ಭಾರತ ಪ್ರಕಾಶಿಸುವಂತೆ ಮಾಡಿದ ವಾಜಪೇಯಿಯ 5 ನಿರ್ಣಯಗಳು
'ಭಾರತ ಪ್ರಕಾಶಿಸುತ್ತಿದೆ' ಎಂಬ ಎನ್ಡಿಎ ಸರ್ಕಾರದ ಜಾಹೀರಾತಿಗೆ ನಿಜವಾಗುವಂತೆ ಮಾಡಿದ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಆರ್ಥಿಕ ಭದ್ರತೆಗಾಗಿ ಹಾಕಿದ ಬುನಾದಿಯನ್ನು ಮರೆಯುವಂತಿಲ್ಲ.
ದೇಶದ ಪ್ರಧಾನಿಯಾಗಿ ಎರಡು ಬಾರಿ ಕಾರ್ಯ ನಿರ್ವಹಿಸಿದ ಮೊದಲ ಅವಿವಾಹಿತ ಎನಿಸಿಕೊಂಡ ವಾಜಪೇಯಿ ಅವರು, ಐದು ವರ್ಷಗಳ ಕಾಲ ಅಧಿಕಾರ ಅವಧಿ ಪೂರೈಸಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿಯಾಗಿದ್ದಾರೆ. 2005ರಲ್ಲಿ ಸಕ್ರಿಯ ರಾಜಕೀಯದಿಂದ ದೂರ ಉಳಿದರು.
ದೇಶದ ಆರ್ಥಿಕ ಪ್ರಗತಿಗಾಗಿ ಪಿವಿ ನರಸಿಂಹರಾವ್ ಅವರು 1991ರಲ್ಲಿ ಕೈಗೊಂಡ ನಿರ್ಣಯಗಳು, ಆರ್ಥಿಕ ತಜ್ಞ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕ್ರಮಗಳನ್ನು ಪರಿಗಣಿಸಿ ದೇಶದ ಪ್ರಗತಿಗಾಗಿ ವಾಜಪೇಯಿ ಹಲವು ಯೋಜನೆಗಳನ್ನು ರೂಪಿಸಿದರು.
ಮೈತ್ರಿ ಸರ್ಕಾರಗಳಿಂದ ಕೂಡಾ ಸರ್ಕಾರ ಆಡಳಿತ ಸಾಧ್ಯ ಎಂದು ತೋರಿಸಿಕೊಟ್ಟರು. ಜಾಗತಿಕವಾಗಿ ಭಾರತವನ್ನು ಸಮರ್ಥ ದೇಶವಾಗಿ ನೋಡಲು ಸಾಧ್ಯವಾಗುವಂಥ ಪರಿಸ್ಥಿತಿ ತಂದರು. ಪ್ರಧಾನಿಯಾಗಿ ವಾಜಪೇಯಿ ಅವರು ಐದು ಅವರ ಆರ್ಥಿಕ ಸಾಧನೆಗಳು ಇಲ್ಲಿವೆ:
ಭಾರತ ಪ್ರಕಾಶಿಸುವಂತೆ ಮಾಡಿದ ವಾಜಪೇಯಿಯ 5 ನಿರ್ಣಯಗಳು

1. ದೇಶದ ಪ್ರಗತಿಗಾಗಿ ಸಮಗ್ರ ಯೋಜನೆಗಳು
ದೇಶದೆಲ್ಲೆಡೆ ಸಮಗ್ರ ಅಭಿವೃದ್ಧಿಗಾಗಿ ಕೈಗೊಂಡ ರಸ್ತೆ ನಿರ್ಮಾಣ ಯೋಜನೆಗಳ ಫಲವನ್ನು ಈಗ ದೇಶ ಕಾಣುತ್ತಿದೆ. ಸುವರ್ಣ ಚತುಷ್ಪಥ ಯೋಜನೆ, ಪ್ರಧಾನಮಂತ್ರಿ ಗ್ರಾಮ ರಸ್ತೆ ಯೋಜನೆ ಮುಖ್ಯವಾದವು. ಸುವರ್ಣ ಚತುಷ್ಪಥದಲ್ಲಿ ಚೆನ್ನೈ, ಕೋಲ್ಕತಾ, ದೆಹಲಿ ಹಾಗೂ ಮುಂಬೈ ನಗರಗಳಾನ್ನು ಹೆದ್ದಾರಿಗಳ ಜಾಲದ ಮೂಲಕ ಬೆಸೆಯಲಾಗಿದೆ. ಗ್ರಾಮೀಣ ರಸ್ತೆಗಳನ್ನು ಬೆಸೆಯುವ ಯತ್ನದಲ್ಲಿ ಸಫಲ ಕಂಡಿದ್ದು, ಆರ್ಥಿಕ ಪ್ರಗತಿಗೆ ಕಾರಣವಾಯಿತು.

2. ಖಾಸಗೀಕರಣ
ಆಡಳಿತದಲ್ಲಿ ಪಾರದರ್ಶಕತೆ ಜತೆಗೆ ಅಧಿಕಾರ ವಿಕೇಂದ್ರಕರಣ, ಖಾಸಗೀಕರಣಕ್ಕೂ ಒತ್ತು ನೀಡಿದರು. ಭಾರತ್ ಅಲ್ಯುಮಿನಿಯಂ ಕಂಪನಿ(BALCO) ಹಾಗೂ ಹಿಂದೂಸ್ತಾನ್ ಜಿಂಕ್, ಇಂಡಿಯನ್ ಪೆಟ್ರೋಕೆಮಿಕಲ್ಸ್ ಕಾರ್ಪೋರೇಷನ್ ಲಿಮಿಟೆಡ್ ಹಾಗೂ ವಿಎಸ್ಎನ್ಎಲ್ ನಲ್ಲಿ ಹೂಡಿಕೆ ಹಿಂತೆಗೆತ ಪ್ರಮುಖ ನಿರ್ಧಾರವಾಗಿತ್ತು. ಅಂದು ವಾಜಪೇಯಿ ಸರ್ಕಾರ ಇಟ್ಟ ಹೆಜ್ಜೆ ಇಂದಿನ ಮೋದಿ ಸರ್ಕಾರಕ್ಕೆ ಮಾದರಿ ಪ್ರತಿಯಾಯಿತು.

3. ವಿತ್ತೀಯ ಕೊರತೆ ಮೇಲೆ ನಿಗಾ
ವಾಜಪೇಯಿ ಸರ್ಕಾರ ಹೊರ ತಂದ ವಿತ್ತೀಯ ಜವಾಬ್ದಾರಿ ಕಾಯ್ದೆ ಮೂಲಕ ವಿತ್ತೀಯ ಕೊರತೆ ಮೇಲೆ ನಿಗಾ ಇರಿಸಲಾಯಿತು. ಸಾರ್ವಜನಿಕ ವಲಯದ ಉಳಿತಾಯ -0.8% ಜಿಡಿಪಿ (ಆರ್ಥಿಕ ವರ್ಷ 2000) ರಿಂದ 2005ರ ಆರ್ಥಿಕ ವರ್ಷದಲ್ಲಿ 2.3%ಕ್ಕೇರಿತು

4. ಟೆಲಿಕಾಂ ಕ್ರಾಂತಿ
ವಾಜಪೇಯಿ ಸರ್ಕಾರ ಹೊರ ತಂದ ಟೆಲಿಕಾಂ ನೀತಿ ದೇಶದಲ್ಲಿ ಹೊಸ ಕ್ರಾಂತಿ ಮಾಡಿತು. ಆದಾಯ ಹಂಚಿಕೆ ವ್ಯವಸ್ಥೆಯನ್ನು ತಂದು ಟೆಲಿಕಾಂ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧ್ಯವಾಯಿತು. ಭಾರತ್ ಸಂಚಾರ್ ನಿಗಮ ನಿಯಮಿತ ಪ್ರತ್ಯೇಕ ನಿಯಮಾವಳಿಗಳನ್ನು ರೂಪಿಸಿತು. ವಿದೇಶ್ ಸಂಚಾರ್ ನಿಗಮ್ ನಿಯಮಿತ ಹೊಂದಿದ್ದ ಏಕಸ್ವಾಮ್ಯತೆಯನ್ನು ಮುರಿಯಲಾಯಿತು. ದೇಶದೆಲ್ಲೆಡೆ ಟೆಲಿಕಾಂ ಜಾಲ ವಿಸ್ತರಣೆಗೊಂಡಿತು.

5. ಸರ್ವ ಶಿಕ್ಷ ಅಭಿಯಾನ
6 ರಿಂದ 14 ವರ್ಷ ವಯಸ್ಸಿನ ತನಕ ಉಚಿತ ಪ್ರಾಥಮಿಕ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೆ ತಂದು ಕ್ರಾಂತಿ ಮಾಡಲಾಯಿತು. 2001ರಲ್ಲಿ ಚಾಲನೆ ಸಿಕ್ಕಿ ಯಶಸ್ಸುಗೊಂಡಿತು. ಶಾಲೆ ಬಿಟ್ಟು ತೆರಳುವವರ ಸಂಖ್ಯೆ ಶೇ 60ರಷ್ಟು ಕಡಿಮೆಯಾಯಿತು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications