'ಮಿಲನ ಕ್ಲೈಮಾಕ್ಸ್ ತೋರಿಸಿ ಚಂದನ್-ನಿವೇದಿತಾನ ಮತ್ತೆ ಒಂದು ಮಾಡ್ತೇವೆ'
ಕನ್ನಡ ಕಿರುತೆರೆಯ ಕ್ಯೂಟ್ ಜೋಡಿ ಎನಿಸಿಕೊಂಡಿದ್ದ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದಾರೆ. ಚಂದನ್ ಹಾಗೂ ನಿವೇದಿತಾ ವಿಚ್ಛೇದನಕ್ಕಾಗಿ ಗುರುವಾರ ಶಾಂತಿನಗರದ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದರು. ಶುಕ್ರವಾರ ಇಬ್ಬರೂ ಮತ್ತೆ ಕೋರ್ಟ್ಗೆ ಹಾಜರಾಗಿದ್ದು, ಕೋರ್ಟ್ ವಿಚ್ಛೇದನವನ್ನು ಕೂಡ ಮಂಜೂರು ಮಾಡಿದೆ.
ಈ ಬಗ್ಗೆ ಚಂದನ್ ಶೆಟ್ಟಿ ಆಪ್ತ ಬಿಗ್ಬಾಸ್ ವಿನ್ನರ್ ಪ್ರಥಮ್ ಮಾತನಾಡಿದ್ದು, ' ಮೊದಲು ನನ್ನ ಮತ್ತು ಚಂದನ್ ಶೆಟ್ಟಿ ನಡುವೆ ಭಿನ್ನಾಭಿಪ್ರಾಯಗಳಿತ್ತು. ಅದನ್ನು ಬಗೆಹರಿಸಿಕೊಂಡು ನಾವಿಬ್ಬರು ಕ್ಲೋಸ್ ಫ್ರೆಂಡ್ಸ್ ಆದೆವು. ನಾವು ಮೊದಲು ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ಬಗೆಹರಿಸಿಕೊಂಡ ಮೇಲೆ ನಾನು ಅವನ ಪರವಾಗಿ ಎಲ್ಲಾ ಕಡೆ ನಿಂತಿದ್ದೇನೆ. ನನ್ನ ಸಿನಿಮಾಗಳೆಲ್ಲಾ ರಿಲೀಸ್ ಆದಾಗ ಚಂದನ್ನ ಕರೆಸುತ್ತಿದ್ದೆ. ನೀನೇ ಪ್ರಮೋಟು ಮಾಡು ಅನ್ನುತ್ತಿದೆ ಎಂದರು.

ಇಷ್ಟು ಆತ್ಮೀಯನಾದ ಚಂದನ್ ಇವತ್ತು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಮಧ್ಯದಲ್ಲಿ ಯಾರು ಕೈ ಆಡಿಸಿದ್ದಾರೋ ಗೊತ್ತಿಲ್ಲ. ಆದರೆ ಅಕಸ್ಮಾತ್ ಶೋಗೋಸ್ಕರ ದೂರ ಆದರೂ ಅಂದರೆ ನಾನೊಂದು ಪ್ರಶ್ನೆ ಕೇಳುತ್ತೇನೆ. ಶೋ ದೊಡ್ಡದಾ..? ಜೀವನಾ ದೊಡ್ಡದಾ ಎಂದು ಪ್ರಥಮ್ ಪ್ರಶ್ನಿಸಿದ್ದಾರೆ.
ಜೀವನಾ ದೊಡ್ಡದು ಎಂದಾದ ಮೇಲೆ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಎಲ್ಲದಕ್ಕಿಂತಾ ನಿವೇದಿತಾ ತುಂಬಾ ಒಳ್ಳೆ ಹುಡುಗಿ. ಆಕೆ ಇನ್ನೂ ಮುಗ್ಧೆ. ಅವಳದೇ ಶೈಲಿಯಲ್ಲಿ ಎಲ್ಲರನ್ನೂ ರಂಜಿಸಿಕೊಂಡು ಬಂದಿದ್ದಾಳೆ. ಅವಳು ನಮ್ಮೂರು ಹುಡುಗಿ, ಚಂದನ್ ನಮ್ಮ ಹುಡುಗ ಹೀಗಾಗಿ ಅವರಿಬ್ಬರನ್ನು ಸರಿ ಮಾಡುವ ಪ್ರಯತ್ನ ಮಾಡುತ್ತೇನೆ ಎಂದರು.

ಕೋರ್ಟ್ ಡಿವೋರ್ಸ್ ನೀಡಿದ ತಕ್ಷಣ ಫೈನಲಾ ಅದು? ಮಿಲನ ಸಿನಿಮಾದಲ್ಲಿ ಅಪ್ಪು ತಬ್ಬಿಕೊಂಡು ಸಂಸಾರ ನಡೆಸಲ್ವಾ..? ಮಿಲನ ಸಿನಿಮಾ ಕ್ಲೈಮಾಕ್ಸ್ ಅನ್ನು ಚಂದನ್ಗೆ ಕಳುಹಿಸುತ್ತೇನೆ. ನೋಡಪ್ಪ ನೀನು ಹಂಗೆ ಆಗಬೇಕು ಎಂದು ಹೇಳುತ್ತೇನೆ. ಅವರಿಬ್ಬರನ್ನು ಒಂದಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.
ಚಂದನ್ ಶೆಟ್ಟಿ-ನಿವೇದಿತಾ ಗೌಡ ಮಧ್ಯ ಹುಳಿ ಹಿಂಡಿದ್ಯಾರು?
ಚಂದನ್ ಶೆಟ್ಟಿ-ನಿವೇದಿತಾ ಗೌಡ ಜೋಡಿ ದೂರಾಗುವ ನಿರ್ಧಾರ ಯಾಕೆ ಮಾಡಿದರು. ಇಬ್ಬರ ಮಧ್ಯ ಬಿರುಕು ತಂದವರ್ಯಾರು ಎನ್ನುವುದು ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಈ ಬಗ್ಗೆ ಚಂದನ್ ಶೆಟ್ಟಿ ಆಪ್ತ ಬಿಗ್ಬಾಸ್ ವಿನ್ನರ್ ಪ್ರಥಮ್ ಮಾತನಾಡಿದ್ದಾರೆ. 'ಈಗಿನ ಕಾಲದಲ್ಲಿ ಬದುಕೋದು ತುಂಬಾ ಕಷ್ಟ. ಲೈಫ್ ಸರಿ ಇಲ್ಲ. ಹೋದ ವಾರ ಸರಿ ಇದ್ದವರು ಈಗ ಹೀಗಾಗಿದೆ ಅಂದರೆ ಮಧ್ಯ ಯಾರೋ ಕೈ ಆಡಿಸಿರುತ್ತಾರೆ. ಯಾರೋ ಮಧ್ಯ ಬರದೇ ಹೀಗೆ ಆಗಿಲ್ಲ. ಯಾರೋ ಕಿವಿ ಚುಚ್ಚುವವರು ಇರುತ್ತಾರೆ. ಅವನು ಹಂಗೆ..ಇವಳು ಹಿಂಗೆ ಎನ್ನುವವರು ಇರುತ್ತಾರೆ. ಈ ರೀತಿ ಮಾತನಾಡಿ ಅವರಿಬ್ಬರ ಮಧ್ಯ ಬಿರುಕು ತಂದಿದ್ದಾರೆ ಎನ್ನುವುದು ಪ್ರಥಮ್ ಅವರ ಅಭಿಪ್ರಾಯವಾಗಿದೆ.
-
'ಅವತ್ತು ಬ್ರೇಕಪ್ ಆಗಿದ್ದೇ ಒಳ್ಳೆಯದಾಯಿತು': ರಶ್ಮಿಕಾ ತಾಯಿಯದ್ದೆ ಎನ್ನಲಾದ ಸ್ಫೋಟಕ ಆಡಿಯೋ ವೈರಲ್ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ












Click it and Unblock the Notifications