ಲಿವ್-ಇನ್ ರಿಲೇಷನ್ಶಿಪ್ನಲ್ಲಿ ಯಾರನ್ನಾದ್ರೂ ಗರ್ಭಿಣಿ ಮಾಡಬಹುದು: ನಟಿ ಕಂಗನಾ
ಸಿನಿಮಾ ನಟಿಯರು ತಮ್ಮ ನಟನೆಯ ಜೊತೆಗೆ ವಿವಾದಗಳಿಂದಲೂ ಹೆಚ್ಚು ಗಮನ ಸೆಳೆಯುತ್ತಾರೆ. ಈ ಪೈಕಿ ಬಾಲಿವುಡ್ ನಟಿ, ರಾಜಕಾರಣಿ ಕಂಗನಾ ರನೌತ್ (Kangana Ranaut) ಕೂಡ ಪ್ರಮುಖರು. ತಮ್ಮ ನೇರ ಹಾಗೂ ಬೋಲ್ಡ್ ಹೇಳಿಕೆಗಳಿಂದಲೇ ಕಂಗನಾ ಇತ್ತೀಚೆಗೆ ದೇಶದೆಲ್ಲೆಡೆ ಸುದ್ದಿಯಾಗುತ್ತಿದ್ದಾರೆ. ಇನ್ನು ಈಗಿನ ಯುವಜನರು ಡೇಟಿಂಗ್, ಲಿವ್-ಇನ್ ರಿಲೇಷನ್ಶಿಪ್ (Live-In Relationship) ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ. ಈ ಡೇಟಿಂಗ್ ಅಪ್ಲಿಕೇಷನ್ಗಳು ಹಾಗೂ ಲಿವ್-ಇನ್ ರಿಲೇಷನ್ಶಿಪ್ ಬಗ್ಗೆ ಕಂಗನಾ ಅಚ್ಚರಿ ಹೇಳಿಕೆಗಳನ್ನು ನೀಡಿದ್ದು, ಈ ವಿಡಿಯೋ ಭಾರೀ ವೈರಲ್ ಆಗಿ ಚರ್ಚೆ ಹುಟ್ಟುಹಾಕಿದೆ.
ಇತ್ತೀಚಿನ ಸಂದರ್ಶನದಲ್ಲಿ ಅವರು ಸಂದರ್ಶನದಲ್ಲಿ, 'ಆಧುನಿಕ ಡೇಟಿಂಗ್ ಸಂಸ್ಕೃತಿಯು ಸಾಮಾನ್ಯ ಜನರಿಗೆ ಅವಮಾನಕರ ಮತ್ತು ಅನರ್ಹ ಎಂದು ಕರೆದಿದ್ದಾರೆ. ಪ್ರತಿಯೊಬ್ಬರಿಗೂ ಆರ್ಥಿಕ, ದೈಹಿಕ ಅಥವಾ ಇನ್ಯಾವುದೇ ವಿಚಾರಗಳಲ್ಲಿ ಅಗತ್ಯತೆ ಇರುತ್ತೆ. ಪ್ರತಿಯೊಬ್ಬ ಮಹಿಳೆ ಮತ್ತು ಪುರುಷನಿಗೂ ಅಗತ್ಯತೆಗಳಿವೆ. ಆದರೆ ನಾವು ಅವುಗಳನ್ನು ಹೇಗೆ ಪರಿಹರಿಸುತ್ತೇವೆ? ಎನ್ನುವುದೇ ದೊಡ್ಡ ಪ್ರಶ್ನೆ. ನಾವು ಅದನ್ನು ಸೊಗಸಾಗಿ ಮಾಡುತ್ತೇವೆಯೇ ಅಥವಾ ಪ್ರತಿ ರಾತ್ರಿ ಹೆಚ್ಚು ಒರಟಾಗಿ ಮಾಡುತ್ತೇವೆಯೇ? ಈಗ ಡೇಟಿಂಗ್ ಎಂದರೆ ಅದೇ ಆಗಿದೆ. ಇದು ಭಯಾನಕ ಪರಿಸ್ಥಿತಿಯಲ್ಲಿದೆ' ಎಂದಿದ್ದಾರೆ ಕಂಗನಾ.

'ಡೇಟಿಂಗ್ ಆಪ್ನಲ್ಲಿ ಸಿಗೋರು ಡೇಂಜರ್'
'ನಾನು ಎಂದಿಗೂ ಡೇಟಿಂಗ್ ಅಪ್ಲಿಕೇಶನ್ಗಳಲ್ಲಿ ಇರಲು ಬಯಸಲಿಲ್ಲ. ಅದು ನಮ್ಮ ಸಮಾಜಕ್ಕೆ ಮಾರಕ. ಯಾವುದೇ ಒಬ್ಬ ಸಾಮಾನ್ಯ ವ್ಯಕ್ತಿಯು ಡೇಟಿಂಗ್ ಅಪ್ಲಿಕೇಶನ್ ಬಳಸಲು ಇಷ್ಟಪಡಲ್ಲ ಎಂದು ನಾನು ಭಾವಿಸುತ್ತೇನೆ. ಆತ್ಮವಿಶ್ವಾಸದ ಕೊರತೆಯಿರುವ ಜನರು ಅಂತಹ ಸ್ಥಳಗಳಿಗೆ ಹೋಗುತ್ತಾರೆ. ಅಂತಹ ಅಪ್ಲಿಕೇಶನ್ಗಳನ್ನು ಬಳಸುವ ಜನರೊಂದಿಗೆ ಮಾತುಕತೆ ನಡೆಸುವುದನ್ನು ಊಹಿಸಲು ಸಾಧ್ಯವಿಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.
'ನೀವು ಕೆಲಸ ಮಾಡುವ ಕಚೇರಿಗಳಲ್ಲಿ ಅಥವಾ ನೀವು ಓದುವ ಕಾಲೇಜುಗಳಲ್ಲಿ, ಮದುವೆಗಾಗಿ ನಿಮ್ಮ ಪೋಷಕರು ನಿಮಗಾಗಿ ಹುಡುಕುವ ಪಾರ್ಟ್ನರ್ಗಳಲ್ಲಿ ನೀವು ಒಳ್ಳೆಯ ಜನರನ್ನು ಕಾಣುತ್ತೀರಿ. ಡೇಟಿಂಗ್ ಆ್ಯಪ್ಗಳಲ್ಲಿ ನನ್ನಂತಹ ಜನರು ನಿಮಗೆ ಸಿಗೋದಿಲ್ಲ. ಅಲ್ಲಿ ನೀವು ಜೀವನದಲ್ಲಿ ಏನನ್ನೂ ಸಾಧಿಸದ ಜನರು, ಸೋತವರನ್ನು ಮಾತ್ರ ಕಾಣುತ್ತೀರಿ' ಎಂದು ಸಲಹೆ ನೀಡಿದ್ದಾರೆ.

'ಪುರುಷರು ಬೇಟೆಗಾರರು'
ಲಿವ್-ಇನ್ ರಿಲೇಷನ್ಶಿಪ್ ಬಗ್ಗೆ ಮಾತನಾಡಿರುವ ಕಂಗನಾ, 'ನಮ್ಮ ಸಮಾಜದಲ್ಲಿ ಮದುವೆಗಳು ತುಂಬಾ ಮುಖ್ಯ. ಅದು ಪುರುಷನು ತನ್ನ ಹೆಂಡತಿಗೆ ನಿಷ್ಠನಾಗಿರಲು ನೀಡುವ ಪ್ರತಿಜ್ಞೆ. ಆದರೆ ಇತ್ತೀಚಿನ ದಿನಗಳಲ್ಲಿ ಲಿವ್-ಇನ್ ಸಂಬಂಧಗಳು ಹೆಚ್ಚಾಗಿವೆ. ಇದು ಮಹಿಳಾ ಸ್ನೇಹಿ ವಿಷಯವಲ್ಲ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ ಎಂದು ವಿರೋಧಿಸಿದ್ದಾರೆ. ನಾಳೆ ನೀವು ಲಿವ್-ಇನ್ ಸಂಬಂಧದ ಸಮಯದಲ್ಲಿ ಗರ್ಭಿಣಿಯಾದರೆ, ನಿಮ್ಮನ್ನು ಯಾರು ನೋಡಿಕೊಳ್ಳುತ್ತಾರೆ? ಪುರುಷರು ಬೇಟೆಗಾರರಿದ್ದಂತೆ. ಅವರು ಯಾವುದೇ ಮಹಿಳೆಗೆ ಗರ್ಭಧರಿಸಿ ಓಡಿ ಹೋಗಬಹುದು. ಆಗ ಗರ್ಭಪಾತ ಮಾಡಿಸಿಕೊಳ್ಳಲು ಯಾರು ನಿಮಗೆ ಸಹಾಯ ಮಾಡುತ್ತಾರೆ?' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications