Rishab Shetty: ಕಾಂತಾರಕ್ಕೆ ಎದುರಾಗಿದ್ಯಾ ದೈವ ಕಂಟಕ: ರಿಷಬ್ ಶೆಟ್ಟಿಗೆ ಪಂಜುರ್ಲಿ ದೈವ ಹೇಳಿದ್ದೇನು?
ಕಾಂತಾರ ಚಿತ್ರ ತಂಡಕ್ಕೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಪ್ರೀಕ್ವೆಲ್ ಶೂಟಿಂಗ್ವೇಳೆ ಎಚ್ಚರಿಕೆಯಿಂದ ಇರುವಂತೆ ದೈವ ಸೂಚಿಸಿದ ಬೆನ್ನಲ್ಲೇ ಕಾಂತಾರ ತಂಡದಲ್ಲಿ ಸಾವು-ನೋವುಗಳು ಸಂಭವಿಸುತ್ತಲೇ ಇವೆ. ಕಾಂತಾರ ಚಾಪ್ಟರ್ 1 ಸಿನಿಮಾದ ಪ್ರೀಕ್ವೆಲ್ ಶೂಟಿಂಗ್ ವೇಳೆ ಈಗ ಮೂರನೇ ಕಲಾವಿದ ಮೃತಪಟ್ಟಿದ್ದಾರೆ. ಚಿತ್ರತಂಡಕ್ಕಷ್ಟೇ ಅಲ್ಲ, ಜನ ಸಾಮಾನ್ಯರಿಗೂ ಈ ಸಾವು ಶಾಕಿಂಗ್ ಆಗಿದೆ. ಕಾರಣ ಕಾಂತಾರ ಶೂಟಿಂಗ್ ಶುರುವಾದ ಮೇಲೆ ಇದು ಮೂರನೇ ಸಾವು ಸಂಭವಿಸಿದೆ.
ಕಳೆದ ಮೇ 6 - ಜೂನಿಯರ್ ಕಲಾವಿದ ಕಪಿಲ್ ಸೌಪರ್ಣಿಕ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಮೇ 12ಕ್ ಕೆ ಕುಂದಾಪುರದಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ರಾಕೇಶ್ ಪೂಜಾ ಸಾವನ್ನಪ್ಪಿದ್ದರು. ಇದೀಗ ಕಾಂತಾರ ತಂಡಕ್ಕೆ ಮತ್ತೊಂದು ಸಾವಿನ ಶಾಕ್ ಆಗಿದೆ. ಕಾಂತಾರ ಚಿತ್ರದ ಯುವ ಕಲಾವಿದ ಆಗುಂಬೆಯಲ್ಲಿ ಮೃತಪಟ್ಟಿದ್ದಾರೆ. ಈ ಘಟನೆ ಕಾಂತಾರ ಚಿತ್ರ ತಂಡಕ್ಕೆ ಮಾತ್ರವಲ್ಲದೇ ಅಭಿಮಾನಿಗಳಿಗೂ ಸಹ ಮತ್ತಷ್ಟು ಶಾಕ್ ಮೂಡಿಸಿದೆ.

ಕಾಂತಾರ ಚಿತ್ರದ ಕಲಾವಿದ ಕೇರಳದ ವಿಜು ವಿಕೆ ಸಾವನ್ನಪ್ಪಿದ್ದಾರೆ. ಕಾಂತಾರ ಪ್ರೀಕ್ವೆಲ್ ಸಿನಿಮಾದ ಮತ್ತೊಬ್ಬ ಸಹ ಕಲಾವಿದ ಸಾವನ್ನಪ್ಪಿದ್ದು, ಹೃದಯಾಘಾತದಿಂದ ಕಾಮಿಡಿ ಕಲಾವಿದ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ. ಆಗುಂಬೆ ಬಳಿಯ ಹೋಂ ಸ್ಟೇಯಲ್ಲಿ ಸಾವು ಸಂಭವಿಸಿದೆ. ಶೂಟಿಂಗ್ಗೆ ಬಂದಿದ್ದ ಕಾಮಿಡಿ ಕಲಾವಿದ ವಿಜು ವಿ ಕೆ ಕೇರಳದ ತ್ರಿಶೂರ್ ಮೂಲದ ಮಿಮಿಕ್ರಿ ಕಲಾವಿದ. ಕಾಂತಾರದ ಶೂಟಿಂಗ್ಗೆ ಬಂದಿದ್ದ ಕಲಾವಿದ ವಿಜು ಆಗುಂಬೆಯಲ್ಲಿ ಮೃತಪಟ್ಟಿದ್ದಾರೆ.
ಇದೀಗ ಕಾಂತಾರ ಸಿನಿಮಾದಲ್ಲಿ ಮೂರನೇ ಕಲಾವಿದ ಸಾವನ್ನಪ್ಪಿದ್ದು ಶಾಕಿಂಗ್ ಆಗಿದೆ. ಈಗಾಗಲೇ ಇಬ್ಬರು ಕಲಾವಿದರನ್ನು ಕಳೆದುಕೊಂಡ ಚಿತ್ರತಂಡ ನೋವಿನಲ್ಲಿತ್ತು. ರಾಕೇಶ್ ಪೂಜಾರಿ ಮೃತ ಪಟ್ಟ ಒಂದು ತಿಂಗಳಿಗೆ ಇನ್ನೊಬ್ಬ ಕಲಾವಿದ ವಿಜು ಮೃತಪಟ್ಟಿದ್ದಾರೆ. ಸಿನಿಮಾ ಶೂಟಿಂಗ್ ಆರಂಭದಿಂದಲೂ ಒಂದಲ್ಲ ಒಂದು ದುರಂತಗಳು ನಡೆಯುತ್ತಿವೆ. ಕಾಂತಾರ ಚಿತ್ರತಂಡಕ್ಕೆ ಸಾಲು ಸಾಲು ಸವಾಲುಗಳು ಎದುರಾದ ಹಿನ್ನೆಲೆಯಲ್ಲಿ ಈ ಹಿಂದೆಮಂಗಳೂರಿನ ಬಾರೆಬೈಲ್ ವಾರಾಹಿ ಪಂಜುರ್ಲಿ ದೈವಸ್ಥಾನಕ್ಕೆ ರಿಷಬ್ ಶೆಟ್ಟಿ ಅವರು ಪತ್ನಿ ಮತ್ತು ಮಕ್ಕಳು ಜೊತೆಗೆ ಭೇಟಿ ನೀಡಿದ್ದರು.
ನೇಮೋತ್ಸವದಲ್ಲಿ ಭಾಗಿಯಾದ ರಿಷಬ್ ಶೆಟ್ಟಿ ಅವರಿಗೆ ಪಂಜುರ್ಲಿ ದೈವ ಕೆಲವು ಮಾತುಗಳನ್ನು ಹೇಳಿದೆ. ರಿಷಬ್ ಶೆಟ್ಟಿ ಅವರಿಗೆ ನಂಬಿ ಸಂಸಾರ ಎಂದು ಹೇಳಿದರೆ ಅವರ ಚಲನಚಿತ್ರದ ಒಂದು ತಂಡ. ಅದರಲ್ಲಿ ಸ್ವಲ್ಪ ಜಾಗ್ರತೆ ಇರಬೇಕು. 5 ತಿಂಗಳಲ್ಲಿ ಎಲ್ಲವನ್ನೂ ಸರಿ ಮಾಡಿಕೊಡುತ್ತೇನೆ ಅಂತ ದೈವ ಉತ್ತರ ನೀಡಿದೆ. ಈಗ ಟಿವಿಯಲ್ಲಿ ದುಷ್ಮನ್ ಎಂಬ ಒಂದು ಪದ ಬರುತ್ತಿದೆ. ಪ್ರತಿಯೊಬ್ಬರ ಏಳಿಗೆಗೂ ಯಾರಾದರೂ ಒಬ್ಬ ಅಡ್ಡ ಇರುತ್ತಾನೆ. ಏನೂ ಮಾಡದೇ ಇರುವ ಭಿಕ್ಷುಕನಿಗೂ ಕಲ್ಲು ಹೊಡೆಯುವವರು ಇದ್ದಾರೆ. ಕಾರಿನಲ್ಲಿ ಹೋಗುವವರಿಗೂ ಕಲ್ಲು ಹೊಡೆಯುವವರು ಇದ್ದಾರೆ. ಆದ್ದರಿಂದ ತಾಯಿ ಆದವಳು ಮಕ್ಕಳಿಗೆ ಜಾಗ್ರತೆಯಲ್ಲಿ ಹೋಗು ಅಂತ ಹೇಳುತ್ತಾಳೆ. ತಾಯಿ ಸ್ಥಾನದಲ್ಲಿ ನಿಂತುಕೊಂಡು ವಾರಾಹಿ ಪಂಜುರ್ಲಿ ಈ ರೀತಿ ಹೇಳಿದೆ ಎಂದು ಗೌರವಾಧ್ಯಕ್ಷ ರವಿ ಪ್ರಸನ್ನ ಅವರು ತಿಳಿಸಿದ್ದರು.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications