ಡಾಲಿಯ "ಹಲಗಲಿ" ಅವತಾರ ನೋಡಿ ಸಿಎಂ ಸಿದ್ದರಾಮಯ್ಯ ಏನಂದ್ರು?
ನಟ ಡಾಲಿ ಧನಂಜಯ್ ಅವರ ಮುಂದಿನ ಸಿನಿಮಾ ಹಲಗಲಿ. ಈ ಸಿನಿಮಾದ ಟೀಸರ್ ರಿಲೀಸ್ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇದು ನಮ್ಮ ಮಣ್ಣಿನ ಕಥೆ, ನಮ್ಮ ನೆಲದ "ಹಲಗಲಿ" ಬಂಡಾಯದ ಕಥೆ ಎಂದು ಡಾಲಿ ಹೇಳಿದ್ದಾರೆ. ಡಾಲಿಯ ಫಸ್ಟ್ ಲುಕ್ ಕೂಡ ಅನಾವರಣಗೊಂಡಿದ್ದು, ಐತಿಹಾಸಿಕ ಹಿನ್ನೆಲೆಯುಳ್ಳ ಈ ಸಿನಿಮಾಗೆ ಸಿನಿರಂಗದ ಹಲವರಿಂದ ಪ್ರಶಂಸೆಗೆ ಒಳಗಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ಈ ಹಲಗಲಿ ಟೀಸರ್ ನೋಡಿ ಮೆಚ್ಚಿದ್ದಾರೆ.
ಬ್ರಿಟಿಷರ ಸರ್ವಾಧಿಕಾರಿ ಸಾಮ್ರಾಜ್ಯದ ನಿಶಸ್ತ್ರೀಕರಣ ನೀತಿಯ ವಿರುದ್ಧ ಸಿಡಿದೆದ್ದ ಹಲಗಲಿಯ ಬೇಡರು ತಮ್ಮ ಅಸ್ಮಿತೆಗಾಗಿ ಕೆಚ್ಚೆದೆಯಿಂದ ಹೋರಾಟ ನಡೆಸಿ, ಹುತಾತ್ಮರಾದರು. ಹಲಗಲಿಯ ದಂಗೆ ಭಾರತದ ಇತಿಹಾಸದಲ್ಲಿ ಎಂದೂ ಮರೆಯಲಾಗದ ಘಟನೆ ಎಂದು ಸಿಎಂ ಸಿದ್ದರಾಮಯ್ಯ ನೆನೆದಿದ್ದಾರೆ.
ಬ್ರಿಟಿಷರ ತುಪಾಕಿ, ಪಿರಂಗಿಗಳಿಗೆ ಎದೆಕೊಟ್ಟು ನಿಂತ ಸ್ವಾತಂತ್ರ್ಯ ಪ್ರೇಮಿಗಳ ಸತ್ಯ ಘಟನೆಯಾಧಾರಿತ "ಹಲಗಲಿ" ಚಿತ್ರದ ಟೀಸರ್ ಅನ್ನು ಸ್ವಾತಂತ್ರ್ಯ ದಿನದಂದೇ ವೀಕ್ಷಿಸಿದ್ದು ಹೆಚ್ಚು ಖುಷಿ ಕೊಟ್ಟಿತು. ಚಿತ್ರದ ನಾಯಕನಟ ಡಾಲಿ ಧನಂಜಯ ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಶುಭ ಹಾರೈಕೆಗಳು. ನಮ್ಮ ಮಣ್ಣಿನ ಕತೆಯನ್ನು ಜನರೆದುರು ತರುವ ಈ ಪ್ರಯತ್ನವು ಯಶಸ್ಸು ಕಾಣಲಿ ಎಂದು ಶುಭಕೋರಿದ್ದಾರೆ.

ನಿಮ್ಮ ದಯೆಯ ಮಾತುಗಳಿಗೆ ಗೌರವ ಮತ್ತು ಕೃತಜ್ಞತೆಗಳು ಸರ್. ನಿಮ್ಮ ಪ್ರೋತ್ಸಾಹ ಇಡೀ ಹಲಗಲಿ ತಂಡಕ್ಕೆ ತುಂಬಾ ಅರ್ಥಪೂರ್ಣವಾಗಿದೆ ಧನ್ಯವಾದಗಳು ಎಂದು ನಟ ಡಾಲಿ ರಿಪ್ಲೈ ಮಾಡಿದ್ದಾರೆ. ಡಾಲಿ ಧನಂಜಯ್ ಅವರ ಹಲಗಲಿ ಚಿತ್ರದ ಫಸ್ಟ್ ಲುಕ್ ಟೀಸರ್ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಪ್ರತಿಯೊಬ್ಬ ಕನ್ನಡಿಗ ನೋಡಲೇಬೇಕಾದ ಚಿತ್ರ. ಕನ್ನಡ ನೆಲದ ಮಣ್ಣಿನ ಯಶೋಗಾಥೆ ಹೇಗೆ ಸಾಮಾನ್ಯ ಬೇಡ ನಾಯಕರು ಬ್ರಿಟಿಷರನ್ನ ಬಗ್ಗು ಬಡೆದರು ಎಂಬವುದರ ಬಗ್ಗೆ ಈ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.
ಹಲಗಲಿ ಸಿನಿಮಾದ ಫಸ್ಟ್ಲುಕ್ ಟೀಸರ್ನಲ್ಲಿ ಡಾಲಿ ಹಲಗಲಿ ಬೇಡರ ನಾಯಕನಾಗಿ ಅಬ್ಬರಿಸಿದ್ದಾರೆ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಹುಟ್ಟಡಗಿಸುವ ದೃಶ್ಯಗಳು ಮೈರೋಮಾಂಚನಗೊಳಿಸುವಂತಿವೆ. ಸಿನಿಮಾಗೆ ಸುಕೇಶ್ ನಾಯಕ್ ಆಕ್ಷನ್ ಕಟ್ ಹೇಳಿದ್ದು, ವಾಸುಕಿ ವೈಭವ್ ಸಂಗೀತವಿದೆ. ಡಾಲಿ ಧನಂಜಯ್ ಜೊತೆಗೆ ಸಪ್ತಮಿಗೌಡ ಮತ್ತೊಮ್ಮೆ ಜತೆಯಾಗಿದ್ದಾರೆ. ಬಿ.ಸುರೇಶ್, ಶರತ್ ಲೋಹಿತಾಶ್ವ, ಬಿರಾದರ್ ಸೇರಿದಂತೆ ಹಿರಿಯ ಪೋಷಕ ಕಲಾವಿದರೂ ಈ ಸಿನಿಮಾದಲ್ಲಿ ಇದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರಲಿದೆ.
ಹಲಗಲಿ ಬೇಡರ ಇತಿಹಾಸವೇನು?
ಬ್ರಿಟೀಷ್ ವಿರುದ್ಧದ ಹೋರಾಟದಲ್ಲಿ ಕರ್ನಾಟಕದ ಪಾಲು ಗಮನಾರ್ಹವಾಗಿತ್ತು. ಈ ಬಂಡಾಯಗಳ ಪೈಕಿ ಹಲಗಲಿ ಬಂಡಾಯ ಕೂಡ ಪ್ರಮುಖವಾದದ್ದು. ಹಲಗಲಿ ಎಂಬ ಸಣ್ಣ ಊರಿನ ದೊಡ್ಡ ಬಂಡಾಯ ರೋಮಾಂಚನಕಾರಿ ಮತ್ತು ವೀರೋಚಿತವಾದುದು. ಹಲಗಲಿ ಬಂಡಾಯಕ್ಕೆ ಕೂಡ ಸುಮಾರು 150 ವರ್ಷಗಳ ಇತಿಹಾಸವಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಎಂಬ ಗ್ರಾಮದಲ್ಲಿ ನಡೆದ ಈ ಬಂಡಾಯ ಹಲಗಲಿಯ ಬೇಡರ ಬಂಡಾಯವೆಂದೇ ಇತಿಹಾಸದಲ್ಲಿ ಪುಟದಲ್ಲಿದೆ. ಇಲ್ಲಿನ ನಾಯಕ ಸಮುದಾಯದವರು ಜೀವನೋಪಾಯಕ್ಕಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು. ಬ್ರಿಟಿಷರ ಶಸ್ತ್ರಾಸ್ತ್ರ ಅಧಿಸೂಚನೆ ನಿರಾಕರಿಸಿ, ತಮ್ಮ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸದೇ ಅಲ್ಲಿನ ಬೇಡರು ಪ್ರತಿಭಟಿಸಿದ್ದೇ ಹಲಗಲಿ ಬಂಡಾಯ.
-
ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ಎ-ಖಾತೆ ಕೈಗನ್ನಡಿ? ಸರ್ಕಾರದ ವಿರುದ್ದ ಆರ್. ಅಶೋಕ್ ವಾಗ್ದಾಳಿ -
Toxic: ಟಾಕ್ಸಿಕ್ ನೀವೆಲ್ಲ ಅಂದುಕೊಂಡಂತೆ ಗ್ಯಾಂಗ್ಸ್ಟರ್ ಸಿನಿಮಾ ಅಲ್ಲ: ಕೊನೆಗೂ ಸೀಕ್ರೇಟ್ ರಿವೀಲ್ ಮಾಡಿದ ನಟ ಯಶ್ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್












Click it and Unblock the Notifications