ನಮ್ಮ ಮೇಲೆ 7 ಬಾರಿ ಅಟ್ಯಾಕ್ ಆಯ್ತು, ವಿಷ್ಣುವರ್ಧನ್ ಮೇಲೆ ರೇಜರ್ ಬೀಸಿದ್ರು: ವಿನೋದ್ ರಾಜ್
ಕನ್ನಡ ಚಿತ್ರರಂಗದ ಕಲಾವಿದರ ಮೇಲೆ ಈ ಹಿಂದೆ ಹಲವು ಬಾರಿ ದಾಳಿಗಳು ನಡೆದಿವೆ. ಈ ಬಗ್ಗೆ ನೇರವಾಗಿ ಮಾತನಾಡಿದ್ದರು ನಟ ವಿನೋದ್ ರಾಜ್. ಒಂದಲ್ಲ, ಎರಡಲ್ಲ ಬರೋಬ್ಬರಿ ಏಳು ಬಾರಿ ತಮ್ಮ ಮೇಲೆ ಅಟ್ಯಾಕ್ ಆಗಿತ್ತು ಎಂದು ವಿನೋದ್ ರಾಜ್ ಸಂದರ್ಶನವೊಂದರಲ್ಲಿ ಶಾಕಿಂಗ್ ವಿಚಾರಗಳನ್ನು ಹೇಳಿಕೊಂಡಿದ್ದರು. ಅಲ್ಲದೆ ನಟ ಸಾಹಸಸಿಂಹ ವಿಷ್ಣುವರ್ಧನ್ ಅವರ ಮೇಲೆ ಕೂಡ ಕೆಲ ವ್ಯಕ್ತಿಗಳು ಮಾರಕಾಸ್ತ್ರದಿಂದ ಹಲ್ಲೆ ಯತ್ನ ನಡೆಸಿದ್ದರು. ಇದು ನನ್ನ ಕಣ್ಣು ಮುಂದೆಯೇ ನಡೆಯಿತು ಎಂದಿದ್ದರು.
'ಅಂದು ತನ್ನ ಕಣ್ಣಾರೆ ನಡೆದ ಘಟನೆ ವಿವರಿಸಿದ್ದ ವಿನೋದ್ ರಾಜ್, ವಿಷ್ಣುವರ್ಧನ್ ಅವರ ಮೇಲೆ ಯಾಕೆ ಆವತ್ತು ಅಟ್ಯಾಕ್ ಮಾಡಿದ್ರೋ ನಿಜಕ್ಕೂ ಗೊತ್ತಿಲ್ಲ. ಅದನ್ನ ಅಭಿಮಾನಿಗಳೇ ಅರ್ಥ ಮಾಡಿಕೊಳ್ಳಬೇಕು. ನಾನು ಇವರೇ ಮಾಡಿದ್ದು, ಅವರೇ ಮಾಡಿದ್ದು ಅಂತ ಹೇಗೆ ಹೇಳೋದು?' ಎಂದು ಹೇಳಿದ್ದರು.
'ವಿಷ್ಣುವರ್ಧನ್ ಅವರ ಮೇಲೆ ಅಟ್ಯಾಕ್ ಆಗಿದ್ದನ್ನ ನಾನು ಕಣ್ಣಾರೆ ನೋಡಿದ್ದೆ. ನಾನು, ಅಮ್ಮ ಹಾಗೂ ವಿಷ್ಣುವರ್ಧನ್ ಅವರು ಒಂದು ಕಾರ್ಯಕ್ರಮಕ್ಕೆ ಹೋಗಿ ವಾಪಸ್ ಬರುವಾಗ ಯಾರೋ ರೇಜರ್ ತೆಗೆದು ಅಟ್ಯಾಕ್ ಮಾಡಿದ್ರು. ಆಗ ವಿಷ್ಣು ಅವರು ಸಡನ್ನಾಗಿ ತಪ್ಪಿಸಿಕೊಂಡು ತಮ್ಮ ಕೈಯಿಂದ ಸರಿಯಾಗಿ ಬಿಟ್ರು. ಇದರ ಉದ್ದೇಶವೇನು?' ಎಂದು ವಿನೋದ್ ರಾಜ್ ಬೇಸರ ಹೊರಹಾಕಿದ್ದರು.

'ನಮ್ಮ ಮೇಲೆ ಶೂಟೌಟ್ ಆಯ್ತು'
'ಶಾಂತಲಾ ಸಿಲ್ಕ್ ಹೌಸ್ನಲ್ಲಿ ನಮ್ಮ ಮೇಲೂ ಶೂಟೌಟ್ ಆಗಿತ್ತು. ಆದರೆ ಬೇರೆ ಏನೋ ಹೇಳಿ ಅದನ್ನ ಮುಚ್ಚಾಕಿದ್ರು. ಅದರ ಬಗ್ಗೆ ನನಗೆ ಏನೂ ಯೋಚನೆ ಇಲ್ಲ. ನಮ್ಮ ಮೇಲೆ ಏಳು ಬಾರಿ ಅಟ್ಯಾಕ್ ಆಯ್ತು. ನಮ್ಮ ಮೈಲನಹಳ್ಳಿ ತೋಟದ ಬಳಿಯೇ ಒಬ್ಬ ರೈಫಲ್ ಹಿಡಿದು ಬಂದಿದ್ದ. ಆದ್ರೆ ಇದೆಲ್ಲ ಯಾಕೆ ಅನ್ನೋದೆ ನಮಗೆ ಗೊತ್ತಿಲ್ಲ. ಎಲ್ಲ ವಿಚಿತ್ರವಾಗಿದೆ' ಎಂದು ಅಚ್ಚರಿ ವ್ಯಕ್ತಪಡಿಸಿದ್ದರು ವಿನೋದ್.
'ಒಮ್ಮೆ ನಮ್ಮ ಆಫೀಸ್ ಕೆಳಗೆ ಸ್ಕಾರ್ಪಿಯೋ ಕಾರು ನಿಲ್ಲಿಸಿದ್ರು. ಅಮ್ಮ ಕೆಳಗೆ ಇಳಿಯೋಕೆ ಆಗದೆ ಅಡ್ಡವಾಗಿ ನಿಲ್ಲಿಸಿದ್ರು. ಆ ಮೇಲೆ ಬಂದು ದುರಂಹಕಾರವಾಗಿ ಮಾತನಾಡಿದ. ಆ ವ್ಯಾನ್ ನಂಬರ್ ಚೆಕ್ ಮಾಡಿದ್ರೆ ಬೇರೆ ಮಾರುತಿ ಗಾಡಿಯ ನಂಬರ್ ಹಾಕಿಕೊಂಡಿದ್ದು ಗೊತ್ತಾಯ್ತು. ಗಾಡಿ ಸೀಜ್ ಮಾಡಿಸಿದ್ವಿ, ಆಮೇಲೆ ತಪ್ಪಾಯ್ತು ಅಂತ ಕೇಳಿಕೊಂಡ. ವಯಸ್ಸಾದ ನನ್ನ ತಾಯಿ ಕೆಳಗೆ ಬರೋಕಾಗದೆ ಅಲ್ಲೇ ನಿಂತಿದ್ರು, ಎಷ್ಟು ಒದ್ದಾಡಿರಬೇಕು, ನೀನು ಒಬ್ಬ ತಾಯಿಗೇ ತಾನೆ ಹುಟ್ಟಿದ್ದು? ಕನಿಕರ ಬರಲಿಲ್ವಾ? ಅಂತ ಕೇಳಿದೆ. ಆಗ ಆತ ಕಣ್ಣೀರು ಹಾಕುತ್ತಾ ಕಾಲಿಗೆ ಬೀಳಲು ಬಂದ' ಎಂದು ಮತ್ತೊಂದು ಘಟನೆ ವಿವರಿಸಿದ್ದರು.
'ಫ್ಯಾನ್ ವಾರ್ನಿಂದ ಮೂರನೆ ವ್ಯಕ್ತಿಗೆ ಲಾಭ!'
'ಅಭಿಮಾನಿಗಳ ನಡುವೆ ಯಾವುದೇ ಕಾರಣಕ್ಕೂ ಗಲಾಟೆ ಆಗಬಾರದು. ಇದು ಕರ್ನಾಟಕದಲ್ಲಿ ಮಾತ್ರ ಅಲ್ಲ, ಬೇರೆ ರಾಜ್ಯಗಳಲ್ಲೂ ನಡೆದಿದೆ. ಏನೇ ಆದರೂ ಸಮರಸದಿಂದ ಒಂದು ತೀರ್ಮಾನಕ್ಕೆ ಬಂದು ಸುಮ್ಮನಾಗಿದ್ದಾರೆ. ಆದರೆ ನಮ್ಮಲ್ಲಿ ಫ್ಯಾನ್ ವಾರ್ ಅನ್ನೋದು ಬೂದಿ ಮುಚ್ಚಿದ ಕೆಂಡವಾಗಿದೆ. ಇಲ್ಲಿ ನಾವು ಸಿನಿಮಾ ಮಾಡೋಕೆ ಬಂದಿದ್ದೀವಾ? ಜಗಳ ಮಾಡೋಕೆ ಬಂದಿದ್ದೀವಾ? ನಾವು ನಾವೇ ಜಗಳ ಆಡಿಕೊಂಡಿದ್ರೆ ಮೂರನೇ ವ್ಯಕ್ತಿ ಲಾಭ ಮಾಡಿಕೊಳ್ತಾರೆ, ಇದು ಚಿತ್ರರಂಗ ಮಾತ್ರ ಅಲ್ಲ, ಎಲ್ಲ ಕಡೆಯೂ ಇದೆ' ಎಂದಿದ್ದರು.
-
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು? -
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ -
ಬೆಂಗಳೂರು ಏರ್ಪೋರ್ಟ್ಗೆ ಸತತ 4ನೇ ಬಾರಿಯೂ ವಿಶ್ವದ 'ಅತ್ಯುತ್ತಮ ಏರ್ಪೋರ್ಟ್'ಪ್ರಶಸ್ತಿ












Click it and Unblock the Notifications