Sangeetha Sringeri: ಸಂಗೀತಾ ಶೃಂಗೇರಿ ಸರ್ಪ ಸೂತ್ರ ಧರಿಸೋದ್ಯಾಕೆ? ಏನಿದರ ಗುಟ್ಟು.?
ಚಾರ್ಲಿ ಸಿನಿಮಾದ ಮೂಲಕ ಮಿಂಚಿದ್ದ ನಟಿ ಸಂಗೀತಾ ಶೃಂಗೇರಿ ಕನ್ನಡ ಬಿಗ್ ಬಾಸ್ ಶೋನಿಂದ ಮತ್ತಷ್ಟು ಜನಪ್ರಿಯತೆ ಪಡೆದರು. ತಮ್ಮ ಮಾತು, ವರ್ತನೆ, ದಿಟ್ಟ ನಿರ್ಧಾರ, ಛಲದಿಂದ ಕರ್ನಾಟಕದ ಜನತೆಯ ಮನಸ್ಸು ಗೆದ್ದರಷ್ಟೇ ಅಲ್ಲದೇ, ಬಿಗ್ಬಾಸ್ ಕನ್ನಡ ಸೀಸನ್ 10ರ ಸಿಂಹಿಣಿ ಅಂತಾನೇ ಖ್ಯಾತಿ ಪಡೆದರು. ಶೋ ಮುಗಿದರೂ ಕೂಡ ನಟಿ ಸಂಗೀತಾ ಶೃಂಗೇರಿ ಅವರ ಹವಾ ಮಾತ್ರ ಕಡಿಮೆಯಾಗಿರಲಿಲ್ಲ. ಸದ್ಯ ಸಂಗೀತಾ ಶೃಂಗೇರಿ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 10ರ ಸ್ಟ್ರಾಂಗ್ ಸ್ಪರ್ಧಿ ಎಂದೇ ಕರೆಸಿಕೊಂಡಿದ್ದ ಸಂಗೀತಾ ಶೃಂಗೇರಿ ತಮ್ಮ ಬೆರಳಿಗೆ ವಿಶೇಷ ಉಂಗುರವೊಂದನ್ನು ಧರಿಸಿದ್ದು, ಈ ಉಂಗುರದ ಬಗ್ಗೆ ಹಲವಾರು ಕುತೂಹಲಕಾರಿ ಪ್ರಶ್ನೆಗಳಿವೆ. ಈ ಉಂಗುರದ ವಿಶೇಷತೆ ಏನು..? ತಾವು ಅದನ್ನು ಯಾಕೆ ಧರಿಸಿರುವುದು..? ಅದರ ಉಪಯೋಗ ಏನು ಎನ್ನುವುದನ್ನು ಸಂಗೀತಾ ಸವಿವರವಾಗಿ ವಿವರಿಸಿದ್ದಾರೆ.

ನಟಿ ಸಂಗೀತಾ ಶೃಂಗೇರಿ ತಮ್ಮ ಎಡಗೈಯ ಉಂಗುರ ಬೆರಳಿಗೆ ತಾಮ್ರದ ಸದ್ಗುರು ಉಂಗುರ ಅಥವಾ ಸರ್ಪ ಸೂತ್ರವನ್ನು ಧರಿಸಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸಂಗೀತಾ ಶೃಂಗೇರಿ, ಇದೊಂದು ತಾಮ್ರದ ಉಂಗುರ. ಸದ್ಗುರು ಕೂಡ ಒಂದು ಸಾರಿ ಹೇಳಿದ್ದಾರೆ. ಅವರು ಹೇಳುವ ಬಹಳಷ್ಟು ವಿಚಾರ ನನಗೆ ಲಾಜಿಕಲ್ ಅನಿಸುತ್ತದೆ. ನನಗೆ ಲಾಜಿಕಲ್ ಅನಿಸುವುದನ್ನು ನಾವು ಒಪ್ಪಿಕೊಳ್ಳುತ್ತೇನೆ. ಯಾವುದು ಅನಿಸುವುದಿಲ್ಲವೋ ಅದನ್ನು ಬಿಟ್ಟು ಬಿಡುತ್ತೇನೆ ಎಂದರು.
ಸಾಮಾನ್ಯವಾಗಿ ತಾಮ್ರದ ಉಂಗುರವನ್ನು ಉಂಗುರ ಬೆರಳಿಗೆ ಹಾಕಬೇಕು ಎಂದು ಹೇಳುತ್ತಾರೆ. ಯಾಕೆಂದರೆ ನಾವು ಧ್ಯಾನ ಮಾಡುವಾಗ ನಮ್ಮ ಆತ್ಮ ನಮ್ಮ ದೇಹವನ್ನು ಬಿಟ್ಟು ಹೋಗುತ್ತದೆ. ಒಂದು ಪೀಸ್ ಆಫ್ ಸ್ಟೇಟ್ ಹೋಗುತ್ತದೆ. ನಾವು ಧ್ಯಾನದಲ್ಲಿ ಮುಳುಗಿ ಹೋಗಿರುತ್ತೇವೆ. ಈ ಶರೀರದ ಬಗ್ಗೆ ನಮಗೇನು ಗಮನನೇ ಇರಲ್ಲ. ನಾವು ಮರೆತು ಬಿಡುತ್ತೇವೆ. ನಮಗೆ ದೇಹವಿದೆ ಎನ್ನುವುದನೆಲ್ಲ ಮರೆತು ಬಿಡುತ್ತೇವೆ.

ಒನ್ಸ್ ಇನ್ ಮಿಲಿಯನ್ ಚಾನ್ಸ್ಸ್ ಅಂತೆ ಇದು ಆಗುವುದು. ಅಷ್ಟು ಅಲ್ಲಿ ಶಾಂತಿ ಇರುತ್ತದೆ. ಆಗ ಎಲ್ಲವೂ ಮರೆತು ಬಿಡುತ್ತದೆ. ಹಾಗೆ ಆಗಬಾರದು ಅಂತಾ ಈ ಉಂಗುರ ಧರಿಸಲಾಗುತ್ತದೆ. ಇದು ಒಂದು ಥಿಯೇರಿ ಆದರೆ ಇನ್ನೊಂದು ತಾಮ್ರದ ಉಂಗುರ ಇನ್ನು ಜಾಸ್ತಿ ನಮ್ಮ ಧ್ಯಾನಕ್ಕೆ ಶಕ್ತಿ ಕೊಡುತ್ತದೆ ಅಂತಾ ಹೇಳುತ್ತಾರೆ ಎಂದು ತಾವು ಧರಿಸಿರುವ ಉಂಗುರದ ಬಗ್ಗೆ ಸಂಗೀತ ಶೃಂಗೇರಿ ವಿವರಿಸಿದ್ದಾರೆ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications