ಅಯೋಧ್ಯೆ ಐತಿಹಾಸಿಕ ತೀರ್ಪು: ಅರ್ಜಿದಾರರಿಗೆ ಸಿಹಿ-ಕಹಿ
Recommended Video
ನವದೆಹಲಿ, ನವೆಂಬರ್ 09: ಹಲವು ದಶಕಗಳ ಅಯೋಧ್ಯೆ ವಿವಾದದ ತೀರ್ಪು ಇಂದು ಪ್ರಕಟವಾಗಿದ್ದು, ಈ ತೀರ್ಪಿಗೆ ಅರ್ಜಿದಾರರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ನಿರ್ಮೋಹಿ ಅಖಾರ, ಸ್ವತಂತ್ರ ಅರ್ಜಿದಾರಿ ಇಖ್ಬಾಲ್ ಅನ್ಸಾರಿ, ಹಿಂದು ಮಹಾಸಭಾ ತೀರ್ಪನ್ನು ಸ್ವಾಗತಿಸಿದ್ದರೆ, ಸುನ್ನಿ ವಕ್ಫ್ ಬೋರ್ಡ್, ಸುಪ್ರೀಂ ತೀರ್ಪಿಗೆ ಗೌರವ ನೀಡುತ್ತೇವೆ. ಆದರೆ ತೀರ್ಪಿನ ಬಗ್ಗೆ ತೃಪ್ತಿಯಿಲ್ಲ ಎಂದಿದೆ.
ತೀರ್ಪಿನಲ್ಲಿ ರಾಮಜನ್ಮಭೂಮಿ ವಿವಾದಿತ ಜಾಗವನ್ನು ರಾಮಜನ್ಮಭೂಮಿ ನ್ಯಾಸ ಟ್ರಸ್ಟ್ ಗೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಸುನ್ನಿ ವಕ್ಫ್ ಬೋರ್ಡಿಗೆ ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಪರ್ಯಾಯ ಜಮೀನು ನೀಡುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.
ಈ ಕುರಿತು ಅರ್ಜಿದಾರರು ನೀಡಿದ ಪ್ರತಿಕ್ರಿಯೆ ಇಲ್ಲಿದೆ.

ಇಕ್ಬಾಲ್ ಅನ್ಸಾರಿ
"ಸುಪ್ರೀಂ ಕೋರ್ಟ್ ಕೊನೆಗೂ ಒಂದು ತೀರ್ಪು ನೀಡಿದೆ ಎಂದು ನನಗೆ ಸಂತಸವಾಗಿದೆ. ನಾನು ಈ ತರ್ಪನ್ನು ಗೌರವಿಸುತ್ತೇನೆ" ಇಕ್ಬಾಲ್ ಅನ್ಸಾರಿ, ಸ್ವತಂತ್ರ ಅರ್ಜಿದಾರ

ನಿರ್ಮೋಹಿ ಅಖಾರದ ವಕ್ತಾರ
"ಕಳೆದ 150 ವರ್ಷಗಳಿಂದ ನಮ್ಮ ಹೋರಾಟವನ್ನು ಗುರುತಿಸಿದ ಸುಪ್ರೀಂ ಕೋರ್ಟ್ ಗೆ ನಾವು ಋಣಿಯಾಗಿದ್ದೇವೆ. ಶ್ರೀರಾಮ ಜನ್ಮಸ್ಥಾನ್ ದೇವಾಲಯವನ್ನು ಕಟ್ಟಲು ನಿರ್ಮಿಸಿರುವ ಟ್ರಸ್ಟ್ ನಲ್ಲಿ ನಮಗೆ ಪ್ರಾತಿನಿಧ್ಯ ನೀಡಿದ್ದಕ್ಕೂ ಧನ್ಯವಾದಗಳು" -ಕಾರ್ತಿಕ್ ಚೋಪ್ರಾ, ನಿರ್ಮೋಹಿ ಅಖಾರದ ವಕ್ತಾರ

ಹಿಂದು ಮಹಾಸಭಾ
"ಇದೊಂದು ಐತಿಹಾಸಿಕ ತೀರ್ಪು. ಈ ತೀರ್ಪಿನ ಮೂಲಕ ಸುಪ್ರೀಂ ಕೋರ್ಟ್ ವಿವಿಧತೆಯೆಲ್ಲಿ ಏಕತೆಯ ಸಂದೇಶ ನೀಡಿದೆ" ವರುಣ್ ಕುಮಾರ್ ಸಿನ್ಹಾ, ಹಿಂದು ಮಹಾಸಭಾ ವಕೀಲ

ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್
"ನಾವು ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸುತ್ತೇನೆ. ಆದರೆ ಈ ತೀರ್ಪು ನಮಗೆ ತೃಪ್ತಿ ತಂದಿಲ್ಲ"- ಜಫಾರ್ಯಾಬ್ ಜಿಲಾನಿ, ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್












Click it and Unblock the Notifications