Get Updates
Get notified of breaking news, exclusive insights, and must-see stories!

2018: ಒನ್ಇಂಡಿಯಾ ಕನ್ನಡ ಫೇಸ್ಬುಕ್ ಟಾಪ್ ಸುದ್ದಿಗಳು

2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು, ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ) ಸಾಮಾಜಿಕ ಜಾಲ ತಾಣಗಳಲ್ಲಿ ಒನ್ಇಂಡಿಯಾ ಕನ್ನಡ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸುತ್ತಾ ಬಂದಿದೆ.

ಆಡಿಯೋ ವಿಡಿಯೋ ಸಾಧ್ಯತೆಗಳನ್ನು ತನ್ನದಾಗಿಸಿಕೊಂಡ ಮೇಲೆ ಸಿನಿಮಾ ಸುದ್ದಿ, ಸಮಾಚಾರ, ಸಂದರ್ಶನಗಳಿಗಾಗಿ ಪ್ರತ್ಯೇಕ ಯೂಟ್ಯೂಬ್ ಚಾನೆಲ್ ಕೂಡಾ ಹೊಂದಿದೆ.

ಪ್ರಮುಖ ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಅಧಿಕೃತ ತಾಣ ಎಂಬ ಮಾನ್ಯತೆ ಸಿಕ್ಕಿದೆ. 2018ರಲ್ಲಿ ಫೇಸ್ ಬುಕ್ ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ, ಓದುಗರಿಂದ ಹೆಚ್ಚು ಕಾಮೆಂಟ್ ಪಡೆದ ಪೋಸ್ಟ್ ಗಳ ಪಟ್ಟಿ ಇಲ್ಲಿದೆ.

ಕನ್ನಡದ ಅಗ್ರ ಅಂತರ್ಜಾಲ ತಾಣವಾಗಿರುವ ದಟ್ಸ್ ಕನ್ನಡ (ಒನ್ಇಂಡಿಯಾ ಕನ್ನಡ) 2000ರಿಂದ ಕಾರ್ಯನಿರ್ವಹಿಸುತ್ತಿದೆ. ವಿಳಾಸ : ಒನ್ಇಂಡಿಯಾ ಕನ್ನಡ ಸುದ್ದಿಗಳನ್ನು ಮೊಬೈಲ್ ನಲ್ಲಿ http://m.oneindia.in/kannada/ ತಾಣದಲ್ಲಿಯೂ ಪಡೆಯಬಹುದು. ನಮ್ಮ ಫೇಸ್ ಬುಕ್ ವಿಳಾಸ: https://www.facebook.com/oneindiakannada/

ಮೋದಿ ಹಾಗೂ ರಮ್ಯಾ ಟ್ವೀಟ್ ವಾರ್

ಮೋದಿ ಹಾಗೂ ರಮ್ಯಾ ಟ್ವೀಟ್ ವಾರ್

ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಬಂದ ಬಳಿಕ ಕಾಂಗ್ರೆಸ್ಸಿನ ಸಾಮಾಜಿಕ ಜಾಲ ತಾಣ ವಿಭಾಗದ ಮುಖ್ಯಸ್ಥೆ, ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರು ಪ್ರಧಾನಿ ಮೋದಿ ಅವರ ಹಳೆ ಟ್ವೀಟೊಂದನ್ನು ತಿದ್ದಿ, 'ಬಿಜೆಪಿ ಮುಕ್ತ ಭಾರತ' ಎಂದು ಟ್ವೀಟ್ ಮಾಡಿದ್ದರು.

ಈ ಫೇಸ್ ಬುಕ್ ಪೋಸ್ಟ್ 1,30,961 ಜನರನ್ನು ತಲುಪಿದ್ದು, 2.2 K ಲೈಕ್ಸ್, 529 ಕಾಮೆಂಟ್ಸ್ ಹಾಗೂ 171 ಬಾರಿ ಶೇರ್ ಆಗಿದೆ.

ಪೋಸ್ಟ್ ನೋಡಲು ಕ್ಲಿಕ್ ಮಾಡಿ

ಚಿಕ್ಕಮಗಳೂರಿನಲ್ಲಿ ಮಂಗಳಮುಖಿಯ ಸಾಧನೆ

ಚಿಕ್ಕಮಗಳೂರಿನಲ್ಲಿ ಮಂಗಳಮುಖಿಯ ಸಾಧನೆ

ಮಂಗಳಮುಖಿಯರೆಂದರೆ ಕೀಳಾಗಿ ನೋಡುವ ಸಾಮಾಜದ ಮುಂದೆ ಸ್ವಾವಲಂಬಿಯಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಚಿಕ್ಕಮಗಳೂರಿನ ಮಂಗಳಮುಖಿಯೊಬ್ಬರ ಲೇಖನವನ್ನು ಬಹುಜನ ಮೆಚ್ಚಿಕೊಂಡಿದ್ದರು.

ಈ ಫೇಸ್ ಬುಕ್ ಪೋಸ್ಟ್ 1,13,135 ಜನರನ್ನು ತಲುಪಿದ್ದು, 1.8K ಲೈಕ್ಸ್, 16 ಕಾಮೆಂಟ್ಸ್ ಹಾಗೂ 181 ಬಾರಿ ಶೇರ್ ಆಗಿದೆ.

ಪೋಸ್ಟ್ ನೋಡಲು ಕ್ಲಿಕ್ ಮಾಡಿ

ಬಿಎಂಟಿಸಿ ಬಸ್ ರೂಟ್ ನಂಬರ್ 600 ಇನ್ನಿಲ್ಲ

ಬಿಎಂಟಿಸಿ ಬಸ್ ರೂಟ್ ನಂಬರ್ 600 ಇನ್ನಿಲ್ಲ

ಬೆಂಗಳೂರು ಮಹಾನಗರದ ಅತಿ ದೊಡ್ಡ ಬಸ್ ಮಾರ್ಗಗಳಲ್ಲಿ ರೂಟ್ ನಂಬರ್ 600 ಬಸ್ ಮಾರ್ಗವು ಒಂದೆನಿಸಿತ್ತು. ಆದರೆ, ಕಾರಣಾಂತರದಿಂದ ಈ ಮಾರ್ಗದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಈ ಕುರಿತ ಈ ಫೇಸ್ ಬುಕ್ ಪೋಸ್ಟ್ 1,40,052 ಜನರನ್ನು ತಲುಪಿದ್ದು, 2K ಲೈಕ್ಸ್, 6 ಕಾಮೆಂಟ್ಸ್ ಹಾಗೂ 102 ಬಾರಿ ಶೇರ್ ಆಗಿದೆ.

ಪೋಸ್ಟ್ ನೋಡಲು ಕ್ಲಿಕ್ ಮಾಡಿ

ಹುಚ್ಚ ಎನಿಸಿಕೊಂಡಿದ್ದ ವ್ಯಕ್ತಿಗೆ ಸಿಎಂರಿಂದ ಸನ್ಮಾನ

ಹುಚ್ಚ ಎನಿಸಿಕೊಂಡಿದ್ದ ವ್ಯಕ್ತಿಗೆ ಸಿಎಂರಿಂದ ಸನ್ಮಾನ

ಊರ ಜನ ಅಂದು ಹುಚ್ಚನೆಂದು ಕರೆದಿದ್ದ ಅದೇ ವ್ಯಕ್ತಿಗೆ ಇಂದು ಸಿಎಂ ಕುಮಾರಸ್ವಾಮಿ ಅವರು ಸನ್ಮಾನ ಮಾಡಿದ್ದಾರೆ. ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾದ 'ಕನ್ನಡ ರಾಜ್ಯೋತ್ಸವ' ಪ್ರಶಸ್ತಿ ಅವರ ಮುಡಿಗೇರಿದೆ.

ಈ ಕುರಿತ ಈ ಫೇಸ್ ಬುಕ್ ಪೋಸ್ಟ್291,779 ಜನರನ್ನು ತಲುಪಿದ್ದು, 4.6K ಲೈಕ್ಸ್, 4.6 ಕಾಮೆಂಟ್ಸ್ ಹಾಗೂ 762 ಬಾರಿ ಶೇರ್ ಆಗಿದೆ.

ಪೋಸ್ಟ್ ನೋಡಲು ಕ್ಲಿಕ್ ಮಾಡಿ

ರತ್ನಖಚಿತ ಸಾಲಿಗ್ರಾಮವಾದ ಮಂತ್ರಾಕ್ಷತೆ

ರತ್ನಖಚಿತ ಸಾಲಿಗ್ರಾಮವಾದ ಮಂತ್ರಾಕ್ಷತೆ

ಎಲ್ಲರಿಗೂ ಒಲಿಯುವ ರಾಘವೇಂದ್ರ ಸ್ವಾಮಿಗಳಿಂದ ಬಾಗಲಕೋಟೆಯಲ್ಲಿ ಅಚ್ಚರಿಯ ಪವಾಡವೊಂದು ನಡೆದಿದ್ದು, ರಾಯರ ಮಂತ್ರಾಕ್ಷತೆ 10 ಸಾಲಿಗ್ರಾಮಗಳಾಗಿ ಪರಿವರ್ತನೆಯಾದ ಘಟನೆ ಜರುಗಿದೆ.

ಈ ಕುರಿತ ಈ ಫೇಸ್ ಬುಕ್ ಪೋಸ್ಟ್ 254,384 ಜನರನ್ನು ತಲುಪಿದ್ದು, 3.3K ಲೈಕ್ಸ್, 30 ಕಾಮೆಂಟ್ಸ್ ಹಾಗೂ 1000 ಬಾರಿ ಶೇರ್ ಆಗಿದೆ.

ಪೋಸ್ಟ್ ನೋಡಲು ಕ್ಲಿಕ್ ಮಾಡಿ

ಒಂದೇ ತಿಂಗಳಲ್ಲಿ ವಿಧಿಯಾಟಕ್ಕೆ ಬಲಿಯಾದ ಸ್ನೇಹಿತರು

ಒಂದೇ ತಿಂಗಳಲ್ಲಿ ವಿಧಿಯಾಟಕ್ಕೆ ಬಲಿಯಾದ ಸ್ನೇಹಿತರು

ಮಾಜಿ ಸಚಿವ ಅಂಬರೀಶ್ ಮತ್ತು ಅವರ ಆಪ್ತ ಸ್ನೇಹಿತರೊಬ್ಬರು ಕೆಲವೇ ದಿನಗಳ ಅಂತರದಲ್ಲಿ ಕಾಲನ ಕರೆಗೆ ಓಗೊಟ್ಟು ಇಹಲೋಕದ ಯಾತ್ರೆ ಮುಗಿಸಿದ್ದಾರೆ.

ಈ ಕುರಿತ ಈ ಫೇಸ್ ಬುಕ್ ಪೋಸ್ಟ್ 160,768 ಜನರನ್ನು ತಲುಪಿದ್ದು, 720 ಲೈಕ್ಸ್ ಹಾಗೂ 58 ಬಾರಿ ಶೇರ್ ಆಗಿದೆ. ಈ ಪೋಸ್ಟ್ ಬಗ್ಗೆ ತಿಳಿಯಲು ಕ್ಲಿಕ್ ಮಾಡಿ

ಅಂಬರೀಷ್ ಮೊಬೈಲಲ್ಲಿ ಸುಮಲತಾ ನಂಬರ್

ಅಂಬರೀಷ್ ಮೊಬೈಲಲ್ಲಿ ಸುಮಲತಾ ನಂಬರ್

ಪತ್ನಿ ಸುಮಲತಾ ಅವರ ಮೊಬೈಲ್ ನಂಬರ್ ಅನ್ನು ಅಂಬರೀಶ್‌ ವಿಚಿತ್ರ ಹೆಸರಿನಿಂದ ಸೇವ್ ಮಾಡಿದ್ದರು. ಅವರು ಸೇವ್ ಮಾಡಿದ್ದ ಹೆಸರೇ ಹೇಳುತ್ತಿತ್ತು ಸುಮಲತಾ ಎಡೆಗೆ ಅಂಬರೀಶ್‌ಗೆ ಯಾವ ಪರಿ ಪ್ರೀತಿ ಇತ್ತೆಂದು...

ಈ ಕುರಿತ ಈ ಫೇಸ್ ಬುಕ್ ಪೋಸ್ಟ್ 710,577 ಜನರನ್ನು ತಲುಪಿದ್ದು, 10K ಲೈಕ್ಸ್, 82 ಕಾಮೆಂಟ್ಸ್ ಹಾಗೂ 274 ಬಾರಿ ಶೇರ್ ಆಗಿದೆ. ಈ ಪೋಸ್ಟ್ ಬಗ್ಗೆ ತಿಳಿಯಲು ಕ್ಲಿಕ್ ಮಾಡಿ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯ

ಔಟಾಗದೆ ಅಚ್ಚರಿ ರೀತಿಯಲ್ಲಿ ಬಚಾವಾಗಿದ್ದ ಪ್ಯಾಟ್ ಕಮಿನ್ಸ್: ವೈರಲ್ ವಿಡಿಯೋ ಬಗ್ಗೆ ಹಾಕಿದ್ದ ಫೇಸ್ ಬುಕ್ ಪೋಸ್ಟ್ ಹೆಚ್ಚು ಸದ್ದು ಮಾಡಿತ್ತು. ಹೆಚ್ಚು ಕಾಮೆಂಟ್ ಗಳು ಬರದಿದ್ದರೂ ರೀಚ್ ಚೆನ್ನಾಗಿ ಆಗಿತ್ತು.

ಈ ಕುರಿತ ಈ ಫೇಸ್ ಬುಕ್ ಪೋಸ್ಟ್ 172,606 ಜನರನ್ನು ತಲುಪಿದ್ದು, 2.2K ಲೈಕ್ಸ್, ಹಾಗೂ 23 ಬಾರಿ ಶೇರ್ ಆಗಿದೆ. ಈ ಪೋಸ್ಟ್ ಬಗ್ಗೆ ತಿಳಿಯಲು ಕ್ಲಿಕ್ ಮಾಡಿ

ಕೇವಲ 10 ರು ಗೆ ಚಿಕಿತ್ಸೆ ನೀಡುವ ಮೈಸೂರಿನ ವೈದ್ಯ

ಕೇವಲ 10 ರು ಗೆ ಚಿಕಿತ್ಸೆ ನೀಡುವ ಮೈಸೂರಿನ ವೈದ್ಯ

ಮೈಸೂರಿನಲ್ಲೊಬ್ಬರು ಡಾಕ್ಟರ್ ಇದ್ದಾರೆ. ಅವರು ಪಡೆಯುವ ವೈದ್ಯಕೀಯ ಸಲಹಾ ಚಿಕಿತ್ಸೆ ಶುಲ್ಕ (ಕನ್ಸಲ್ಟೆನ್ಸಿ ಫೀ) 10 ರೂ ಅಷ್ಟೇ.

ಈ ಕುರಿತ ಈ ಫೇಸ್ ಬುಕ್ ಪೋಸ್ಟ್ 273,538 ಜನರನ್ನು ತಲುಪಿದ್ದು, 2.2K ಲೈಕ್ಸ್,59 ಕಾಮೆಂಟ್ಸ್ ಹಾಗೂ 1.3K ಬಾರಿ ಶೇರ್ ಆಗಿದೆ. ಈ ಪೋಸ್ಟ್ ಬಗ್ಗೆ ತಿಳಿಯಲು ಕ್ಲಿಕ್ ಮಾಡಿ

ಶಿರಡಿಗೆ ಬೆಂಗಳೂರಿನಿಂದ ವಾರದ 6 ದಿನ ವಿಮಾನ

ಶಿರಡಿಗೆ ಬೆಂಗಳೂರಿನಿಂದ ವಾರದ 6 ದಿನ ವಿಮಾನ

ಬೆಂಗಳೂರಿನಿಂದ ಶಿರಡಿ ಸಾಯಿಬಾಬಾ ದರ್ಶನಕ್ಕೆ ತೆರಳುವವರಿಗೆ ಸ್ಪೈಸ್ ಜೆಟ್ ವಿಮಾನ ಸೌಲಭ್ಯ ಒದಗಿಸುತ್ತಿದೆ. ಮಂಗಳವಾರ ಹೊರತುಪಡಿಸಿ ವಾರದ 6 ದಿನಗಳ ವಿಮಾನಯಾನ ಲಭ್ಯವಿರಲಿದೆ

ಈ ಕುರಿತ ಈ ಫೇಸ್ ಬುಕ್ ಪೋಸ್ಟ್ 332,633 ಜನರನ್ನು ತಲುಪಿದ್ದು, 3.8K ಲೈಕ್ಸ್, 56 ಕಾಮೆಂಟ್ಸ್ ಹಾಗೂ 2,296ಬಾರಿ ಶೇರ್ ಆಗಿದೆ. ಈ ಪೋಸ್ಟ್ ಬಗ್ಗೆ ತಿಳಿಯಲು ಕ್ಲಿಕ್ ಮಾಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+