ಗಲ್ಲಾಪೆಟ್ಟಿಗೆ ಶೇಕ್ ಮಾಡಿದ ಕಾಟೇರ: ದರ್ಶನ್ರ ಸಿನಿಮಾ ಶತಕ ಬಾರಿಸಲು 5 ಕೋಟಿ ಬಾಕಿ!
ಕನ್ನಡಿಗರ 'ಕಾಟೇರ' ಅಬ್ಬರ ದಿನದಿಂದ ದಿನಕ್ಕೆ ಜೋರಾಗುತ್ತಲೇ ಇದೆ. ಕಾಟೇರ ಸಿನಿಮಾ ರಿಲೀಸ್ ಆಗಿ ನಾಳೆ 1 ವಾರ ಕಂಪ್ಲೀಟ್ ಆಗುತ್ತಿದ್ದರೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ಸಿನಿಮಾ ಅಬ್ಬರಿಸುತ್ತಲೇ ಇದೆ. ಹೀಗಿದ್ದಾಗ ಇನ್ನೇನು ಸೆಂಚ್ಯುರಿ ಅಂದ್ರೆ ಶತಕ ಬಾರಿಸಲು ತುಂಬಾ ಹತ್ತಿರದಲ್ಲೇ ಇದೆ ಕಾಟೇರ. ಹಾಗಾದ್ರೆ ಕನ್ನಡಿಗರ ಕಾಟೇರ ಇಲ್ಲಿಯವರೆಗೆ ಗಳಿಸಿದ ಹಣ ಎಷ್ಟು ಕೋಟಿ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
'ಕಾಟೇರ' ಮೊದಲ ದಿನವೆ 19.79 ಕೋಟಿ ರೂಪಾಯಿ ಬಾಚಿತ್ತು, 2ನೇ ದಿನ ಅಬ್ಬರಿಸಿ 17.35 ಕೋಟಿ ಕಲೆಕ್ಷನ್ ಮಾಡಿತ್ತು. 3ನೇ ದಿನ ಕಾಟೇರ ಸಿನಿಮಾ, ಬರೋಬ್ಬರಿ 20.94 ರೂಪಾಯಿನ ಗಳಿಸಿತ್ತು. 4ನೇ ದಿನ 18.26 ಕೋಟಿ, 5ನೇ ದಿನ 9 ಕೋಟಿ ಕಲೆಕ್ಷನ್ ಮಾಡಿತ್ತು. ಈಗ 6ನೇ ದಿನಕ್ಕೆ 9.78 ಕೋಟಿ ಗಳಿಸುವ ಮೂಲಕ ಈವರೆಗೂ 95.36 ಕೋಟಿ ರೂಪಾಯಿ ಗಳಿಸಿರುವ ಕಾಟೇರ ಇನ್ನೇನು 100 ಕೋಟಿ ರೂ. ಕ್ಲಬ್ ಸೇರಲು ಅತ್ಯಂತ ಸಮೀಪ ಇದೆ. ಹಾಗೇ ಕಾಟೇರ ಸಿನಿಮಾ ಅಬ್ಬರ ಈಗಲೂ ಮುಂದುವರಿದಿದೆ.

ಚಿತ್ರಮಂದಿರ ಎಲ್ಲೆಲ್ಲೂ ಹೌಸ್ ಫುಲ್
ಇಷ್ಟೆಲ್ಲದರ ನಡುವೆ ಕನ್ನಡ ಸಿನಿಮಾ ರಂಗದಲ್ಲಿ ಈಗ ಕಾಟೇರ ತಲ್ಲಣ ಸೃಷ್ಟಿ ಮಾಡಿದೆ. ಹಾಗೇ ದಿನದಿಂದ ದಿನಕ್ಕೆ ತನ್ನ ಥಿಯೇಟರ್ ಸ್ಕ್ರೀನ್ಗಳ ಸಂಖ್ಯೆ ಹೆಚ್ಚು ಮಾಡಿಕೊಳ್ಳುತ್ತಿದೆ. ಅದರಲ್ಲೂ ಸಿಂಗಲ್ ಸ್ಕ್ರೀನ್ ಕಾಟೇರ ಸಿನಿಮಾಗೆ ಮೀಸಲಾಗಿ ನಿಂತಿವೆ ಎನ್ನುವಷ್ಟರ ಮಟ್ಟಿಗೆ ಕಾಟೇರ ಚಿತ್ರ ಈಗ ಅಬ್ಬರಿಸುತ್ತಿದೆ. ಈಗಾಗಲೇ 100 ಕೋಟಿ ರೂ. ಗಳಿಸುವುದಕ್ಕೂ, ಈ ಸಿನಿಮಾ ತುಂಬಾನೆ ಹತ್ತಿರದಲ್ಲಿದೆ. ಹಾಗೇ ಈಗಲೂ ಸಿನಿಮಾ ಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣ್ತಿವೆ.
ಕಾಟೇರ ವೀಕ್ಷಿಸಿದ ನಟ ದರ್ಶನ್?
ಕಾಟೇರ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಬಾಕ್ಸ್ ಆಫಿಸ್ನ ಧೂಳ್ ಧೂಳ್ ಮಾಡುತ್ತಿದೆ. ಹೀಗಾಗಿ ಕನ್ನಡ ಚಿತ್ರರಂಗದ ನಟ & ನಟಿಯರಿಗೆ ಸೆಲೆಬ್ರಿಟಿ ಶೋ ಆಯೋಜಿಸಿತ್ತು ಸಿನಿಮಾ ತಂಡ. ಬೆಂಗಳೂರಿನ ಒರಿಯಾನ್ ಮಾಲ್ನಲ್ಲಿ 'ಕಾಟೇರ' ಸಿನಿಮಾ, ಸೆಲೆಬ್ರಿಟಿ ಶೋ ಆಯೋಜಿಸಲಾಗಿತ್ತು. ಚಂದನ ವನದಿಂದ, ಹಿರಿಯ ನಟ & ನಟಿಯರ ದಂಡೇ ಕಾಟೇರ ಚಿತ್ರ ನೋಡಲು ಬಂದಿತ್ತು. ಆಗ ನಟ ದರ್ಶನ್ ವಿಶೇಷವಾಗಿ ತಮ್ಮ ಸಿನಿಮಾವನ್ನೇ ನೋಡಿದ್ದಾರೆ!

ಮೆಟ್ಟಿಲು ಮೇಲೆ ಕೂತ ದರ್ಶನ್
ಹಿರಿಯ ನಟಿ ಬಿ.ಸರೋಜಾ ದೇವಿ, ರಮೇಶ್ ಅರವಿಂದ್, ಯೋಗರಾಜ್ ಭಟ್, ಅಮೂಲ್ಯ, ಶ್ರೀಮುರಳಿ, ನಟ ಡಾಲಿ ಧನಂಜಯ್, ನಿನಾಸಂ ಸತೀಶ್, ರಿಯಲ್ ಸ್ಟಾರ್ ಉಪೇಂದ್ರ ಸೇರಿ, ಹಲವು ನಟರು ಬಂದಿದ್ದರು. ಸ್ವತಃ ದರ್ಶನ್ ಅವರಿಗೆ & ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರಿಗೂ ಕುಳಿತುಕೊಳ್ಳಲು ಸೀಟ್ ಇರಲಿಲ್ಲ. ಈ ಹಿನ್ನೆಲೆ ಸಿನಿಮಾವನ್ನ ನೋಡಲು ಸಿನಿಮಾ ಮಂದಿರದ ಮೆಟ್ಟಿಲು ಮೇಲೆ ಕುಳಿತುಕೊಂಡೇ ಸಿನಿಮಾ ವೀಕ್ಷಿಸಿದ್ದಾರೆ ನಟ ದರ್ಶನ್ ಅವರು.
-
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Anusha Rai: ಬಿಗ್ಬಾಸ್ ಬೆಡಗಿ ಅನುಷಾ ರೈ ಮನೆಗೆ ಬಂತು ಐಷಾರಾಮಿ ಫಾರ್ಚೂನರ್ ಕಾರು, ಫೋಟೋಸ್ ಇಲ್ಲಿವೆ -
Chandan Shetty: ವಯಸ್ಸಾದ್ಮೇಲೆ ಒಂಟಿತನ ಕಾಡುತ್ತೆ, ಆಗ ಕೊರಗುವ ಬದಲು ಈಗಲೇ ಒಳ್ಳೆಯ ಸಂಗಾತಿ ಹುಡುಕುವೆ: ಚಂದನ್ ಶೆಟ್ಟಿ -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ












Click it and Unblock the Notifications