Get Updates
Get notified of breaking news, exclusive insights, and must-see stories!

ಪ್ರಭಾಕರ್‌ ಮಗನನ್ನ ತುಳೀಬೇಡಿ: ನಟ ವಿನೋದ್‌ ರಾಜ್‌ ಹೀಗಂದಿದ್ದೇಕೆ?

ಸ್ಯಾಂಡಲ್‌ವುಡ್‌ ಸೇರಿದಂತೆ ಬಹುಭಾಷೆಗಳಲ್ಲಿ ಮಿಂಚಿದ್ದ ನಟ ಟೈಗರ್‌ ಪ್ರಭಾಕರ್‌. ಇದೀಗ ಅವರ ಪುತ್ರ ವಿನೋದ್‌ ಪ್ರಭಾಕರ್‌ ಕೂಡ ನಟರಾಗಿದ್ದಾರೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ಗೆದ್ದಿರುವ ಅವರ ವಿನೋದ್‌ ಪ್ರಭಾಕರ್‌ ಅವರು ಮಾದೇವ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್‌ ಆಗಿತ್ತು. ಇದೀಗ ನಟ ವಿನೋದ್‌ ರಾಜ್‌ ಅವರು ಮಾಧ್ಯಮಗಳ ಮುಂದೆ ಮನವಿ ಮಾಡಿದ್ದಾರೆ. ಪ್ರಭಾಕರ್‌ ಅವರ ಮಗನನ್ನು ತುಳಿಯಬೇಡಿ ಎಂದು ಹೇಳಿದ್ದಾರೆ. ವಿನೋದ್‌ ರಾಜ್‌ ಹೀಗೆ ಹೇಳಲು ಕಾರಣವೇನು ಎಂಬ ವಿವರ ಇಲ್ಲಿದೆ..

ಕನ್ನಡ ಸಿನಿಮಾಗಳಿಗೆ ಕನ್ನಡ ನೆಲದಲ್ಲೇ ಉಳಿಗಾಲವಿಲ್ಲ, ಬೆಲೆ ಇಲ್ಲ ಎನ್ನುವ ದೂರು ಮೊದಲಿನಿಂದಲೂ ಇದೆ. ಈಗ ಇದೇ ಪ್ರವೃತ್ತಿ ಮುಂದುವರಿದಿದೆ. ಕನ್ನಡ ಸಿನಿಮಾಗಳಿಗೆ ಥಿಯೇಟರ್‌ಗಳು ಸಿಗುತ್ತಿಲ್ಲ, ಸಿಕ್ಕರೂ ಪರಭಾಷೆ ಸಿನಿಮಾಗಳು ಬಂದರೆ ಕನ್ನಡ ಸಿನಿಮಾಗಳನ್ನು ಎತ್ತಂಗಡಿ ಮಾಡಲಾಗುತ್ತಿದೆ ಎಂದು ಹಲವು ನಟರು ಕಣ್ಣೀರು ಹಾಕಿದ್ದರು. ಈಗ ವಿನೋದ್‌ ಪ್ರಭಾಕರ್‌ ಅವರು ಕೂಡ ಇದೇ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಾರೆ.

veteran-actor-vinod-raj-urges-support-for-vinod-prabhakar-films

ತಮ್ಮ ಮಾದೇವ ಸಿನಿಮಾಗೆ ಥಿಯೇಟರ್‌, ಮಲ್ಟಿಪ್ಲೆಕ್ಸ್‌ಗಳಲ್ಲಿ ಅವಕಾಶ ನೀಡುತ್ತಿಲ್ಲ ಎಂದು ಕರ್ನಾಟಕ ಫಿಲ್ಮ್‌ ಚೇಂಬರ್‌ ಬಳಿ ಅಳಲು ತೋಡಿಕೊಂಡಿದ್ದಾರೆ. ಕನ್ನಡ ಸಿನಿಮಾಗಳಿಗೆ ಆಗುತ್ತಿರುವ ಈ ಅನ್ಯಾಯವನ್ನು ಕೂಡಲೇ ತಪ್ಪಿಸಿ ಎಂದು ಬೇಡಿಕೊಂಡಿದ್ದಾರೆ. ಇದೇ ವಿಚಾರವಾಗಿ ನಟ ವಿನೋದ್‌ ರಾಜ್‌ ಕೂಡ ವಿನೋದ್‌ ಪ್ರಭಾಕರ್‌ ಅವರೊಂದಿಗೆ ಧ್ವನಿ ಎತ್ತಿದ್ದಾರೆ. ವಿನೋದ್‌ ಅವರ ಮಾದೇವ ಸಿನಿಮಾ ರಿಲೀಸ್‌ ಆಗಿ, ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ವಿನೋದ್‌ ಅವರು ಪ್ರಭಾಕರ್‌ ಅವರ ಮಗ, ಅವರು ಕೂಡ ಬೆಳೆಯುತ್ತಿರುವ ವ್ಯಕ್ತಿ. ಅವರೂ ಬೆಳೆದರೆ ಇಂಡಸ್ಟ್ರಿಯ ಆಸ್ತಿ ಆಗ್ತಾರೆ. ಅವರನ್ನ ಬೆಳೆಯಲು ನಾವೇ ಬಿಡಬೇಕು ಎಂದು ವಿನೋದ್‌ ರಾಜ್‌ ಹೇಳಿದ್ದಾರೆ.

ಕನ್ನಡ ಚಿತ್ರಗಳಿಗೆ ಥಿಯೇಟರ್‌ಗಳಲ್ಲಿ ಅವಕಾಶವಿಲ್ಲ. ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ಸಿನಿಮಾಗಳನ್ನ ಯಾಕೆ ತೆಗೆಯುತ್ತಿದ್ದೀರಿ? ಕನ್ನಡ ಸಿನಿಮಾಗಳಿಗೆ ಒಂದಷ್ಟು ಸ್ಕ್ರೀನ್‌ಗಳನ್ನ, ಪ್ರೈಮ್‌ ಟೈಮ್‌ ಅನ್ನ ಮೀಸಲಿಡಬೇಕು. ನಾವು ತಿಂತಿರೋದು ಕರ್ನಾಟಕದ ಅನ್ನ, ಬೇರೆ ಭಾಷೆಗಳ ಸಿನಿಮಾಗಳಿಗೂ ಅವಕಾಶ ಕೊಡಿ, ಆದರೆ ಕನ್ನಡಕ್ಕೆ ಮೊದಲ ಆದ್ಯತೆ ಕೊಡಿ ಎಂದು ಮನವಿ ಮಾಡಿದ್ದಾರೆ. ನನ್ನ ಕಾಲದಲ್ಲಿ ಸಿಂಗಲ್‌ ಸ್ಕ್ರೀನ್‌ಗಳಲ್ಲಿ ನಾನು ಪಟ್ಟಪಾಡನ್ನೇ ವಿನೋದ್‌ ಪ್ರಭಾಕರ್‌ ಕೂಡ ಅನುಭವಿಸುತ್ತಿದ್ದಾರೆ. ಅವರು ಬೇರೆ ಸಿನಿಮಾಗಳಿಗೂ ಕಷ್ಟ ಆಗಬಾರದು ಅಂತ ಒದ್ದಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅವಕಾಶ ಸಿಕ್ಕರೆ ಎಷ್ಟೋ ಜನ ಮುಂದೆ ಬರುವವರಿದ್ದಾರೆ. ಕಾಂತಾರ ರೀತಿ ವಿನೋದ್‌ ಪ್ರಭಾಕರ್‌ ಸಿನಿಮಾ ಕೂಡ ಬೆಳೆಯಬಹುದು. ಯಾರಿಗೆ ಗೊತ್ತು ವಿನೋದ್‌ ಕೂಡ ದೊಡ್ಡ ನಟರಾಗಿ ಬೆಳೆಯಬಹುದು. ಪ್ರೋತ್ಸಾಹ ಕೊಟ್ಟರೆ ಮಾತ್ರವೇ ಇದೆಲ್ಲ ಸಾಧ್ಯವಾಗುತ್ತೆ. ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ವಿನೋದ್‌ ಅವರಿಗೆ ದೇವರು ಒಳ್ಳೇದು ಮಾಡ್ತಾರೆ ಎಂದು ಧೈರ್ಯ ತುಂಬಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+