Darshan Thoogudeepa: ಪವಿತ್ರಾ ಗೌಡ ಕಾಲಿನ ಚಪ್ಪಲಿ ಆಗ್ತೀನಿ, ಆದ್ರೆ ಪವಿತ್ರಾ ಗೌಡ ಮುಳ್ಳು....
ಡಿ-ಬಾಸ್ ದರ್ಶನ್ ತೂಗುದೀಪ್ ಅವರು, ತಮ್ಮ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕಾಗಿ, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನು ಪಟ್ಟಣಗೆರೆ ಶೆಡ್ಗೆ ಎತ್ತಾಕ್ಕೊಂಡು ಬಂದು ಸರಿಯಾಗಿ ಬಾರಿಸಿ, ಕೊಲೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಹೀಗೆ ಸತತ 6 ತಿಂಗಳ ನರಳಾಟದ ನಂತರ ಇದೀಗ, ಡಿ-ಬಾಸ್ ದರ್ಶನ್ ತೂಗುದೀಪ್ & ಅವರ ಗೆಳತಿ ಪವಿತ್ರಾ ಗೌಡ ಅವರಿಗೆ ಜಾಮೀನು ಸಿಕ್ಕಿದೆ. ಇದೇ ಸಮಯದಲ್ಲಿ, ಪವಿತ್ರಾ ಗೌಡ ಕಾಲಿನ ಚಪ್ಪಲಿ ಆಗ್ತೀನಿ, ಅದರೆ ಪವಿತ್ರಾ ಗೌಡ ಮುಳ್ಳು....
ಪವಿತ್ರಾ ಗೌಡ & ಅವರ ಮೊದಲ ಗಂಡ ಪ್ರೀತಿಸಿ ಮದುವೆ ಆಗಿದ್ದರು ಎಂಬ ಮಾಹಿತಿ ಇದೆ. ಆದರೆ ವೈಯಕ್ತಿಕ ಕಾರಣಕ್ಕೆ ಮೊದಲ ಗಂಡನಿಂದ ದೂರವಾಗಿ ಡಿವೋರ್ಸ್ ಪಡೆದಿರುವ ನಟಿ ಕಂ ಫ್ಯಾಷನ್ ಡಿಸೈನರ್ ಪವಿತ್ರಾ ಗೌಡ ಅವರು ತಮ್ಮ ಮೊದಲ ಮದುವೆ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಿದ್ದಾಗಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೊತೆಗೆ ಪವಿತ್ರಾ ಗೌಡ ಅವರಿಗೆ ಆತ್ಮೀಯ ಸಂಬಂಧ ಇತ್ತು ಎಂಬ ಮಾಹಿತಿ ರೇಣುಕಾಸ್ವಾಮಿ ಕೊಲೆ ಕೇಸ್ನ ತನಿಖೆ ನಡೆಸುವಾಗ ಪೊಲೀಸರ ಮೂಲಕ ಇಡೀ ಜಗತ್ತಿಗೇ ಗೊತ್ತಾಗಿದೆ ಎಂಬ ಆರೋಪವೂ ಇದೆ.

ಪವಿತ್ರಾ ಗೌಡ ಕಾಲಿನ ಚಪ್ಪಲಿ ಆಗ್ತೀನಿ....
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪವಿತ್ರಾ ಗೌಡ ಎ-1 ಆರೋಪ ಆಗಿದ್ದಾರೆ. ಹೀಗಾಗಿಯೇ ಪವಿತ್ರಾ ಗೌಡ ಅವರು ಸುಮಾರು ಅರ್ಧ ವರ್ಷ ಕಾಲ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಕೋಣೆಗಳ ನಡುವೆ ನರಳಿದ್ದಾರೆ. ಇಂತಹ ಸಮಯದಲ್ಲೇ, ಕೆಲವು ದಿನಗಳ ಹಿಂದೆ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜಾಮೀನು ಸಿಕ್ಕಿದ್ದು, ಹೀಗಿದ್ದಾಗ ಪವಿತ್ರಾ ಗೌಡ ಅವರ ಮಾಜಿ ಗಂಡ ತಮ್ಮ ಹೆಂಡಿತಿ ಬಗ್ಗೆ ಮಾತನಾಡಿದ್ದಾರೆ. ಪವಿತ್ರಾ ಗೌಡ ಕಾಲಿನ ಚಪ್ಪಲಿ ಆಗ್ತೀನಿ, ಅದರೆ ಪವಿತ್ರಾ ಗೌಡ ಮುಳ್ಳು....
ಅಂದಹಾಗೆ, ಪವಿತ್ರಾ ಗೌಡ ಅವರ ಮಾಜಿ ಗಂಡ ತಮ್ಮ ಮಾಜಿ ಹೆಂಡತಿಗೆ ಯಾವುದೇ ರೀತಿ ಸಮಸ್ಯೆಗಳು ಜೀವನದಲ್ಲಿ ಎದುರಾಗಬಾರದು ಅಂತಾ ಹೇಳಿದ್ದಾರೆ. ಅಲ್ಲದೆ, ಪವಿತ್ರಾ ಗೌಡ ಕಾಲಿನ ಚಪ್ಪಲಿ ಆಗ್ತೀನಿ, ಅದರೆ ಪವಿತ್ರಾ ಗೌಡ ಮುಳ್ಳು ತುಳಿಯಲು ಬಿಡಲ್ಲ. ಹಾಗೇ ನಾನು ಅವರ ಬದುಕಿನಲ್ಲಿ ಎಂದಿಗೂ ಮುಳ್ಳು ಆಗುವುದಿಲ್ಲ ಅಂತಾ ಕೂಡ ಪವಿತ್ರಾ ಗೌಡ ಮಾಜಿ ಗಂಡ ಹೇಳಿದ್ದಾರೆ. ಈ ಮೂಲಕ ಇಂದಿಗೂ ತಾವು ಪವಿತ್ರಾ ಗೌಡ ಪ್ರೀತಿಯಲ್ಲಿ ಸಿಲುಕಿರುವ ಮುನ್ಸೂಚನೆ ನೀಡಿದ್ದಾರೆ.
ರೇಣುಕಾಸ್ವಾಮಿ ಮಾಡಿದ್ದು ಸರಿನಾ?
ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜಾಮೀನು ಸಿಕ್ಕ ಬೆನ್ನಲ್ಲೇ ಪವಿತ್ರಾ ಗೌಡ ಮಾಜಿ ಗಂಡ ಮಹತ್ವದ ಹೇಳಿಕೆ ನೀಡಿದ್ದಾರೆ. ಕೊಲೆ ಕೇಸ್ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಬಗ್ಗೆ ಮಾತನಾಡಿರುವ ಪವಿತ್ರಾ ಗೌಡ ಮಾಜಿ ಗಂಡ, ಪವಿತ್ರಾ ಆ ರೀತಿ ಕೊಲೆ ಮಾಡುವವರು ಅಲ್ಲ. ಹಂಗಾದ್ರೆ ರೇಣುಕಾಸ್ವಾಮಿ ಮಾಡಿದ್ದು ಸರಿನಾ? ಅಂತಾ ಪ್ರಶ್ನೆ ಮಾಡಿದ್ದಾರೆ ಪವಿತ್ರಾ ಗೌಡ ಮಾಜಿ ಗಂಡ.
ಪ್ರೀತಿಗೆ ಮೋಸ ಮಾಡುವವರು ನಾಯಿಗಳು!
ಚಾಲೆಂಜಿಂಗ್ ಸ್ಟಾರ್ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಹೊರ ಬರುತ್ತಿರುವ ವಿಚಾರ ಭರ್ಜರಿ ಸೌಂಡ್ ಮಾಡ್ತಿದೆ. ಡಿ-ಬಾಸ್ ದರ್ಶನ್ ಅಭಿಮಾನಿಗಳು, ಇಂದು ಆಸ್ಪತ್ರೆಯಿಂದ ದರ್ಶನ್ ತೂಗುದೀಪ್ ಅವರು ಹೊರ ಬಂದ ತಕ್ಷಣ ದೊಡ್ಡ ಮೆರವಣಿಗೆ ಮಾಡಲು ಸಜ್ಜಾಗಿದ್ದಾರೆ. ಇಂತಹ ಸಮಯದಲ್ಲೇ, ಪವಿತ್ರಾ ಗೌಡ ಮಾಜಿ ಗಂಡ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿ ಮಾಡಿದೆ. ಅಂದಹಾಗೆ ಪವಿತ್ರಾ ಗೌಡ ಮಾಜಿ ಗಂಡ ಇದೀಗ, ಪ್ರೀತಿಗೆ ಮೋಸ ಮಾಡುವವರು ನಾಯಿಗಳು... ಹೀಗಾಗಿ ನಾನು ಇಂದಿಗೂ ಪವಿತ್ರಾ ಗೌಡ ಅವರನ್ನೇ ಪ್ರೀತಿ ಮಾಡುತ್ತಿರುವೆ ಎಂದಿದ್ದಾರೆ ಪವಿತ್ರಾ ಗೌಡ ಮಾಜಿ ಗಂಡ.












Click it and Unblock the Notifications