Bigg Boss: ಬಿಗ್ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಹನುಮಂತ, ರನ್ನರ್-ಅಪ್ ತ್ರಿವಿಕ್ರಮ್- ವಿಕ್ಕಿಪೀಡಿಯಾ ರಿಸಲ್ಟ್ ವೈರಲ್
ಬಿಗ್ಬಾಸ್ ಕನ್ನಡ ಸೀಸನ್ 11 ಮುಗಿಯಲು ಇನ್ನೂ ಎರಡರಿಂದ ಮೂರು ವಾರಗಳು ಬಾಕಿ ಇದೆ. ಅದಾಗಲೇ ವಿಕ್ಕಪೀಡಿಯಾದಲ್ಲಿ ವಿಜೇತರ ಹೆಸರು ಹಂಚಿಕೊಳ್ಳಲಾಗಿದೆ. ವಿಕ್ಕಿಪೀಡಿಯಾದಲ್ಲಿ ಹಂಚಿಕೊಳ್ಳಲಾದ ಬಿಗ್ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಹಾಗಾದರೆ ವಿಕ್ಕಿಪೀಡಿಯಾದಲ್ಲಿ ಏನಿದೆ?
ವಿಕ್ಕಿಪೀಡಿಯಾದಲ್ಲಿ ಬಿಗ್ಬಾಸ್ ಕನ್ನಡ ಸೀಸನ್ 11 ಮುಗಿಯುವ ಮುನ್ನ ವಿನ್ನರ್ ಹೆಸರು ಘೋಷಣೆ ಮಾಡಲಾಗಿದೆ. ಜೊತೆಗೆ ರನ್ನರ್-ಅಪ್ ಹೆಸರು ಕೂಡ ಘೋಷಣೆ ಮಾಡಲಾಗಿದೆ. ಸಾಮಾನ್ಯವಾಗಿ ವಿಕ್ಕಿಪೀಡಿಯಾದಲ್ಲಿ ಸಿಕ್ಕ ಮಾಹಿತಿ ನಿಖರವಾದ ಮಾಹಿತಿ ಎಂದು ಜನ ಭಾವಿಸುತ್ತಾರೆ. ಆದರೆ ಬಿಗ್ಬಾಸ್ ಕನ್ನಡ ಸೀಸನ್ 11 ಮುಗಿಯುವ ಮುನ್ನ ಈ ಮಾಹಿತಿಯನ್ನು ವಿಕ್ಕಿಪೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು ಭಾರೀ ಅನುಮಾನಗಳನ್ನು ಸೃಷ್ಟಿ ಮಾಡಿದೆ.

ಸಾಮಾನ್ಯವಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ಬಾಸ್ ಕನ್ನಡ ಸೀಸನ್ 11ರ ಎಲ್ಲಾ ಮಾಹಿತಿ ಹಾಗೂ ದೃಶ್ಯಗಳು ತಿಳಿಯುವುದು ರಾತ್ರಿ 9:30ಕ್ಕೆ ಪ್ರಸಾರವಾಗುವ ಸಂಚಿಕೆಯಲ್ಲಿ ಬಿಟ್ಟರೆ ಪ್ರೋಮೋ ಮೂಲಕ ಮಾತ್ರ ಪ್ರಸಾರವಾಗಬೇಕು. ಆದರೆ ವಿಕ್ಕಿಪೀಡಿಯಾದಲ್ಲಿ ಬಿಗ್ಬಾಸ್ ಮುಗಿಯಲು ಇನ್ನೂ ಎರಡರಿಂದ ಮೂರು ವಾರ ಬಾಕಿ ಇರುವಾಗಲೇ ಮಾಹಿತಿ ಹೇಗೆ ಹಂಚಿಕೊಳ್ಳಲಾಗಿದೆ ಎನ್ನುವ ಪ್ರಶ್ನೆ ಉದ್ಬವವಾಗಿದೆ.
ಈ ಮಾಹಿತಿ ಫೇಕ್ ಆಗಿರಬಹುದಾ? ಅಥವಾ ನಿಜಾನಾ? ಯಾವುದು ತಿಳಿಯದೇ ಬಿಗ್ಬಾಸ್ ವೀಕ್ಷಕರು ಗೊಂದಲಗೊಂಡಿದ್ದಾರೆ. ವಿಕ್ಕಿಪೀಡಿಯಾದಲ್ಲಿ ಬಿಗ್ಬಾಸ್ ಕನ್ನಡ ಸೀಸನ್ 11ರ ವಿನ್ನರ ಹನುಮಂತ ಹಾಗೂ ರನ್ನರ್ ಅಪ್ ತ್ರಿವಿಕ್ರಮ್ ಎನ್ನುವ ಮಾಹಿತಿ ನೀಡಲಾಗಿದೆ. ಇದರೊಂದಿಗೆ ಸೀಸನ್ ಆರಂಭವಾದ ದಿನಾಂಕ ಹೋಸ್ಟರ್ ಹೆಸರು, ಎಪಿಸೋಡ್ ಸಂಖ್ಯೆ ಹೀಗೆ ಎಲ್ಲಾ ಮಾಹಿತಿಯನ್ನು ನೀಡಲಾಗಿದೆ.
ಇದು ಬಿಗ್ಬಾಸ್ ತಂಡದಿಂದ ಪಡೆದ ಮಾಹಿತಿನಾ ಅಥವಾ ಇದೊಂದು ಪೇಕ್ ಅಕೌಂಟಾ? ಯಾವುದೂ ಕೂಡ ಗೊತ್ತಾಗುತ್ತಿಲ್ಲ. ಆದರೆ ವಿಕ್ಕಿಪೀಡಿಯಾ ಮಾಹಿತಿ ಬಹುತೇಕ ಬಾರಿ ಸರಿಯಾಗೇ ಇರುತ್ತಾರೆ. ಆದರೆ ಯಾವುದೇ ಮಾಹಿತಿಯನ್ನು ವಿಕ್ಕಿಪೀಡಿಯಾದಲ್ಲಿ ಖಾತರಿಯಿಂದ ಮಾತ್ರ ಹಂಚಿಕೊಳ್ಳಲಾಗುತ್ತದೆ. ಇಲ್ಲಿ ಬಿಗ್ಬಾಸ್ ಕನ್ನಡ ಸೀಸನ್ 11 ಇನ್ನೂ ಕೂಡ ಮುಗಿದಿಲ್ಲ. ವಿನ್ನರ್ ಹಾಗೂ ರನ್ನರ್ ಯಾರು ಅನ್ನೋದು ಇನ್ನೂ ಕೂಡ ಸ್ಪಷ್ಟವಾಗಿಲ್ಲ. ಹೀಗಿರುವಾಗ ಅದು ಹೇಗೆ ವಿಕ್ಕಿಪೀಡಿಯಾದಲ್ಲಿ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎನ್ನುವುದು ತಿಳಿಯದಾಗಿದೆ.
ಬಹುತೇಕರು ಇದೊಂದು ಫೇಕ್ ಇನ್ಫಾರ್ಮೇಷನ್ ಎಂದರೆ, ಇನ್ನೂ ಕೆಲವರು ಇದೇ ಫೈನಲ್ ಎಂದು ಭಾವಿಸಿದ್ದಾರೆ. ಇನ್ನೂ ಹನುಮಂತ ಕಳೆದ ದಿನ ಫಿನಾಲೆ ಟಿಕೆಟ್ ಟಾಸ್ಕ್ನಲ್ಲಿ ಗೆದ್ದಿದ್ದರು. ನಟ ಶರಣ್ ಹಾಗೂ ನಟಿ ಅದಿತಿ ಪ್ರಭುದೇವ ಅವರು ಟಿಕೆಟ್ ಟು ಫಿನಾಲೆ ಟಾಸ್ಕ್ ಗೆದ್ದ ಹನುಮಂತನಿಗೆ ಟಿಕೆಟ್ ನೀಡಿ ಶುಭ ಹಾರೈಸಿದ್ದರು. ಇದನ್ನೇ ವಿಕ್ಕಿಪೀಡಿಯಾ ತಪ್ಪಾಗಿ ಭಾವಿಸಿ ಬಿಡ್ತಾ ಎನ್ನುವ ಗೊಂದಲು ಕೂಡ ಇದೆ. ಹೀಗಾಗಿ ಯಾವುದು ಸರಿ ಯಾವುದು ತಪ್ಪು ಇದಕ್ಕೆ ಬಿಗ್ಬಾಸ್ ತಂಡವೇ ಉತ್ತರ ನೀಡಬೇಕಿದೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications