ತಂದೆ ಸ್ಥಾನ ತಾಯಿ ತುಂಬಲು ಆಗಲ್ಲ: ನಟಿ ಭಾವನಾ ಮಾತು ಒಪಲ್ಲ ಅಂದಿದ್ದೇಕೆ ಯಮುನಾ ಶ್ರೀನಿಧಿ?
ನಟಿ ಭಾವನಾ ರಾಮಣ್ಣ ಅವರು ಇತ್ತೀಚೆಗೆ ಐವಿಎಫ್ ಚಿಕಿತ್ಸೆ ವಿಧಾನದ ಮೂಲಕ ಅವಳಿ ಮಕ್ಕಳಿಗೆ ಗರ್ಭಿಣಿಯಾಗಿರುವ ವಿಚಾರ ಹೇಳಿಕೊಂಡಿದ್ದರು. ಈಗ ನಾನು ಆರು ತಿಂಗಳ ಗರ್ಭಿಣಿಯಾಗಿದ್ದೇನೆ. ಮದುವೆಯಾಗದೆ ಮಕ್ಕಳನ್ನು ಹೆರುತ್ತಿದ್ದೇನೆ. ಅಲ್ಲದೆ ನಾನು ತಂದೆಯಿಲ್ಲದೆ ಮಕ್ಕಳನ್ನು ಬೆಳೆಸುತ್ತೇನೆ ಎಂದು ದಿಟ್ಟತನದ ಮಾತುಗಳನ್ನು ಆಡಿದ್ದರು. ಇನ್ನು ಮದುವೆಯಾದರೆ ನಟಿಯರು ಸಿನಿಮಾಗಳಿಂದ ದೂರ ಸರಿಯುತ್ತಾರೆ ಎಂದು ಉದಾಹರಣೆಯೂ ನೀಡಿದ್ದರು. ನಟಿ ಭಾವನಾ ಅವರ ಹೇಳಿಕೆಗಳನ್ನು ಖ್ಯಾತ ನಟಿ ಯಮುನಾ ಶ್ರೀನಿಧಿ (Yamuna Srinidhi) ನಿರಾಕರಿಸಿದ್ದಾರೆ. ಗಂಡಸರು ಇಲ್ಲ ಅಂದ್ರೆ ಹೆಂಗಸರು ಇರಲು ಸಾಧ್ಯವೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ʼನಾನು ಮದುವೆಯಾಗಿ ಮಕ್ಕಳಾಗದವರು ಮಾತ್ರ ಐವಿಎಫ್ ಮೂಲಕ ಮಗು ಪಡೆಯಬಹುದು ಎಂದು ಭಾವಿಸಿದ್ದೆ. ಆದರೆ ಕಾನೂನಿನ ಮೂಲಕ ಮದುವೆ ಆಗದೆಯೂ ಮಕ್ಕಳನ್ನು ಪಡೆಯಬಹುದು ಎಂದು ಭಾವನಾ ಅವರ ವಿಚಾರದಿಂದಲೇ ತಿಳಿದಿದ್ದು ಎಂದು ಬಾಸ್ ಟಿವಿ ಯುಟ್ಯೂಬ್ ಚಾನಲ್ ಜೊತೆಗೆ ಯುಮುನಾ ಮಾತನಾಡಿದ್ದಾರೆ. ನನ್ನ ಪ್ರಕಾರ ಯಾವುದೇ ಆದರೂ ಪ್ರಾಕೃತಿಕವಾಗಿ ನಡೆದಾಗಲೇ ಅದು ಸಹಜವಾದದ್ದು, ಆದರೆ ಕೃತಕವಾಗಿ ನಡೆಯುವುದು ನಾನು ಒಪ್ಪಲ್ಲʼ ಎಂದಿದ್ದಾರೆ.

ʼಭಾರತೀಯ ಸಂಸ್ಕೃತಿಯಲ್ಲಿ ಕುಟುಂಬದಿಂದ ಒಳ್ಳೆಯ ಬೆಂಬಲ ಸಿಗುತ್ತೆ. ಎಲ್ಲರೂ ಒಂದು ಮಗುವನ್ನ ಬೆಳೆಸಲು ಒಟ್ಟಿಗೆ ಬರುತ್ತಾರೆ. ಆ ಬೆಂಬಲ ನನಗೂ ಇತ್ತು. ನನಗೆ ಎಷ್ಟೇ ಬೆಂಬಲ ಸಿಕ್ಕರೂ ತಂದೆಯಾಗಿ ನನ್ನ ಪತಿ ಮಕ್ಕಳಿಗೆ ತುಂಬಿದ ಸ್ಥಾನ ಬೇರೆ ಯಾರಿಂದಲೂ ಈ ಬ್ರಹ್ಮಾಂಡದಲ್ಲೇ ಸಾಧ್ಯವಿಲ್ಲ. ಅದನ್ನ ಕೇವಲ ತಂದೆ ಮಾತ್ರ ಕೊಡಲು ಸಾಧ್ಯʼ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಕ್ಕಳಿಗೆ ಇಬ್ಬರ ಪ್ರೀತಿ ಮುಖ್ಯ
ʼತಾಯಿಯ ಮಮತೆ ಬೇರೆ ಯಾರಿಂದಲೂ ಕೊಡೋಕೆ ಆಗಲ್ಲ. ಅಷ್ಟೇ ಸತ್ಯ ತಂದೆ ಕೊಡುವ ಸ್ಥಾನ ಬೇರೆಯೇ ಇದೆ. ಅದನ್ನ ತಾಯಿಯೂ ಕೊಡಲು ಸಾಧ್ಯವಿಲ್ಲ. ತಂದೆ ಯಾವತ್ತಿದ್ರೂ ತಂದೇನೇ, ತಾಯಿ ತಾಯೀನೇ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಪಂಚವೆಲ್ಲ ಒಂದು ತೂಕ ಆದ್ರೆ, ತಾಯಿ-ತಂದೆ ಸಮಾನವಾಗಿ ಇನ್ನೊಂದು ತೂಕ. ಹಾಗಾಗಿ ಮಕ್ಕಳಿಗೆ ಇಬ್ಬರ ಪ್ರೀತಿ ಕೂಡ ಮುಖ್ಯ ಎಂದು ಯಮುನಾ ಹೇಳಿದ್ದಾರೆ. ಸಿಂಗಲ್ ಪೇರೆಂಟಿಂಗ್ ಅಂತ ತುಂಬಾ ಕಷ್ಟಪಡುತ್ತಾರೆ. ಮಕ್ಕಳನ್ನ ಒಬ್ಬರೇ ಬೆಳೆಸುವುದು ತುಂಬಾ ಕಷ್ಟ. ಮಾನವರಾಗಿ ಹುಟ್ಟಿ ನಮಗೆ ರೀತಿ, ನೀತಿ ಇರುತ್ತೆ. ಅದಕ್ಕೆ ಒಗ್ಗಿ ಬದುಕುವುದೇ ಒಳ್ಳೆಯದು ಎನ್ನುವುದು ನನ್ನ ಗಾಢವಾದ ನಂಬಿಕೆʼ ಎಂದಿದ್ದಾರೆ.
ಮದುವೆ ಬಳಿಕವೇ ನನ್ನ ಎಲ್ಲ ಸಾಧನೆ
ಮದುವೆಯಾದ ಮೇಲೆ ನಟಿಯರು ಸೈಡ್ಲೈನ್ ಆಗುತ್ತಾರೆ ಎಂದು ನಟಿ ಭಾವನಾ ಸಂದರ್ಶನಗಳಲ್ಲಿ ಹೇಳಿದ್ದರು. ಇದನ್ನು ಕೂಡ ಯಮುನಾ ಅವರು ವಿರೋಧಿಸಿದ್ದಾರೆ. ʼಈ ಮಾತನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಯಾಕೆಂದರೆ ಈಗ ನನ್ನನ್ನೇ ಉದಾಹರಣೆಗೆ ತೆಗೆದುಕೊಂಡರೆ, ನಾನು ಮಾಡಿದ ಎಲ್ಲ ಸಾಧನೆಯನ್ನು ಮದುವೆ ನಂತರವೇ ಮಾಡಿದ್ದು. ಒಳ್ಳೆಯ ಪಾತ್ರಗಳು ಸಿಕ್ಕಿವೆ. ಎಲ್ಲವೂ ಮದುವೆಯಾದ ನಂತರವೇ ಆಗಿದ್ದು. ಹಾಗಾಗಿ ಮದುವೆಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಮ್ಮಲ್ಲಿ ನಿಜವಾಗಿ ಪ್ರತಿಭೆ ಇದ್ದರೆ, ಒಳ್ಳೆಯದೇ ಆಗುತ್ತೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮದುವೆಯಾದ ಮೇಲೇ ಹಲವಾರು ಸಾಧನೆ ಮಾಡಿದ್ದಾರೆ. ಗಂಡಸರು ಇಲ್ಲ ಅಂದ್ರೆ ಹೆಂಗಸರು ಇರಲು ಸಾಧ್ಯವೇ ಇಲ್ಲʼ ಎಂದು ಅಭಿಪ್ರಾಯಪಟ್ಟಿದ್ದಾರೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video











Click it and Unblock the Notifications