Super Buck Moon : ಜುಲೈ 13ರಂದು ಈ ವರ್ಷದ ಅತಿದೊಡ್ಡ ಸೂಪರ್ ಮೂನ್, ವಿಶೇಷತೆ
ಈ ವರ್ಷದ ಅತಿದೊಡ್ಡ ಸೂಪರ್ ಮೂನ್ ಜುಲೈ 13ರಂದು ಕಾಣಸಿಗಲಿದೆ. ವಿಶ್ವದ ಅನೇಕ ದೇಶಗಳಲ್ಲಿ ಈ ವಿಶೇಷ ವಿದ್ಯಮಾನವನ್ನು ವೀಕ್ಷಿಸಬಹುದು. ಹುಣ್ಣಿಮೆ ಚಂದ್ರನನ್ನು ದೊಡ್ಡ ಆಕಾರದಲ್ಲಿ ಕಂಡು ಕಣ್ತುಂಬಿಸಿಕೊಳ್ಳಬಹುದು.
ಮಂಗಳವಾರ ಬೆಳಗ್ಗೆಯಿಂದ ಶುಕ್ರವಾರ ಬೆಳಗ್ಗೆವರೆಗೆ ಮೂರು ದಿನಗಳ ಕಾಲ ಹುಣ್ಣಿಮೆ ಚಂದ್ರನ ಮನೋಹರ ದೃಶ್ಯವನ್ನು ಕಾಣಬಹುದು. ಭಾರತೀಯ ಕಾಲಮಾನದಲ್ಲಿ ಬುಧವಾರ ಮಧ್ಯ ರಾತ್ರಿ ಪರಿಪೂರ್ಣ ಸೂಪರ್ ಮೂನ್ ದರ್ಶನ ಆಗುತ್ತದೆ.
ಸೂಪರ್ ಮೂನ್ ಎಂದರೆ?; ಹುಣ್ಣಿಮೆ ಅಥವಾ ಪೌರ್ಣಿಮೆ ದಿನದಂದು ಭೂಮಿಯ ಒಂದು ಬದಿಯಲ್ಲಿ ಸೂರ್ಯ ಇದ್ದರೆ, ಅದಕ್ಕೆ ತದ್ವಿರುದ್ಧವಾಗಿ ಹಿಂಬದಿಯಲ್ಲಿ ಚಂದ್ರನಿರುತ್ತಾನೆ. ಅಂದರೆ ಅಂದು ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಇರುತ್ತದೆ. ಸೂರ್ಯನ ಪ್ರಕಾಶದಲ್ಲಿ ಇಡೀ ಚಂದ್ರ ಹೊಳೆಯುತ್ತಿರುವುದನ್ನು ಭೂಮಿಯಿಂದ ಕಾಣಬಹುದು.

ಪ್ರತೀ ತಿಂಗಳು ಹುಣ್ಣಿಮೆ ಬರುತ್ತದೆ. ಒಂದು ವರ್ಷದಲ್ಲಿ ಆ ದಿನದಂದು ಭೂಮಿಗೆ ಚಂದ್ರ ಅತಿ ಸಮೀಪಕ್ಕೆ ಬಂದಾಗ ಅದನ್ನು ಸೂಪರ್ ಮೂನ್ ಎನ್ನುತ್ತಾರೆ. ವರ್ಷದಲ್ಲಿ ಮೂರ್ನಾಲ್ಕು ಸೂಪರ್ ಮೂನ್ ವಿದ್ಯಮಾನ ಇದೆ. ಈ ವಾರ ಬರುವ ಸೂಪರ್ ಮೂನ್ ಅತಿ ದೊಡ್ಡದು.
ಸೂರ್ಯನನ್ನು ಭೂಮಿ ಸುತ್ತುಹಾಕಲು 365 ದಿನ ತೆಗೆದುಕೊಳ್ಳುತ್ತದೆ. ಚಂದ್ರ ಭೂಮಿಯ ಪ್ರದಕ್ಷಿಣೆಗೆ 27 ದಿನ ಬೇಕಾಗುತ್ತದೆ. ಹೀಗೆ ಸುತ್ತು ಹಾಕುವಾಗ ಭೂಮಿಗೆ ಚಂದ್ರ ಅತಿ ಸಮೀಪ ಬರುವುದು 3,63,600 ಕಿಮೀ ದೂರದಲ್ಲಿ. ಈ ಅಂತರವನ್ನು ಪೆರಿಗೀ (Perigee) ಎನ್ನುತ್ತಾರೆ. ಅತಿ ದೂರ ಎಂದರೆ 4,05,500 ಕಿಮೀ. ಅತಿ ಕಡಿಮೆ ದೂರವಾದ ಪೆರಿಗಿಯ ಶೇ. 90ರಷ್ಟು ಅಂತರಕ್ಕೆ ಹುಣ್ಣಿಮೆಯಂದು ಚಂದ್ರ ಬಂದರೆ ಅದಕ್ಕೆ ಸೂಪರ್ ಮೂನ್ ಎನ್ನುವುದು.
ಬಕ್ ಸೂಪರ್ ಮೂನ್; ಈ ಬಾರಿಯ ಸೂಪರ್ ಮೂನ್ ಅನ್ನು ಬಕ್ ಸೂಪರ್ ಮೂನ್, ಥಂಡರ್ ಸೂಪರ್ ಮೂನ್, ಹೇ ಮೂನ್, ಮೀಡ್ ಮೂನ್ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಆಯಾ ಪ್ರದೇಶಗಳ ವೈಶಿಷ್ಟ್ಯತೆಗೆ ತಕ್ಕಂತೆ ಈ ಹೆಸರು ಕೊಡಲಾಗಿದೆ. ಬಕ್ ಎಂಬುದು ಜಿಂಕೆ ಜಾತಿಯ ಕಾಡುಪ್ರಾಣಿ. ಈ ಸೂಪರ್ ಮೂನ್ ಅವಧಿಯಲ್ಲಿ ಈ ಪ್ರಾಣಿಗಳಿಗೆ ಕೊಂಬು ಬೆಳೆಯುತ್ತದಂತೆ. ಹೀಗಾಗಿ, ಇದಕ್ಕೆ ಬಕ್ ಸೂಪರ್ ಮೂನ್ ಎಂದು ಕರೆಯುತ್ತಾರೆ.

ಅಲೆಗಳ ತೀವ್ರತೆ ಹೆಚ್ಚು; ಹುಣ್ಣಿಮೆ ದಿನದಂದು ಸಮುದ್ರದ ಅಲೆಗಳು ಹೆಚ್ಚು ರಭಸದಲ್ಲಿ ಅಪ್ಪಳಿಸುವುದನ್ನು ನೀವು ನೀಡಿರಬಹುದು. ಆದರೆ, ಸೂಪರ್ ಮೂನ್ ವೇಳೆ ಈ ಅಲೆ ಇನ್ನೂ ತೀವ್ರತೆಯಲ್ಲಿ ಏಳುತ್ತದೆ. ಈ ವಾರ ಬರಲಿರುವ ಸೂಪರ್ ಮೂನ್ ಈ ವರ್ಷದ ಅತಿ ದೊಡ್ಡದು ಎನಿಸಿದ್ದು, ಸಮುದ್ರದ ಅಲೆಗಳು ಇನ್ನೂ ಹೆಚ್ಚು ತೀವ್ರತೆಯಲ್ಲಿ ಪುಟಿದೇಳುವುದನ್ನು ಕಾಣಬಹುದು. ಹೀಗಾಗಿ, ನೀವು ಈ ಹುಣ್ಣಿಮೆಯಂದು ಸಮುದ್ರದ ಬಳಿ ಹೋದರೆ ಹುಷಾರ್.
(ಒನ್ಇಂಡಿಯಾ ಸುದ್ದಿ)
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications