Actress Prema: ಬೆಳ್ಳಿತೆರೆಯಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದ ಪ್ರೇಮಾ 'ಅದೇ' ವ್ಯಕ್ತಿಯನ್ನು ಮದುವೆಯಾಗಿದ್ದೇಕೆ?
ನಟಿ ಪ್ರೇಮಾ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ರಾಜೇಶ್ ಗೌಡ ಯುಟ್ಯೂಬ್ ಚಾನೆಲ್ನ ಸಂದರ್ಶನಲ್ಲಿ ಮಾತನಾಡಿದ್ದು, ತಾವು ಯಾಕೆ ಅಷ್ಟು ಬೇಗ ಮದುವೆಯಾದೆ ಎನ್ನುವುದರ ಬಗ್ಗೆ ಕೂಡ ಮಾತನಾಡಿದ್ದಾರೆ. ಆ ಸಮಯಕ್ಕೆ ಬಹುಬೇಡಿಕೆ ನಟಿಯಾಗಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟು, ನಟ ದಿಗ್ಗಜರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದ ಪ್ರೇಮ ಅದೇ ವ್ಯಕ್ತಿಯನ್ನು ಯಾಕೆ ಮದುವೆಯಾದೆ ಎನ್ನುವುದರ ಬಗ್ಗೆ ಕೂಡ ಮಾತನಾಡಿದ್ದಾರೆ.
ಸಂದರ್ಶನಲ್ಲಿ ಮಾತನಾಡಿದ ನಟಿ ಪ್ರೇಮಾ 'ಆ ಸಮಯದಲ್ಲಿ ನನಗೇನು ಅನಿಸಿತು ಅಂದರೆ, ಪಾತ್ರಗಳು ಸರಿಯಾಗಿ ಸಿಗುತ್ತಿರಲಿಲ್ಲ. ಮನೆಯಲ್ಲಿ ಬೇರೆ ಒತ್ತಡ ಇತ್ತು. ಅಂದರೆ ನಮ್ಮ ತಾಯಿ ನೀನು ಮದುವೆಯಾಗಬೇಕು. ನೀನು ಆಗದಿದ್ದರೆ ನಿನ್ನ ತಂಗಿ ಆಗಲ್ಲ ಎನ್ನುತ್ತಿದ್ದರು. ತಂಗಿದು ಏಳು ವರ್ಷದ ಪ್ರೀತಿ ಇತ್ತು. ಅವಳ ಆಫೀಸ್ ಅಲ್ಲೇ. ಇಬ್ಬರೂ ಲವ್ ಮಾಡುತ್ತಿದ್ದರು..ಮನೆಯಲ್ಲೂ ಗೊತ್ತಿತ್ತು. ಅಕ್ಕನಿಗೆ ಮದುವೆಯಾಗದೇ ನಾನು ಹೇಗೆ ಮದುವೆ ಆಗಲಿ ಅನ್ನುವ ಆಲೋಚನೆ ಅವಳಿಗಿತ್ತು. ಆ ಎಲ್ಲಾ ಒತ್ತಡ ಇತ್ತು.

ಸಿನಿಮಾನೂ ಸರಿಯಾದ ಕಥೆಗಳು ಬರುತ್ತಿರಲಿಲ್ಲ. ಒಳ್ಳೆಯ ಕಥೆನು ಇರಲಿಲ್ಲ. ಅಂತಹ ಸಮಯದಲ್ಲಿ ಅಪ್ಪ ಅಮ್ಮನಿಗೆ ಬೇಸರ ಮಾಡಬಾರದು ಅಂತಾ ಮದುವೆಯಾದೆ. ನನ್ನದಾಗಿ ಒಂದೆರಡು ವರ್ಷದಲ್ಲಿ ತಂಗಿ ಮದುವೆಯಾದಳು. ನನ್ನದು ಅರೇಂಜ್ ಮ್ಯಾರೇಜ್ ಆಗಿತ್ತು' ಎಂದಿದ್ದಾರೆ.
'ಅದೇ ವ್ಯಕ್ತಿಯನ್ನು ಯಾಕೆ ಮದುವೆಯಾದೆ ಎನ್ನುವುದರ ಬಗ್ಗೆ ಮಾತನಾಡಿದ ಪ್ರೇಮಾ, ಅವರು ಮನೆಗೆ ಬರುತ್ತಿದ್ದರು. ನಾನೇ ಮದುವೆಯಾಗುತ್ತೇನೆ ಅಂತೆಲ್ಲಾ ಹೇಳುತ್ತಿದ್ದರು. ನಮ್ಮ ತಂದೆ-ತಾಯಿ ಜೊತೆಗೆಲ್ಲಾ ಅವರ ಬಗ್ಗೆ ಮಾತನಾಡಿದೆ. ಅವರೇ ಕೇಳಿದಾಗ ನೀವ್ಯಾಕೆ ಕೊಡಬಾರದು ಅಂತೆಲ್ಲಾ ಮನೆಯವರ ಜೊತೆ ಮಾತನಾಡಿದೆ. ಆಮೇಲೆ ಇಬ್ಬರ ಮನೆಯೂ ಹತ್ತಿರ ಇತ್ತು. ಹೋಗಿ ಬಂದು ಅಪ್ಪ ಅಮ್ಮನನ್ನು ನೋಡಿಕೊಳ್ಳಬಹುದು ಅಂತಾ ಆ ಉದ್ದೇಶದಿಂದ ನಾನು ಮದುವೆಯಾದೆ' ಎಂದಿದ್ದಾರೆ.
'ಮದುವೆಯಾದ ಹೊಸತರಲ್ಲಿ ನನಗೂ ಎಲ್ಲಾ ಹೆಣ್ಣು ಮಕ್ಕಳಂತೆ ಆಸೆ ನಿರೀಕ್ಷೆಗಳಿತ್ತು. ಅದೆಲ್ಲಾ ಈಡೇರದೆ ಇದ್ದಾಗ ನೋವಾಯ್ತು. ಅದನೆಲ್ಲಾ ದಾಟಿ ಬಂದೆ. ಅವರಿಂದಲೇ ನಾನು ಇವತ್ತು ಇಷ್ಟು ಗಟ್ಟಿಯಾಗಿದ್ದೇನೆ. ಈಗ ಅನಿಸುತ್ತೆ ಅವರಿಗೆ ಥ್ಯಾಂಕ್ಸ್ ಹೇಳಬೇಕು ಅಂತಾ..ತುಂಬಾ ಸ್ಟ್ರಾಂಗ್ ಆಗಿದ್ದೇನೆ. ಈ ಮೂಲಕ ಅವರಿಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ' ಎಂದು ಸಂದರ್ಶನಲ್ಲಿ ಹೇಳಿದ್ದಾರೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications