'ಈ 8-10 ವರ್ಷದಲ್ಲಿ ರಚಿತಾ ರಾಮ್ಗಿಂತ ಬ್ಯೂಟಿಯನ್ನು ನಾನು ನೋಡಿಲ್ಲ'
ಬೆಂಗಳೂರು, ಆಗಸ್ಟ್ 20: ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಶ್ರೀನಗರ ಕಿಟ್ಟಿ ಅಭಿನಯದ 'ಸಂಜು ವೆಡ್ಸ್ ಗೀತಾ 2' ಸಿನಿಮಾ ತೆರೆಕಾಣಲು ಸಜ್ಜಾಗುತ್ತಿದೆ. ನಾಗಶೇಖರ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಸದ್ಯ ಮುಕ್ತಾಯವಾಗಿದ್ದು, ಮುಂದಿನ ಕೆಲಸಗಳು ಕೂಡ ಭರದಿಂದ ಸಾಗುತ್ತಿದೆ. ಚಿತ್ರೀಕರಣ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ 'ಸಂಜು ವೆಡ್ಸ್ ಗೀತಾ 2' ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ, ದೇಶ-ವಿದೇಶದ ಚಿತ್ರೀಕರಣದ ಅನುಭವ ಹಾಗೂ ಚಿತ್ರ ತೆರೆ ಕಾಣಲು ನಡೆಸುತ್ತಿರುವ ಸಿದ್ಧತೆ ಬಗ್ಗೆ ಮಾತನಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಟ ಸಾಧು ಕೋಕಿಲ ಕೂಡ ಭಾಗಿಯಾಗಿ ಮಾತನಾಡಿದ್ದು, 'ಸಂಜು ವೆಡ್ಸ್ ಗೀತಾ 2 ಚಿತ್ರದಲ್ಲಿ ನಿರ್ದೇಶಕ ನಾಗಶೇಖರ್ ಅವರ ಪರಿಶ್ರಮ ಇದೆ. ನಿರ್ಮಾಪಕ ಸಾಥ್ ಇದೆ. ಸಿನಿಮಾವನ್ನು ತುಂಬಾ ಚೆನ್ನಾಗಿ ಮಾಡಲಾಗಿದೆ. ಬೇರೆ ದೇಶಕ್ಕೆ ಹೋಗಿ ಶೂಟಿಂಗ್ ಮಾಡುವುದು ಅಂದರೆ ಲಕ್ಷಾಂತರ ರೂಪಾಯಿ ಬೇಕು, ಇಷ್ಟು ದಿನ ಚಿತ್ರೀಕರಣ ಮಾಡಲು ಕೋಟ್ಯಂತರ ರೂಪಾಯಿ ಬೇಕು. ಜೊತೆಗೆ ಅವರ ಹಾರ್ಡ್ ವರ್ಕ್ ಸೇರಿ ಚಿತ್ರ ಚೆನ್ನಾಗಿದೆ' ಎಂದರು.

'ಸಂಜು ವೆಡ್ಸ್ ಗೀತಾ-1 ರಲ್ಲಿ ರಮ್ಯಾ ಅವರನ್ನು ತುಂಬಾ ಚೆನ್ನಾಗಿ ತೋರಿಸಿದ್ದೀರಿ. ಹೀಗಾಗಿ ಸಂಜು ವೆಡ್ಸ್ ಗೀತಾ 2ದಲ್ಲಿ ರಚಿತಾ ರಾಮ್ ಅವರನ್ನು ಹೇಗೆ ತೋರಿಸಿದ್ದೀರಿ ಅಂತಾ ಎಲ್ಲರೂ ಕೇಳುತ್ತಲೇ ಇರುತ್ತಾರೆ. ರಮ್ಯಾ ಅವರು ಚೆನ್ನಾಗಿದ್ದರು ಹೀಗಾಗಿ ಚೆನ್ನಾಗಿ ತೋರಿಸಲಾಗಿತ್ತು. ಇತ್ತೀಚಿನ ಹತ್ತು ಅಥವಾ ಎಂಟು ವರ್ಷಳಲ್ಲಿ ರಚಿತಾ ರಾಮ್ ಅವರಂತಹ ಬ್ಯೂಟಿ ಹೀರೋಯಿನ್ಅನ್ನು ನಾನಂತೂ ನೋಡಿಲ್ಲ. ನೀವು ಯಾರಾದರೂ ನೋಡಿದ್ದೀರಾ' ಎಂದು ಸಾಧು ಕೋಕಿಲ ಪ್ರಶ್ನಿಸಿದರು.

'ಬೇರೆಯವರು ಯಾರಿದ್ದರೂ ಕೂಡ ಹೇಳಿ. ನಾನಂತೂ ನೋಡಿಲ್ಲ ಎಂದು ಮಾತು ಮುಂದುವರಿಸಿದ ಅವರು, ಸಂಜು ವೆಡ್ಸ್ ಗೀತಾ 2 ಚಿತ್ರದಲ್ಲಿ ರಚಿತಾ ರಾಮ್ ಅವರನ್ನು ಇನ್ನೂ ಚೆನ್ನಾಗಿ ತೋರಿಸಿದ್ದಾರೆ. ಒಂದು ಒಳ್ಳೆ ಬ್ಯೂಟಿ ಹೀರೋಯಿನ್ ಇದ್ದಾಗ, ಅದೇ ರೀತಿ ದೃಶ್ಯಗಳು ಬರುತ್ತದೆ. ಹೀರೋಗಳಿಗೂ ಒಳ್ಳೆ ಸಾಂಗ್ ಬರುತ್ತದೆ. ಒಳ್ಳೆ ಡ್ಯೂಯೆಟ್ ಬರುತ್ತದೆ. ಒಳ್ಳೆ ಸಿನಿಮಾ ಕೂಡ ಆಗುತ್ತದೆ' ಎಂದು ಹೇಳಿದರು.

'ಸಂಜು ವೆಡ್ಸ್ ಗೀತಾ 2 ಬೇರೆ ರೀತಿಯೇ ಆಗಿರುವಂತಹ ಸಿನಿಮಾ. ನನ್ನ ಪ್ರಕಾರ ಮೊದಲ ಪಾರ್ಟ್ಗೂ ಇದಕ್ಕೂ ಲಿಂಕ್ ಇರಬಹುದು. ಆದರೆ ಕಥೆ ಅಂತಾ ತೆಗೆದುಕೊಂಡಾಗ ಇದು ತುಂಬಾ ವಿಶಾಲವಾಗಿದೆ. ಹೀಗಾಗಿ ಈ ಸಿನಿಮಾ ಬೇರೆ ರೀತಿಯ ಜಾನರ್ನಲ್ಲೇ ಬರುತ್ತಿದೆ. ಸದ್ಯ ಚಿತ್ರೀಕರಣ ಮುಗಿದಿದೆ. ಮುಂದಿನ ದಿನಗಳಲ್ಲಿ ಇಡೀ ತಂಡದ ಪರಿಶ್ರಮದಿಂದ ಸಿನಿಮಾ ಅದ್ಭುತವಾಗಿ ಮೂಡಿ ಬರಲಿದೆ' ಎಂದು ಹೇಳಿದರು.
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು












Click it and Unblock the Notifications