BBK-12: ನನ್ನಂತವನನ್ನ ನೋಡಿರಬಹುದು, ನನ್ನ ನೋಡಿಲ್ಲ: ಅಶ್ವಿನಿ ಗೌಡರನ್ನ ಮತ್ತೆ ಕೆಣಕಿದ ಗಿಲ್ಲಿ
ಬಿಗ್ಬಾಸ್ ಕನ್ನಡ ಸೀಸನ್-12ರಲ್ಲಿ ಆರಂಭದಿಂದಲೂ ಗಿಲ್ಲಿ ಹಾಗೂ ಅಶ್ವಿನಿ ಗೌಡ ನಡುವೆ ಹಾವು-ಮುಂಗುಸಿ ಜಗಳ ನಡೆಯುತ್ತಿರುವುದು ಗೊತ್ತೇ ಇದೆ. ಇದು ಆಗಾಗ ತಾರಕಕ್ಕೇರಿ, ಕಿಚ್ಚ ಸುದೀಪ್ ಕಡೆಯಿಂದ ಭರ್ಜರಿ ಕ್ಲಾಸ್ ಕೂಡ ಆಗಿದೆ. ಆದರೂ ಈ ಸೀಸನ್ನಲ್ಲಿ ಇವರಿಬ್ಬರ ನಡುವಿನ ಫೈಟ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡಮಟ್ಟದ ಫ್ಯಾನ್ಸ್ ಕೂಡ ಇದ್ದಾರೆ. ಇವರಿಬ್ಬರ ಗಲಾಟೆ ಮತ್ತೆ ಶುರುವಾಗಿದ್ದು, "ನೀವು ನನ್ನಂತವನನ್ನ ನೋಡಿರಬಹುದು, ಆದ್ರೆ ನನ್ನ ನೋಡಿರಲ್ಲ" ಎಂದು ಅಶ್ವಿನಿಗೌಡ ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಇತ್ತೀಚೆಗೆ ರಘು ಹಾಗೂ ಅಶ್ವಿನಿ ಅವರ ನಡುವೆ ಕಿರಿಕ್ ಆಗಿತ್ತು. ರಘು ಅವರ ಮಾತಿನಿಂದ ಅಶ್ವಿನಿ ಅವರು ಗಳಗಳನೆ ಅತ್ತಿದ್ದರು. ಅಲ್ಲದೆ ಬಿಗ್ಬಾಸ್ನಿಂದ ಹೊರಗೆ ಹೋಗ್ತೀನಿ ಅಂತ ಬೇಸರ ಹೊರಹಾಕಿದ್ದರು. ರಘು ಅವರು ಏಕವಚನದಲ್ಲಿ ಮಾತನಾಡಿದ್ರು ಎಂದು ಅಶ್ವಿನಿ ಗೌಡ ಗರಂ ಆಗಿದ್ದರು. ಇದೀಗ ಗಿಲ್ಲಿ ಮತ್ತೆ ಅಶ್ವಿನಿ ವಿರುದ್ಧ ತೊಡೆತಟ್ಟಿದ್ದಾರೆ.

ರಘು ಅಣ್ಣ ನಿಮ್ಮನ್ನ ಕರೆದ ಹಾಗೆ ಅಶ್ವಿನಿ ಅನ್ನಬೇಕಿತ್ತಾ? ಅಶ್ವಿನಿ.....ಮೇಡಂ ಎಂದು ಗಿಲ್ಲಿ ಟಾಂಗ್ ಕೊಟ್ಟಿದ್ದಾರೆ. ನಿಮ್ಮ ಇನಿಶಿಯಲ್ ಎ ಅಂತ ಇದ್ದಿದ್ರೆ ಎ ಅಶ್ವಿನಿ ಮೇಡಂ ಅಂತ ಕರೀತಿದ್ದೆ. ಗೇಟ್ ಹತ್ರ ಹೋಗಿ ನಾನು ಮನೆಗೆ ಹೋಗ್ತೀನಿ ಅಂತೀರಲ್ಲ? ಹೋಗಿ ಎಂದಿದ್ದಾರೆ. ನಾವೇನು ಬೇಡ ಅಂತ ಹಿಡಿದುಕೊಂಡಿದ್ದೀವಾ? ಎಂದು ರೋಸ್ಟ್ ಮಾಡಿದ್ದಾರೆ. ನಿನ್ನಂತವನನ್ನ ಎಷ್ಟು ಜನರನ್ನ ನೋಡಿಲ್ಲ ನಾನು? ಎಂದು ಅಶ್ವಿನಿ ಗೌಡ ಕೋಪದಿಂದ ಮಾತನಾಡಿದ್ದಾರೆ. ಆದರೆ ನೀವು ನನ್ನ ನೋಡಿರಲ್ಲ ಎಂದು ಗಿಲ್ಲಿ ಕೌಂಟರ್ ಕೊಟ್ಟಿದ್ದಾರೆ.
ರಿಷಾ-ಮಾಳು ಫೈಟ್
ಇತ್ತ ರಿಷಾ ಗೌಡ ಹಾಗೂ ಮಾಳು ನಡುವೆ ಕೂಡ ಗಲಾಟೆ ನಡೆದಿದೆ. ಮೊದಲ ದಿನದಿಂದಲೂ ಮಾಳುಗೆ ಏನ್ ಪ್ರಾಬ್ಲಂ ಅಂತ ಗೊತ್ತಿಲ್ಲ ಅಂತ ರಿಷಾ ರೇಗಿದ್ದಾರೆ. ಇದಕ್ಕೆ ನೀನೇ ದೊಡ್ಡ ಪ್ರಾಬ್ಲಂ, ನಿನ್ನ ಯಾರು ಮಾತನಾಡಿಸಿದ್ರು ಎಂದು ಮಾಳು ಗರಂ ಆಗಿದ್ದಾರೆ. ಈ ಆಟಿಟ್ಯೂಡ್ ಎಲ್ಲ ನಿನ್ನ ಮನೇಲಿ ಇಟ್ಕೋಳಿ ಎಂದು ರಿಷಾ ವಾರ್ನಿಂಗ್ ಕೊಟ್ಟಿದ್ದಾರೆ. ಮನೆ ವಿಚಾರಕ್ಕೆ ಬಂದ್ರೆ ಸರಿ ಇರಲ್ಲ, ಇದು ಲಾಸ್ಟ್ ವಾರ್ನಿಂಗ್ ಅಂತ ಮಾಳು ಮಾತಿಗೆ ಮಾತು ಬೆಳೆಸಿದ್ದಾರೆ. ಇದೇನು ನಿಮ್ಮ ಮನೇನಾ? ನೀವ್ಯಾರು ಅದನ್ನ ಹೇಳೋಕೆ? ಬೇಕಾ ನೀವ್ ಹೋಗ್ತಾ ಇರಿ? ನೀವೇನು ಲಾಸ್ಟ್ ವಾರ್ನಿಂಗ್ ಕೊಡೋದು ಎಂದು ರಿಷಾ ಮತ್ತೆ ಕೌಂಟರ್ ಕೊಟ್ಟಿದ್ದಾರೆ. ಯಾವ ಕಾರಣಕ್ಕೆ ಇವರ ನಡುವೆ ಗಲಾಟೆ ಆಯ್ತು ಎಂದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
-
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ











Click it and Unblock the Notifications