₹15 ಲಕ್ಷ ಸಂಬಳ ಕೊಡಬೇಕು, ನಾನು ಒಂಟಿ ಮಹಿಳೆ: ನೆರೆ ಪರಿಹಾರ ಕೇಳಿದ್ದಕ್ಕೆ ನಟಿ ಕಂಗನಾ ಗರಂ
ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್ ಅವರು ಮತ್ತೆ ವಿವಾದದಲ್ಲಿ ಸಿಲುಕಿದ್ದಾರೆ. ಸಾಮಾನ್ಯವಾಗಿ ತಮ್ಮ ಕ್ಷೇತ್ರದ ಜನರು ಸಮಸ್ಯೆ ಅಂತ ಬಂದಾಗ ಜನಪ್ರತಿನಿಧಿಗಳು ಅದಕ್ಕೆ ಸ್ಪಂದಿಸಬೇಕು. ಆದರೆ ರಾಜಕಾರಣಿಯಾಗಿರುವ ನಟಿ ಕಂಗನಾ ರನೌತ್, ತಮ್ಮ ಬಳಿ ಸಮಸ್ಯೆ ಹೇಳಿಕೊಂಡವರಿಗೆ ತಮ್ಮದೇ ಸಮಸ್ಯೆ ಹೇಳಿಕೊಂಡು ಟೀಕೆಗೆ ಗುರಿಯಾಗಿದ್ದಾರೆ. ಕುಲು-ಮನಾಲಿಯಲ್ಲಿ ಭೀಕರ ದುರಂತ ಸಂಭವಿಸಿ, ಮೂರು ವಾರಗಳ ನಂತರ ಪ್ರವಾಹ ಪೀಡಿತ ಪ್ರದೇಶಗಳಿಗೆ ಮಂಡಿ ಸಂಸದೆ ಕಂಗನಾ ರನೌತ್ ಭೇಟಿ ನೀಡಿದಾಗ ಈ ಘಟನೆ ನಡೆದಿದೆ.
ಕಂಗನಾ ಅವರನ್ನ ಕಪ್ಪು ಬಾವುಟಗಳೊಂದಿಗೆ ಅಲ್ಲಿನ ಜನ ಸ್ವಾಗತಿಸಿದರು. ಗೋ ಬ್ಯಾಕ್ ಘೋಷಣೆಗಳನ್ನು ಕೂಗಲಾಯಿತು. ಸಮಸ್ಯೆ ಹೇಳಿಕೊಳ್ಳಲು ಬಂದ ಸಾರ್ವಜನಿಕರಿಗೆ ಪರಿಹಾರದ ಬದಲಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಮೂಲಕ ಮತ್ತೊಂದು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ನೀವು ನನ್ನ ಮೇಲೆ ದಾಳಿ ಮಾಡಲು ಅಥವಾ ಪ್ರಶ್ನೆಗಳನ್ನು ಕೇಳಲು ಬಂದಿದ್ದೀರಾ? ಶಾಂತವಾಗಿರಿ ಎಂದು ಕಂಗನಾ ಡೈಲಾಗ್ ಹೊಡೆದಿದ್ದಾರೆ.

ಮನಾಲಿಯಲ್ಲಿ ಮನೆ ಹೊಂದಿರುವ ಕಂಗನಾ, ಈ ವರ್ಷದ ಫೆಬ್ರವರಿಯಲ್ಲಿ ರೆಸ್ಟೋರೆಂಟ್ವೊಂದನ್ನು ತೆರೆದಿದ್ದಾರೆ. ಮನಾಲಿಯ ಮಾಜಿ ಬಿಜೆಪಿ ಶಾಸಕ ಗೋಬಿಂದ್ ಠಾಕೂರ್ ಮತ್ತು ಬಿಜೆಪಿ ರಾಜ್ಯ ವಕ್ತಾರ ಅಖಿಲೇಶ್ ಕಪೂರ್ ಅವರೊಂದಿಗೆ ಕಂಗನಾ ಸೋಲಾಂಗ್ ಕಣಿವೆ, ಬಹ್ಂಗ್ ಗ್ರಾಮ, ಪಲ್ಚನ್ ಮತ್ತು ಪಟ್ಲಿಕುಹಾಲ್ ಸೇರಿದಂತೆ ಪ್ರವಾಹ, ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು.
ನನ್ನ ರೆಸ್ಟೋರೆಂಟ್ನಲ್ಲಿ ಕೇವಲ ₹50 ಬಿಸಿನೆಸ್ ಆಗಿದೆ
ಆಗ ಹಿಮಾಚಲ ಪ್ರದೇಶದ ವಿಪತ್ತು ಪೀಡಿತ ಜನರಿಗೆ ಹಣ ಸಂಗ್ರಹ ಏಕೆ ಮಾಡಲಿಲ್ಲ ನೀವು ಎಂದು ಮಾಧ್ಯಮದವರು ಕೂಡ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಕಂಗನಾ, ನನ್ನ ದುಃಖವನ್ನ ನೀವು ಅರ್ಥಮಾಡಿಕೊಳ್ಳಿ. ನಾನು ಕೂಡ ಒಬ್ಬ ಮನುಷ್ಯಳು. ನನಗೂ ಇಲ್ಲಿ ಒಂದು ಮನೆ ಮತ್ತು ಒಂದು ರೆಸ್ಟೋರೆಂಟ್ ಇದೆ. ನನ್ನ ರೆಸ್ಟೋರೆಂಟ್ನಲ್ಲಿ ನಿನ್ನೆ ಕೇವಲ 50 ರೂಪಾಯಿ ಬಿಸಿನೆಸ್ ಆಗಿದೆ. ಅಲ್ಲಿನ ಉದ್ಯೋಗಿಗಳಿಗೆ ನಾನೂ ಮಾಸಿಕ 15 ಲಕ್ಷ ರೂಪಾಯಿ ಸಂಬಳ ಕೊಡಬೇಕು. ನಾನು ಒಂಟಿ ಮಹಿಳೆ, ಸಂತ್ರಸ್ತರಿಗೆ ಏನನ್ನೂ ಮಾಡುತ್ತಿಲ್ಲ ಎಂಬಂತೆ ನನ್ನ ಮೇಲೆ ದಾಳಿ ಮಾಡಬೇಡಿ. ನಾನು ಕೂಡ ನಿಮ್ಮಂತೆ ಒಬ್ಬಳು ಎಂದಿದ್ದಾರೆ.

ಕಂಗನಾ ಪಟ್ಲಿಕುಹಾಲ್ ತಲುಪಿದಾಗ ಸ್ಥಳೀಯ ಕಾಂಗ್ರೆಸ್ ಬೆಂಬಲಿಗರ ಗುಂಪು ಕಪ್ಪು ಬಾವುಟ ಪ್ರದರ್ಶಿಸಿ, ಕಂಗನಾ ಹಿಂತಿರುಗಿ ಎಂದು ಘೋಷಣೆಗಳನ್ನ ಕೂಗಿದರು. ಕಳೆದ ಜುಲೈನಲ್ಲೂ ತಮ್ಮ ಕ್ಷೇತ್ರವಾದ ಮಂಡಿಯ ಪ್ರವಾಹ ಪೀಡಿತ ಸೆರಾಜ್ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಗನಾ ವಿವಾದಕ್ಕೆ ಕಾರಣರಾಗಿದ್ದರು. ವಿಪತ್ತು ಪೀಡಿತರಿಗೆ ಆರ್ಥಿಕ ಸಹಾಯದ ಬಗ್ಗೆ ಕೇಳಿದಾಗ, ಕಂಗನಾ ಅವರು ತಮ್ಮ ಬಳಿ ಸಚಿವ ಸ್ಥಾನ ಅಥವಾ ನಿಧಿ ಇಲ್ಲದ ಕಾರಣ ಅಸಹಾಯಕಳಾಗಿದ್ದೇನೆ ಎಂದಿದ್ದರು. ಇದೀಗ ಮತ್ತೆ ನಿರ್ಲಕ್ಷ್ಯದ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.
-
Viral: ಕಚೇರಿಗೆ ಬಂದ ಪೋಷಕರು, ಮ್ಯಾನೇಜರ್ ಬಳಿ ಮಗಳ ವರ್ತನೆ ಬಗ್ಗೆ ವಿಚಾರಣೆ: ಶಾಲಾ ದಿನಗಳನ್ನು ನೆನಪಿಸಿದ ವಿಡಿಯೋ -
2025ರ ದ್ವಿತೀಯ PUC ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಮಿಂಚಿದ ಪ್ರತಿಭೆಗಳು; ಇಲ್ಲಿದೆ ಟಾಪರ್ಗಳ ಪಟ್ಟಿ -
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
ಹೈಟೆಕ್ ಬೆಂಗಳೂರು ಬಿಸಿನೆಸ್ ಕಾರಿಡಾರ್: 65ಮೀ ವಿಸ್ತರಣೆ, ಮೆಟ್ರೋ-ಸೈಕಲ್ ಟ್ರ್ಯಾಕ್ಗಳೂ ಲಭ್ಯ; ವಿನ್ಯಾಸ ವಿವರ -
Horoscope April 8: ಕೆಲವರಿಗೆ ಯಶಸ್ಸು, ಕೆಲವರಿಗೆ ಜಾಗ್ರತೆ ಸೂಚಿಸುವ ದಿನ ಭವಿಷ್ಯ -
Bengaluru Road: ಬನ್ನೇರುಘಟ್ಟ ರಸ್ತೆ ಪ್ರಯಾಣಿಕರಿಗೆ ಗುಡ್ನ್ಯೂಸ್: ಸಮಗ್ರ ಅಭಿವೃದ್ಧಿಗೆ ಜಿಬಿಎ ಮಾಸ್ಟರ್ ಪ್ಲಾನ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Iran 10 Demands: ಕದನ ವಿರಾಮಕ್ಕೆ ಇರಾನ್ ವಿಧಿಸಿರುವ 10 ಷರತ್ತುಗಳ ವಿವರ ಇಲ್ಲಿದೆ, ನ್ಯೂಕ್ಲಿಯರ್ ಬೇಡ ಎಂದಿದ್ಯಾಕೆ -
Karnataka Rain: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಈ ಭಾಗಗಳಲ್ಲಿ ಭಾರೀ ಮಳೆ: ಐಎಂಡಿ -
ನಿಮ್ಮ ಸಂಬಳಕ್ಕೆ ಎಷ್ಟು ಬೆಲೆಯ ಮನೆ ಖರೀದಿಸಬಹುದು? Viral ಆಗುತ್ತಿದೆ ಬೆಂಗಳೂರಿನ ಸಿಎ ತಿಳಿಸಿದ 20-30-40 ರೂಲ್ -
Bengaluru Rent House: ಬೆಂಗಳೂರಲ್ಲಿ 1 BHK ಬಾಡಿಗೆ ಮನೆ ಸ್ಕ್ಯಾಮ್; 30,000 ಕೊಟ್ಟರೂ ಒಳ್ಳೆ ಮನೆ ಸಿಗ್ತಿಲ್ಲ, ವೈರಲ್ ಪೋಸ್ಟ್












Click it and Unblock the Notifications