, ಗಂಡು ಮಕ್ಕಳ ಅನುಪಸ್ಥಿತಿಯಲ್ಲಿ ಅಥವಾ ತಂದೆಯ ಮನೆಯಲ್ಲಿ ಗಂಡು ಸಂತಾನವೇ ಇಲ್ಲದಿದ್ದಲ್ಲಿ ಹೆಣ್ಮಕ್ಕಳೇ ಪಿಂಡದಾನ ಮಾಡಲು ಅವಕಾಶ ಇದೆ.
ಪಿಂಡದಾನ ವಿಧಾನ ಹೇಗೆ?
ಶ್ರಾದ್ಧವನ್ನು ಸಾಮಾನ್ಯವಾಗಿ ಮಧ್ಯಾಹ್ನದ ಅವಧಿಯಲ್ಲಿ ಮಾಡಲಾಗುತ್ತದೆ. ಶ್ರಾದ್ಧ ಮಾಡುವವರು ಬಿಳಿ ಬಟ್ಟೆಗಳನ್ನು ಧರಿಸಬೇಕು. ಪಿಂಡಗಳನ್ನು ತಯಾರಿಸಿ ಇಟ್ಟುಕೊಂಡಿರಬೇಕು. ಪಿಂಡಕ್ಕೆ ಪೂಜೆ ಮಾಡಬೇಕು. ಪೂರ್ವಿಕರನ್ನು ಸ್ಮರಿಸಿ ಪೂಜೆ ಸಲ್ಲಿಸಬೇಕು. ನಂತರ ಪಿಂಡವನ್ನು ಎತ್ತಿ ನೀರಿಗೆ ಬಿಡಬೇಕು.
(ಒನ್ಇಂಡಿಯಾ ಸುದ್ದಿ)
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications