ಅಮೃತಧಾರೆ ಧಾರಾವಾಹಿಗೆ ಕ್ಯಾಕರಿಸಿ ಉಗಿದ ಜನ..ಯಾಕೆ?
ಜೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿ ಮೇಲೆ ಪ್ರೇಕ್ಷಕರು ತೀರಾ ಅಸಮಾಧಾನಗೊಂಡಿದ್ದಾರೆ. ನಟ ರಾಜೇಶ್ ನಟರಂಗ, ವನಿತಾ ವಾಸು, ಛಾಯ ಸಿಂಗ್ ಸೇರಿದಂತೆ ದೊಡ್ಡ ಕಲಾವಿದರ ಸಮಾಗಮದಿಂದ ಆರಂಭದಲ್ಲೇ ಗೆದಿದ್ದ ಅಮೃತಧಾರೆ ಧಾರಾವಾಹಿ ಮೊದಮೊದಲು ಕಥೆ ಕೂಡ ಇಂಟ್ರಸ್ಟಿಂಗ್ ಆಗಿ ಪ್ರೇಕ್ಷಕರಿಗೆ ಹತ್ತಿರವಾಗಿತ್ತು.
ಗೌತಮ್ ದಿವಾನ್- ಭೂಮಿ ಟೀಚರ್ ಜೋಡಿಯನ್ನು ಜನ ಮನಸಾರೆ ಮೆಚ್ಚುಕೊಂಡಿಕೊಂಡಿದ್ದರು. ಈ ಜೋಡಿಯ ಸುತ್ತ ಹೆಣೆಯಲಾದ ಕಥೆಯಲ್ಲಿ ಗೌತಮ್ ದಿವಾನ್ ತಾಯಿ-ತಂಗಿ ಸಿಕ್ಕ ಕಥೆ ಕೂಡ ಜನರಿಗೆ ಇಷ್ಟವಾಗಿತ್ತು. ಆದರೆ ಬರಬರುತ್ತಾ ಅಮೃತಧಾರೆ ಧಾರಾವಾಹಿ ಕಥೆ ಹಳಿ ತಪ್ಪಿದಂತೆ ಕಾಣುತ್ತಿದ್ದು, ಗೌತಮ್ ದಿವಾನ್ಗೆ ಎರಡನೇ ಮದುವೆ ಎನ್ನುವ ಕಥಾ ವಸ್ತುವನ್ನು ಕೈಗೆತ್ತಿಕೊಳ್ಳಲಾಗಿದೆ.

ತನಗೆ ಮಗುವಾಗುವುದಿಲ್ಲ ಎನ್ನುವ ಸುಳ್ಳು ಮಾಹಿತಿಯನ್ನೇ ನಂಬಿರುವ ಭೂಮಿ, ಬೆಟ್ಟದಷ್ಟೂ ಪ್ರೀತಿಯಿದ್ದರೂ ಗೌತಮ್ ದಿವಾನ್ಗೆ ಎರಡನೇ ಮದುವೆ ಮಾಡಲು ಮುಂದಾಗಿದ್ದಾಳೆ. ಮಧುರಾ ಎನ್ನುವ ಪಾತ್ರವನ್ನು ಧಾರಾವಾಹಿಯಲ್ಲಿ ಹೊಸದಾಗಿ ಪರಿಚಯಿಸಲಾಗಿದ್ದು, ಗೌತಮ್ ದಿವಾನ್ಗೆ ಎರಡನೇ ಪತ್ನಿಯಾಗಲು ಆಕೆ ಕೂಡ ಒಪ್ಪಿದ್ದಾಳೆ. ಈ ಕಥಾ ಹಂದರಲ್ಲಿ ಅಮೃತಧಾರೆ ಧಾರಾವಾಹಿ ನಡೆಯುತ್ತಿದ್ದು, ಕಥೆ ಈ ರೀತಿಯ ತಿರುವು ಪಡೆದುಕೊಂಡ ಬಗ್ಗೆ ಪ್ರೇಕ್ಷಕರು ಅಸಮಧಾನಗೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಅಮೃತಧಾರೆ ಧಾರಾವಾಹಿ ಪ್ರೋಮೋಗಳಿಗೆ ಕಮೆಂಟ್ ಹಾಕುವ ಮೂಲಕ ಜನ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಕಥೆಗೆ ಒಂದು ಲಾಜಿಕ್ ಇಲ್ಲದೇ ತಗೆದುಕೊಂಡು ಹೋಗಲಾಗುತ್ತಿದೆ. ಎಂತಹ ದಡ್ಡರು ಕೂಡ ಆರೋಗ್ಯದ ವಿಚಾರದಲ್ಲಿ ಸೆಕೆಂಡ್ ಒಪಿನಿಯನ್ ಎಂದು ಬೇರೆ ವೈದ್ಯರ ಬಳಿ ಒಮ್ಮೆ ತೋರಿಸುತ್ತಾರೆ. ಆದರೆ ಟೀಚರ್ ಆಗಿರುವ ಭೂಮಿ ಮಾತ್ರ ಯಾರದೋ ಮಾತು ನಂಬಿಕೊಂಡು ಗಂಡನಿಗೆ ಎರಡನೇ ಮದುವೆ ಮಾಡುತ್ತಿರುವುದು ವಾಸ್ತವತೆಗೆ ದೂರವಾಗಿದೆ.

ಒಂದು ವೇಳೆ ಮಗು ಆಗುವುದಿಲ್ಲವಾದರೆ ವಿಜ್ಞಾನ ಎಷ್ಟು ಮುಂದುವರಿದೆ ಎನ್ನುವ ಅರಿವು ಗೌತಮ್ ದಿವಾನ್ನಂತಹ ದೊಡ್ಡ ಬ್ಯುಸಿನೆಸ್ಮೆನ್ಗೆ ಗೊತ್ತಿಲ್ಲವೇ..? ಎಂದು ಪ್ರಶ್ನಿಸಿರುವ ಜನರು ಈ ಧಾರಾವಾಹಿಯಲ್ಲಿ ದುಡ್ಡಿರುವ ವ್ಯಕ್ತಿ ಎಷ್ಟು ಮದುವೆ ಬೇಕಾದರೂ ಆಗಬಹುದು ಎನ್ನುವುದನ್ನು ತೋರಿಸುತ್ತಿದೆ. ಈಗಿನ ಎಲ್ಲಾ ಡೈರೆಕ್ಟರ್ಗಳಿಗೆ ಹೀರೋಗೆ ಎರಡು ಮದುವೆ ಮಾಡಿಸೋದು ಬಿಟ್ಟರೆ ಬೇರೆ ಆಲೋಚನೆಗಳೇ ಇಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಅಮೃತಧಾರೆ ಧಾರಾವಾಹಿಗೆ ಟ್ವಿಸ್ಟ್ ಕೊಡಲಾಗಿದ್ದು, ಇಂದಿನ ಪ್ರೋಮೋ ಪ್ರಕಾರ ಎರಡನೇ ಮದುವೆಗೆ ಸಿದ್ಧವಾಗಿ ಕುಳಿತ ಗೌತಮ್ ದಿವಾನ್ ಮತ್ತೆ ಭೂಮಿಗೆ ತಾಳಿಕಟ್ಟಿ ಏಳೇಳು ಜನ್ಮಕ್ಕೂ ಇವರೇ ನನ್ನ ಪತ್ನಿ ಎಂದು ಹೇಳುತ್ತಾನೆ. ಈ ಮೂಲಕ ಧಾರಾವಾಹಿ ತಂಡ ಪ್ರೇಕ್ಷಕರ ಅಸಮಾಧಾನವನ್ನು ಶಮನ ಮಾಡಿದೆ.
-
Jana Nayagan: ದಳಪತಿ ವಿಜಯ್ ಚಿತ್ರಕ್ಕೆ ಪೈರಸಿ ಕಾಟ: ಸೋರಿಕೆಯಾದ ‘ಜನ ನಾಯಗನ್’ ಕ್ಲಿಪ್, ಶೇರ್ ಮಾಡಿದರೆ ಬೀಳುತ್ತೆ ಕೇಸ್ -
Asha Bhosle: ಸಂಗೀತ ಜಗತ್ತಿಗೆ ಆಶಾ ಭೋಸ್ಲೆ ನೀಡಿದ ಕೊಡುಗೆ ಅಪಾರ: ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ











Click it and Unblock the Notifications