25 ವರ್ಷದ ಸಂಸಾರದಲ್ಲಿ ಬಿರುಗಾಳಿ, ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತೊಮ್ಮೆ ಪವಿತ್ರಾ... Darshan Thoogudeepa

25 ವರ್ಷಗಳ ಹಿಂದೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮದುವೆ ಆಗಿದ್ದರು, ಕನ್ನಡ ಸಿನಿಮಾ ರಂಗದ ಸೂಪರ್ ಹೀರೋ ಆಗಿ ಹವಾ ಇಟ್ಟಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ವಿಜಯಲಕ್ಷ್ಮೀ ಅವರ ಜೊತೆ ಸಪ್ತಪದಿ ತುಳಿದಿದ್ದರು. ಆದರೆ ಪವಿತ್ರಾ ಗೌಡ ಅವರ ಎಂಟ್ರಿ ನಂತರ ದೊಡ್ಡ ಬಿರುಗಾಳಿ ಎದ್ದಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಇನ್ನೊಂದು ಕಡೆ ಕಳೆದ ಕೆಲವು ತಿಂಗಳಿಂದ ಡಿ-ಬಾಸ್ ದರ್ಶನ್ & ಪವಿತ್ರಾ ಗೌಡ ಮಾತು ಬಿಟ್ಟಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಹೀಗಿದ್ದಾಗಲೇ, 25 ವರ್ಷದ ಸಂಸಾರದಲ್ಲಿ ಬಿರುಗಾಳಿ, ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತೊಮ್ಮೆ ಪವಿತ್ರಾ...

ಅಂದಹಾಗೆ ಪವಿತ್ರಾ ಗೌಡ & ಡಿ-ಬಾಸ್ ದರ್ಶನ್ ತೂಗುದೀಪ್ ಸಂಪೂರ್ಣವಾಗಿ ದೂರವೇ ಆಗಿಹೋದ್ರಾ? ಅನ್ನೋ ಪ್ರಶ್ನೆ ಇದೀಗ ಮೂಡಿದೆ. 10 ವರ್ಷದ ಸ್ನೇಹ & ಪ್ರೀತಿ, ಪವಿತ್ರಾ ಗೌಡ ಅವರಿಂದ ಶಾಶ್ವತವಾಗಿ ದೂರವಾದ ಡಿ-ಬಾಸ್ ದರ್ಶನ್ ತೂಗುದೀಪ್ ಅವರು... ಅಂತಾನೇ ಇದೀಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಈ ರೀತಿ ಚರ್ಚೆ ನಡೆಯಲು ಕಾರಣ ಆಗಿರುವುದು ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇತ್ತೀಚೆಗೆ ಪವಿತ್ರಾ ಗೌಡ ಅವರಿಂದ ಕಾಯ್ದುಕೊಳ್ಳುತ್ತಿರುವ ಅಂತರ. ಇದೇ ಕಾರಣದಿಂದಾಗಿ ಈಗ ಭಾರಿ ದೊಡ್ಡ ಪ್ರಶ್ನೆ ಮೂಡಿದ್ದು, ಸಂಚಲನ ಸೃಷ್ಟಿಯಾಗಿತ್ತು. ಆದರೆ ದಿಢೀರ್ ಇಬ್ಬರು ಮತ್ತೆ ಮಾತನಾಡಿದ್ದಾರೆ...

Darshan Thoogudeepa And Pavithra Gowda Friendship Is On Discussion For This Reason

25 ವರ್ಷದ ಸಂಸಾರದಲ್ಲಿ ಬಿರುಗಾಳಿ...

ಅಂದಹಾಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿಗೆ ಹೋಗಿ ಬಂದ ನಂತರ ಪವಿತ್ರಾ ಗೌಡ ಅವರಿಂದ ದೂರ ಇರುವಂತೆ ಕುಟುಂಬದ ಸದಸ್ಯರು ತಿಳಿಸಿದ್ದರು. ಹೀಗಾಗಿಯೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕೂಡ ಈ ವಿಚಾರದಲ್ಲಿ ಅಂತರ ಕಾಯ್ದುಕೊಂಡಿದ್ದರು ಎನ್ನಲಾಗಿತ್ತು. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆಗೆ ಅಂತಾ ಬಂದಿದ್ದ ಸಮಯದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತು ಪವಿತ್ರಾ ಗೌಡ ನಂಬರ್ ಪಡೆದಿದ್ದಾರೆ ಎಂಬ ಸುದ್ದಿ ಬಿರುಗಾಳಿ ಎಬ್ಬಿಸಿದೆ!

ಡಿ-ಬಾಸ್ ದರ್ಶನ್ ತೂಗುದೀಪ್ ಅವರು...

ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಹೊಸ ನಂಬರ್ ಅನ್ನ ಪವಿತ್ರಾ ಗೌಡ ಅವರಿಗೆ ನೀಡಿದ್ದಾರೆ ಎಂಬ ಸುದ್ದಿ ಕನ್ನಡ ನ್ಯೂಸ್ ಚಾನಲ್‌ಗಳ ಮೂಲಕ ಹೊರಗೆ ಬಿದ್ದಿದೆ. ಇನ್ನು ಈ ಸುದ್ದಿ ಹಬ್ಬಿದ ನಂತರ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೊತೆ ಕುಟುಂಬದ ಸದಸ್ಯರು ಅದರಲ್ಲೂ ಹೆಂಡತಿ ಕೋಪ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯು ಹಬ್ಬಿದೆ!

ಸೋಷಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, 25 ವರ್ಷದ ಸಂಸಾರದಲ್ಲಿ ಬಿರುಗಾಳಿ, ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತೊಮ್ಮೆ ಪವಿತ್ರಾ ಗೌಡ ಜೊತೆ ಮಾತನಾಡಿದ್ದಕ್ಕೆ ಜಗಳ ಶುರು... ಅಂತೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಈಗ ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ ಇದೆಲ್ಲಾ ಸುಳ್ಳೂ, ಇದಕ್ಕೆ ಅಧಿಕೃತ ಮಾಹಿತಿ ಇಲ್ಲ ಅಂತಾನು ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಈವರೆಗು ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ, ಹೀಗಾಗಿ ಇದು ಗಾಳಿ ಸುದ್ದಿ ಎನ್ನಲಾಗಿದೆ. ಅಲ್ಲದೆ ಈ ರೀತಿ ಗಾಳಿ ಸುದ್ದಿ ಹಬ್ಬಿಸಿದವರ ವಿರುದ್ಧ ಡಿ-ಬಾಸ್ ಅಭಿಮಾನಿಗಳು ಗರಂ ಆಗಿದ್ದಾರೆ.

ಡಿ-ಬಾಸ್ ಅಭಿಮಾನಿಗಳಿಂದ ಭರ್ಜರಿ ಬೆಂಬಲ...

ಹೀಗಿದ್ದಾಗಲೇ ವಿಜಯಲಕ್ಷ್ಮೀ ದರ್ಶನ್ ಅವರ ಹೊಸ ಪೋಸ್ಟ್ ಕುತೂಹಲ ಡಬಲ್ ಮಾಡಿ ಗಮನ ಸೆಳೆದಿದೆ. ಪವಿತ್ರಾ ಗೌಡ ಅವರು, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹೊಸ ಮೊಬೈಲ್ ನಂಬರ್ ಪಡೆದರು ಎಂಬ ಸುದ್ದಿ ಹಬ್ಬಿದ ನಂತರ, ಡಿ-ಬಾಸ್ ದರ್ಶನ್ ಅವರ ಜೊತೆಗೆ ನಿಂತಿರುವ ಫೋಟೋ ಅಪ್‌ಲೋಡ್ ಹಾಕಿ ಪ್ರೀತಿಯ ಸಂದೇಶ ನೀಡಿದ್ದಾರೆ. ಹೀಗೆ ಮತ್ತೆ ಫೈಟ್ ಶುರುವಾಯ್ತಾ? ಎಂಬ ಚರ್ಚೆ ಜೋರಾಗಿದೆ. ಅದರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರೋಧಿಗಳು, ಪವಿತ್ರಾ ಗೌಡ & ವಿಜಯಲಕ್ಷ್ಮೀ ದರ್ಶನ್ ನಡುವೆ ಮತ್ತೆ ವಾರ್ ಶುರು ಅಂತಾ ಸುದ್ದಿ ಹಬ್ಬಿಸುತ್ತಿದ್ದಾರೆ. ಇದಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸರಿಯಾಗೇ ತಿರುಗೇಟು ನೀಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+