Manjula: ಮಂಜುಳಾ ಸಾವಿಗೆ ಕಾರಣವೇನು? ನಟಿ ಅಂತ್ಯವನ್ನು ಕಣ್ಣಾರೆ ಕಂಡವರು ಹೇಳಿದ್ದೇನು?
80ರ ದಶಕದಲ್ಲಿ ಕನ್ನಡ ಚಿತ್ರರಂಗ ಅದೆಷ್ಟೋ ನಟಿಯರನ್ನು ಕಂಡಿದೆ. ಒಂದಿಷ್ಟು ಕಲಾವಿದೆಯರು ಜನಮಾನಸದಲ್ಲಿ ಉಳಿದರೆ, ಇನ್ನೂ ಕೆಲವು ನಟಿಯರು ಕಾರಣಾಂತರಗಳಿಂದ ತೆರೆ ಮರೆಗೆ ಸರಿದರು. ಆದರೆ ತಮ್ಮ ನಟನೆಯಿಂದ ಜನರ ಮೆಚ್ಚುಗೆ ಗಳಿಸಿ ಅಪಾರ ಅಭಿಮಾನ ಗಳಿಸಿದ್ದ ಕೆಲ ನಟಿಯರು ದುರಂತ ಅಂತ್ಯ ಕಂಡಿರುವುದು ವಿಷಾದನೀಯ. ಈ ಪೈಕಿ ಹಿರಿಯ ನಟಿ ಮಂಜುಳಾ ಕೂಡ ಒಬ್ಬರು.
80ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ನಟಿ ಮಂಜುಳಾ, ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದು ತಮ್ಮ ಅಮೋಘ ನಟನೆಯ ಮೂಲಕ ಯಶಸ್ಸು ಕಂಡಿದ್ದರು. ವರ ನಟ ಡಾ.ರಾಜ್ಕುಮಾರ್, ಡಾ.ವಿಷ್ಣುವರ್ಧನ್ ಹಾಗೂ ಶ್ರೀನಾಥ್ರಂತಹ ಮುಂತಾದ ಸಮಕಾಲೀನ ನಟರೊಂದಿಗೆ ತೆರೆ ಹಂಚಿಕೊಂಡು ನಟನೆಯಲ್ಲಿ ಮಂಜುಳಾ ಸೈ ಎನಿಸಿಕೊಂಡು ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿದ್ದರು.

ಖಾಸಗಿ ಜೀವನದಲ್ಲಿ ಏರಿಳಿತಗಳನ್ನು ಕಂಡ ನಟಿ ಮಂಜುಳಾ ತಮ್ಮ 34ನೇ ವಯಸ್ಸಿಗೆ ಇಹಲೋಕ ತ್ಯಜಿಸಿದರು. ಆದರೆ ಇವರ ಸಾವಿನ ಸುತ್ತ ಅನೇಕ ಅನುಮಾನಗಳು ಹುಟ್ಟಿಕೊಂಡಿದ್ದವು. ಅವರ ಸಾವು ಆತ್ಮಹತ್ಯೆಯೋ ಅಥವಾ ಸಹಜ ಸಾವೋ ಎನ್ನುವುದರ ಬಗ್ಗೆ ಅನೇಕ ವಿಚಾರಗಳು ಹರಿದಾಡಿದ್ದವು. ಮಂಜುಳಾ ಅವರ ಸಾವಿನ ನೈಜ ವಿಚಾರಗಳು ಈಗೀಗ ಬೆಳಕಿಗೆ ಬರುತ್ತಿದ್ದು, ಅವರ ಅತ್ಯಾಪ್ತರೊಬ್ಬರು ಈ ಬಗ್ಗೆ ಮಾತನಾಡಿದ್ದಾರೆ.
ನಟಿ ಮಂಜುಳಾ ಅವರ ಸಹೋದರನ ಪತ್ನಿ ಅಗ್ನಿ ದುರಂತ ನಡೆದ ದಿನ ಏನಾಯ್ತು ಎನ್ನುವುದರ ಬಗ್ಗೆ ವಿವರಿಸಿದ್ದಾರೆ. ಮಂಜುಳ ಅವರೊಂದಿಗಿನ ಬಾಂಧವ್ಯದ ಬಗ್ಗೆ ಹೇಳಿಕೊಂಡ ಅವರು, ಏನು ಮಾಡುವುದು ಅವರನ್ನು ಕಳೆದುಕೊಂಡೆವು, ಆ ದಿನ ಒಂದು ಸೆಕೆಂಡ್ನಲ್ಲಿ ನಡೆದ ಅವಘಡದಿಂದ ಹೀಗೆ ಆಗಿ ಹೋಯ್ತು ಎಂದು ಭಾವುಕರಾಗಿದ್ದರೆ.
'ಮಗ ಬಂದಿದ್ದಾನೆ ಎಂದು ಅವರು ಸ್ಟೌವ್ ಹಚ್ಚಿದ್ದರು. ಆದರೆ ಗ್ಯಾಸ್ ಹಚ್ಚಿರುವುದು ಅವರಿಗೆ ನೆನಪಿಲ್ಲ. ಆಗೆಲ್ಲಾ ಸಂಜೆ ಹೊತ್ತಲ್ಲಿ ಸೊಳ್ಳೆ ಬರುತ್ತದೆ ಎಂದು ನಾವು ಕಿಟಕಿಯಲ್ಲ ಕ್ಲೋಸ್ ಮಾಡಿದ್ದೇವು. ಅವರಿಗೆ ಗ್ಯಾಸ್ ಹಚ್ಚಿರುವುದೇ ನೆನಪಿಲ್ಲ. ಮಗ ಬಂದ ಎಂದು ಅವನ ಜೊತೆ ಹೋಗಿದ್ದಾರೆ. ಸ್ವಲ್ಪ ಸಮಯ ಬಿಟ್ಟು ಬಂದು ಬೆಂಕಿ ಅಂಟಿಸಿದ್ದಾರೆ. ಮೊದಲೇ ಸಿಂತಟಿಕ್ ಬಟ್ಟೆ ಧರಿಸಿದ್ದರು, ಇದರಿಂದ ಮೈಗೆ ಬೆಂಕಿ ಹೊತ್ತಿಕೊಂಡಿತ್ತು.'

'ಆ ದಿನ ಯಾರು ಇರಲಿಲ್ಲ ಬೇರೆ. ಜೊತೆಯಲ್ಲಿ ಚಿಕ್ಕ ಮಕ್ಕಳಿದ್ದರು. ಅವರು ಜೋರಾಗಿ ಕೂಗಿಕೊಂಡಾಗ ಏನು ಮಾಡಬೇಕೋ ತಿಳಿಯಲಿಲ್ಲ. ಮನೆಯಲ್ಲಿದ್ದ ಹೊದಿಕೆಯೊಂದನ್ನು ತೆಗೆದುಕೊಂಡು ತಕ್ಷಣವೇ ಸುತ್ತಿದೆವು. ಬಳಿಕ ಆಟೋದಲ್ಲಿ ಸಮೀಪದ ಆಸ್ಪತ್ರೆಗೆ ಹೋದೆವು. ಬೆಂಕಿ ಅವಘಡ ಆದ ಕಾರಣ ಅಲ್ಲಿ ಚಿಕಿತ್ಸೆ ನೀಡಲಿಲ್ಲ. ಹೀಗಾಗಿ ಮತ್ತೆ ವಿಕ್ಟೋರಿಯಾಕ್ಕೆ ಹೋದೆವು.
ರಾತ್ರಿ 8 ಗಂಟೆ ಆಗಿತ್ತು.. ಆಟೋದಲ್ಲೇ ನೀರು ಬೇಕು ನೀರು ಬೇಕು ಎನ್ನುತ್ತಿದ್ದರು. ನಾನು ಆಟೋ ನಿಲ್ಲಿಸಿ ನೀರು ತಂದು ಕೊಟ್ಟೆ, ತಣ್ಣಗಾಯ್ತು ಅಂದಿದ್ದರು. ಆ ಬಳಿಕ ಆಸ್ಪತ್ರೆಗೆ ದಾಖಲಿಸಿದೆವು..ಆಮೇಲೆ ಏನಾಯ್ತು ಎಲ್ಲರಿಗೂ ಗೊತ್ತಿದೆ. ನಾವು ಅವರನ್ನು ಕಳೆದುಕೊಂಡೆವು..ಆತ್ಮಹತ್ಯೆಯೂ ಅಲ್ಲ ಏನೂ ಅಲ್ಲ ಇದೊಂದು ಅಗ್ನಿ ಅವಘಡ, ನಾನೇ ನೋಡಿದ್ದೇನೆ. ನಾನೇ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದು. ಎಂದು ಆ ದಿನದ ಇಂಚಿಚೂ ಮಾಹಿತಿಯನ್ನು ತೆರೆದಿಟ್ಟಿದ್ದಾರೆ.
-
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ












Click it and Unblock the Notifications