Anupama Gowda: ಅನುಪಮಾ ಗೌಡ ಮನೆಗೆ 'ನಮ್ಮನೆ' ಎನ್ನುವ ಹೆಸರು ಯಾಕೆ..?
ಕಿರುತೆರೆ ನಟಿ, ನಿರೂಪಕಿ ಅನುಪಮಾ ಗೌಡ ತಮ್ಮ ಬಹುಕಾಲದ ಕನಸು ನನಸಾದ ಖುಷಿಯಲ್ಲಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ತುಂಬ ಕಷ್ಟಪಟ್ಟು ಜೀವನ ಕಟ್ಟಿಕೊಂಡಿದ್ದ ಅನುಪಮಾ ಈಗ ತಮ್ಮ ಇಚ್ಛೆಯಂತೆ ಬೆಂಗಳೂರಿನಲ್ಲಿ ಸ್ವಂತ ಮನೆ ನಿರ್ಮಿಸಿದ್ದಾರೆ. ದಸರಾ ಶುಭಗಳಿಗೆಯಲ್ಲೇ ಅನುಪಮಾ ತಮ್ಮ ಹೊಸ ಮನೆಗೆ ಕಾಲಿಟ್ಟಿದ್ದಾರೆ. ವಿಶೇಷವೆಂದರೆ ಅನುಪಮಾ ತಮ್ಮ ಮನೆಗೆ 'ನಮ್ಮನೆ' ಅಂತಾ ಹೆಸರಿಟ್ಟಿದ್ದಾರೆ.
ತಮ್ಮ ಮನೆಗೆ 'ನಮ್ಮನೆ' ಅಂತಾ ಯಾಕೆ ಹೆಸರಿಟ್ಟರು ಎನ್ನುವುದನ್ನು ಸ್ವತಃ ಅನುಪಮಾ ಅವರೇ ವಿವರಿಸಿದ್ದಾರೆ. ಈ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ಅನುಪಮಾ, 'ಮೂವತ್ತಾ ಮೂರು ವರ್ಷಕ್ಕೆ ನಾನು ಒಂದು ಮನೆ ಮಾಡಿದ್ದೇನೆ. ಸಿಕ್ಕಾಪಟ್ಟೆ ಖುಷಿ ಆಗುತ್ತಿದೆ. ನನಗೆ ಹೆಮ್ಮೆ ವಿಚಾರ ಇದು. ನಮ್ಮ ಮನೆಗೆ ನಮ್ಮನೆ ಅಂತಾನೇ ಹೆಸರಿಟ್ಟೆ. ಯಾಕಂದರೆ ಯಾರೇ ಬಂದರೂ ನಮ್ಮನೆ ನಮ್ಮನೆ ಅಂತಾ ಹೇಳುವಾಗ ಕೇಳೋಕು ಖುಷಿ ಅನಿಸಿತು. ಹೀಗಾಗಿ ನಮ್ಮನೆ ಅಂತಾ ನಮ್ಮ ಮನೆಗೆ ನಾನು ಹೆಸರಿಟ್ಟಿದ್ದೇನೆ' ಎಂದರು.

ಎಲ್ಲರೂ ಬರುತ್ತಾರೆ. ಫ್ಯಾಮಿಲಿ ಇಂದ ಒಂದಷ್ಟು ಜನ. ನನಗೆ ಹದಿನಾಲ್ಕು ವರ್ಷದಿಂದ ಕೆಲಸ ಮಾಡ್ತಾ ಫ್ಯಾಮಿಲಿ ಆಗಿರುವ ನನ್ನ ಇಂಡಸ್ಟ್ರಿ ಫ್ರೆಂಡ್ಸ್ ಇರಬಹುದು, ಡೈರೆಕ್ಟರ್ಗಳಿರಬಹುದು, ನನ್ನ ಕೈಯಲ್ಲಿ ಎಷ್ಟು ಜನ ಆಗುತ್ತೋ ಅಷ್ಟು ಜನರನ್ನು ನೆನಪಿಟ್ಟುಕೊಂಡು ಕರೆದಿದ್ದೇನೆ. ಎಲ್ಲರೂ ಸೇರಿ ವಿಶ್ ಮಾಡಿ ಈ ಮನೆಗೆ ಒಳ್ಳೆದಾಗಲಿ ಅಂತಾ ಹರಸಿದರೆ ಅಷ್ಟೇ ಸಾಕು.
ಇನ್ನು ಜಾಸ್ತಿ ಕೆಲಸ ಸಿಗಲಿ ಅಂತಾ ಎಲ್ಲರೂ ಹಾರೈಸಿದರೆ ನಾನು ಕರೆಕ್ಟ್ ಆಗಿ ಲೋನ್ ತೀರಿಸಬಹುದು. ನೀವೆಲ್ಲರೂ ವಿಡಿಯೋ ಮೂಲಕ ನಮ್ಮ ಮನೆ ಗೃಹಪ್ರವೇಶಕ್ಕೆ ಬಂದಿದ್ದೀರಾ. ನೀವು ಅಷ್ಟೇ ಅಲ್ಲಿಂದಲೇ ಒಳ್ಳೆದಾಗಲಿ ಅಂತಾ ಶುಭ ಹಾರೈಸಿ ಎಂದು ಅನುಪಮಾ ಗೌಡ ವೀಕ್ಷಕರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮನೆ ಮಾಡುವುದು ಅಷ್ಟು ಸುಲಭ ಅಲ್ಲ. ಈಗಂತಲ್ಲ ಕೆಲವು ವರ್ಷದಿಂದ ಅದು ಕಷ್ಟನೇ. ಜೀವನದಲ್ಲಿ ನನಗೊಂದು ಗುರಿ ಇತ್ತು. ಏನಾಗಬೇಕು? ಏನು ಮಾಡಬೇಕು ಅಂತಾ? ಒಂದು ಸ್ವಂತ ಮನೆ ಮಾಡಬೇಕು ಎನ್ನುವುದು ಮೊದಲಿನಿಂದಲೂ ಇತ್ತು. ಮೊದಲು ಅಪಾರ್ಟ್ಮೆಂಟ್ ಅಂತಾ ತಲೆಯಲ್ಲಿತ್ತು. ಅದಾದ ಮೇಲೆ ಬೇಡ ಮನೆ ಬೇಕು. ನನ್ನದೇ ಆದಂತಹ ಒಂದು ಮನೆ ಬೇಕು ಅಂತಾ ನಿರ್ಧರಿಸಿದ್ದೆ.

ನನ್ನ ಕೈಯಲ್ಲಿ ಆದ ಮಟ್ಟಿಗೆ ಈ ಮನೆಯನ್ನು ಮಾಡಿ ಆಗಿದೆ. ಎಲ್ಲರಿಗೂ ಜೀವನದಲ್ಲಿ ಮನೆ ಮಾಡಬೇಕು ಎನ್ನುವುದು ಇರುತ್ತದೆ. ನನಗೆ ಎಲ್ಲರೂ ಮದುವೆಯಾಗು ಅನ್ನುತ್ತಿದ್ದರು. ಆದರೆ ನನಗೆ ಮನೆ ಮೊದಲು ಆಗಬೇಕಿತ್ತು. ಕೊನೆಗೂ ಕನಸು ನನಸಾದ ಘಳಿಗೆ ಬಂದಿದೆ. ಒಂದು ವರ್ಷದಿಂದ ಕಾದು, ಈ ಮನೆ ಬಗ್ಗೆ ಯಾರಿಗೂ ಹೇಳದೆ, ಇಂದು ಗೃಹಪ್ರವೇಶ ಆಗಿದೆ. ನನಗಂತೂ ಸಿಕ್ಕಾಪಟ್ಟೆ ಖುಷಿಯಾಗಿದೆ ಎಂದು ಅನುಪಮಾ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ












Click it and Unblock the Notifications