'ನಿಖಿಲ್ ಎಲ್ಲಿದ್ದಿಯಪ್ಪಾ ಅಂತಾ ಸರ್ಗೆ ಹೇಳಿಕೊಟ್ಟಿದ್ದು ನಾನೇ': ಆ ದಿನ ವೇದಿಕೆ ಮೇಲೆ ಏನಾಯ್ತು?
ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ನಿಖಿಲ್ ಎಲ್ಲಿದ್ದಿಯಪ್ಪಾ ಎನ್ನುವ ಡೈಲಾಗ್ ಸಖತ್ ಫೇಮಸ್ ಆಗಿತ್ತು. ಕಳೆದ ಐದಾರು ವರ್ಷಗಳಿಂದ ಟ್ರೆಂಡ್ನಲ್ಲಿರುವ ನಿಖಿಲ್ ಎಲ್ಲಿದ್ದಿಯಪ್ಪಾ ಇಂದಿಗೂ ಟ್ರೋಲಿಗರ ಮೋಸ್ಟ್ ಫೇವರೇಟ್ ಡೈಲಾಗ್.
ಜಾಗ್ವಾರ್ ಸಿನಿಮಾದ ಆಡಿಯೋ ಬಿಡುಗಡೆ ವೇಳೆ ನಡೆದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ನಡುವೆ ನಡೆದ ಸಂಭಾಷಣೆಯ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.

ಕುಮಾರಸ್ವಾಮಿ ಅವರು ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಕೇಳುತ್ತಾರೆ. ಅದಕ್ಕೆ ನಿಖಿಲ್ ಕುಮಾರಸ್ವಾಮಿ, ಜನರ ಮಧ್ಯೆ, ನಿಮ್ಮನ್ನು, ತಾತನನ್ನು ಪ್ರೀತಿಸೋ ಜನರ ಮಧ್ಯೆ ಇದ್ದೇನೆ ಅಪ್ಪಾ ಎಂದು ಉತ್ತರಿಸಿರುವ ವೀಡಿಯೋ ಜಾಲತಾಣಗಳಲ್ಲಿ ಸದ್ದು ಮಾಡಿತ್ತು. ಜೊತೆಗೆ ಸಖತ್ ಟ್ರೋಲ್ ಕೂಡ ಆಗಿತ್ತು.
ಆದರೆ ಈ ನಿಖಿಲ್ ಎಲ್ಲಿದ್ದಿಯಪ್ಪಾ ಡೈಲಾಗ್ ಹುಟ್ಟು ಹಾಕಿದವರು ಯಾರು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಸಂಭಾಷಣೆಯ ಸೃಷ್ಟಿಕರ್ತರು ಯಾರು ಎಂದರೆ ಮತ್ಯಾರು ಅಲ್ಲಾ.. ನಿರೂಪಕಿ ಶಾಲಿನಿ. ಸದ್ಯ ಸುವರ್ಣ ಸೂಪರ್ ಸ್ಟಾರ್ ಶೋನಲ್ಲಿ ಮಿಂಚುತ್ತಿರುವ ನಿರೂಪಕಿ ಶಾಲಿನಿ ಇತ್ತೀಚಿನ ತಮ್ಮ ಸಂದರ್ಶನದಲ್ಲಿ ನಿಖಿಲ್ ಎಲ್ಲಿದ್ದಿಯಪ್ಪಾ ಡೈಲಾಗ್ ಹೇಗೆ ಬಂತು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.

ಕಿರಿಕ್ ಕೀರ್ತಿ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಶಾಲಿನಿ, 'ನಿಖಿಲ್ ಎಲ್ಲಿದ್ದಿಯಪ್ಪಾ ಎನ್ನುವುದನ್ನು ನಾನೇ ಸರ್ಗೆ ಹೇಳಿಕೊಟ್ಟಿದ್ದು, ನನಗೆ ಗೊತ್ತೇ ಇರಲಿಲ್ಲ ಅದು ಅಷ್ಟು ಫೇಮಸ್ ಆಗಿದೆ ಅಂತಾ. ನನ್ನ ಫ್ರೆಂಡ್ ಆ ವಿಡಿಯೋ ಕಳಿಸಿ ಇದ್ಯಾವಗಮ್ಮ ಮಾಡದೇ ನೀನು ಅಂದರು. ನಿಖಿಲ್ ಎಲ್ಲಿದ್ದಿಯಪ್ಪಾ ಹೇಳಿಕೊಟ್ಟಿದ್ದು ನಾನೇ' ಎಂದು ಶಾಲಿನಿ ಜೋರಾಗಿ ನಕ್ಕಿದ್ದಾರೆ.
ಮಾತು ಮುಂದುವರಿಸಿದ ಅವರು 'ಅದನ್ನು ಯಾಕೆ ಮಾಡಿದೆ ಅಂದರೆ, ಪ್ಲಾನ್ ಮಾಡಿ ಆಗಿದಲ್ಲ ಅದು. ನಿಖಿಲ್ ಅವರು ಜನರ ಮಧ್ಯದಲ್ಲಿ ಇರುತ್ತಾರೆ. ಅವರ ತಂದೆ ಅವರನ್ನು ಕರೆಯಬೇಕು, ಆಗ ಅವರು ವೇದಿಕೆ ಮೇಲೆ ಬರುತ್ತಾರೆ ಎಂದಿದ್ದರು. ಆ ಸಮಯಲ್ಲಿ ವೇದಿಕೆ ಮೇಲೆ ಒಂದು ರಾಶಿ ಜನ ಇದ್ದರು. ಆಗ ತುಂಬಾ ಗೊಂದಲ ಆಗುತ್ತಿತ್ತು.. ಸರ್ ನಿಖಿಲ್ ಅವರನ್ನು ಕರೆಯಲು ಕ್ಯೂ ಕೊಡಲೇ ಇಲ್ಲ. ಕೊನೆಗೆ ನಾನೇ ಸರ್ಗೆ ನಿಖಿಲ್ ಎಲ್ಲಿದ್ದಿಯಪ್ಪಾ ಅನ್ನಿ ಸರ್ ಅಂದೆ ಅವರು ಹಾಗೆಯೇ ಕರೆದು ಬಿಟ್ಟರು. ನಾಲ್ಕು ಗಂಟೆ ಶೋ ಅದು. ನಾಲ್ಕು ಗಂಟೆ ಶೋನಲ್ಲಿ ಆ ಒಂದು ತುಣುಕನ್ನು ತೆಗೆದು ಟ್ರೆಂಡ್ ಮಾಡಿದವರನ್ನು ನಾನು ಒಮ್ಮೆ ಭೇಟಿ ಮಾಡಬೇಕು' ಎಂದು ಶಾಲಿನಿ ಹೇಳಿದ್ದಾರೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ












Click it and Unblock the Notifications