Pitru Paksha 2022 Pind Daan: ಪಿತೃಪಕ್ಷದಲ್ಲಿ ಹೆಣ್ಮಕ್ಕಳು ಪಿಂಡದಾನ ಮಾಡಬಹುದಾ? ಶಾಸ್ತ್ರ ಏನು ಹೇಳುತ್ತೆ?
ಸೆಪ್ಟೆಂಬರ್ 10, ನಾಳೆ ಶನಿವಾರದಿಂದ ಪಿತೃ ಪಕ್ಷ ಪ್ರಾರಂಭವಾಗುತ್ತದೆ. ಶಾಸ್ತ್ರದ ಪ್ರಕಾರ ಪ್ರತೀ ವರ್ಷವೂ ಭಾದ್ರಪದ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗೂ ಪಿತೃ ಪಕ್ಷ ಇರುತ್ತದೆ. ಅಂದರೆ 15 ದಿನಗಳವರೆಗೂ ಪಿತೃ ಪಕ್ಷ ಇರುತ್ತದೆ. ಸೆಪ್ಟೆಂಬರ್ 10ರಂದು ಶುರುವಾಗುವ ಪಿತೃ ಪಕ್ಷ ಸೆಪ್ಟೆಂಬರ್ 25ಕ್ಕೆ ಅಂತ್ಯವಾಗುತ್ತದೆ.
ಪಿತೃ ಪಕ್ಷದ ಅವಧಿಯಲ್ಲಿ ನಮ್ಮ ಮೂರು ತಲೆಮಾರಿನ ಪೂರ್ವಿಕರು ಕಾಗೆ ಅಥವಾ ಬೇರೆ ಪಕ್ಷಿ ರೂಪದಲ್ಲಿ ತಮ್ಮ ಕುಟುಂಬಗಳನ್ನು ನೋಡಲು ಬರುತ್ತಾರೆ. ಈ ಅವಧಿಯಲ್ಲಿ ಅವರಿಗೆ ಶಾಸ್ತ್ರೋಕ್ತವಾಗಿ ತರ್ಪಣ, ಪಿಂಡದಾನ, ಶ್ರಾದ್ಧ ಮಾಡಿದರೆ ಪೂರ್ವಿಕರ ಆತ್ಮಗಳಿಗೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಇದೆ. ನಾವಿಟ್ಟ ಎಡೆಯನ್ನು ಕಾಗೆಗಳು ಬಂದು ತಿಂದರೆ ನಮ್ಮ ಶ್ರಾದ್ಧ ಕಾರ್ಯ ಸಾರ್ಥಕವಾದಂತೆ ಎಂಬ ಭಾವನೆ ಇದೆ.
ನಮ್ಮ ಪೂರ್ವಿಕರ ಆತ್ಮಗಳು ಸಂತುಷ್ಟಿಗೊಂಡರೆ ನಮ್ಮ ಕುಟುಂಬಕ್ಕೆ ಸೌಖ್ಯ ಬರುತ್ತದೆ. ಪೂರ್ವಜರ ಆಶೀರ್ವಾದ ನಮಗೆ ದೊರಕುತ್ತದೆ ಎಂಬ ನಂಬಿಕೆ ಉಂಟು.

ಪಿಂಡ ದಾನ ಎಂದರೇನು?
ನಮ್ಮ ಪೂರ್ವಿಕರ ಅತ್ಮಗಳಿಗೆ ಶಾಂತಿ ಮತ್ತು ಮುಕ್ತಿ ಸಿಗುವಂತೆ ದಾನ-ದಕ್ಷಿಣೆಗಳನ್ನು ಮಾಡಲಾಗುತ್ತದೆ. ಅಕ್ಕಿ, ಬಾರ್ಲಿ ಹಿಟ್ಟು, ಕಪ್ಪು ಎಳ್ಳು ಮತ್ತು ತುಪ್ಪವನ್ನು ಮಿಶ್ರ ಮಾಡಿ ಉಂಡೆ ಮಾಡಿದರೆ ಅದು ಪಿಂಡ. ಅದನ್ನು ಪೂರ್ವಿಕರ ಆತ್ಮಗಳಿಗೆ ನೇವೇದ್ಯವಾಗಿ ಅರ್ಪಿಸುವುದೇ ಪಿಂಡದಾನ. ಅದೇ ಶ್ರಾದ್ಧ ಕರ್ಮ. ಪಿತೃಪಕ್ಷದಲ್ಲಿ ಪಿಂಡದಾನ ಬಹಳ ಮುಖ್ಯ.
ಹೆಣ್ಮಕ್ಕಳು ಪಿಂಡದಾನ ಮಾಡಬಹುದೆ?
ಶಾಸ್ತ್ರಗಳ ಪ್ರಕಾರ ಗಂಡು ಮಕ್ಕಳು ಶ್ರಾದ್ಧ ವಿಧಿ ಮಾಡಬೇಕೆಂದಿದೆ. ಪಿಂಡದಾನ ಮತ್ತು ತರ್ಪಣೆ ಆಗದಿದ್ದರೆ ನಮ್ಮ ಪೂರ್ವಿಕರ ಆತ್ಮಗಳಿಗೆ ಮುಕ್ತಿ ಸಿಗುವುದಿಲ್ಲ. ಮೃತಪಟ್ಟ ತಂದೆ ಪಿತೃಋಣವನ್ನು ನೀಗಿಸಬೇಕಾದರೆ ಗಂಡುಮಕ್ಕಳು ಪಿಂಡದಾನ ಮಾಡಬೇಕು. ಅದು ಗಂಡು ಮಕ್ಕಳ ಕರ್ತವ್ಯ ಎಂದು ಶಾಸ್ತ್ರಗಳು ಹೇಳುತ್ತವೆ.

ಆದರೆ, ಗಂಡು ಮಕ್ಕಳ ಅನುಪಸ್ಥಿತಿಯಲ್ಲಿ ಅಥವಾ ತಂದೆಯ ಮನೆಯಲ್ಲಿ ಗಂಡು ಸಂತಾನವೇ ಇಲ್ಲದಿದ್ದಲ್ಲಿ ಹೆಣ್ಮಕ್ಕಳೇ ಪಿಂಡದಾನ ಮಾಡಲು ಅವಕಾಶ ಇದೆ.
ಪಿಂಡದಾನ ವಿಧಾನ ಹೇಗೆ?
ಶ್ರಾದ್ಧವನ್ನು ಸಾಮಾನ್ಯವಾಗಿ ಮಧ್ಯಾಹ್ನದ ಅವಧಿಯಲ್ಲಿ ಮಾಡಲಾಗುತ್ತದೆ. ಶ್ರಾದ್ಧ ಮಾಡುವವರು ಬಿಳಿ ಬಟ್ಟೆಗಳನ್ನು ಧರಿಸಬೇಕು. ಪಿಂಡಗಳನ್ನು ತಯಾರಿಸಿ ಇಟ್ಟುಕೊಂಡಿರಬೇಕು. ಪಿಂಡಕ್ಕೆ ಪೂಜೆ ಮಾಡಬೇಕು. ಪೂರ್ವಿಕರನ್ನು ಸ್ಮರಿಸಿ ಪೂಜೆ ಸಲ್ಲಿಸಬೇಕು. ನಂತರ ಪಿಂಡವನ್ನು ಎತ್ತಿ ನೀರಿಗೆ ಬಿಡಬೇಕು.
(ಒನ್ಇಂಡಿಯಾ ಸುದ್ದಿ)
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications