Rajath: D-BOSS ಫ್ಯಾನ್ಸ್ ನಮ್ಮನ್ನ ಗೆಲ್ಲಿಸಿದ್ರು ಅಂದ್ರೆ ಖುಷಿನೇ- ರಜತ್
ಬಿಗ್ ಬಾಸ್ ಕನ್ನಡ ಸೀಜನ್ 11 ಮುಕ್ತಾಯಗೊಂಡಿದ್ದರೂ ಕೂಡ ಸ್ಪರ್ಧಿಗಳ ಹವಾ ಮಾತ್ರ ಕಮ್ಮಿಯಾಗಿಲ್ಲ. ಸದ್ಯ ಬಿಗ್ ಬಾಸ್ ಕನ್ನಡ ಸೀಜನ್ 11ರ ಸ್ಪರ್ಧಿಗಳು ಎಲ್ಲೆಡೆ ಪ್ರಚಾರದಲ್ಲಿದ್ದಾರೆ. ಕೆಲವೊಬ್ಬರು ಹೊಸ ಶೋಗಳಲ್ಲಿ ಬ್ಯೂಸಿಯಾಗಿದ್ದರೆ, ಇನ್ನೂ ಕೆಲವರು ಸಿನಿಮಾ ಮಾಡಲು ಸಜ್ಜಾಗುತ್ತಿದ್ದಾರೆ. ಒಟ್ಟಾರೆ ಈ ಬಾರಿಯ ಬಿಗ್ ಬಾಸ್ ಅನೇಕರಿಗೆ ಹೊಸ ಅಧ್ಯಾಯ ಆರಂಭಿಸಲು ಅವಕಾಶ ಮಾಡಿಕೊಟ್ಟಿದೆ.
ಬಿಗ್ ಬಾಸ್ ಕನ್ನಡ ಸೀಜನ್ 11ರಲ್ಲಿ ಹಾಡುಗಾರ ಹನುಮಂತ ವಿನ್ನರ್ ಆದರೆ, ನಟ ತ್ರಿವಿಕ್ರಮ್ ರನ್ನರ್ ಅಪ್ ಆದರು, ಇನ್ನು ಮೊದಲೇ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದಿದ್ದ ರಜತ್ ಈ ಬಾರಿಯ ಬಿಗ್ ಬಾಸ್ನ ಎರಡನೇ ರನ್ನರ್ ಅಪ್ ಆದರು. ಟಾಪ್ ತ್ರೀ ಬಂದ ಈ ಮೂವರಲ್ಲೂ ಒಂದು ವಿಶೇಷತೆಯಿದ್ದು, ಮೂರು ಜನ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು, ಇವರನ್ನು ಡಿ-ಬಾಸ್ ಫ್ಯಾನ್ಸ್ ಗೆಲ್ಲಿಸಿದರು ಎನ್ನುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಬಗ್ಗೆ ಈ ಹಿಂದೆಯೇ ನಾನು ನಟ ದರ್ಶನ್ ಅವರ ಅಭಿಮಾನಿ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದ ರಜತ್ ಮಾತನಾಡಿದ್ದಾರೆ. ಬಾಸ್ ಟಿವಿ ಕನ್ನಡದ ಸಂದರ್ಶನದಲ್ಲಿ ಮಾತನಾಡಿದ ರಜತ್, 'ಇದು ಅಂತ್ಯಂತ ಖುಷಿ ವಿಚಾರ. ನಮ್ಮ ಬಾಸ್ ಫ್ಯಾನ್ಸ್ ಗೆಲ್ಲಿಸಿದ್ದಾರೆ ಎಂದರೆ ಅದಕ್ಕಿಂತ ಖುಷಿ ಇನ್ನೇನಿದೆ. ಏನೂ ತೊಂದರೆ ಇಲ್ಲ' ಎಂದು ಖುಷಿಪಟ್ಟರು.
'ಆದರೆ ಹನುಮಂತು ದರ್ಶನ್ ಅವರ ಅಭಿಮಾನಿ ಅಲ್ಲ ಅನಿಸುತ್ತದೆ. ಆದರೆ ಖುಷಿನೇ. ಮೂರು ಜನ ಡಿ-ಬಾಸ್ ಅಭಿಮಾನಿಗಳು ಎಂದು ವೈರಲ್ ಮಾಡಲಿ. ನಮಗೂ ಖುಷಿ. ನಮ್ಮ ದೇವರು ಭಕ್ತಾಧಿಗಳು ನಮ್ಮನ್ನು ಗೆಲ್ಲಿಸಿದ್ದಾರೆ ಅಂದರೆ ಅದಕ್ಕಿಂತ ಸಂತೋಷ ಇನ್ನೇನಿದೆ. ಇದು ಒಳ್ಳೆಯದೇ' ಎಂದು ಬಿಗ್ ಬಾಸ್ ಕನ್ನಡ ಸೀಜನ್ 11ರ ಸ್ಪರ್ಧಿ ರಜತ್ ಕಿಶನ್ ಹೇಳಿದ್ದಾರೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಬುದ್ಧಿ ಉಪಯೋಗಿಸಿ ಆಟ ಆಡಿದ್ದು ಯಾರು ಎನ್ನುವ ಪ್ರಶ್ನೆಗೆ ರಜತ್, 'ತ್ರಿವಿಕ್ರಮ್, ಮಂಜು, ಹನುಮಂತು, ನಾನು ಬಿಟ್ಟರೆ ಮತ್ಯಾರು ಇಲ್ಲ ಅನಿಸುತ್ತದೆ' ಎಂದು ಉತ್ತರಿಸಿದ್ದಾರೆ. ಇನ್ನು 'ತ್ರಿವಿಕ್ರಮ್ ಕರಾಬ್ ಸ್ಟ್ರಾಟಜಿ ಕಿಂಗ್ ಅವನು ಎಲ್ಲೂ ಬೆಳಕಿಗೆ ಬಂದಿಲ್ಲ ಅಷ್ಟೇ. ಅವನು ತಿರುಗೇಟು ಕೊಡುವುದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ತ್ರಿವಿಕ್ರಮ್ ನೆಕ್ಸ್ಟ್ ಲೆವೆಲ್ ಮಾಸ್ಟರ್ ಮೈಂಡ್' ಎಂದು ರಜತ್ ಹೇಳಿದ್ದಾರೆ.
-
ಕರುಳು ಹಿಂಡುವ ವಿಡಿಯೋ: ಸತ್ತ ಮರಿಯಾನೆಯ ಜೊತೆ ತಾಯಿ ಆನೆಯ ರೋಧನೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ











Click it and Unblock the Notifications