Nobel Peace Prize- ಅಲೆಸ್ ಬಯಾಲಿಯಾಸ್ಕಿ, ಮೆಮೋರಿಯಲ್, ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್ಗೆ 2022 ನೊಬೆಲ್ ಶಾಂತಿ ಪ್ರಶಸ್ತಿ
ನವದೆಹಲಿ, ಅ. 7: ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಒಬ್ಬ ವ್ಯಕ್ತಿ ಹಾಗೂ ಎರಡು ಸಂಘಟನೆಗಳಿಗೆ ನೀಡಲಾಗಿದೆ. ಬೆಲಾರಸ್ ದೇಶದ ಮಾನವ ಹಕ್ಕು ಹೋರಾಟಗಾರ ಅಲೆಸ್ ಬಯಾಲಿಯಾಸ್ಕಿ ಮತ್ತು ರಷ್ಯಾದ ಮೆಮೋರಿಯಲ್ ಮತ್ತು ಉಕ್ರೇನ್ನ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್ ಸಂಘಟನೆಗಳಿಗೆ ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಸಿಕ್ಕಿದೆ.
ಮೆಮೋರಿಯಲ್ ಮತ್ತು ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್ ರಷ್ಯಾ ಹಾಗೂ ಉಕ್ರೇನ್ ದೇಶಗಳ ಮಾನವ ಹಕ್ಕು ಸಂಘಟನೆಗಳಾಗಿವೆ. ಬೆಲಾರಸ್, ರಷ್ಯಾ ಮತ್ತು ಉಕ್ರೇನ್ ದೇಶಗಳ ಮಾನವ ಹಕ್ಕು ಸಂಘಟನೆಗಳಿಗೆ ಪ್ರಶಸ್ತಿ ನೀಡಲಾಗಿದೆ.

2022ರಲ್ಲಿ ನೀಡಲಾದ ನೊಬೆಲ್ ಪ್ರಶಸ್ತಿಗಳ ವಿವರ ಇಲ್ಲಿದೆ:
ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ: ಅಲೇನ್ ಆಸ್ಪೆಕ್ಟ್, ಜಾನ್ ಎಫ್ ಕ್ಲೌಸರ್, ಆಂಟೋನ್ ಝೇಲಿಂಗರ್
ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ: ಕೆರೋಲಿನ್ ಆರ್ ಬೆರ್ತೋಜಿ, ಮಾರ್ಟನ್ ಮೆಲ್ಡಾಲ್, ಕೆ ಬ್ಯಾರಿ ಶಾರ್ಪ್ಲೆಸ್
ವೈದ್ಯಕೀಯ ವಿಜ್ಞಾನದಲ್ಲಿ: ಸ್ವಾಂಟೆ ಪಾಬೊ
ಸಾಹಿತ್ಯದಲ್ಲಿ ನೊಬೆಲ್: ಆನೀ ಎರ್ನಾಕ್ಸ್
ಶಾಂತಿ ನೊಬೆಲ್: ಅಲೆಸ್ ಬಯಾಲಿಯಾಸ್ಕಿ, ಮೆಮೋರಿಯಲ್, ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್ಪಟ್ಟಿಯಲ್ಲಿದ್ದರಾ ಜುಬೇರ್, ಪ್ರತೀಕ್, ಹರ್ಷ್?
ಕೆಲ ದಿನಗಳಿಂದ ನೊಬೆಲ್ ಶಾಂತಿ ಪುರಸ್ಕಾರ ವಿಚಾರವಾಗಿ ಭಾರತದಲ್ಲಿ ವಿವಾದಗಳೆದ್ದಿದ್ದವು. ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ಭಾರತದ ಆಲ್ಟ್ ನ್ಯೂಸ್ನ ಮೊಹಮ್ಮದ್ ಜುಬೇರ್, ಪ್ರತೀಕ್ ಸಿನ್ಹಾ ಮತ್ತು ಹರ್ಷ್ ಮಂದರ್ ಅವರ ಹೆಸರು ಅನಧಿಕೃತ ಪಟ್ಟಿಯಲ್ಲಿ ಇದೆ ಎಂಬಂತಹ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಟೈಮ್ಸ್ ಪತ್ರಿಕೆಯಲ್ಲಿ ಮೊದಲು ಇದರ ಸುದ್ದಿಯಾಗಿ ನಂತರ ಆ ಮೂಲಕ ಭಾರತೀಯ ಮಾಧ್ಯಮಗಳಲ್ಲಿ ಸುದ್ದಿ ಕಾಣಿಸಿಕೊಂಡಿತ್ತು. ನೊಬೆಲ್ ಶಾಂತಿ ಪ್ರಶಸ್ತಿಗೆ ಈ ಮೂವರು ಫೇವರಿಟ್ಗಳೆಂದು ಹೇಳಲಾಗಿತ್ತು.
ಅಲೆಸ್ ಬಿಯಾಲಿಯಾಸ್ಕಿ ಯಾರು?
ಬೆಲಾರಸ್ ದೇಶದಲ್ಲಿ ಎಂಬತ್ತರ ದಶಕದಲ್ಲಿ ಪ್ರಜಾತಂತ್ರ ಚಳವಳಿ ಆರಂಭ ಮಾಡಿದವರ ಮೊದಲಿಗರಲ್ಲಿ ಅಲೆಸ್ ಬಯಾಲಿಯಾಸ್ಕಿ ಒಬ್ಬರು. 1996ರಲ್ಲಿ ವಿಯಾಸ್ನಾ (ವಸಂತ ಕಾಲ ಎಂದರ್ಥ) ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಅಂದಿನ ಅಧ್ಯಕ್ಷರು ಸರ್ವಾಧಿಕಾರ ಪಡೆಯಲು ಸಂವಿಧಾನದಲ್ಲಿ ತಿದ್ದುಪಡಿ ಮಾಡಹೊರಟಾಗ ವಿಯಾಸ್ನಾ ಸಂಘಟನೆಯನ್ನು ಕಟ್ಟಿ ಆ ಮೂಲಕ ಎಲ್ಲೆಡೆ ಜನಪ್ರತಿಭಟನೆಗೆ ಕಿಚ್ಚೆಬ್ಬಿಸಿದವರು ಅಲೆಸ್.
ಅಲೆಸ್ ಬಿಯಾಲಿಯಾಸ್ಕಿ ಅವರ ವಿಯಾಸ್ನಾ ಸಂಘಟನೆ ಹೋಗಹೋಗುತ್ತಾ ಮಾನವ ಹಕ್ಕು ಹೋರಾಟಕ್ಕೆ ಮುಡಿಪಾಗತೊಡಗಿತು. ಅಧಿಕಾರ ವರ್ಗದ ದರ್ಪ, ದೌರ್ಜನ್ಯ ವಿರುದ್ಧ ಜನಹೋರಾಟಕ್ಕೆ ಪ್ರೇರೇಪಿಸತೊಡಗಿತು.
ಮೆಮೋರಿಯಲ್:
ಸೋವಿತ್ ರಷ್ಯಾ ಅವಧಿಯಲ್ಲಿ ಹುಟ್ಟಿಕೊಂಡ ಮಾನವ ಹಕ್ಕು ಸಂಘಟನೆ ಇದು. ಕಮ್ಯೂನಿಸ್ಟ್ ಆಡಳಿತದ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಕಾರ್ಯವನ್ನು ಇದು ಮಾಡುತ್ತಿತ್ತು. ಹಿಂದೆ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿದ್ದ ಆಂಡ್ರೇ ಸಖರೋವ್ ಮತ್ತು ಮಾನವ ಹಕ್ಕು ಹೋರಾಟಗಾರ್ತಿ ಸ್ವೆಟ್ಲಾನ ಗನ್ನುಶ್ಕಿನಾ ಅವರು ಮೆಮೋರಿಯಲ್ನ ಸಂಸ್ಥಾಕರು.
ಹಿಂದಿನ ಅಪರಾಧಗಳನ್ನು ಕಲೆಹಾಕಿದರೆ ಮುಂಬರುವ ಅಪರಾಧಗಳನ್ನು ತಡೆಯಬಹುದು ಎಂಬ ಪರಿಕಲ್ಪನೆಯಲ್ಲಿ ಹುಟ್ಟಿಕೊಂಡ ಸಂಘಟನೆ. ಆದರೆ, ಸೋವಿಯತ್ ರಷ್ಯಾ ಪತನದ ಬಳಿಕ ಮೆಮೋರಿಯಲ್ ಸಂಘಟನೆ ರಷ್ಯಾದ ಅತಿದೊಡ್ಡ ಮಾನವ ಹಕ್ಕು ಸಂಸ್ಥೆಯಾಗಿ ಬೆಳೆಯಿತು.
ಚೆಚೆನ್ಯಾ ಯುದ್ಧದಲ್ಲಿ ರಷ್ಯಾ ಆಡಳಿತ ಮತ್ತು ಸೇನೆ ನಡೆಸಿದ ಯುದ್ಧಾಪರಾಧಗಳನ್ನು ಮೆಮೋರಿಯಲ್ ಎತ್ತಿತೋರಿಸುವ ಕೆಲಸ ಆಡಿತು. ರಷ್ಯಾ ಆಡಳಿತದಿಂದ ಪ್ರಾಣಾಪಾಯ ಇದ್ದರೂ ಲೆಕ್ಕಿಸದೇ ಮೆಮೋರಿಯಲ್ ಕಾರ್ಯಕರ್ತರು ಶ್ರದ್ಧೆಯಿಂದ ಕೆಲಸ ಮಾಡಿದ್ದರು.
ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್
ಉಕ್ರೇನ್ನ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್ 2007ರಲ್ಲಿ ಕಿಯಿವ್ನಲ್ಲಿ ಸ್ಥಾಪನೆ ಆಯಿತು. ಉಕ್ರೇನ್ನಲ್ಲಿ ಮಾನವ ಹಕ್ಕು ಮತ್ತು ಪ್ರಜಾತಂತ್ರ ಹಕ್ಕಿಗಾಗಿ ಹೋರಾಡುವ ಉದ್ದೇಶದಿಂದ ಈ ಸಂಘಟನೆ ಶುರುವಾಗಿದ್ದು. ಉಕ್ರೇನ್ ಮೇಲೆ ರಷ್ಯಾ ಯುದ್ಧ ಮಾಡಿದ ಬಳಿಕ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್ ಬಹಳ ಕೆಚ್ಚೆದೆಯಿಂದ ಕೆಲಸ ಮಾಡಿ, ರಷ್ಯಾದ ಯುದ್ಧಾಪರಾದಗಳನ್ನು ಎತ್ತಿತೋರಿಸುವ ಕೆಲಸ ಮಾಡಿದೆ.
(ಒನ್ಇಂಡಿಯಾ ಸುದ್ದಿ)
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications