Sudeep: ಮಗಳ ಶಾಲೆಯಲ್ಲಿ ರನ್ನಿಂಗ್ ರೇಸ್ ಸ್ಪರ್ಧಿಯಲ್ಲಿ 2ನೇ ಬಹುಮಾನ ಪಡೆದಿದ್ದ ಸುದೀಪ್
ನಟ ಕಿಚ್ಚ ಸುದೀಪ್ ಅವರು ಸಿನಿಮಾ, ರಿಯಾಲಿಟಿ ಶೋ, ಕ್ರಿಕೆಟ್ ಅಂತ ಇಂಡಸ್ಟ್ರಿಯಲ್ಲಿಯೇ ಸಮಯ ಕಳೆಯುವವರು. ಆದರೆ, ಕುಟುಂಬಕ್ಕೆ ಸಮಯ ಹೇಗೆ ಕೊಡ್ತಾರೆ ಎಂಬ ಕುತೂಹಲ ಸಾಮಾನ್ಯವಾಗಿ ಇದ್ದೆ ಇರುತ್ತದೆ. ಕುಟುಂಬದ ಸದಸ್ಯರಿಗೆ ಯಾವಾಗ ಸಮಯವನ್ನ ನೀಡುತ್ತಾರೆ ಎನ್ನುವ ಪ್ರಶ್ನೆಗೆ ಸಹಜವಾಗಿಯೇ ಎಲ್ಲಾರಲ್ಲೂ ಇದ್ದೆ ಇದೆ. ಈ ಪ್ರಶ್ನೆಗೆ ಕಿಚ್ಚ ಸುದೀಪ್ ಅವರು ಈಗಾಗಲೇ ಉತ್ತರವನ್ನ ನೀಡಿದ್ದಾರೆ.
ಕಿಚ್ಚ ಸುದೀಪ್ ಕನ್ನಡ ಇಂಡಸ್ಟ್ರಿಯ ಬಿಗ್ ಸ್ಟಾರ್. ಅವರನ್ನ ನೋಡುವುದಕ್ಕೆ ಅಭಿಮಾನಿಗಳು ಕ್ಯೂ ನಿಲ್ಲುತ್ತಾರೆ. ಅವರಿಗಾಗಿ ಕಾಯುತ್ತಾರೆ. ಅವರ ಸಿನಿಮಾಗಳನ್ನ ಅಭಿಮಾನಿಗಳು ಸೆಲೆಬ್ರೇಟ್ ಮಾಡುತ್ತಾರೆ. ಹೊರಗಡೆ ಯಾವುದಾದರೊಂದು ವಿಚಾರ ಮಾತನಾಡುವಾಗ ಬಹಳ ಪ್ರಬುದ್ಧವಾಗಿ, ತಪ್ಪು ಮಾಡಿದವರಿಗೆ ಬುದ್ದಿ ಕಲಿಸುವಂತೆ ಮಾತನಾಡುತ್ತಾರೆ. ಇಷ್ಟು ದೊಡ್ಡ ನಟ ಕಿಚ್ಚನ ಬಗ್ಗೆ ಸಾಮಾನ್ಯ ಜನರಿಗೆ ಸಾಕಷ್ಟು ಕುತೂಹಲವಿರುತ್ತದೆ. ಅಲ್ಲದೇ ಕಿಚ್ಚ ಸುದೀಪ್ ಅವರ ವೈದಕ್ತಿಕ ಬದುಕು ಹೇಗೆ ಎನ್ನುವ ಕೆಲ ಪ್ರಶ್ನೆಗಳಿಗೆ ಸುದೀಪ್ ಅವರೇ ಉತ್ತರವನ್ನ ನೀಡಿದ್ದಾರೆ.

ಜೀ ಕನ್ನಡದ ಸರಿಗಮಪ ವೇದಿಕೆಗೆ ಕಿಚ್ಚ ಸುದೀಪ್ ಅವರು ಆಹ್ವಾನಿಸಿದ್ದು. ಈ ವೇಳೆ ಜೀ ಕನ್ನಡ ಟೀಮ್ ಮಗಳು ಹಾಗೂ ಪತ್ನಿ ಪ್ರಿಯಾ ಅವರನ್ನು ಕರೆಸಿ ಸರ್ಪೈಸ್ ನೀಡಿದೆ. ಈ ವೇಳೆ ಜೀ ವೇದಿಕೆಗೆ ಕಿಚ್ಚ ಸುದೀಪ್ ಕಳೆದ ವರ್ಷ ಅಂದ್ರೆ ಡಿಸೆಂಬರ್ 25 ರಂದು ರಿಲೀಸ್ ಆದ 'ಮ್ಯಾಕ್ಸ್' ಸಿನಿಮಾ ಯಶಸ್ವಿ ಪ್ರದರ್ಶನದ ಖುಷಿಯನ್ನ ಜೀ ಕನ್ನಡ ವಾಹಿನಿ ಸಂಭ್ರಮಿಸಿದೆ.
ಈ ವೇದಿಕೆಯಲ್ಲಿ ಮಗಳಿಗಾಗಿ ಹಾಡಿದ ಕಿಚ್ಚ ಸಾನ್ವಿ ಸ್ಟೇಜ್ಗೆ ಬರುವುದಕ್ಕೂ ಮುನ್ನವೇ ಹಾಡು ಹಾಡುತ್ತಾ ಬಂದಿದ್ದಾರೆ. 'ಜಸ್ಟ್ ಮಾತ್ ಮಾತಲ್ಲಿ' ಹೇಳುತ್ತಾ, ಕಿಚ್ಚನ ಕಣ್ಣಲ್ಲಿ ನೀರು ತರಿಸಿದ್ದಾರೆ. ಮಗಳನ್ನು ಕಂಡು ಕಿಚ್ಚನಿಗೆ ಖುಷಿಯಾಗಿದೆ. ಸರ್ಪೈಸ್ ಎಂದ ಮಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ. ಆ ಭಾವನಾತ್ಮಕ ಕ್ಷಣ ಅಭಿಮಾನಿಗಳಿಗಂತು ಫುಲ್ ಥ್ರಿಲ್ಲಿಂಗ್ ಫೀಲ್ ಕೊಟ್ಟಿದೆ. ನಾನು ಅವಳಿಗೆ ಅಪ್ಪ ಅನ್ನೋದೆ ಹೆಮ್ಮೆ ಎಂದು ಕಿಚ್ಚ ಹೊಗಳಿದ್ದಾರೆ.
ಇನ್ನೂ ಮಗಳ ಶಾಲಾ-ಕಾಲೇಜು ದಿನಗಳು ಇದೇ ವೇದಿಕೆಯಲ್ಲಿ ಪ್ರಿಯಾ, ಸುದೀಪ್ ಅವರನ್ನು ಕರೆಸಿದ ಅನುಶ್ರೀ ಅಪ್ಪ - ಮಗಳಿಗೆ ಕುತೂಹಲಕಾರಿ ಪ್ರಶ್ನೆಗಳನ್ನ ಕೇಳಿದ್ದಾರೆ. ನೀವೂ ಅಪ್ಪ ಅಂತೀರಾ ಡ್ಯಾಡಿ ಅಂತೀರಾ ಯಾವ ಥರ ಕರೀತೀರಾ ಸುದೀಪ್ ಸರ್ ನಾ..? ಶಾಲೆಗೆಲ್ಲಾ ಬಿಟ್ಟು ಬರ್ತಿದ್ರಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಸುದೀಪ್ ಪುತ್ರಿ ಸಾನ್ವಿ, 'ಅಪ್ಪಾ ಅಂತ ಕರೀತಿನಿ. ನನ್ನ ಶಾಲೆಗೆ ಅವರೇ ಕರೆದುಕೊಂಡು ಹೋಗಿ, ಕರೆದುಕೊಂಡು ಬರ್ತಾ ಇದ್ರು ಎಂದಿದ್ದಾರೆ.
ಮರೆಯಲಾಗದ ದಿನ ನೆನೆದ ಕಿಚ್ಚ ಸಾನ್ವಿ ಈ ಮಾತು ಹೇಳ್ತಾ ಇದ್ದಂತೆ ಕಿಚ್ಚ ಸುದೀಪ್ ಅವರು ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಅವರ ಸ್ಕೂಲಲ್ಲಿ ರನ್ನಿಂಗ್ ರೇಸ್ ಎಲ್ಲಾ ಓಡಿದ್ದೀನಿ. ಸೆಕೆಂಡ್ ಬಂದಿದ್ದೀನಿ. ನಾಲ್ಕು ಸಲ ಓಡಿದ್ದೀನಿ. ಈ ಥರ ಓಡಬೇಕು ಅಂತ ಬಂದಾಗ ನಾನು ಆಕ್ಚುಲಿ ಖುರ್ಚಿಯಿಂದ ಸ್ವಲ್ಪ ಕೆಳಗೆ ಹೋದೆ. ಹುಡುಕ್ತಾ ಇದ್ರು ಎಲ್ಲೋದ್ರು ಅಂತ. ಕಿಚ್ಚ ಸುದೀಪ್ ಸ್ಟೈಲ್ನಲ್ಲಿ ಹೋಗಿರ್ತೀವಿ. ಸಡನ್ ಆಗಿ ಓಡಿ ಅಂತಿದ್ದಾರೆ. ಓಡೋದಕ್ಕೆ ರೇಸಲ್ಲಿ ಇಳಿದಿದ್ದೀನಿ. ಬಟ್ ಅಕ್ಕ ಪಕ್ಕ ಇರೋದು ಸಿಂಹನ, ಹುಲಿನ, ಚಿರತೆನಾ ಗೊತ್ತಿಲ್ಲ. ಮರ್ಯಾದೆಯಿಂದ ಮೆತ್ತಗೆ ಓಡ್ರೋ ಅಂತ ಹೇಳುವಂಗು ಇಲ್ಲ. ನಾನು ಓಡಿದೆ. ಆದ್ರೆ ಯಾರೋ ಅಪ್ಪ, ಚಪ್ಪಲಿ ಗಿಪ್ಪಲಿ ಬಿಚ್ಚಿ ಓಡ್ತಾ ಇದ್ದರು. ಅವ್ರೆನು ಗೆಲ್ಲೋದಕ್ಕೆ ಓಡ್ತಾ ಇದಾರೋ ಅಥವಾ ಹೆಂಡತಿ ಹಿಂದೆ ಓಡ್ತಾ ಇದಾರೋ ಗೊತ್ತಾಗ್ಲಿಲ್ಲ ಎಂದು ಹೇಳಿ ಎಲ್ಲರನ್ನು ನಕ್ಕು ನಲಿಸಿದ್ದಾರೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು












Click it and Unblock the Notifications