Kavya Maran: ಎಸ್ಆರ್ಎಚ್ ಒಡತಿ ಕಾವ್ಯಾ ಮಾರನ್-ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮದುವೆ ಫಿಕ್ಸ್?: ಭಾರೀ ವೈರಲ್
Kavya Maran: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದು 17 ವರ್ಷಗಳ ಬಳಿಕ ಮೊದಲ ಟ್ರೋಫಿ ತನ್ನದಾಗಿಸಿಕೊಂಡಿತು. ಈ ಸೀಸನ್ ಆರಂಭದಲ್ಲಿಯೇ ಬಹುತೇಕ ಮಂದಿ ಸನ್ ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ಬಲಿಷ್ಠವಾಗಿದ್ದು, ಇದೇ ತಂಡ ಕಪ್ ಗೆಲ್ಲಲಿದೆ ಅಂತಾ ಭವಿಷ್ಯ ನುಡಿದಿದ್ರು. ಆದ್ರೆ ಇದು ಉಲ್ಟಾ ಹೊಡೆಯಿತು. ಈ ನಡುವೆಯೇ ಎಸ್ಆರ್ಎಚ್ ಮಾಲಕಿ ಕಾವ್ಯಾ ಮಾರನ್ ವಿವಾಹದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಬಾರಿಯ ಐಪಿಎಲ್ ಸೀಸನ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಹೆಚ್ಚಾಗಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ಇವರು ಕೊಡುತ್ತಿದ್ದ ಸಿಂಪ್ಲಿಸಿಟಿ ಸ್ಮೈಲಿಗೆ ಎಷ್ಟೋ ಮಂದಿ ಯುವಕರ ಮನಸು ಸೆಳೆದಿದೆ. ತಮ್ಮ ತಂಡ ಎಸ್ಆರ್ಎಚ್ ಪಂದ್ಯ ನಡೆಯುವಾಗಲೆಲ್ಲಾ ಇವರು ಸ್ಟೇಡಿಯಂನ ಗ್ಲಾಸ್ ಹೌಸ್ ಒಳಗೆ ಕುಳಿತುಕೊಂಡು ಎಂಜಾಯ್ ಮಾಡುತ್ತಿದ್ದರು.

ತಮ್ಮ ತಂಡದ ಆಟಗಾರರು ಬೌಲಿಂಗ್ ಮಾಡುವಾಗ ವಿಕೆಟ್ ಪಡೆದಾಗ ಹಾಗೂ ಬ್ಯಾಟಿಂಗ್ ಮಾಡುವಾಗ ಸಿಕ್ಸರ್, ಬೌಂಡರಿ ಸಿಡಿಸುವಾಗ ಸಂತಸದಿಂದ ಕುಣಿದು ಕುಪ್ಪಳಿಸಿದ್ದಿ, ಈ ಫೋಟೋ, ವಿಡಿಯೋಗಳು ಸಖತ್ ವೈರಲ್ ಆಗಿದ್ದವು. ಇನ್ನೂ ಇವರು ನಗುವಾಗ ಮುಖದಲ್ಲಿ ಏನೋ ಒಂಥರಾ ಡಿಫೆರೆಂಟ್ ಆಗಿ ಕಾಣುತ್ತಿದ್ದರು. ಇವರ ಈ ಮುದ್ದಾದ ನಗುವಿಗೆ ಅದೇಷ್ಟೋ ಯುವಕರ ಹೃದಯಗಳು ಮಿಡಿದಿದ್ದವು. ಆದರೆ, ಇದೀಗ ಕಾವ್ಯಾ ಮಾರನ್ ಹೃದಯಕ್ಕೆ ಮಾಲೀಕನೊಬ್ಬ ಸಿಕ್ಕಿದ್ದಾನೆ ಎನ್ನುವ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿವೆ.
ಸಂಗೀತ ನಿರ್ದೇಶಕ ಅನಿರುದ್ಧ್ ಮತ್ತು ಸನ್ ಟಿವಿ ಮಾಲೀಕರ ಕುಟುಂಬದ ಹಾಗೂ ಐಪಿಎಲ್ ಎಸ್ಆರ್ಎಚ್ ತಂಡದ ಮಾಲಕಿ ಕಾವ್ಯಾ ಮಾರನ್ ವಿವಾಹದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಹಬ್ಬಿವೆ. ಆದರೆ ಈ ಬಗ್ಗೆ ಎರಡೂ ಕುಟುಂಬಗಳು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಅನಿರುದ್ಧ್-ಕಾವ್ಯಾ ಮದುವೆ ಸುದ್ದಿ?: ಖ್ಯಾತ ಸಂಗೀತ ನಿರ್ದೇಶಕ ರವಿಚಂದರ್ ಅವರ ಮೊಮ್ಮಗ ಅನಿರುದ್ಧ್, ಸನ್ ಟಿವಿ ಮಾಲೀಕರ ಕುಟುಂಬದ ಕಾವ್ಯಾ ಮಾರನ್ ಅವರನ್ನು ವಿವಾಹ ಆಗಲಿದ್ದಾರೆ ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆದರೆ ಈ ಬಗ್ಗೆ ಎರಡೂ ಕುಟುಂಬಗಳು ಮೌನವಾಗಿವೆ.
ಹಿರಿಯ ಪತ್ರಕರ್ತ ರಂಗನಾಥನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, 'ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಪರಸ್ಪರ ಭೇಟಿ ಆಗಿರುವ ಸಾಧ್ಯತೆ ಇದೆ. ಆದರೆ ವಿವಾಹದ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯ ಆಗಿಲ್ಲ,' ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ಎರಡೂ ಕುಟುಂಬಗಳು ಯಾವುದೇ ಹೇಳಿಕೆ ನೀಡಲು ಹಿಂದೇಟು ಹಾಕುತ್ತಿವೆ ಅಂತಲೂ ಅವರು ತಿಳಿಸಿದ್ದಾರೆ.
ಕಾವ್ಯಾ ಮಾರನ್ ವಿವಾಹದ ಸುದ್ದಿ ಎರಡು ದಿನಗಳ ಹಿಂದಿನಿಂದ ಹರಡಲು ಪ್ರಾರಂಭಿಸಿತು. ಆದರೆ ಎರಡೂ ಕುಟುಂಬಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮದುವೆ ಸುದ್ದಿ ನಿಜವೇ ಅಥವಾ ಕೇವಲ ವದಂತಿಯೇ ಎಂದು ತಿಳಿದುಕೊಳ್ಳಲು ಕುಟುಂಬದವರು ಸ್ಪಷ್ಟನೆ ನೀಡುವವರೆಗೂ ಕಾದು ನೋಡಬೇಕಿದೆ.
ಅನಿರುದ್ಧ್ ಹಿನ್ನೆಲೆ: ಅನಿರುದ್ಧ್ ಅವರು ತಮಿಳು ಚಿತ್ರರಂಗದ ಪ್ರಮುಖ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಅವರು ಅನೇಕ ಹಿಟ್ ಹಾಡುಗಳನ್ನು ಕೊಟ್ಟಿದ್ದಾರೆ. ಪಿತ್ರಾಮಗನ್ ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರ ತಂದೆ ರವಿ ರಾಘವೇಂದ್ರ ನಟರಾಗಿದ್ದಾರೆ. ಇನ್ನು ಅನಿರುದ್ಧ್ ಅವರ ತಾತ ಎಸ್.ವಿ. ರಮಣನ್ ಅವರು ಪ್ರಸಿದ್ಧ ನಿರ್ಮಾಪಕರು ಮತ್ತು ನಿರ್ದೇಶಕರು.
ಇನ್ನು ಅನಿರುದ್ಧ್ ಅವರು ನಟ ಧನುಷ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎನ್ನಲಾಗಿದೆ. ಈ ಹಿಂದೆ ಅನಿರುದ್ಧ್ ಮತ್ತು ಗಾಯಕಿ ಆಂಡ್ರಿಯಾ ನಡುವೆ ಸಂಬಂಧ ಇದೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ.
ಕಾವ್ಯಾ ಮಾರನ್ ಯಾರು?: ಕಾವ್ಯಾ ಮಾರನ್ ಸನ್ ಟಿವಿ ಮಾಲೀಕರ ಪುತ್ರಿ. ಸದ್ಯ ಇದೀಗ ಅವರು ಐಪಿಎಲ್ನ ಸನ್ ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಅಮೆರಿಕಾದಲ್ಲಿ ಉನ್ನತ ವ್ಯಾಸಂಗ ಮಾಡಿದ್ದು, ತಮ್ಮ ತಂದೆಯವರ ವ್ಯವಹಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಕಾವ್ಯಾ ಮಾರನ್ ಅವರು 4,000 ಕೋಟಿ ರೂಪಾಯಿ ಆಸ್ತಿಯ ಒಡತಿ ಆಗಿದ್ದಾರೆ. ಅವರು ಸನ್ ಮ್ಯೂಸಿಕ್ ಮತ್ತು ಎಫ್ಎಂ ಚಾನೆಲ್ಗಳ ಉಸ್ತುವಾರಿಯನ್ನು ಸಹ ನೋಡಿಕೊಳ್ಳುತ್ತಾರೆ. ಅನಿರುದ್ಧ್ ಹಾಗೂ ಕಾವ್ಯಾ ಪರಸ್ಪರ ಭೇಟಿ ಆಗಿರಬಹುದು. ಆದರೆ, ಮದುವೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಎರಡೂ ಕುಟುಂಬಗಳು ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಅನಿರುದ್ಧ್ ಅವರಿಗೆ 34 ವರ್ಷ ವಯಸ್ಸಾಗಿದ್ದು, ಕಾವ್ಯಾ ಅವರಿಗೆ 32 ವರ್ಷ. ಈ ವಯಸ್ಸಿನಲ್ಲಿ ಮದುವೆ ಆಗುವುದು ಸಹಜ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿಗಾಗಿ ಕಾದುನೋಡಬೇಕಿದೆ. ಒಟ್ಟಾರೆಯಾಗಿ, ಅನಿರುದ್ಧ್ ಮತ್ತು ಕಾವ್ಯಾ ಮಾರನ್ ವಿವಾಹದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ದೊಡ್ಡ ಮಟ್ಟದಲ್ಲಿ ಜೋರಾಗಿ ಚರ್ಚೆಗಳು ಆಗುತ್ತಿವೆ. ಆದರೆ ಈ ಬಗ್ಗೆ ಎರಡೂ ಕುಟುಂಬಗಳ ನಿಲುವು ಏನಿದೆ ಹಾಗೂ ಅಧಿಕೃತ ಮಾಹಿತಿಗಾಗಿ ಕಾಯುವುದು ಸೂಕ್ತ ಎನ್ನಲಾಗುತ್ತಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications