Actress Prema: ಬೆಳ್ಳಿತೆರೆಯಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದ ಪ್ರೇಮಾ 'ಅದೇ' ವ್ಯಕ್ತಿಯನ್ನು ಮದುವೆಯಾಗಿದ್ದೇಕೆ?
ನಟಿ ಪ್ರೇಮಾ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ರಾಜೇಶ್ ಗೌಡ ಯುಟ್ಯೂಬ್ ಚಾನೆಲ್ನ ಸಂದರ್ಶನಲ್ಲಿ ಮಾತನಾಡಿದ್ದು, ತಾವು ಯಾಕೆ ಅಷ್ಟು ಬೇಗ ಮದುವೆಯಾದೆ ಎನ್ನುವುದರ ಬಗ್ಗೆ ಕೂಡ ಮಾತನಾಡಿದ್ದಾರೆ. ಆ ಸಮಯಕ್ಕೆ ಬಹುಬೇಡಿಕೆ ನಟಿಯಾಗಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟು, ನಟ ದಿಗ್ಗಜರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದ ಪ್ರೇಮ ಅದೇ ವ್ಯಕ್ತಿಯನ್ನು ಯಾಕೆ ಮದುವೆಯಾದೆ ಎನ್ನುವುದರ ಬಗ್ಗೆ ಕೂಡ ಮಾತನಾಡಿದ್ದಾರೆ.
ಸಂದರ್ಶನಲ್ಲಿ ಮಾತನಾಡಿದ ನಟಿ ಪ್ರೇಮಾ 'ಆ ಸಮಯದಲ್ಲಿ ನನಗೇನು ಅನಿಸಿತು ಅಂದರೆ, ಪಾತ್ರಗಳು ಸರಿಯಾಗಿ ಸಿಗುತ್ತಿರಲಿಲ್ಲ. ಮನೆಯಲ್ಲಿ ಬೇರೆ ಒತ್ತಡ ಇತ್ತು. ಅಂದರೆ ನಮ್ಮ ತಾಯಿ ನೀನು ಮದುವೆಯಾಗಬೇಕು. ನೀನು ಆಗದಿದ್ದರೆ ನಿನ್ನ ತಂಗಿ ಆಗಲ್ಲ ಎನ್ನುತ್ತಿದ್ದರು. ತಂಗಿದು ಏಳು ವರ್ಷದ ಪ್ರೀತಿ ಇತ್ತು. ಅವಳ ಆಫೀಸ್ ಅಲ್ಲೇ. ಇಬ್ಬರೂ ಲವ್ ಮಾಡುತ್ತಿದ್ದರು..ಮನೆಯಲ್ಲೂ ಗೊತ್ತಿತ್ತು. ಅಕ್ಕನಿಗೆ ಮದುವೆಯಾಗದೇ ನಾನು ಹೇಗೆ ಮದುವೆ ಆಗಲಿ ಅನ್ನುವ ಆಲೋಚನೆ ಅವಳಿಗಿತ್ತು. ಆ ಎಲ್ಲಾ ಒತ್ತಡ ಇತ್ತು.

ಸಿನಿಮಾನೂ ಸರಿಯಾದ ಕಥೆಗಳು ಬರುತ್ತಿರಲಿಲ್ಲ. ಒಳ್ಳೆಯ ಕಥೆನು ಇರಲಿಲ್ಲ. ಅಂತಹ ಸಮಯದಲ್ಲಿ ಅಪ್ಪ ಅಮ್ಮನಿಗೆ ಬೇಸರ ಮಾಡಬಾರದು ಅಂತಾ ಮದುವೆಯಾದೆ. ನನ್ನದಾಗಿ ಒಂದೆರಡು ವರ್ಷದಲ್ಲಿ ತಂಗಿ ಮದುವೆಯಾದಳು. ನನ್ನದು ಅರೇಂಜ್ ಮ್ಯಾರೇಜ್ ಆಗಿತ್ತು' ಎಂದಿದ್ದಾರೆ.
'ಅದೇ ವ್ಯಕ್ತಿಯನ್ನು ಯಾಕೆ ಮದುವೆಯಾದೆ ಎನ್ನುವುದರ ಬಗ್ಗೆ ಮಾತನಾಡಿದ ಪ್ರೇಮಾ, ಅವರು ಮನೆಗೆ ಬರುತ್ತಿದ್ದರು. ನಾನೇ ಮದುವೆಯಾಗುತ್ತೇನೆ ಅಂತೆಲ್ಲಾ ಹೇಳುತ್ತಿದ್ದರು. ನಮ್ಮ ತಂದೆ-ತಾಯಿ ಜೊತೆಗೆಲ್ಲಾ ಅವರ ಬಗ್ಗೆ ಮಾತನಾಡಿದೆ. ಅವರೇ ಕೇಳಿದಾಗ ನೀವ್ಯಾಕೆ ಕೊಡಬಾರದು ಅಂತೆಲ್ಲಾ ಮನೆಯವರ ಜೊತೆ ಮಾತನಾಡಿದೆ. ಆಮೇಲೆ ಇಬ್ಬರ ಮನೆಯೂ ಹತ್ತಿರ ಇತ್ತು. ಹೋಗಿ ಬಂದು ಅಪ್ಪ ಅಮ್ಮನನ್ನು ನೋಡಿಕೊಳ್ಳಬಹುದು ಅಂತಾ ಆ ಉದ್ದೇಶದಿಂದ ನಾನು ಮದುವೆಯಾದೆ' ಎಂದಿದ್ದಾರೆ.
'ಮದುವೆಯಾದ ಹೊಸತರಲ್ಲಿ ನನಗೂ ಎಲ್ಲಾ ಹೆಣ್ಣು ಮಕ್ಕಳಂತೆ ಆಸೆ ನಿರೀಕ್ಷೆಗಳಿತ್ತು. ಅದೆಲ್ಲಾ ಈಡೇರದೆ ಇದ್ದಾಗ ನೋವಾಯ್ತು. ಅದನೆಲ್ಲಾ ದಾಟಿ ಬಂದೆ. ಅವರಿಂದಲೇ ನಾನು ಇವತ್ತು ಇಷ್ಟು ಗಟ್ಟಿಯಾಗಿದ್ದೇನೆ. ಈಗ ಅನಿಸುತ್ತೆ ಅವರಿಗೆ ಥ್ಯಾಂಕ್ಸ್ ಹೇಳಬೇಕು ಅಂತಾ..ತುಂಬಾ ಸ್ಟ್ರಾಂಗ್ ಆಗಿದ್ದೇನೆ. ಈ ಮೂಲಕ ಅವರಿಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ' ಎಂದು ಸಂದರ್ಶನಲ್ಲಿ ಹೇಳಿದ್ದಾರೆ.
-
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ












Click it and Unblock the Notifications