ಸಾಧಾರಣ ಮೆಕ್ಯಾನಿಕ್ ಆಗಿದ್ದ ವ್ಯಕ್ತಿ ಚಿನ್ನದ ಗೋಡೆಗಳ ಬುರ್ಜ್ ಖಲೀಫಾ 22 ಅಪಾರ್ಟ್ಮೆಂಟ್ ಮಾಲೀಕ!
ನವದೆಹಲಿ, ಅಕ್ಟೋಬರ್ 09: ಬುರ್ಜ್ ಖಲೀಫಾ ದುಬೈನ ಅತ್ಯಂತ ಬೃಹತ್ ಕಟ್ಟಡವಾಗಿದೆ. ಈ ಎತ್ತರದ ಗಗನಚುಂಬಿ ಕಟ್ಟಡದಲ್ಲಿ ಚಿನ್ನದ ಗೋಡೆಯನ್ನೊಳಗೊಂಡ ನಿಮ್ಮ ಅಪಾರ್ಟ್ಮೆಂಟ್ ಇದೆ ಎಂದರೆ ಊಹಿಸಿಕೊಳ್ಳಿ. ಅದು ನಿಮ್ಮ ಶ್ರೀಮಂತಿಕೆಯ ಪ್ರತೀಕವಾಗಿದೆ. ಇಂತಹ ಶ್ರೀಮಂತ ಒಬ್ಬ ಭಾರತೀಯ. ಅವರ ಬಗ್ಗೆ ತಿಳಿಯೋಣ.
ಬುರ್ಜ್ ಖಲೀಫಾದಲ್ಲಿನ ಅಪಾರ್ಟ್ಮೆಂಟ್ಗಳು ಭಾರತದ ಅತ್ಯಂತ ಶ್ರೀಮಂತರಲ್ಲಿ ಕೆಲವರಿಗೆ ಸೇರಿವೆ. ವಾಸ್ತವವಾಗಿ ಬುರ್ಜ್ ಖಲೀಫಾ ನೀಡುವ 900 ರಲ್ಲಿ ಸುಮಾರು 150 ಅಪಾರ್ಟ್ಮೆಂಟ್ಗಳನ್ನು ಭಾರತೀಯರು ಹೊಂದಿದ್ದಾರೆ. ಅಂತಹ ಭಾರತೀಯರೊಬ್ಬರು ಬುರ್ಜ್ ಖಲೀಫಾದ ಅತಿದೊಡ್ಡ ಆಸ್ತಿ ಮಾಲೀಕರಾಗಿದ್ದಾರೆ ಎಂದು ಡಿಎನ್ಎ ವರದಿ ತಿಳಿಸಿದೆ.

ಅವರು ಬೇರೆ ಯಾರು ಅಲ್ಲ. ಒಂದು ಕಾಲದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿದ್ದ ಮತ್ತು ಸ್ಪೂರ್ತಿದಾಯಕ ರಾಗ್ಸ್-ಟು-ರಿಚಸ್ ಕಥೆಯನ್ನು ಸ್ಕ್ರಿಪ್ಟ್ ಮಾಡಿದ ವ್ಯಕ್ತಿ ಜಾರ್ಜ್ ವಿ ನೆರೆಯಂಪರಂಬಿಲ್.
ಜಾರ್ಜ್ ಕೇರಳದಲ್ಲಿ ಸಾಧಾರಣ ಕುಟುಂಬದಲ್ಲಿ ಜನಿಸಿದ ವ್ಯಕ್ತಿ. ಅವರು ಚಿಕ್ಕಂದಿನಲ್ಲೇ ಕೆಲಸ ಮಾಡಲು ಪ್ರಾರಂಭಿಸಿದ್ದರು. 11ನೇ ವಯಸ್ಸಿನಲ್ಲಿ ಅವರು ತಮ್ಮ ತಂದೆಗೆ ಬೆಳೆಗಳನ್ನು ಸಾಗಿಸಲು ಮತ್ತು ವ್ಯಾಪಾರ ಮಾಡಲು ಸಹಾಯ ಮಾಡುತ್ತಿದ್ದರು. ಅದನ್ನು ದೊಡ್ಡದಾಗಿಸುವ ಮೊದಲು ಜಾರ್ಜ್ ಸ್ಥಳೀಯ ಮೆಕ್ಯಾನಿಕ್ ಆಗಿಯೂ ಕೆಲಸ ಮಾಡಿದ್ದರು.

1976 ರಲ್ಲಿ ಅವರು ಶಾರ್ಜಾಕ್ಕೆ ಆಗಮಿಸಿದಾಗ ಅವರ ಜೀವನಕ್ಕೆ ಮಹತ್ವದ ತಿರುವು ಸಿಕ್ಕಿತು. ಅಲ್ಲಿ ಅವರು ಈ ಮರುಭೂಮಿಯ ಶಾಖದ ನಡುವೆ ಹವಾನಿಯಂತ್ರಣ ವಲಯದಲ್ಲಿ ಬೃಹತ್ ಸಾಮರ್ಥ್ಯವಿದೆ ಎಂದು ಅರಿತುಕೊಂಡರು. ಅವರು ಕ್ರಮೇಣ ವ್ಯಾಪಾರ ಶುರು ಮಾಡಿದರು. ಇಂದು ಜಿಇಒ ಗ್ರೂಪ್ ಆಫ್ ಕಂಪನೀಸ್ ಎಂಬ ಬೃಹತ್ ಸಾಮ್ರಾಜ್ಯವನ್ನಾಗಿ ಪರಿವರ್ತಿಸಿದರು. ಗಲ್ಫ್ ಪ್ರದೇಶದಲ್ಲಿನ ಅತ್ಯಂತ ಪ್ರಮುಖ ಭಾರತೀಯ ವ್ಯಾಪಾರ ಉದ್ಯಮಿಗಳಲ್ಲಿ ಒಬ್ಬರಾದರು.
ಬುರ್ಜ್ ಖಲೀಫಾದ ಬೆಲೆಬಾಳುವ ಅಪಾರ್ಟ್ಮೆಂಟ್ ಖರೀದಿಸಲು ನೆರೆಯಪರಂಬಿಲ್ ಅವರಿಗೆ ಬಯಕೆಯಾಯಿತು. ಆದರೆ ಅಲ್ಲಿನ ಅವರ ಸಂಬಂಧಿಯೊಬ್ಬರು ಅವರಿಗೆ ನೀನು ಬುರ್ಜ್ ಖಲೀಫಾವನ್ನು ಪ್ರವೇಶಿಸಲೂ ಸಾಧ್ಯವಿಲ್ಲ ಎಂದು ಅವರನ್ನು ಗೇಲಿ ಮಾಡಿದರು. ಆದರೆ ಮುಂದೆ ಜಾರ್ಜ್ 2010ರಲ್ಲಿ ಕಟ್ಟಡದಲ್ಲಿ ಅಪಾರ್ಟ್ ಮೆಂಟ್ ಬಾಡಿಗೆಗೆ ಪಡೆದರು.
ಜಾರ್ಜ್ ವಿ ನೆರೆಯಂಪರಂಬಿಲ್ ಅವರು ಅನೇಕ ವರ್ಷಗಳಲ್ಲಿ ಬುರ್ಜ್ ಖಲೀಫಾದಲ್ಲಿ ಒಟ್ಟು 22 ಐಷಾರಾಮಿ ಅಪಾರ್ಟ್ಮೆಂಟ್ಗಳನ್ನು ಸ್ವಾಧೀನಪಡಿಸಿಕೊಂಡರು. ತನ್ನ ಸಂಪತ್ತನ್ನು ಪ್ರದರ್ಶಿಸಲು ಹಿಂಜರಿಯದ ಜಾರ್ಜ್ ಅವರ ಅಪಾರ್ಟ್ಮೆಂಟ್ಗಳ ಗೋಡೆಗಳು, ಸೀಲಿಂಗ್ಗಳು ಮತ್ತು ಮಹಡಿಗಳನ್ನು ಚಿನ್ನದಿಂದ ಅಲಂಕಾರ ಮಾಡಿದರು. ಈ ಮೂಲಕ ತಮ್ಮನ್ನು ಜರಿದವರಿಗೆ ಮಾತನಾಡದೇ ತಿರುಗೇಟು ಕೊಟ್ಟರು.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications