Bigg Boss: ಮತ್ತೆ ಬಂತು ಬಿಗ್ ಬಾಸ್ ಒಟಿಟಿ, ಆದರೆ ಈ ಬಾರಿ ಸಲ್ಮಾನ್ ಖಾನ್ ಕಾಣಿಸಲ್ಲ!
ಮುಂಬೈ, ಜೂನ್. 08: ರಿಯಾಲಿಟಿ ಶೋ ಬಿಗ್ ಬಾಸ್ ಒಟಿಟಿ ಜೂನ್ 21 ರಿಂದ ಮತ್ತೊಂದು ಸೀಸನ್ ಜೊತೆಗೆ ಪ್ರಸಾರವಾಗಲಿದೆ. ಈ ಹಿಂದಿನ ಸೀಸನ್ ಅನ್ನು ಸಲ್ಮಾನ್ ಖಾನ್ ನಡೆಸಿಕೊಟ್ಟಿದ್ದರು. ಈ ಬಾರಿ ಹೊಸ ಹೋಸ್ಟ್ ಆಗಿ ಹಿರಿಯ ನಟ ಅನಿಲ್ ಕಪೂರ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಜೂನ್ 21 ರಿಂದ JioCinema ನಲ್ಲಿ ಬಿಗ್ ಬಾಸ್ ಒಟಿಟಿ ಮೂರನೇ ಸೀಸನ್ ಸ್ಟ್ರೀಮ್ ಆಗಲು ಸಿದ್ಧವಾಗಿದೆ. ಬಿಗ್ ಬಾಸ್ ಒಟಿಟಿ ಕಾರ್ಯಕ್ರಮದ ಹಿಂದಿನ ಸೀಸನ್ ಅನ್ನು ಟಿವಿಯ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡುವ ನಟ ಸಲ್ಮಾನ್ ಖಾನ್ ನಡೆಸಿಕೊಟ್ಟಿದ್ದರು. ಈ ಬಾರಿ ಹೋಸ್ಟ್ ಬದಲಾಗಿದ್ದಾರೆ.

ಹೋಸ್ಟ್ನ ಬದಲಾವಣೆಯ ಕುರಿತು ಸಾಕಷ್ಟು ಸುಳಿವು ನೀಡಿದ ನಂತರ, ಜಿಯೋ ಸಿನಿಮಾ ಅಂತಿಮವಾಗಿ ಅನಿಲ್ ಕಪೂರ್ ಬಿಗ್ ಬಾಸ್ OTT, ಸೀಸನ್ 3 ರ ಹೊಸ ಹೋಸ್ಟ್ ಎಂದು ಘೋಷಿಸಿದೆ. ಒಟಿಟಿ ಪ್ಲಾಟ್ಫಾರ್ಮ್ ಅಧಿಕೃತ ಘೋಷಣೆ ಮಾಡಿದ್ದು, ಪೋಸ್ಟರ್ ಮತ್ತು ರಿಯಾಲಿಟಿ ಶೋ ಸ್ಟ್ರೀಮಿಂಗ್ ಪ್ರಾರಂಭವಾಗುವ ದಿನಾಂಕವನ್ನು ಹಂಚಿಕೊಂಡಿದೆ. ನಟ ಸಲ್ಮಾನ್ ಖಾನ್ನಿಂದ ಅನಿಲ್ ಕಪೂರ್ ಹೋಸ್ಟ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
"ಬಿಗ್ ಬಾಸ್ OTT 3 ಗಾಗಿ 'ಅನಿಲ್ ಕಪೂರ್' ಅವರನ್ನು ಹೊಸ ಹೋಸ್ಟ್ ಆಗಿ ಪ್ರಸ್ತುತಪಡಿಸುತ್ತಿದ್ದೆವೆ. ಜಿಯೋ ಸಿನಿಮಾ ಪ್ರೀಮಿಯಮ್ನಲ್ಲಿ ಜೂನ್ 21 ರಿಂದ ಪ್ರಾರಂಭವಾಗುವ ಬಿಗ್ ಬಾಸ್ ಒಟಿಟಿ 3ಯಲ್ಲಿ ಅವರ ಮ್ಯಾಜಿಕ್ಗೆ ಸಾಕ್ಷಿಯಾಗಿ" ಎಂದು ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದೆ.

ಅನಿಲ್ ಕಪೂರ್ ಕೂಡ ಬಿಗ್ ಬಾಸ್ OTT 3 ರ ನಿರೂಪಕರಾಗುವ ಬಗ್ಗೆ ಸುಳಿವು ನೀಡಿದ್ದಾರೆ. "ಬಿಗ್ ಬಾಸ್ ಒಟಿಟಿ ಹೋಸ್ಟ್ ಮಾಡುವವರು ತುಂಬಾ ಗುಡ್ ಲುಕ್ಕಿಂಗ್ ಅಂತ ಕೇಳಿ ಬರುತ್ತಿದೆ" ಎಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಒಟಿಟಿ ಮೊದಲ ಸೀಸನ್ ಅನ್ನು ಕರಣ್ ಜೋಹರ್ ಮತ್ತು ಎರಡನೆಯ ಸೀಸನ್ ಅನ್ನು ಸಲ್ಮಾನ್ ಖಾನ್ ಹೋಸ್ಟ್ ಮಾಡಿದ್ದರು.
ರಿಯಾಲಿಟಿ ಶೋ ಬಿಗ್ ಬಾಸ್ನ ಡಿಜಿಟಲ್ ಬಿಗ್ ಬಾಸ್ ಒಟಿಟಿಯ ಉದ್ಘಾಟನಾ ಸೀಸನ್ Voot ನಲ್ಲಿ ಲಭ್ಯವಿದ್ದರೆ, ಎರಡನೇ ಸೀಸನ್ JioCinema ನಲ್ಲಿ ಸ್ಟ್ರೀಮ್ ಮಾಡಿತು. ದಿವ್ಯಾ ಅಗರ್ವಾಲ್ ಬಿಗ್ ಬಾಸ್ OTT ಯ ಮೊದಲ ಸೀಸನ್ ಗೆದ್ದರು, ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ ಎರಡನೇ ಸೀಸನ್ನಲ್ಲಿ ವಿಜಯ ಸಾಧಿಸಿದ್ದರು. ಮೂರನೇ ಸೀಸನ್ಗಾಗಿ ಒಟಿಟಿ ವೀಕ್ಷಕರು ಕಾಯುತ್ತಿದ್ದಾರೆ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ












Click it and Unblock the Notifications