ಸುದೀಪ್ ಸರ್ ಹೇಳಿದ ಆ ಮಾತಿಂದ ತುಂಬಾ ನೋವಾಯ್ತು: ತುಕಾಲಿ ಸಂತೋಷ್ ಹೇಳಿದ್ದೇನು?
ಬಿಗ್ಬಾಸ್ ಕನ್ನಡ ಹೊಸ ಸೀಸನ್ ಶುರವಾಗಲು ಇನ್ನೆರಡೇ ದಿನ ಬಾಕಿ ಇದೆ. ಸ್ಪರ್ಧಿಗಳು ಯಾರು ಎಂಬ ಕುತೂಹಲಕ್ಕೂ ತೆರೆ ಬೀಳಲಿದೆ. ಇದೇ ವೇಳೆ ಬಿಗ್ಬಾಸ್ ಕನ್ನಡ ಸೀಸನ್-10ರ ಸ್ಪರ್ಧಿಯಾಗಿದ್ದ ತುಕಾಲಿ ಸಂತೋಷ್ ಹೊಸ ಸ್ಪರ್ಧಿಗಳಿಗೆ ಟಿಪ್ಸ್ ನೀಡಿದ್ದಾರೆ. ಬಿಗ್ಬಾಸ್ ಮನೆಗೆ ಹೋಗುವವರು ಹೇಗಿರಬೇಕು? ಹೇಗೆಲ್ಲ ಆಟ ಆಡಬೇಕು ಎಂದು ತಮ್ಮ ಅನುಭವದೊಂದಿಗೆ ಸಲಹೆ ನೀಡಿದ್ದಾರೆ. ಜೊತೆ ಸುದೀಪ್ ಸರ್ ಅವರು ಆಡಿದ ಮಾತಿನಿಂದ ನೋವಾಗಿತ್ತು ಎಂದೂ ತುಕಾಲಿ ಹೇಳಿಕೊಂಡಿದ್ದಾರೆ.
'ಬಿಗ್ಬಾಸ್ ಅನುಭವ ಅಂದ್ರೆ ಒಂದು ಕಾಣದ ಜಗತ್ತಿನ ಒಳಗೆ ಹೋದಂತೆ. ಅಲ್ಲಿ ನಮಗೆ ಒಂದು ಫೋನ್ ಇರಲ್ಲ, ನೆಟ್ವರ್ಕ್ ಇರೋದಿಲ್ಲ. ಅಲ್ಲಿ ಯಾರೂ ನಮಗೆ ಗೊತ್ತಿರಲ್ಲ, ಪರಿಚಯ ಇರೋದಿಲ್ಲ. ಬಿಗ್ಬಾಸ್ ಮನೆಯೊಳಗೆ ಒಂದು ಹದಿನೆಂಟು ಜನರನ್ನ ಬಿಟ್ಟು ನಿಮಗೆ ನೀವೇ ಆಟ ಆಡಿಕೊಳ್ಳಿ ಎಂದು ಮನಸ್ಸುಗಳ ನಡುವೆ ಆಡೋ ಆಟ ಅದು' ಎಂದು ತುಕಾಲಿ ಸಂತೋಷ್ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.

'ಆ ಆಟವನ್ನು ಅನುಭವಿಸುವುದೇ ಒಂದು ಸ್ವರ್ಗ. ಮನುಷ್ಯ ಆದವನು ಬಿಗ್ಬಾಸ್ ಅನುಭವವನ್ನು ಒಂದು ದಿನವಾದ್ರೂ ಹಂಚಿಕೊಳ್ಳಬೇಕು. ಆ ದಿನ ನಿಜಕ್ಕೂ ಪರಿಪೂರ್ಣವಾಗುತ್ತೆ ಅನ್ನೋದು ನನ್ನ ಅಭಿಪ್ರಾಯ. ಬಿಗ್ಬಾಸ್ನ ಇನ್ನೊಂದು ಅನುಭವ ಅಂದ್ರೆ ಅದು ಕಿಚ್ಚ ಸುದೀಪ್ ಸರ್. ಅವರು ಫಿನಾಲೆವರೆಗೆ ನಮ್ಮ ಜೊತೆ ಇದ್ದು ಮಾತನಾಡಿಸುತ್ತಾರೆ. ಅದೇ ದೊಡ್ಡ ಅನುಭವ. ಆ ಜಗತ್ತಿನೊಳಗೆ ಹೋಗಿ ನಾವೇ ದುಡಿದುಕೊಂಡು, ತಿನ್ಕೊಂಡು ಕೊನೆಗೆ ಗೆದ್ದು ಬರೋದು ಒಂದು ಚಾಲೆಂಜ್. ಆ ಅನುಭವವನ್ನ ಯಾರೂ ಮಿಸ್ ಮಾಡಿಕೊಳ್ಳಬಾರದು' ಎಂದಿದ್ದಾರೆ.
'ಸುದೀಪ್ ಸರ್ ಮಾತು ಕೇಳಿ ಶಾಕ್ ಆಯ್ತು'
'ವಾರ ವಾರವೂ ಟಾಸ್ಕ್ ಇರುತ್ತೆ. ಜೊತೆಯಲ್ಲಿ ಇದ್ದವರನ್ನ ನೋಡಿ ನೋಡಿ ಬೇಜಾರಾಗಿರುತ್ತೆ. ಅವರನ್ನೇ ನಾಮಿನೇಟ್ ಮಾಡೋದು ಎಲ್ಲ ಇರುತ್ತೆ. ಆ ವಾರದಲ್ಲಿ ಏನಾದರೂ ತಪ್ಪು ಮಾಡಿದ್ರೆ, ಸರಿ ಮಾಡಿದ್ರೆ ಹೊಗಳೋಕೆ ಸುದೀಪ್ ಸರ್ ಬರ್ತಾರೆ ಅಂತ ಕಾಯುತ್ತೀವಿ. ಶುರುವಿನಲ್ಲಿ ನಾನು ಸಿಕ್ಕಾಪಟ್ಟೆ ಕಾಮಿಡಿ ಮಾಡ್ಕೊಂಡು ಇರ್ತಿದ್ದೆ. ನನ್ನ ಯಾರೂ ಎಲಿಮಿನೇಟ್ ಮಾಡೋಕೆ ಸಾಧ್ಯನೇ ಇಲ್ಲ ಅನ್ಕೊಂಡಿದ್ದೆ. ಆದರೆ ಸುದೀಪ್ ಸರ್ ಬಂದು ನೀವು ಮಾಡ್ತಿರೋದು ಕಾಮಿಡಿ ಅಲ್ಲ, ಬೇರೆಯವರಿಗೆ ನೋವು ಮಾಡ್ತಿದ್ದೀರಿ ಅಂದ್ರು. ಆ ವಿಚಾರಕ್ಕೆ ನನಗೆ ನೋವು ಕೂಡ ಆಯ್ತು' ಎಂದಿದ್ದಾರೆ.
'ಕೊನೆಗೆ ಎಲ್ಲ ಸ್ಪರ್ಧಿಗಳು ನನ್ನನ್ನೇ ನಾಮಿನೇಟ್ ಮಾಡೋಕೆ ಶುರು ಮಾಡಿದ್ರು. ಇದು ನನಗೆ ತುಂಬಾ ದೊಡ್ಡ ಹೊಡೆತ ಕೊಟ್ಟಿತು. ತುಕಾಲಿ ಸರಿ ಇಲ್ಲ ಅನ್ನೋ ಮಾತು ಎಲ್ಲೆಡೆ ಕೇಳಿಬಂತು. ಕಾಮಿಡಿ ಮಾಡ್ಕೊಂಡು ಇದ್ದವನು ಬಿಗ್ಬಾಸ್ ಮನೆಗೆ ಹೋಗಿ ಹೊಸಬರನ ಜೊತೆ ಬದುಕೋದು ನಿಜಕ್ಕೂ ಕಷ್ಟ. ವೀಕೆಂಡ್ನಲ್ಲಿ ಸುದೀಪಣ್ಣ ಕೂಡ ಆ ರೀತಿ ಹೇಳಿದ್ದರಿಂದ ನನಗೆ ತುಂಬಾ ಸಮಸ್ಯೆ ಆಯ್ತು. ಆ ಮೇಲೆ ಕೂತು ಯೋಚನೆ ಮಾಡಿದೆ. ಇಲ್ಲಿ ಆಟ ಆಡೋದು ಹೇಗೆ ಅಂತ ಗೊತ್ತಾಯ್ತು. ಅದನ್ನ ನೋಡಿ ಸುದೀಪಣ್ಣ ಖುಷಿ ಪಟ್ಟರು. ಎಲ್ಲರೂ ಗುದ್ದಾಡಿಕೊಂಡು ಆಟ ಆಡಿದ್ರೆ, ನೀವು ಮಾತಲ್ಲೇ ಆಡ್ತಿದ್ದೀರಲ್ಲ ಅಂತ ಹೊಗಳಿದ್ರು. ನನಗೆ ಸಿಕ್ಕಾಪಟ್ಟೆ ಸಪೋರ್ಟ್ ಕೂಡ ಮಾಡಿದ್ರು' ಎಂದು ತುಕಾಲಿ ಸಂತೋಷ್ ಬಿಗ್ಬಾಸ್ ಅನುಭವ ಹಂಚಿಕೊಂಡಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications