Darshan Thoogudeepa: ಜಗ್ಗೇಶ್ & ದರ್ಶನ್ ತೂಗುದೀಪ್ ನಡುವೆ ಮತ್ತೆ ದೋಸ್ತಿ? ಕಾಮಿಡಿ ಕಿಲಾಡಿ ವಿಡಿಯೋ ವೈರಲ್ ಗುರೂ!
ಜಗ್ಗೇಶ್ & ದರ್ಶನ್ ತೂಗುದೀಪ್ ಕಳೆದ 3-4 ವರ್ಷದಿಂದ ಹಾವು & ಮುಂಗುಸಿ ರೀತಿಯಲ್ಲಿ ಕಿತ್ತಾಡಿದ್ದಾರೆ. ಅದರಲ್ಲೂ ನಟ ಜಗ್ಗೇಶ್ ಮೇಲೆ ಅಟ್ಯಾಕ್ ಮಾಡಲು ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮುಂದಾಗಿದ್ದರು, ನಟ ಜಗ್ಗೇಶ್ ಶೂಟಿಂಗ್ ಮಾಡುವ ಜಾಗಕ್ಕೆ ಕೂಡ ನುಗ್ಗಿ ಗಲಾಟೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆದರೆ ಇದೀಗ ಕೊಲೆ ಆರೋಪ ಹೊತ್ತು ಜೈಲಿಗೆ ಸೇರಿರುವ ದರ್ಶನ್ ತೂಗುದೀಪ್ ಅವರ ಬಗ್ಗೆ ನವರಸ ನಾಯಕ ಜಗ್ಗೇಶ್ ನೀಡಿರುವ ಹೇಳಿಕೆ ವಿಡಿಯೋ ವೈರಲ್ ಆಗುತ್ತಿದೆ. ಆ ವಿಡಿಯೋ ನೋಡಲು ಮುಂದೆ ಓದಿ.
ಜಗ್ಗೇಶ್ ಕನ್ನಡ ಸಿನಿಮಾ ರಂಗದಲ್ಲಿ ಹಿರಿಯ ನಟ ಎನಿಸಿಕೊಂಡಿದ್ದು, ಹಲವು ವಿವಾದಗಳ ಮೂಲಕ ಸದ್ದು ಕೂಡ ಮಾಡಿದ್ದಾರೆ. ಅದರಲ್ಲೂ ನಟ ದರ್ಶನ್ ತೂಗುದೀಪ್ & ಜಗ್ಗೇಶ್ ನಡುವೆ ದೊಡ್ಡ ತಿಕ್ಕಾಟವೇ ನಡೆದಿತ್ತು. ದರ್ಶನ್ ತೂಗುದೀಪ್ ಬಗ್ಗೆ ಜಗ್ಗೇಶ್ ಅವರು ಭಾರಿ ಅಸಭ್ಯ ಪದ ಬಳಸಿ ಬೈದಿದ್ದಾರೆ ಎಂದು ಆರೋಪ ಮಾಡಿದ್ದ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು, ಜಗ್ಗೇಶ್ ಅವರ ಸಿನಿಮಾ ಶೂಟಿಂಗ್ ನಡೆಯುತ್ತಿದ್ದ ಜಾಗಕ್ಕೆ ನುಗ್ಗಿ ಗಲಾಟೆ ಕೂಡ ಮಾಡಿದ್ದರು. ಪರಿಸ್ಥಿತಿ ಹೀಗಿದ್ದಾಗ ಇಬ್ಬರೂ ಮಾತು ಬಿಟ್ಟಿದ್ದರು. ಆದರೆ ಈಗ ನಟ ಜಗ್ಗೇಶ್ ಅವರು ದರ್ಶನ್ರ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ? ಕುತೂಹಲಕಾರಿ ವಿಡಿಯೋಗೆ ಮುಂದೆ ಓದಿ.

ದರ್ಶನ್ ಬಗ್ಗೆ ಜಗ್ಗೇಶ್ ಮಾತು!
ಕನ್ನಡ ಸಿನಿಮಾ ರಂಗ ಒಗ್ಗಟ್ಟಿನಿಂದ ಇತ್ತು, ಅದರಲ್ಲೂ ಕನ್ನಡ ಸಿನಿಮಾ ರಂಗದ ಒಗ್ಗಟ್ಟು ಇಡೀ ಭಾರತದ ಇತರ ಭಾಷೆಗಳ ಅಂದ್ರೆ ಹಿಂದಿ, ತೆಲುಗು, ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಕೂಡ ಒಗ್ಗಟ್ಟು ಮೂಡಿಸಲು ಕಾರಣ ಆಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಭಿಮಾನಿಗಳ ಗಲಾಟೆ & ಬಡಿದಾಟದ ಕಾರಣ ಕನ್ನಡ ಸಿನಿಮಾ ರಂಗ ಒಡೆದ ಮನೆಯಾಗಿದೆ. ಹೀಗಿದ್ದರೂ ನಟ ಜಗ್ಗೇಶ್ ಅವರು ಇದೀಗ ದರ್ಶನ್ ತೂಗುದೀಪ್ ಬಗ್ಗೆ ನೀಡಿರುವ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದೆ.
ದರ್ಶನ್ ತೂಗುದೀಪ್ ಫ್ಯಾನ್ಸ್ ಖುಷ್!
ಹೌದು, ವಿಡಿಯೋ ನೋಡಿದ್ರಲ್ಲ? 'ಕಾಮಿಡಿ ಕಿಲಾಡಿ'ಗಳು ವೇದಿಕೆಯಲ್ಲಿ ಒಬ್ಬ ಹಾಸ್ಯ ನಟ ಕನ್ನಡ ಕಲಾವಿದರ ಮಿಮಿಕ್ರಿ ಮಾಡುತ್ತಿದ್ದ. ಈ ವೇಳೆ ಜಗ್ಗೇಶ್ ಅವರು ಕನ್ನಡದ ನಟರನ್ನು ಹೆಸರಿನಿಂದ ಗುರುತಿಸಿ, ಮಿಮಿಕ್ರಿ ಅಂದ್ರೆ ಸ್ಟಾರ್ ನಟರ ಮಾತಿನ ಶೈಲಿ & ಧ್ವನಿ ಅನುಕರಣೆ ಮಾಡಲು ಹೇಳುತ್ತಿದ್ದರು. ಹೀಗಿದ್ದಾಗ ನಟ ದರ್ಶನ್ ತೂಗುದೀಪ್ ಅವರ ಮಿಮಿಕ್ರಿ ಕೂಡ ಮಾಡು ಎಂದು ಜಗ್ಗೇಶ್ ಅವರು ಮನವಿ ಮಾಡಿಕೊಂಡರು. ಅಲ್ಲದೆ ಈ ಮೂಲಕ ತಮಗೆ ಕೂಡ ದರ್ಶನ್ ತೂಗುದೀಪ್ ಅವರ ಬಗ್ಗೆ ಗೌರವ ಇದೆ ಎಂಬುದನ್ನು ತೋರಿಸಿದ್ದಾರೆ. ಈಗ ವಿಡಿಯೋ ನೋಡಿ ದರ್ಶನ್ ತೂಗುದೀಪ್ರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ನಾಯಿ ಮರಿ ಗಿಫ್ಟ್ ಕೊಟ್ಟಿದ್ದ ಡಿ-ಬಾಸ್?
ಪವಿತ್ರಾ ಗೌಡ ಒಬ್ಬರೇ ಇರುತ್ತಿದ್ದ ಕಾರಣಕ್ಕೆ ಅವರ ರಕ್ಷಣೆಗೆ ಅಂತಾ ಖುದ್ದು ದರ್ಶನ್ ಅವರೇ ಬುಲ್ ಡಾಗ್ ನಾಯಿ ತಳಿಯನ್ನು ಕೊಡಿಸಿದ್ದರು ಎಂಬ ಮಾತು ಓಡಾಡುತ್ತಿದೆ. ಆದರೆ ಇದರ ಬಗ್ಗೆ ಅಧಿಕೃತ ಹೇಳಿಕೆ ಸಿಕ್ಕಿಲ್ಲ. ಹೀಗಿದ್ದಾಗ, ರೇಣುಕಾ ಸ್ವಾಮಿ ಮರ್ಡರ್ ಆಗಲು ಪವಿತ್ರಾ ಕಾರಣ ಎಂಬ ಆರೋಪದ ಹಿನ್ನೆಲೆ, ಪೊಲೀಸರು ಅರೆಸ್ಟ್ ಮಾಡಿಕೊಂಡು ಕರ್ಕೊಂಡು ಹೋಗಿ ಜೈಲಿಗೆ ತಳ್ಳಿದ್ದಾರೆ. ಹೀಗೆ ಪವಿತ್ರಾ ಜೈಲಿಗೆ ಹೋದ ನಂತರ ಆ ನಾಯಿಗಳು ಅನಾಥವಾಗಿವೆ.
ದರ್ಶನ್ ಮನೆಗೆ ನಾಯಿಗಳು ಶಿಫ್ಟ್?
ಕೇಸ್ನ ಮತ್ತೊಬ್ಬ ಕೊಲೆ ಆರೋಪಿ ಪವನ್ ನಾಯಿಗಳನ್ನು ನೋಡಿಕೊಳ್ಳುತ್ತಿದ್ದನಂತೆ. ಆದರೆ ದರ್ಶನ್ ಬಳಿ ಫಿಟಿಂಗ್ ಇಟ್ಟು, ಎಲ್ಲರ ಬಾಳು ಹಾಳು ಮಾಡಿದ್ದೇ ಈ ಪವನ್ ಎಂಬ ಆರೋಪ ಇದೆ. ಹೀಗಿದ್ದಾಗ ಅನಾಥವಾಗಿದ್ದ ಪವಿತ್ರಾ ಗೌಡ ಮನೆ ನಾಯಿಗಳನ್ನ ರಕ್ಷಣೆ ಮಾಡಿ ದರ್ಶನ್ ಮನೆಗೆ ಶಿಫ್ಟ್ ಮಾಡಲಾಗಿದೆ. ಇನ್ನೊಂದು ನಾಯಿ ಮರಿಯನ್ನು ಪವಿತ್ರಾ ಗೌಡಳ ಸ್ನೇಹಿತರು ತೆಗೆದುಕೊಂಡು ಹೋಗಿದ್ದಾರಂತೆ. ನಾಯಿಗಳು ಈಗ ದರ್ಶನ್ ತೂಗುದೀಪ್ ಮನೆಯಲ್ಲಿ ಸೇಫ್ ಆಗಿವೆ ಎಂಬ ಮಾಹಿತಿ ಸಿಕ್ಕಿದ್ದು, ದರ್ಶನ್ ಅವರ ಮನೆಯಲ್ಲಿ ನಾಯಿಗಳನ್ನ ಆರೈಕೆ ಕೂಡ ಮಾಡಲಾಗುತ್ತಿದೆಯಂತೆ.
-
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ












Click it and Unblock the Notifications