"ನಮಗೇನ್ ತೆವಲಾ..." ಬಿಗ್ಬಾಸ್ನಲ್ಲಿ ಅಶ್ವಿನಿ, ರಜತ್, ರಘು ನಡುವೆ ಟಾಕ್ವಾರ್, ಏಕೆ?
ಬಿಗ್ಬಾಸ್ ಕನ್ನಡ ಸೀಸನ್-12ರಲ್ಲಿ ಸ್ಪರ್ಧಿಗಳ ನಡುವೆ ದಿನಕ್ಕೊಂದು ಗಲಾಟೆ ನಡೆಯುತ್ತಿದೆ. ಇದೀಗ ಅಡುವೆ ವಿಚಾರವಾಗಿ ಶುರುವಾಗಿರುವ ಗಲಾಟೆ ಅತಿರೇಕಕ್ಕೆ ತಲುಪಿದೆ. ಈ ವೇಳೆ ಸ್ಪರ್ಧಿಗಳ "ನಮಗೇನ್ ತೆವಲಾ..." ಅಂತೆಲ್ಲ ಕೂಗಾಡಿಕೊಂಡಿದ್ದಾರೆ. ಅಶ್ವಿನಿ ಗೌಡ, ರಘು ಹಾಗೂ ರಜತ್ ನಡುವೆ ಈ ಗಲಾಟೆ ನಡೆದಿದ್ದು, ಮಾತಿಗೆ ಮಾತು ಬೆಳೆದಿದೆ. ಇನ್ನು ಬಿಗ್ಬಾಸ್ ಮನೆಯಲ್ಲಿ ಅಡುಗೆ ವಿಚಾರಕ್ಕೂ ಕಿರಿಕ್ ಆಗಿದೆ. ಆಗ ಸ್ಪರ್ಧಿಗಳು "ತೆವಲು" ಪದ ಬಳಕೆ ಮಾಡಿದ್ದಾರೆ.
ಆಲೂಗಡ್ಡೆಯನ್ನು ಭಾಗ ಮಾಡುವ ವಿಚಾರವಾಗಿ ಗಲಾಟೆ ಶುರುವಾಗಿದೆ. ಆಗ ನಮಗೇನು ತೆವಲಾ, ನಿಮಗೆಲ್ಲ ತಿನ್ನಿಸೋಕೆ ಎಂದು ರಘು ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅಶ್ವಿನಿ ಗೌಡ, ನಿಮಗೆ ಆಗಲ್ಲ ಅಂದ್ರೆ ಬಿಡಿ ಸರ್, ಬೇರೆಯವರು ಮಾಡ್ತಾರೆ, ನೀವು ತೆವಲು ಅಂತ ಯಾಕೆ ಹೇಳ್ತೀರಾ? ಎಂದು ಕೂಗಾಡಿದ್ದಾರೆ.

ಬಳಿಕ ಎಲ್ಲ ಸ್ಪರ್ಧಿಗಳ ನಡುವೆ ಜೋರು ಗಲಾಟೆ ನಡೆದಿದೆ. ಆಗ ರಜತ್ ಕೂಡ ನನಗೆ ಬೇಕು ಅಂದ್ರೆ ನಾನು ತಿಂತೀನಿ, ಅವರಿಗೆ ಬೇಕಾದ್ರೆ ತಿನ್ನಲಿ ಎಂದಿದ್ದಾರೆ. ನಮ್ಮ ಪಾಲನ್ನೂ ಸೇರಿಸಿ ತಿಂತಿದ್ದೀರಿ ಅಂದ್ರೆ ನಮಗೇನು ತೆವಲಾ ಈ ರೀತಿ ಅನಿಸಿಕೊಳ್ಳೋಕೆ? ಎಂದು ಅಶ್ವಿನಿ ಗೌಡಗೆ ರಜತ್ ಕೌಂಟರ್ ಕೊಟ್ಟಿದ್ದಾರೆ. ಅಸಲಿಗೆ ಯಾವ ಕಾರಣಕ್ಕೆ ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಈ ಗಲಾಟೆ ನಡೆಯಿತು ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ. ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಯಾರಿಗೆಲ್ಲ ಬೆಂಡೆತ್ತಲಿದ್ದಾರೆ ಎಂದು ವೀಕ್ಷಕರು ಕುತೂಹಲದಿಂದ ಕಾದಿದ್ದಾರೆ.
ಸುದೀಪ್ ಎದುರಲ್ಲೇ ಕಿತ್ತಾಡಿಕೊಂಡ ರಜತ್-ಧ್ರುವಂತ್
ಬಿಗ್ಬಾಸ್ ಸ್ಪರ್ಧಿಗಳಿಗೆ ಒಂದಷ್ಟು ಪ್ರಶ್ನೆಗಳು ವೀಕ್ಷಕರಿಂದ ಬಂದಿದೆ ಎಂದು ಸುದೀಪ್ ಹೇಳಿದ್ದಾರೆ. ಧ್ರುವಂತ್ಗೆ ಮನೆ ಬಿಟ್ಟು ಹೋಗುವಂತದ್ದು ಏನಾಗಿದೆ? ಎಂಬ ಪ್ರಶ್ನೆಯನ್ನು ವೀಕ್ಷಕರು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಧ್ರುವಂತ್ ನಾನು ನಿರಂತರವಾಗಿ ನನ್ನದಲ್ಲದ ತಪ್ಪಿಗೆ ಬ್ಲೇಮ್ ಮಾಡಿಸಿಕೊಳ್ಳಬೇಕಾಯ್ತು, ಅದರಿಂದ ಆಗುವ ಡ್ಯಾಮೇಜ್ ನನಗೆ ಬೇಕಾ ಅನಿಸಿತು ಎಂದಿದ್ದಾರೆ.
ಆಗ ಮಧ್ಯಪ್ರವೇಶಿಸಿದ ರಜತ್, ಇಲ್ಲಿ ಡ್ಯಾಮೇಜ್ ಮಾಡಿಕೊಳ್ಳುತ್ತಿರುವುದೇ ಧ್ರುವಂತ್ ಎಂದಿದ್ದಾರೆ. ಧ್ರುವಂತ್ ಅಸಭ್ಯವಾಗಿ ಮಾತನಾಡುವುದು, ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದಿದ್ದಾರೆ. ಇದರಿಂದ ಸಿಟ್ಟಾದ ಧ್ರುವಂತ್ ಇದು ತುಂಬಾ ತಪ್ಪಾದ ಹೇಳಿಕೆ ಎಂದಿದ್ದಾರೆ. ಈಗ ನಾನು ನೇರವಾಗಿ ಮಾತನಾಡ್ತೀನಿ ತಡ್ಕೋ ಎಂದು ರಜತ್ ಹೇಳಿದಾಗ, ಏಯ್...ನೀನು ತಡ್ಕೋ, ಇದನ್ನೆಲ್ಲ ನನ್ನತ್ರ ಮಾತನಾಡೋಕೆ ಬರಬೇಡ ನೀನು, ಎಷ್ಟರಲ್ಲಿ ಇರ್ಬೇಕೋ ಅಷ್ಟರಲ್ಲಿ ಇರು ಎಂದು ಧ್ರುವಂತ್ ಅವಾಜ್ ಹಾಕಿದ್ದಾರೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications