Ashwini Gowda: ಸುದೀಪ್ ಅಣ್ಣ ಹೆಣ್ಮಕ್ಕಳ ಕೈ ಎತ್ತುತ್ತಾರೆ ಅಂದ್ಕೊಂಡಿದ್ದೆ, ನನ್ನನ್ನ ಕೈಬಿಟ್ಟರು ಎಂದ ಅಶ್ವಿನಿ ಗೌಡ
BBK 12 Ashwini Gowda: ಈಗಗಾಲೇ ಬಿಗ್ಬಾಸ್ ಕನ್ನಡ 12 ಮುಕ್ತಾಯ ಆಗಿದ್ದು, ಗಿಲ್ಲಿ ಟ್ರೋಫಿ ಗೆದ್ದ ಸಂಭ್ರಮದಲ್ಲಿದ್ದಾರೆ. ಈ ನಡುವೆಯೇ ಎರಡನೇ ರನ್ನರ್ ಅಪ್ ಆಗಿರುವ ಅಶ್ವಿನಿ ಗೌಡ ಅವರು ಕೊಟ್ಟಿರುವ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ.
ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಆರಂಭದಲ್ಲಿ ಅಶ್ವಿನಿ ಗೌಡ ಅವರು ತಮ್ಮ ಮಾತಿನ ಮೂಲಕ ಇಡೀ ಕರ್ನಾಟಕದ ಗಮನ ಸೆಳೆದಿದ್ದರು. 'ರಾಜಮಾತೆ' ಪಾತ್ರವನ್ನು ನಿಭಾಯಿಸುವ ಮೂಲಕ ಜನಮನ್ನಣೆ ಗಳಿಸಿದ್ದರು. ಆದರೆ, ದಿನಕಳೆದಂತೆ ಅವರು ಎಲ್ಲೋ ಒಂದು ಕಳೆದುಹೋಗಿಬಿಟ್ಟರು. ಕೊನೆಯಲ್ಲಿ ಮತ್ತೆ ಗೇಮ್ಗಳಲ್ಲಿ ಉತ್ತಮವಾಗಿ ಆಡಿ ಗಮನ ಸೆಳೆದರು.

ಆದರೆ, ಫಿನಾಲೆ ವಾರದಲ್ಲಿ ಅವರು ಎರಡನೇ ರನ್ನರ್ ಅಪ್ ಆದರು. ಮೊದಲ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಆದರೆ, ಟ್ರೋಫಿ ವಿನ್ನರ್ ಪಟ್ಟ ಜನರು ನುಡಿದ ಭವಿಷ್ಯದಂತೆ ಗಿಲ್ಲಿ ನಟನಿಗೆ ದೊರೆಯಿತು. ಬಿಗ್ಬಾಸ್ ಮನೆಯಿಂದ ಹೊರಗಡೆ ಬರುತ್ತಿದ್ದಂತೆ ಗಿಲ್ಲಿ ನಟ ಅಭಿಮಾನಿಗಳ ಸಾಗರವನ್ನು ಕಂಡು ದಂಗಾದರು. ಅಷ್ಟರ ಮಟ್ಟಿಗೆ ತಮ್ಮ ಕಾಮಿಡಿ ಮೂಲಕ ಜನರ ಮನಸು ಗೆದ್ದಿದ್ದಾರೆ. ಅವರಿಗೆ ಬರೀ ಕರ್ನಾಟಕ ಮಾತ್ರ ಅಷ್ಟೇ ಅಲ್ಲದೆ, ದೇಶ ವಿದೇಶಗಳಲ್ಲೂ ಅಭಿಮಾನಿಗಳು ಇದ್ದಾರೆ ಎಂಬುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೋಗಳೇ ಸಾಕ್ಷಿ.
ಅಶ್ವಿನಿ ಗೌಡ ನಾನೇ ವಿನ್ನರ್ ಅಂದಿದ್ದೇಕೆ?: ಇನ್ನೂ ಬಿಗ್ಬಾಸ್ ಮನೆಯಿಂದ ಹೊರಗಡೆ ಬಂದ ಬಳಿಕ ಅಶ್ವಿನಿ ಅವರು ಸಂದರ್ಶನಗಳಲ್ಲಿ ನೀಡಿದ ಹೇಳಿಕೆಗಳು ಇದೀಗ ವೈರಲ್ ಆಗಿವೆ. ಅದರಲ್ಲೂ ಬಿಗ್ಬಾಸ್ ವಿನ್ನರ್ ನಾನೇ ಆಗಬೇಕಿತ್ತು ಎನ್ನುವ ಹೇಳಿಕೆ ಭಾರೀ ವೈರಲ್ ಆಗಿದೆ. ಹೌದು, ಮಾಧ್ಯಮವೊಂದರ ಬಳಿ ಮಾತನಾಡಿದ ಅವರು, "ನನಗೆ ಬಂದಿರುವ ಮಾಹಿತಿ ಪ್ರಕಾರ, ನನಗೆ ಬಂದಿರುವ ವೋಟ್ ಹಾಗೂ ಅವರಿಗೆ ಬಂದಿರುವ ವೋಟ್ಗಳನ್ನು ಹೊರಗಡೆ ಇಟ್ಟರೆ ನಾನೇ ವಿನ್ನರ್," ಎಂದು ಹೇಳಿದ್ದಾರೆ.
ಮನಸಿಗೂ, ದೈಹಿಕವಾಗಿಯೂ ಗಾಯವಾಗಿದೆ: "ಇದು ಕಾಮಿಡಿ ಶೋ ಅಲ್ಲ, ಬಿಗ್ಬಾಸ್ ವ್ಯಕ್ತಿತ್ವಗಳ ಆಟ. ಆದರೆ, ಯಾವ ಮಾನದಂಡದ ಮೇಲೆ ಒಬ್ಬರನ್ನ ಆಯ್ಕೆ ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ನನ್ನನ್ನ ನಾನು ಮನೆಗೆ ಸಮರ್ಪಿಸಿಕೊಂಡಿದ್ದೆ. ಮನಸಿಗೂ ಗಾಯವಾಗಿದೆ, ದೈಹಿಕವಾಗಿಯೂ ಗಾಯವಾಗಿದೆ. ಅದ್ಯಾವುದು ನನಗೆ ಲೆಕ್ಕಕ್ಕೆ ಬರಲಿಲ್ಲ. ಬಿಗ್ಬಾಸ್ಗೆ ಒಬ್ಬ ಟಫ್ ಕಂಟೆಂಡರ್ ಹೇಗಿರಬೇಕೋ ನಾನು ಹಾಗೇ ಇದ್ದೆ," ಎಂದು ಹೇಳಿದರು.
ಹೆಣ್ಮಕ್ಕಳ ಕೈ ಎತ್ತಲಿಲ್ಲ ಸುದೀಪ್ ಅಣ್ಣ: "ಇಲ್ಲಿಯವರೆಗೂ ಬಿಗ್ಬಾಸ್ ಮನಗೆ ಯಾವೊಬ್ಬ ಸ್ಟ್ರಾಂಗ್ ಕಂಟೆಂಡರ್ ಬಂದಿಲ್ಲ. ಇನ್ಮುಂದೆ ಬರುತ್ತಾರೆ ಅಂದ್ರೆ ನನ್ನನ್ನು ಮೀರಿಯೇ ಹೋಗಬೇಕು. ಆ ಹೆಮ್ಮೆ ನನಗಿದೆ. ಈ ಸಲ ಆದ್ರೂ ಸುದೀಪ್ ಅಣ್ಣ ಹೆಣ್ಮಕ್ಕಳ ಕೈ ಎತ್ತುತ್ತಾರೆ ಅಂತಾ ಅಂದ್ಕೊಂಡಿದ್ದೆ. ಆದರೆ, ನನ್ನನ್ನ ಕೈಬಿಡ್ತಾರೆ ಅಂತಾ ಅಂದುಕೊಂಡಿರಲಿಲ್ಲ," ಎಂದು ಹೇಳಿದರು.
"ಗಿಲ್ಲಿಯ ಆಟ, ವ್ಯಕ್ತಿತ್ವ ಮತ್ತು ಗೆಲುವಿನ ಬಗ್ಗೆ ಗೌರವವಿದೆ ಎಂದು ಅಶ್ವಿನಿ ಅವರು ಹೇಳಿದ್ದಾರೆ. ಇದೇ ವೇಳೆ "ಅವರು ಗೆದ್ದಿದ್ದಾರೆ, ಒಳ್ಳೆಯದಾಗಲಿ. ಆದರೆ, ನಿಜವಾದ ಬಡವರ ಮಕ್ಕಳು ಗೆಲ್ಲಬೇಕು ಎಂಬ ಟ್ಯಾಗ್ಲೈನ್ ನನಗೆ ಸಂಪೂರ್ಣವಾಗಿ ಸರಿ ಅನಿಸಲಿಲ್ಲ," ಎಂದು ಹೇಳಿದ್ದು, ಈ ಹೇಳಿಕೆಗಳೇ ಇದೇ ಭಾರೀ ಚರ್ಚೆಗೆ ಗ್ರಾಸವಾಗಿವೆ.
ಗಿಲ್ಲಿ ನಟ ಅವರು ಅಶ್ವಿನಿ ಆರೋಪಗಳಿಗೆ ಪ್ರತಿಕ್ರಿಯಿಸಿ, "ಮಾತಿನ ಭರದಲ್ಲಿ ಅವರು ಹಾಗೆ ಹೇಳಿರಬಹುದು" ಎಂದಷ್ಟೇ ನೀಡಿದ್ದಾರೆ. ಈಗಾಗಲೇ ಗಿಲ್ಲಿ ಅವರಿಗೆ ಪ್ರಶಸ್ತಿ ಜೊತೆ ಸಾಕಷ್ಟು ಹಣ ಸಿಕ್ಕಿದೆ. ಅವರಿಗೆ ಹುಟ್ಟೂರಲ್ಲಿ ಅದ್ಧೂರಿ ಸ್ವಾಗತ, ಮೆರವಣಿಗೆಯನ್ನು ಸಹ ಮಾಡಿದ್ದು, ಈ ವೇಲೆ ಅಭಿಮಾನಿಗಳ ಸಾಗರವೇ ಕಂಡುಬಂದಿತು. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈಗಲೂ ಸಹ ಗಿಲ್ಲಿ ನಟ ಅವರನ್ನು ಭೇಟಿ ಆಗಲು ಅಭಿಮಾನಿಗಳ ದಂಡೇ ಹರಿದುಬರುತ್ತಿದೆ.
-
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ -
ಬೆಂಗಳೂರು ಏರ್ಪೋರ್ಟ್ಗೆ ಸತತ 4ನೇ ಬಾರಿಯೂ ವಿಶ್ವದ 'ಅತ್ಯುತ್ತಮ ಏರ್ಪೋರ್ಟ್'ಪ್ರಶಸ್ತಿ -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ












Click it and Unblock the Notifications