ಸ್ಯಾಂಡಲ್ವುಡ್ ಅಂಗಳಕ್ಕೆ ‘ಧೈರ್ಯಂ ಸರ್ವತ್ರ ಸಾಧನಂ’ ಎಂಟ್ರಿ!
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸಬರ ಸಿನಿಮಾಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗ್ತಿದೆ. ಹೀಗೆ ಬರುವ ಹೊಸಬರ ಸಿನಿಮಾಗಳು ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಭಾರಿ ಸರ್ಪ್ರೈಸ್ ನೀಡಿ ರಂಜಿಸುತ್ತಿವೆ. ಅದೇ ರೀತಿ ಇದೀಗ 'ಧೈರ್ಯಂ ಸರ್ವತ್ರ ಸಾಧನಂ' ಸಿನಿಮಾ ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹವಾ ಸೃಷ್ಟಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇನ್ನು ಹೊಸಬರ ಈ ಪ್ರಯತ್ನಕ್ಕೆ ಸೀನಿಯರ್ಸ್ ಕೂಡ ಸಾಥ್ ಕೊಡುತ್ತಿದ್ದು, ವಸಿಷ್ಠ ಕೂಡ ಬೆನ್ನುತಟ್ಟಿದ್ದಾರೆ.
ಅಷ್ಟಕ್ಕೂ ಎ.ಆರ್. ಸಾಯಿರಾಮ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತ ರಚನೆಯನ್ನು ಮಾಡಿರುವ 'ಧೈರ್ಯಂ ಸರ್ವತ್ರ ಸಾಧನಂ' ಸಿನಿಮಾ ಟೀಸರ್ ರಿಲೀಸ್ ಆಗಿದೆ. ಎ.ಆರ್. ಸಾಯಿರಾಮ್ ಈ ಸಿನಿಮಾದ ನಿರ್ದೇಶನದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ಈ ಸಿನಿಮಾಗೆ ಕೈಜೋಡಿಸಿರುವ ತಂಡ ಕೂಡ ಹೊಸಬರದ್ದು. ಹೀಗಾಗಿ ಆರಂಭದಿಂದಲೇ ಈ ಸಿನಿಮಾ ಟೈಟಲ್ ಮೂಲಕ ಸಾಕಷ್ಟು ಗಮನವನ್ನ ಸೆಳೆದಿತ್ತು. ಈಗ ಹೊಸಬರ ಸಿನಿಮಾಗೆ ನಟ ವಸಿಷ್ಠ ಸಿಂಹ ಸಾಥ್ ನೀಡಿ ಶುಭ ಹಾರೈಸಿದ್ದಾರೆ. ಟೀಸರ್ ಕೂಡ ರಿಲೀಸ್ ಮಾಡಿದ್ದಾರೆ.

'ಧೈರ್ಯಂ ಸರ್ವತ್ರ ಸಾಧನಂ' ಟೀಸರ್ ಹೇಗಿದೆ?
ಇನ್ನು ಹೊಸಬರ 'ಧೈರ್ಯಂ ಸರ್ವತ್ರ ಸಾಧನಂ' ಟೀಸರ್ ಮೇಕಿಂಗ್ನಲ್ಲಿ ಡಿಫರೆಂಟ್ ಆಗಿ ಕಾಣಿಸಿಕೊಂಡಿದೆ. ಹಾಗೇ ಫೈಟ್ & ಆಕ್ಷನ್ ಮೂಲಕ ಒಂದಷ್ಟು ಥ್ರಿಲ್ಲಿಂಗ್ ಕಥಾ ಹಂದರ ಹೊಂದಿದೆ ಎಂಬ ಸೂಚನೆ ಸಿಗುತ್ತಿದೆ. ಹಾಗೇ ತಂದೆಯ ಕನಸು ಈಡೇರಸಲು ಮಗ ಹೇಗೆ ಪರದಾಡುತ್ತಾನೆ? ಅನ್ನೋ ಕಥೆಯನ್ನು ಈ ಸಿನಿಮಾ ಹೇಳುತ್ತೆ, ಜೊತೆಗೆ ತಂದೆ & ಮಗನ ಬಾಂಧವ್ಯದ ಬಗ್ಗೆಯೂ ವಿವರಿಸಲಿದೆ ಅಂತಿದೆ ಸಿನಿಮಾ ತಂಡ.
ವಸಿಷ್ಠ ಸಿಂಹ ಹೇಳಿದ್ದೇನು?
ಇನ್ನು ಟೀಸರ್ ಬಿಡುಗಡೆ ಮಾಡಿ ಮಾತನಾಡಿರುವ ನಟ ವಸಿಷ್ಠ ಸಿಂಹ, ಸಿನಿಮಾದ ಕುರಿತು ಟೀಸರ್ ಕುತೂಹಲ ಕೆರಳಿಸಿದೆ ಎಂದಿದ್ದಾರೆ. ಹಾಗೇ ಈ ಕುತೂಹಲಕ್ಕೆ ಉತ್ತರ ಪಡೆಯಲು ಥಿಯೇಟರ್ಗೆ ಬರಬೇಕು ಎಂದಿದ್ದಾರೆ. ಹಾಗೆ ಮತ್ತೊಂದು ಕಡೆ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ನಿರ್ದೇಶನ ಮಾಡಿದ್ದ ಪಾ.ರಂಜಿತ್ ಡಿಜಿಟಲ್ನಲ್ಲಿ ಟೀಸರ್ ಬಿಡುಗಡೆ ಮಾಡಿ, ಚಿತ್ರ ನೋಡಲು ನಾನು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಹೀಗಾಗಿ ಸಿನಿಮಾ ಟೀಸರ್ ಈಗ ಗಮನ ಸೆಳೆಯುತ್ತಿದೆ.

ಬಂಡವಾಳ ಹಾಕಿರುವುದು ಯಾರು?
ಅಂದಹಾಗೆ ಎ.ಪಿ.ಪ್ರೊಡಕ್ಷನ್ ಅಡಿ ಉದ್ಯಮಿ ಆನಂದ್ ಬಾಬು.ಜಿ ನಿರ್ಮಾಣ ಮಾಡಿದ್ದಾರೆ. ನಾಯಕನಾಗಿ ವಿವಾನ್.ಕೆ.ಕೆ & ನಾಯಕಿಯಾಗಿ ಅನುಷಾ ರೈ, ವಿಶಿಷ್ಟ ಪಾತ್ರಗಳಲ್ಲಿ ಯಶ್ ಶೆಟ್ಟಿ, ಬಲರಾಜ ವಾಡಿ, ಚಕ್ರವರ್ತಿ ಚಂದ್ರಚೂಡ್, ವರ್ಧನ್, ಪ್ರದೀಪ್ ಪೂಜಾರಿ ರಾಮ್ ಪವನ್ ನಟಿಸಿದ್ದಾರೆ. ಹಾಗೇ ಪದ್ಮಿನಿ ಶೆಟ್ಟಿ, ಅರ್ಜುನ್ ಪಾಳೆಗಾರ ಮತ್ತೆ ರಾಮ್ ನಾಯಕ್, ಹೊಂಗಿರಣ ಚಂದ್ರು ಈ ಸಿನಿಮಾದ ತಾರಾ ಬಳಗದಲ್ಲಿ ಇದ್ದಾರೆ. ಜೊತೆಗೆ ಹೊಸಬರಿಗೂ ಹೆಚ್ಚಿನ ಅವಕಾಶವನ್ನು 'ಧೈರ್ಯಂ ಸರ್ವತ್ರ ಸಾಧನಂ' ಸಿನಿಮಾದಲ್ಲಿ ನೀಡಲಾಗಿದೆ.
ಈ ಸಿನಿಮಾಗೆ ಹೃದಯಶಿವ, ಕಿನ್ನಾಳ್ ರಾಜ್, ಅರಸು ಅಂತಾರೆ ಸಾಹಿತ್ಯ ಬರೆದಿದ್ದಾರೆ. ಈ ಮೂಲಕ ಐದು ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತವನ್ನ ಸಂಯೋಜಿಸಿದ್ದಾರೆ. ಭಾರತದ ಹಲವು ಭಾಷೆ ಚಿತ್ರಗಳಿಗೆ ಕೆಲಸ ಮಾಡಿರುವ ರವಿಕುಮಾರ್ ಸನಾ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಚಂದ್ರು ಸಾಹಸ, ಕ್ಯಾಪ್ಟನ್ ಕಿಶೋರ್ ನೃತ್ಯ ಇರಲಿದೆ. ತುಮಕೂರು ಸೇರಿದಂತೆ, ಕೊರಟಗೆರೆ, ದೇವರಾಯನದುರ್ಗದ ಸುಂದರ ಜಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇನ್ನೂ ಈ ಸಿನಿಮಾ ಶೀಘ್ರದಲ್ಲೇ ರಿಲೀಸ್ ಆಗಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಅಂತಿಮ ಹಂತದ ಸಿದ್ಧತೆಗಳನ್ನ ಸಿನಿಮಾ ತಂಡ ಮಾಡಿಕೊಳ್ಳುತ್ತಿದೆ.
-
Anusha Rai: ಬಿಗ್ಬಾಸ್ ಬೆಡಗಿ ಅನುಷಾ ರೈ ಮನೆಗೆ ಬಂತು ಐಷಾರಾಮಿ ಫಾರ್ಚೂನರ್ ಕಾರು, ಫೋಟೋಸ್ ಇಲ್ಲಿವೆ -
Chandan Shetty: ವಯಸ್ಸಾದ್ಮೇಲೆ ಒಂಟಿತನ ಕಾಡುತ್ತೆ, ಆಗ ಕೊರಗುವ ಬದಲು ಈಗಲೇ ಒಳ್ಳೆಯ ಸಂಗಾತಿ ಹುಡುಕುವೆ: ಚಂದನ್ ಶೆಟ್ಟಿ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ












Click it and Unblock the Notifications