ರೇ*ಪ್ ಮಾಡೋ ಶಕ್ತಿ ಇಲ್ಲ: 'ಯಾರನ್ನೂ ಬಿಡಲ್ವಂತೆ' ಎಂದವರಿಗೆ ಓಂ ಪ್ರಕಾಶ್ ರಾವ್ ಹೇಳಿದ್ದೇನು?
ಸ್ಯಾಂಡಲ್ವುಡ್ನ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರಾಗಿರುವ ಓಂ ಪ್ರಕಾಶ್ ರಾವ್ ಅವರು ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಆದರೆ ಇವರ ಬಗ್ಗೆ ಕೆಲ ವದಂತಿಗಳು ಕೂಡ ಹಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಈ ಬಗ್ಗೆ ಅಚ್ಚರಿ ವಿಚಾರಗಳನ್ನು ಓಂ ಪ್ರಕಾಶ್ ಅವರೇ ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ಓಂ ಪ್ರಕಾಶ್ ರಾವ್ ಯಾರನ್ನೂ ಬಿಡಲ್ವಂತೆ" ಎಂಬ ರೂಮರ್ ಬಗ್ಗೆಯೂ ಮಾತನಾಡಿರುವ ಅವರು ನೇರವಾಗಿ ಉತ್ತರ ನೀಡಿದ್ದಾರೆ.
'ನನಗೆ ಮದುವೆ ಆಗಿದೆ, ಮಗು ಇತ್ತು. ಅವರನ್ನು ಓಂ ಪ್ರಕಾಶ್ ಬಿಟ್ಟುಬಿಟ್ಟ, ಅವನು ಸರಿಯಿಲ್ಲ ಅಂತಲೂ ವದಂತಿಗಳಿವೆ. ನಾನು ನಿಜಕ್ಕೂ ಒಳ್ಳೆಯವನಾ ಅಥವಾ ಕೆಟ್ಟವನಾ? ನನ್ನನ್ನ ನಾನು ಯಾವ ರೀತಿ ಜಡ್ಜ್ ಮಾಡಬೇಕು ಅಂತಾ ಗೊತ್ತಾಗ್ತಿಲ್ಲ. ಬಹುಶಃ ನನಗೆ ಅವರ ಜೊತೆ ಜೀವನ ಮಾಡೋ ಅವಕಾಶ ಸಿಗಲಿಲ್ವೇನೋ? ಅತವಾ ಅವರೇ ಒಳ್ಳೆಯವರು ಇರಬಹುದು, ನಾನೇ ಕೆಟ್ಟವನಾಗಿರಬಹುದು. ಅಥವಾ ನಾನೇ ಸರಿಯಿಲ್ಲ ಇಲ್ಲದೇನೂ ಇರಬಹುದು, ಇದೆಲ್ಲದಕ್ಕೂ ನೋ ಪ್ರಾಬ್ಲಂ' ಎಂದು ಓಂ ಪ್ರಕಾಶ್ ರಾವ್ ಹೇಳಿದ್ದಾರೆ.

'ಸಿನಿಮಾದಲ್ಲಿ ಕೆಲಸ ಮಾಡುವವರನ್ನ ಯಾರನ್ನೂ ಓಂ ಪ್ರಕಾಶ ಬಿಡಲ್ವಂತೆ ಎಂದೆಲ್ಲ ವದಂತಿ ಹಬ್ಬಿರುವ ಬಗ್ಗೆ ಮಾತನಾಡಿರುವ ಅವರು, ಓಂ ಪ್ರಕಾಶ್ ರಾವ್ ಯಾರನ್ನೂ ಬಿಡಲ್ವಂತೆ. ಎಲ್ಲರನ್ನೂ ಹತ್ತಿರ ಕರೆದುಕೊಂಡು ಏನಾದ್ರೂ ಮಾಡಿಬಿಡ್ತಾನೆ ಎಂದೆಲ್ಲ ಸುದ್ದಿ ಹಬ್ಬಿದೆ. ನಾನು ಆ ರೀತಿ ನಡೆದುಕೊಂಡರೆ ಅವರು ಸುಮ್ಮನೆ ಇರ್ತಾರಾ?' ಎಂದು ನ್ಯೂಸೋ ನ್ಯೂಸು ಸಂದರ್ಶನದಲ್ಲಿ ಕೇಳಿದ್ದಾರೆ.
'ನಾನು ಹಾಗೆಲ್ಲ ಮಾಡೋವಾಗ ಅವರೆಲ್ಲ ಏನ್ ಮಾಡುತ್ತಿರ್ತಾರೆ? ನಾನು ಏನೇ ಮಾಡಿದ್ರೂ ಸುಮ್ಮನೆ ಇರ್ತಾರಾ? ನನಗೆ ರೇ*ಪ್ ಮಾಡುವ ಶಕ್ತಿ ಅಂತೂ ಇಲ್ಲ. ಆ ರೀತಿ ಏನೂ ರೂಮರ್ ಇಲ್ಲ. ಆದರೆ ಯಾಕೆ ಆ ವ್ಯಕ್ತಿ ಹೀಗೆಲ್ಲ ಮಾತನಾಡುತ್ತಾರೆ ಅನ್ನೋದೆ ನನ್ನ ಬಗ್ಗೆ ಇರೋ ವದಂತಿ' ಎಂದು ಓಂಪ್ರಕಾಶ್ ರಾವ್ ಹೇಳಿದ್ದಾರೆ.
ಅವ್ರೇ ಇಷ್ಟ ಪಟ್ಟು ನನ್ ಜೊತೆ ಮತ್ತೆ ಸಿನಿಮಾ ಮಾಡ್ತಾರೆ
'ನನ್ನ ಸಿನಿಮಾಗಳಲ್ಲಿ ನಟಿಸಿರುವ ಹೀರೋಯಿನ್ಗಳು ಐದಾರು ಸಿನಿಮಾಗಳನ್ನ ನನ್ನ ಜೊತೆಯಲ್ಲೇ ಕೆಲಸ ಮಾಡಿದ್ದಾರೆ. ಹೆಣ್ಣು ಮಕ್ಕಳಿಗೆ ಎಷ್ಟು ಗೌರವ ಕೊಡ್ತೀನಿ ಅಂತ ಅರ್ಥ ಮಾಡಿಕೊಳ್ಳಬೇಕು. ನಾನು ನಿಜವಾಗಿಯೂ ಸರಿಯಿಲ್ಲ ಅಂದಿದ್ರೆ ಅವರೆಲ್ಲ ಮೊದಲ ಸಿನಿಮಾದಲ್ಲೇ ಓಡಿ ಹೋಗುತ್ತಿದ್ರು. ಆದರೆ ನಾನು ಬೇರೆ ಸಿನಿಮಾ ಮಾಡೋಕೆ ಹೋದ್ರೆ, ಯಾಕೆ ನಾವು ನಿಮ್ಮ ಸಿನಿಮಾದಲ್ಲಿ ಸರಿಯಾಗಿ ನಟಿಸಿಲ್ವಾ, ಯಾಕೆ ಬೇರೆ ಹೀರೋಯಿನ್ಗಳನ್ನ ಹಾಕೋತೀರಾ? ಎಂದು ಬೈದಿದ್ದಾರೆ' ಎಂದು ಓಂ ಪ್ರಕಾಶ್ ರಾವ್ ಸ್ಪಷ್ಟನೆ ನೀಡಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ












Click it and Unblock the Notifications