Darshan Thoogudeepa: ಡಿ-ಬಾಸ್ ದರ್ಶನ್ ಅಲ್ಲ, ದರ್ಶನ್ ತೂಗುದೀಪ್ ಕೊಲೆ ಆರೋ... ಲಾಯರ್ ಜಗದೀಶ್ ಸ್ಫೋಟಕ...
ಬಳ್ಳಾರಿ ಜೈಲಿಂದ ರಿಲೀಸ್ ಆಗಿ ಹೊರ ಬಂದಿರುವ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ಜೊತೆಗೆ, ಲಾಯರ್ ಜಗದೀಶ್ ದೊಡ್ಡ ಗಲಾಟೆ ಮಾಡಿಕೊಂಡಿದ್ದಾರೆ. ಸುಖಾಸುಮ್ಮನೆ ಇದೇ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಅಂತಾ ಹೇಳಿಕೊಂಡ ಒಬ್ಬ ಕೊಲೆ ಬೇದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಂಚಲನ ಸೃಷ್ಟಿ ಆಗಿರುವ ಬೆನ್ನಲ್ಲೇ ಸಾಲು ಸಾಲು ವಿಡಿಯೋ ಮಾಡಿ ಲಾಯರ್ ಜಗದೀಶ್ ಚಾಲೆಂಜ್ ಹಾಕುತ್ತಿದ್ದಾರೆ. ದರ್ಶನ್ ತೂಗುದೀಪ್ ಅಭಿಮಾನಿಗಳು ಮಾಡುವ ಟ್ರೋಲ್ & ಕಮೆಂಟ್ಗೆ ಉತ್ತರ ನೀಡುತ್ತಿದ್ದಾರೆ.
ದರ್ಶನ್ ತೂಗುದೀಪ್ ಅವರನ್ನ ಮಾನ್ಯ ನ್ಯಾಯಾಲಯ ಹಲವಾರು ಷರತ್ತು ಹಾಕಿ ಮಧ್ಯಂತರ ಜಾಮೀನು ನೀಡಿ ಬಳ್ಳಾರಿ ಜೈಲಿನಿಂದ ರಿಲೀಸ್ ಮಾಡಿದೆ. ಹೀಗಾಗಿ ಸ್ವಲ್ಪ ಎಡವಟ್ಟು ಆಗಿ, ದರ್ಶನ್ ತೂಗುದೀಪ್ ತಪ್ಪಿತಸ್ಥ ಎಂದು ಗೊತ್ತಾದರೂ ಮತ್ತೆ ಬಳ್ಳಾರಿ ಜೈಲಿಗೆ ಹೋಗುವುದು ಗ್ಯಾರಂಟಿ ಆಗಿದೆ. ಹೀಗೆ ದರ್ಶನ್ ತೂಗುದೀಪ್ ಅವರನ್ನು ಮತ್ತೊಮ್ಮೆ ಬಳ್ಳಾರಿ ಜೈಲಿಗೆ ತಳ್ಳಿ ಕಂಬಿ ಎಣಿಸುವಂತೆ ಮಾಡಲು ಪೊಲೀಸರು ಕೂಡ ಕಾಯುತ್ತಿದ್ದಾರೆ. ಇಂತಹ ಸಮಯದಲ್ಲೇ ಡಿ-ಬಾಸ್ ದರ್ಶನ್ ಅಲ್ಲ, ದರ್ಶನ್ ತೂಗುದೀಪ್ ಕೊಲೆ ಆರೋ... ಲಾಯರ್ ಜಗದೀಶ್ ಸ್ಫೋಟಕ...

ಅಭಿಮಾನಿ ವಿರುದ್ಧ ಕೊಲೆ ಬೆದರಿಕೆ ಆರೋಪ!
ಡಿ-ಬಾಸ್ ದರ್ಶನ್ ತೂಗುದೀಪ್ ಹೆಸರು ಹೇಳಿಕೊಂಡು ಕೆಲವರು ಕೊಲೆ ಬೆದರಿಕೆ ಹಾಕ್ತಿದ್ದು, ಸೋಷಿಯಲ್ ಮೀಡಿಯಾದಲ್ಲೂ ಇಂತಹ ಕೆಲವರ ಹಾವಳಿ ಜಾಸ್ತಿ ಆಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಅದರಲ್ಲೂ ಲಾಯರ್ ಜಗದೀಶ್ ಅವರಿಗೂ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿ ಅಂತಾ ಹೇಳಿಕೊಂಡವನು ಕೊಲೆ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕಿತ್ತಾಟ ಇದೀಗ ಮತ್ತಷ್ಟು ಜೋರಾಗುತ್ತಿದೆ.
ಲಾಯರ್ ಜಗದೀಶ್ ಅವರು ವಿಡಿಯೋ ಒಂದನ್ನ ಮಾಡಿ ದರ್ಶನ್ ತೂಗುದೀಪ್ ಅಭಿಮಾನಿಗೆ, 'ಯಾರೋ ದರ್ಶನ್ನ ದರ್ಶನ್ ಅನ್ನದೆ ಇನ್ನೇನು ಬಾಸ್ ಅನ್ನಬೇಕೇನೋ ಲೇ?? ಯಾರೋ.. ನಿಂಗೆ ಬಾಸು ನನಗಲ್ಲ, ನನಗೆ ನಾನೇ ಬಾಸು ಲೇ... ಅವನು ಯಾವನೋ ವಿಡಿಯೋ ಮಾಡಿ ಹಾಕಿ ಟ್ರೋಲ್ ಮಾಡ್ತೀಯಾ? ಲೇ ನಾನು ಯಾವನ್ನೂ ಬಾಸ್ ಅನ್ಕೊಂಡಿಲ್ಲ ಅಂದುಕೊಳ್ಳುವ ಅವಶ್ಯಕತೆ ಕೂಡ ನನಗೆ ಇಲ್ಲ. ಕರ್ನಾಟಕದಲ್ಲಿ ದರ್ಶನ್ ಯಾವ ಊರೋ? ಯಾವ ಊರೋ? ನಾಯ್ಡು... ಆಂಧ್ರ ಇಂದ ಬಂದಿರೋನು, ಲೇ ಕರ್ನಾಟಕದಲ್ಲಿ ಕನ್ನಡಿಗರೇ ಕಿಂಗ್ ಲೇ...' ಅಂತಾ ಫುಲ್ ಗರಂ ಆಗಿ ಮಾತನಾಡಿದ್ದಾರೆ ಲಾಯರ್ ಜಗದೀಶ್ ಅವರು.












Click it and Unblock the Notifications