Get Updates
Get notified of breaking news, exclusive insights, and must-see stories!

ಕಾಮಿಡಿ ಕಿಲಾಡಿಗಳು ಖ್ಯಾತಿ ಮತ್ತೊಬ್ಬರು ಸಾವು, ರಾಕೇಶ್ ಪೂಜಾರಿ ಬಳಿಕ ಘೋರ ದುರಂತ... Comedy Khiladigalu

ಕನ್ನಡ ಟಿವಿ ಚಾನಲ್ ಲೋಕದಲ್ಲಿ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ದೊಡ್ಡ ಹೆಸರು ಸಂಪಾದಿಸುವ ಜೊತೆಗೆ, ಕಾಮಿಡಿ ಕಿಲಾಡಿಗಳು ಮಾಡಿದ ಹೆಸರು ಬೇರೆ ಯಾವುದೇ ರಿಯಾಲಿಟಿ ಶೋ ಕೂಡ ಮಾಡಲು ಸಾಧ್ಯ ಇಲ್ಲ ಅನ್ನುವ ಮಟ್ಟಕ್ಕೆ ತಲುಪಿಸಿದೆ. ಅದರಲ್ಲೂ 7,00,00,000 ಕನ್ನಡಿಗರು ಇಷ್ಟಪಟ್ಟು ನೋಡುವ ಈ ಕಾರ್ಯಕ್ರಮವು ಹೊಸ ಇತಿಹಾಸ ನಿರ್ಮಿಸಿದೆ. ಆದರೆ ಕಳೆದ ಕೆಲವು ದಿನಗಳಿಂದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಹಲವು ನಟರ ಸಂಸಾರದಲ್ಲಿ ಘೋರ ದುರಂತಗಳೇ ನಡೆದು ಹೋಗುತ್ತಿವೆ. ಹೀಗಿದ್ದಾಗಲೇ, ಕಾಮಿಡಿ ಕಿಲಾಡಿಗಳು ಖ್ಯಾತಿ ಮತ್ತೊಬ್ಬರು ಸಾವು, ರಾಕೇಶ್ ಪೂಜಾರಿ ಬಳಿಕ ಘೋರ ದುರಂತ...

ಕನ್ನಡ ಭಾಷೆಯಲ್ಲಿ ಹಲವು ರಿಯಾಲಿಟಿ ಶೋಗಳು ಬಂದಿವೆ & ಹೋಗಿವೆ. ಆದರೆ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಮಾತ್ರ ಹಲವು ಕಾರಣಗಳಿಗೆ ಅಂತಾನೇ ಎಂದೆಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದ ರೀತಿ ಉಳಿದು ಬಿಡುತ್ತದೆ. ಯಾಕಂದ್ರೆ ಕನ್ನಡಿಗರನ್ನು ಮನೆಯಲ್ಲೇ ಕೂತು ಹೊಟ್ಟೆ ಉಣ್ಣಾಗುವ ರೀತಿ & ಬಿದ್ದು ಬಿದ್ದು ನಗುವಂತೆ ಮಾಡಿದ್ದ ರಿಯಾಲಿಟಿ ಶೋ ಅಂದ್ರೆ ಅದು ಕನ್ನಡಿಗರ ನೆಚ್ಚಿನ ಕಾಮಿಡಿ ಕಿಲಾಡಿಗಳು ಶೋ ಅಂತಾ ಹೇಳಬಹುದು. ಆದರೆ ಕೆಲ ದಿನಗಳಿಂದ ಇದೇ ಕಾಮಿಡಿ ಕಿಲಾಡಿಗಳು ಹೆಸರು ಬೇಡದ ವಿಚಾರ & ಅನಗತ್ಯ ಸಂಗತಿ ಕಾರಣಕ್ಕೆ ಸುದ್ದಿಯಲ್ಲಿ ಇದ್ದು ಇಡೀ ಇಂಡಿಯಾದಲ್ಲಿ ಸದ್ದು ಮಾಡುತ್ತಿದೆ...

Comedy Khiladigalu Show Actor Name Is On Trend For This Reason

ಕಾಮಿಡಿ ಕಿಲಾಡಿಗಳು ಮತ್ತೊಬ್ಬ ಸ್ಪರ್ಧಿ...

ಹೌದು, ಕನ್ನಡಿಗರ ನೆಚ್ಚಿನ ಹಾಗೂ ಅಚ್ಚುಮೆಚ್ಚಿನ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಒಂದು ಬಾರಿ ನಟನೆ ಮಾಡಲು ಅವಕಾಶ ಪಡೆಯಬೇಕು ಅನ್ನೋದು ಕೋಟಿ ಕೋಟಿ ಕಲಾವಿದರ ಆಸೆ ಆಗಿರುತ್ತದೆ. ಈ ಶೋ ಮೂಲಕ ಹೆಸರು ಸಂಪಾದಿಸಿ, ಸಿನಿಮಾ ರಂಗದಲ್ಲಿ ಅವಕಾಶ ಪಡೆಯಲು ಕೂಡ ಹಲವು ಕಲಾವಿದರು ಕಾಯುತ್ತಾ ಇದ್ದಾರೆ. ಹೀಗಿದ್ದಾಗಲೇ, ಕೆಲವು ದಿನಗಳ ಹಿಂದಷ್ಟೇ ಕಾಮಿಡಿ ಕಿಲಾಡಿ ಕಾರ್ಯಕ್ರಮದ ಮಾಜಿ ಸ್ಪರ್ಧಿ ರಾಕೇಶ್ ಶೆಟ್ಟಿ ಸಾವು ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಇದೀಗ ಮತ್ತೊಂದು ಭಾರಿ ಘೋರ ದುರ್ಘಟನೆ ನಡೆದು ಹೋಗಿದ್ದು, ಕನ್ನಡ ನಾಡಲ್ಲಿ ದೊಡ್ಡ ಸದ್ದು ಮಾಡುತ್ತಿದೆ...

ದಿಢೀರ್ ಬಂದು ಎರಗಿದ ಆಘಾತ...

ಅಂದಹಾಗೆ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಖ್ಯಾತಿ ಪದೆದ ಕಲಾವಿದ ಚಂದ್ರಶೇಖರ್ ಸಿದ್ದಿ ಇದೀಗ ಮೃತಪಟ್ಟಿದ್ದಾರೆ. ಅಷ್ಟಕ್ಕೂ ಖಿನ್ನತೆ ಕಾರಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ವಜ್ರಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಮನಳ್ಳಿಯ ಸಿದ್ದಿ ಸಮುದಾಯದ ಯುವಕ ಚಂದ್ರಶೇಖರ್ ಸಿದ್ದಿ ಇದೀಗ ಮೃತಪಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಮನಳ್ಳಿಯ ಸಿದ್ದಿ ಅವರು, ಕೋಟಿ ಕೋಟಿ ಕನ್ನಡಿಗರ ಮನಸ್ಸು ಗೆದ್ದಿದ್ದರು. ಆದರೆ ಇದೀಗ ಚಂದ್ರಶೇಖರ್ ಸಿದ್ದಿ ಸಾವು ದೊಡ್ಡ ಆಘಾತ ನೀಡಿದೆ...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+