Fact Check: ಹುಷಾರ್ ! ನಕಲಿ ನೌಕರಿ ಕೊಡಿಸುವ ವಾಟ್ಸಾಪ್ ಸಂದೇಶಕ್ಕೆ ಬಲಿಯಾಗಬೇಡಿ
ನವದೆಹಲಿ, ಡಿಸೆಂಬರ್ 18: ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ, ನೋಂದಣಿ ಮಾಡಿಕೊಳ್ಳಿ ನೀವು ಮನೆಯಲ್ಲೇ ಕುಳಿತು ಸಾವಿರಾರು ರೂಪಾಯಿ ಎಣಿಸಬಹುದು ಎಂದು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸಂದೇಶಗಳ ಬಗ್ಗೆ ಎಚ್ಚರಿಕೆಯಿಂದಿರಿ.
ಸಾಮಾನ್ಯವಾಗಿ ಗೃಹಿಣಿಯರಿಗೆ ಪಾರ್ಟ್ ಟೈಂ, ಫುಲ್ ಟೈಂ ಜಾಬ್ ಆಫರ್ಗಳು ಬರುತ್ತಲೇ ಇರುತ್ತವೆ. ಸಾಕಷ್ಟು ಮಂದಿ ಆನ್ಲೈನ್ ಫ್ರಾಡ್ಗಳನ್ನು ಮಾಡಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ.
ವಾಟ್ಸಾಪ್ ಬಳಕೆದಾರರು ಕೊಂಚ ಜಾಗೃತರಾಗಿರಿ, ಕೆಲವು ದಿನಗಳ ಹಿಂದೆ ವಾಟ್ಸಾಪ್ನಲ್ಲಿ ಒಂದು ಸಂದೇಶ ಹರಿದಾಡಿತ್ತು.ಈ ಲಿಂಕ್ ಕ್ಲಿಕ್ ಮಾಡಿ, ವರ್ಕ್ ಫ್ರಂ ಹೋಂ ಆಫರ್ನಿಂದ, ಪ್ರತಿನಿತ್ಯ ನೀವು 3 ಸಾವಿರ ರೂ ಗಳಿಸಬಹುದು ಎನ್ನುವ ಸಂದೇಶ ಅದಾಗಿತ್ತು.

ಅಂತೆಯೇ ಅದು ಪರಿಚಯವಿಲ್ಲದ ನಂಬರ್ನಿಂದ ಬಂದಿದ್ದರೂ, ಜನರು ನಂಬಿ ನೋಂದಣಿ ಎಂದು 50 ರೂ ಕಟ್ಟಿದ್ದರು. ಆ ಲಿಂಕ್ ಕ್ಲಿಕ್ ಮಾಡಿ ನಿಮಗೆ ಆಫರ್ಗಳು ಲಭ್ಯವಿರಲಿವೆ ಎಂದು ಬರೆದಿದ್ದಾಗ, ಸಾಮಾನ್ಯವಾಗಿ ಜನರು ಲಿಂಕ್ ಕ್ಲಿಕ್ ಮಾಡುತ್ತಾರೆ, ಆಗ ಹಣವು ಕಟ್ ಆಗುವುದಲ್ಲದೇ ನಿಮ್ಮ ಮೊಬೈಲ್ ಡಾಟಾ ಕೂಡ ಖಾಲಿಯಾಗಬಹುದು.
ಇದು ಪಾರ್ಟ್ ಟೈಂ ಕೆಲಸವಾಗಿದ್ದು, ಮನೆಯಲ್ಲಿಯೇ ಕುಳಿತು ಒಂದು ದಿನಕ್ಕೆ 200 ರಿಂದ 3 ಸಾವಿರ ರೂ ಗಳಿಸಬಹುದು, ನಿತ್ಯ 10 ರಿಂದ 30 ನಿಮಿಷಗಳು ಮಾತ್ರ ಇದಕ್ಕೆ ನೀವು ಮೀಸಲಿಡಬೇಕಾಗಿದೆ. ಕೆಲಸ ಬೇಕಾದವರು 50 ರೂ ನೀಡಿ ನೋಂದಣಿ ಮಾಡಿಕೊಳ್ಳಿ ಎಂದು ಸಂದೇಶದಲ್ಲಿ ಬರೆದಿರುತ್ತದೆ.
ಇಂತಹ ಸಂದೇಶಗಳು ಬಂದಾಗ ಜನರು ಹೆಚ್ಚು ಬಾರಿ ಆಲೋಚಿಸಬೇಕು.ಇದೆಲ್ಲಾ ಸಂದೇಶಗಳು ಸುಳ್ಳಾಗಿದ್ದು, ಅದು ಸೈಬರ್ ದಾಳಿಯಾಗಿರುತ್ತದೆ.ಒಂದೊಮ್ಮೆ ಅಂತಹ ಸಂದೇಶಗಳು ಬಂದಾಗ ಓಪನ್ ಮಾಡಬೇಡಿ ಅಲ್ಲವೇ ನಂಬರ್ನ್ನು ಬ್ಲಾಕ್ ಮಾಡಿಬಿಡಿ. ಇದರಿಂದ ನಿಮ್ಮ ಹಣ, ನಿಮ್ಮ ಸಮಯವೂ ಉಳಿತಾಯವಾಗುತ್ತದೆ.

Fact Check
ಕ್ಲೇಮು
ವಾಟ್ಸಾಪ್ನಲ್ಲಿ ಬರುವ ಜಾಬ್ ಆಫರ್ ಲಿಂಕ್ ಕ್ಲಿಕ್ ಮಾಡಿದರೆ ನಿತ್ಯ 3 ಸಾವಿರ ದುಡಿಯುವ ಅವಕಾಶ ನೀಮ್ಮದಾಗಲಿದೆ
ಪರಿಸಮಾಪ್ತಿ
ವಾಟ್ಸಾಪ್ನಲ್ಲಿ ಬರುವ ಸಂದೇಶದ ಬಗ್ಗೆ ಎಚ್ಚರಿಕೆಯಿಂದಿರಿ, ಉದ್ಯೋಗ ಕೊಡಿಸುವ ಸಂದೇಶಗಳೆಲ್ಲಾ ಸುಳ್ಳು
Rating
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ












Click it and Unblock the Notifications