Kiccha Sudeep: ಕಿಚ್ಚ ಸುದೀಪ್ ಜೀವನದಲ್ಲಿರುವ ಇಬ್ಬರು ಬಾಸ್ ಯಾರು ಗೊತ್ತಾ..?
ಅಭಿನಯ ಚಕ್ರವರ್ತಿ, ಬಾದ್ ಶಾ ನಟ ಕಿಚ್ಚ ಸುದೀಪ್ ಅಪಾರ ಅಭಿಮಾನಿಗಳ ಆರಾಧ್ಯ ದೈವ. ಅಭಿಮಾನಿಗಳು ಪ್ರೀತಿಯಿಂದ ಸುದೀಪ್ ಅವರನ್ನು ಬಾಸ್ ಎಂದು ಕರೆಯುತ್ತಾರೆ. ಆದರೆ ಸುದೀಪ್ ತಮ್ಮ ಜೀವನದಲ್ಲಿ ಬಾಸ್ ಎಂದು ಕರೆದಿದ್ದು ಇಬ್ಬರಿಗೆ ಮಾತ್ರವಂತೆ. ಈ ಬಗ್ಗೆ 'ಗೌರಿ' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಡುತ್ತಿರುವ ಸಮರ್ಜಿತ್ ಲಂಕೇಶ್ ಜೊತೆಗೆ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
'ಕಲಾ ಮಾಧ್ಯಮ' ಯೂಟ್ಯೂಬ್ ಚಾನೆಲ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸುದೀಪ್ ಈ ಬಗ್ಗೆ ಮಾತನಾಡಿದ್ದಾರೆ. ನನ್ನ ಮೆಚ್ಚಿನ ಹೀರೋ ನೀವು ನಿಮ್ಮ ಮೆಚ್ಚಿನ ಹೀರೋ ಯಾರು ಎನ್ನುವ ಸಮರ್ಜಿತ್ ಲಂಕೇಶ್ ಪ್ರಶ್ನೆಗೆ ಉತ್ತರಿಸಿದ ಕಿಚ್ಚ ಸುದೀಪ್, ವಿಷ್ಣು ಸರ್ ಎಂದು ಉತ್ತರಿಸಿದ್ದಾರೆ. ಕನ್ನಡದಲ್ಲಿ ನನ್ನ ಆಲ್ ಟೈಮ್ ಫೇವರೇಟ್ ಅಂದ್ರೆ ವಿಷ್ಣು ಸರ್. ನಾನು ಯಾವಾಗಲೂ ಎಲ್ಲಾ ಕಡೆಯಲ್ಲೂ ಅದನ್ನು ಹೇಳಿದ್ದೇನೆ.

ನಾನು ಲೈಪ್ ಅಲ್ಲಿ ಇಬ್ಬರಿಗೆ ಬಾಸ್ ಅಂತಾ ಕರೆದಿರುವುದು. ಒಂದು ನಮ್ಮ ತಂದೆಗೆ. ಅವರನ್ನು ಇವತ್ತಿಗೂ ಬಾಸ್ ಅಂತಾ ಕರೆಯುತ್ತೇನೆ. ಇನ್ನೊಂದು ವಿಷ್ಣು ಸರ್. ಅವರು ಒಬ್ಬ ನಟನಾಗಿ ಮಾತ್ರವಲ್ಲದೇ, ನಟನೆಗಿಂತ ಹೆಚ್ಚಾಗಿ ಅವರ ವ್ಯಕ್ತಿತ್ವ. ಈ ಗತ್ತು ಅದೆನೆಲ್ಲಾ ಮೊದಲು ನೋಡಿದ್ದು ಅವರಲ್ಲೆ ನಾನು. ಆ ವ್ಯಕ್ತಿ ಅವರಿದ್ದ ರೀತಿ, ಆ ಗತ್ತು, ಅವರೇ ನನಗೆ ಎಲ್ಲಾ ಸಮಯದಲ್ಲೂ ಫೇವರೇಟ್ ಎಂದು ಹೇಳಿದ್ದಾರೆ.
ಇನ್ನು ತಮ್ಮ ತಂದೆ ಬಗ್ಗೆ ಮಾತನಾಡಿದ ಸುದೀಪ್, ನಮ್ಮ ತಂದೆ ಬ್ಯುಸಿನೆಸ್ಮ್ಯಾನ್. ಮೊದಲು ಕ್ರಿಕೆಟರ್ ಆಗಬೇಕು ಎಂದುಕೊಂಡೆ ಅದಕ್ಕೆ ಬಿಡಲಿಲ್ಲ. ನಾನು ಕ್ರಿಕೆಟ್ ನಿಲ್ಲಿಸಿದಾಗ ನನ್ನ ಅಮ್ಮ ಹಾಗೂ ಕೆಲವರು ನಮ್ಮ ತಂದೆಗೆ ಹೇಳಿದ್ದು ಏನೆಂದರೆ, ಎಲ್ಲವನ್ನೂ ತಡೆಯಬೇಡಿ, ಮಾಡಲು ಬಿಡಿ ಅವನಿಗೆ. ನಮ್ಮ ತಂದೆಗೆ ಇಂಡಸ್ಟ್ರಿಯಲ್ಲಿ ತುಂಬಾ ಜನ ಗೆಳೆಯರಿದ್ದರು. ಅವರಿಗೆ ಗೊತ್ತಿತ್ತು ಯಾರ್ಯಾರು ಹೇಗೆ ಒದ್ದಾಡಿದ್ದಾರೆ ಅಂತಾ. ಅವರು ಅಂದುಕೊಂಡಿದ್ದರು ಹೋಗಿ ವಾಪಸ್ ಬರುತ್ತಾನೆ ಅಂತಾ. ಆದರೆ ನಾನು ಯಾವ ಕಾರಣಕ್ಕೂ ಬಿಡಬಾರದು ಅಂತಾ ನಿರ್ಧರಿಸಿದ್ದೆ ಎಂದು ಸುದೀಪ್ ಹೇಳಿದ್ದಾರೆ.
-
Spirit: ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾ ಸೆಟ್ನಲ್ಲಿ ಬೆಂಕಿ, ಹಲವರಿಗೆ ಗಾಯ: ಚಿತ್ರೀಕರಣ ಬಂದ್ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ












Click it and Unblock the Notifications