ವಿಶ್ವ ಕಾವ್ಯ ದಿನ: ಮಾ. 20ರಂದು ಹರಿವು ಬುಕ್ಸ್ನಲ್ಲಿ ಕಾವ್ಯ ಚಿಂತನೆ
ಬೆಂಗಳೂರು, ಮಾರ್ಚ್ 19: ಮಾರ್ಚ್ 21 ವಿಶ್ವ ಕಾವ್ಯ ದಿನ. ಕವಿ-ಕವಿತೆಗಳ ಮೆಲುಕು, ಮಂಥನ ಹಾಗೂ ಚಿಂತನೆಗೆ ಕಿಡಿ ಹಚ್ಚುವ ದಿನ. ಕಾಲ ಬದಲಾದಂತೆ ಜಗತ್ತಿನ ಆಗುಹೋಗುಗಳ ಜೊತೆಗೆ ಸಾಮಾಜಿಕ ಸ್ವರೂಪ ಮತ್ತು ಅದರ ಸುತ್ತಲ ಸಂವೇದನೆಗಳು ಬದಲಾಗುತ್ತವೆ. ಹಾಗೆಯೇ ಕಾಲಕ್ಕೆ ತಕ್ಕ ಕಾವ್ಯಚಿಂತನೆಯೂ ರೂಪುಗೊಳ್ಳುತ್ತದೆ.
ಹಾಗಾಗಿ, ಇಂದಿನ ಕಾಲದ ಕಾವ್ಯಚಿಂತನೆಯಲ್ಲಿ ಹೊಸತಲೆಮಾರಿನ ಪಾತ್ರ ಏನು ಎಂಬ ವಿಷಯವಾಗಿ ಚರ್ಚಿಸಲು ವಿಶ್ವ ಕಾವ್ಯದಿನದ ಮುನ್ನಾ ದಿನ ಅಂದರೆ ಮಾರ್ಚ್ 20, ಭಾನುವಾರ, ಬೆಳಗ್ಗೆ 11.30ಕ್ಕೆ ವಿಶೇಷವಾದ ಕಾರ್ಯಕ್ರಮವೊಂದನ್ನು ಹರಿವು ಬುಕ್ಸ್ನಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡದ ಹಿರಿಯ ಬರಹಗಾರರು, ಕವಯತ್ರಿ ಆಗಿರುವ ಎಂ.ಆರ್. ಕಮಲಾ ಅವರು ಈ ಕಾರ್ಯಕ್ರಮದ ಕೇಂದ್ರ ಬಿಂದು. ಜೊತೆಗೆ ಪ್ರಶಸ್ತಿ ವಿಜೇತ ಯುವ ಬರಹಗಾರ, ಕವಿ ಶ್ರೀಧರ ಬನವಾಸಿ, ಹೊಸತಲೆಮಾರಿನ ಬರಹಗಾರ್ತಿ ಪೂರ್ಣಿಮಾ ಮಾಳಗಿಮನಿ ಹಾಗೂ ಬರಹಗಾರ, ಕವಿ ಡಾ. ಲಕ್ಷ್ಮಣ್ ಅವರು ಇರಲಿದ್ದಾರೆ.

"ಸಮಕಾಲೀನ ಕಾವ್ಯ ಚಿಂತನೆಯಲ್ಲಿ ಹೊಸತಲೆಮಾರಿನ ಪಾತ್ರ" ಎಂಬ ವಿಷಯದ ಕುರಿತು ಈ ನಾಲ್ಕೂ ಜನ ಮಾತನಾಡಲಿದ್ದಾರೆ. ಸಂವಾದ ನಡೆಸಲಿದ್ದಾರೆ. ಬೆಂಗಳೂರಿನ ಬಸವನಗುಡಿಯ ಡಿ.ವಿ.ಜಿ ರಸ್ತೆಯಲ್ಲಿರುವ 'ಹರಿವು ಪುಸ್ತಕ' ಮಳಿಗೆಯಲ್ಲಿ ಈ ಮಾತುಕತೆ ನಡೆಯಲಿದೆ. ತಾವೆಲ್ಲರೂ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬಹುದು.
ಏನಿದು ವಿಶ್ವ ಕಾವ್ಯ ದಿನ?
ಕಾವ್ಯ ಎಂಬುದು ಯಾವುದೇ ಭಾಷೆಯ ಕಿರೀಟವಿದ್ದಂತೆ. ಭಾಷಿಕರ ತಲ್ಲಣಗಳು, ಅನಿಸಿಕೆಗಳು ಆಗುಹೋಗುಗಳು ಒಂದು ಸುಂದರವಾದ ಪದಗುಚ್ಛಗಳ ರೂಪದಲ್ಲಿ ಹೊರಹೊಮ್ಮುವ ವಿಶಿಷ್ಟ ಪ್ರಾಕಾರವೇ ಕಾವ್ಯ. ಕಾವ್ಯ ಎಂಬುದು ಸಾಂಸ್ಕೃತಿಕ ಹಾಗೂ ಭಾಷಾ ಅಭಿವ್ಯಕ್ತಿಯ ಹಾಗೂ ಗುರುತಿನ ಒಂದು ಅಮೂಲ್ಯವಾದ ರೂಪ. ಇತಿಹಾಸದುದ್ದಕ್ಕೂ- ಪ್ರತಿ ಸಂಸ್ಕೃತಿಯಲ್ಲಿ ಮತ್ತು ಪ್ರತಿ ಖಂಡದಲ್ಲಿ- ಕಾವ್ಯವು ನಮ್ಮಲ್ಲಿರುವ ಮಾನವೀಯತೆ ಮತ್ತು ನಾವು ಹಂಚಿಕೊಳ್ಳಬಹುದಾದ ಮೌಲ್ಯಗಳ ಬಗ್ಗೆ ಮಾತನಾಡುತ್ತದೆ. ಒಂದು ಸರಳವಾದ ಕವಿತೆಗಳನ್ನು ಗಟ್ಟಿದನಿಯಾಗ ಬಲ್ಲದು, ಶಾಂತಿ ಕಾಪಾಡಬಲ್ಲದು, ಸಮಾಜದ ದಿಕ್ಕನ್ನು ಬದಲಿಸಬಲ್ಲದು.
ಇಷ್ಟೆಲ್ಲಾ ಶಕ್ತಿ ಇರುವ ಕಾವ್ಯಕ್ಕೆ ತಕ್ಕ ಗೌರವ ಕೊಡುವ ಸಲುವಾಗಿ ಯುನೆಸ್ಕೋ ಮಾರ್ಚ್ 21 ಅನ್ನು 'ವಿಶ್ವ ಕಾವ್ಯ ದಿನ' ಎಂದು ಘೋಷಿಸಿತು. 1999ರಂದು ಪ್ಯಾರಿಸ್ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಯಿತು. "ಕಾವ್ಯ ಅಭಿವ್ಯಕ್ತಿಯ ಮೂಲಕ ಭಾಷೆಯ ವೈವಿಧ್ಯತೆಯನ್ನು ಎತ್ತಿಹಿಡಿಯುವುದು ಹಾಗೂ ಅಳಿವಿನಂಚಿನಲ್ಲಿ ಇರುವ ಭಾಷೆಗಳು ಕಾವ್ಯದ ದನಿಯ ಮೂಲಕ ಹೊರ ಪ್ರಪಂಚಕ್ಕೆ ತಲುಪುವಂತೆ ನೆರವಾಗುವುದು." ಇದು ವಿಶ್ವ ಕಾವ್ಯ ದಿನದ ಮೂಲ ಉದ್ದೇಶವಾಗಿದೆ.
Recommended Video
ಕಾವ್ಯದಿನದಂದು ಕವಿತೆಗಳದ್ದೇ ಗುಂಗು, ಕವಿಗಳನ್ನು ಗುರುತಿಸುವುದು, ಕವಿತೆಗಳನ್ನು ಓದುವುದು, ಓದಿಸುವುದು, ಗೌರವಿಸುವುದು. ಕವಿ-ಕಾವ್ಯವನ್ನು ಹುರಿದುಂಬಿಸುವುದು ಹೀಗೆ ಕಾವ್ಯದ ಅಭಿವ್ಯಕ್ತಿಯನ್ನು ಹೆಚ್ಚಿಸಲು ಬೇಕಾದ ಕೆಲಸಗಳನ್ನು ಮಾಡಲಾಗುವುದು. ಜಗತ್ತನ್ನೇ ಒಗ್ಗೂಡಿಸಬಲ್ಲ ಶಕ್ತಿಯಿರುವ ಕಾವ್ಯಕ್ಕೆ ಕಾವ್ಯದಿನ ಇನ್ನಷ್ಟು ಶಕ್ತಿ ತುಂಬಲಿ.
-
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ












Click it and Unblock the Notifications