'ಮತ್ತೊಬ್ಬ ನಟನ ಮಾತು ಕೇಳಿ ಕಿಚ್ಚ ಸುದೀಪ್ಗೆ ರಾಗಿಣಿ ಅವಮಾನ ಮಾಡಿದ್ರು'
ಕನ್ನಡ ಚಿತ್ರರಂಗದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ವಿರುದ್ಧ ಸಾಮಾಜಿಕ ಹೋರಾಟಗಾರರೊಬ್ಬರು ಅಸಮಾಧಾನ ಹೊರಹಾಕಿದ್ದು, ತಮಗೆ ಚಿತ್ರರಂಗದಲ್ಲಿ ಮೊದಲ ಅವಕಾಶ ಕೊಟ್ಟ ಕಿಚ್ಚ ಸುದೀಪ್ ಅವರಿಗೆ ರಾಗಿಣಿ ಅವಮಾನ ಮಾಡಿದರು ಎನ್ನುವ ಆರೋಪ ಮಾಡಿದ್ದಾರೆ. ಬೆಂಗಳೂರಿನ ಖ್ಯಾತ ವಕೀಲರು ಹಾಗೂ ಸಾಮಾಜಿಕ ಹೋರಾಟಗಾರ ಪ್ರಖ್ಯಾತ್ ಗೌಡ ಬಾಸ್ ಟಿವಿ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಈ ಇಂಟ್ರಸ್ಟಿಂಗ್ ಮಾಹಿತಿ ಬಿಚ್ಚಿಟ್ಟಿದ್ದಾರೆ.
'ರಾಗಿಣಿ ಅವರು ಇಂದು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರೆ ಮೂಲ ಕಾರಣ ನಟ ಕಿಚ್ಚ ಸುದೀಪ್ ಅವರು. ರಾಗಿಣಿ ಅವರದು ಯಾವುದೂ ಸಿನಿಮಾ ಇಲ್ಲದೇ ಇದ್ದಾಗ ಸುದೀಪ್ ಅವರು ಒಬ್ಬ ಸ್ಟಾರ್ ನಟ. ರಾಗಿಣಿ ಏನೂ ಅಲ್ಲ ಅವತ್ತು. ಅಂತಹ ಒಂದು ಹೊಸ ಹುಡುಗಿಗೆ ಅದರಲ್ಲೂ ಬೇರೆ ರಾಜ್ಯದ ಹುಡುಗಿಗೆ ಸುದೀಪ್ ಅಂತಹ ಒಳ್ಳೆಯ ಅವಕಾಶ ಕೊಡುತ್ತಾರೆ ಎಂದರೆ ದೊಡ್ಡ ವಿಚಾರ. ಆ ಸಮಯದಲ್ಲಿ ಆಕೆಗೆ ಕನ್ನಡ ಭಾಷೆ ಬರುತ್ತಿರಲಿಲ್ಲ. ವೀರಮದಕರಿ ಸಿನಿಮಾ ಮಾಡುವ ಸಮಯದಲ್ಲಿ ಆಕೆಗೆ ಕನ್ನಡವೇ ಗೊತ್ತಿರಲಿಲ್ಲ'.

'ಆಕೆಯ ಹೋಳಿ ಸಿನಿಮಾ ಶುರು ಸಹ ಆಗಿರಲಿಲ್ಲ. ಹೊಸ ನಟನ ಜೊತೆ ಹೋಳಿ ಸಿನಿಮಾ ಒಪ್ಪಿಕೊಂಡಿದ್ದರು. ಇಂತಹ ಸಮಯದಲ್ಲಿ ಕಿಚ್ಚ ಸುದೀಪ್ ಅವರು ಒಂದು ಅವಕಾಶ ಕೊಡುತ್ತಾರೆ. ಯಾಕೆಂದರೆ ಒಬ್ಬ ಹೆಣ್ಣು ಮಗಳಿಗೆ ಸಹಾಯವಾಗಲಿ ಅಂತಾ. ಅದಾಗ ಮೇಲೆ ಕೆಂಪೇಗೌಡದಲ್ಲಿಯೂ ಅವಕಾಶ ಕೊಡುತ್ತಾರೆ. ಎರಡು ಸಿನಿಮಾ ಬ್ಯಾಕ್ ಟು ಬ್ಯಾಕ್ ಹಿಟ್ ಆಗುತ್ತದೆ. ಅದಾಗ ಮೇಲೆ ನಟಿ ರಾಗಿಣಿ ಸುದೀಪ್ ಅವರಿಗೆ ಅಗೌರವಯುತವಾಗಿ ನಡೆದುಕೊಳ್ಳುತ್ತಾರೆ' ಎಂದರು.
'ಸುದೀಪ್ ಅವರು ನನಗೆ ಒಂದು ಅವಕಾಶ ಕೊಟ್ಟಿದ್ದಾರೆ ಎನ್ನುವುದನ್ನು ಕಡೆಗಣಿಸಿ, ಸುದೀಪ್ ಅವರು ಏನೂ ಅಲ್ಲವೇ ಅಲ್ಲ ನನಗೆ, ತಾನು ನಡೆದದ್ದೇ ದಾರಿ ಎನ್ನುವ ತರ ಅವರೇ ನಿರ್ಧಾರ ತೆಗೆದುಕೊಂಡು ಸಿನಿಮಾಗಳನ್ನು ಮಾಡುತ್ತಾ ಹೋಗುತ್ತಾರೆ. ಇದು ಒಳಗಡೆಯಿಂದ ಬಂದಿರುವಂತಹ ಮಾಹಿತಿ. ಸುದೀಪ್ ಅವರ ಆಪ್ತ ವಲಯಕ್ಕೆ ಇದರ ಬಗ್ಗೆ ಇನ್ನೂ ಹೆಚ್ಚಾಗಿ ಗೊತ್ತು ನನಗಿಂತ ಜಾಸ್ತಿ. ಹೀಗಾಗಿ ಸುದೀಪ್ ಅವರು ಆಕೆಯ ವಿಚಾರದಲ್ಲಿ ಸುಮ್ಮನಾಗಿ ಹೋಗುತ್ತಾರೆ'.

'ರಾಗಿಣಿ ಅವಕಾಶ ತೆಗೆದುಕೊಂಡರು, ಬಳಸಿಕೊಂಡರು, ದೊಡ್ಡ ನಟಿಯಾದರು. ಸಿನಿಮಾ ರಂಗದಲ್ಲಿ ಸುದೀಪ್ ಅವರು ಅನೇಕರಿಗೆ ಗಾಡ್ಫಾದರ್ ಆಗಿದ್ದಾರೆ. ಆದರೆ ಈಕೆ ಎರಡನೇ ಸಿನಿಮಾಗೆ ಹತ್ತಿದ ಏಣಿಯನ್ನು ಒದೆಯುವ ಕೆಲಸ ಮಾಡಿದರು. ಇನ್ನೊಬ್ಬ ನಟನ ಮಾತು ಕೇಳಿಕೊಂಡು ಹೀಗೆ ಮಾಡಿದರು. ಅವಕಾಶ, ಸಂಭಾವನೆ ಎಲ್ಲಾ ರೀತಿಯಲ್ಲೂ ಹೀಗೆ ಮಾಡಿ ತನಗೆ ಬೇಕಾದ ನಿರ್ಧಾರ ಮಾಡಿದರು. ಅವತ್ತಿನಿಂದ ಸುದೀಪ್ ಅವರು ಕೂಡ ಸುಮ್ಮನಾಗಿ ಬಿಟ್ಟರು' ಎಂದು ಪ್ರಖ್ಯಾತ್ ಗೌಡ ಹೇಳಿದರು.
-
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? -
ರೈತರಿಗೆ ಮಾಲ್, ಮಂಡ್ಯ ಸಾವಯ ಕೃಷಿ: ಅಡಿಕೆ - ತೆಂಗು ಬೆಳಗಾರರಿಗೂ ಬಂಪರ್, ಮೇಕೆದಾಟು ಯೋಜನೆಗೆ ಅಸ್ತು -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ -
Karnataka Budget 2026: ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ -
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ, ವಿಶೇಷವೇನು -
ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಅನುಮತಿ ಕೊಟ್ಟ ಅಮೆರಿಕ












Click it and Unblock the Notifications