ಹೀರೋಯಿನ್ಗಳು ಬೆಳ್ಳಗೆ ಕಾಣಲು ಇಂಜೆಕ್ಷನ್ ಬಳಸುತ್ತಾರಾ? ಶಾಕಿಂಗ್ ಸತ್ಯ ಹೇಳಿದ ನಟಿ
ಸಾಮಾನ್ಯವಾಗಿ ಸುಂದರವಾಗಿರುವವರೇ ಹೆಚ್ಚಾಗಿ ಹೀರೋಯಿನ್ಗಳಾಗುತ್ತಾರೆ, ಅಂದಗಾತಿಗಳಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗುತ್ತೆ ಎಂಬ ಮಾತಿದೆ. ಇದೇ ಕಾರಣಕ್ಕೆ ಕೆಲ ನಟಿಯರು ಏನೇನೋ ಟ್ರೀಟ್ಮೆಂಟ್ಗಳನ್ನು ಕೂಡ ತೆಗೆದುಕೊಳ್ಳುತ್ತಾರೆ. ಮುಖ್ಯವಾಗಿ ಬೆಳ್ಳಗೆ ಹೊಳೆಯಲು, ಸುಂದರವಾಗಿ ಕಾಣಲು ದುಬಾರಿ ಚಿಕಿತ್ಸೆಗಳಿಗೆ ಒಳಗಾಗುತ್ತಾರೆ, ಇಂಜೆಕ್ಷನ್ಗಳನ್ನು ಬಳಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ನಿಜಕ್ಕೂ ನಟಿಯರು ಅಂದ ಹೆಚ್ಚಿಸಿಕೊಳ್ಳಲು ಏನೆಲ್ಲ ಮಾಡ್ತಾರೆ ಎಂಬ ಶಾಕಿಂಗ್ ಸತ್ಯಗಳನ್ನು ಖ್ಯಾತ ನಟಿ ತೃಪ್ತಿ ಸಾಹು (Tripti Sahu) ಇತ್ತೀಚಿನ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ನಟಿ ತ್ರಿಪ್ತಿ ಸಾಹು ಅವರು "ಪಂಚಾಯತ್" ವೆಬ್ ಸಿರೀಸ್ನ ಖುಷ್ಬು ಪಾತ್ರದಿಂದ ಜನಪ್ರಿಯರಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಟಿವಿ ಹಾಗೂ ಚಲನಚಿತ್ರ ಲೋಕದಲ್ಲಿ ಬೇರುಬಿಟ್ಟಿರುವ ಕರಾಳ ಉದ್ಯಮದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮುಖ್ಯವಾಗಿ ನಟಿಯರನ್ನು ಚರ್ಮ ಬೆಳ್ಳಗೆ ಹೊಳೆಯುವಂತೆ ಮಾಡುವ ದಂಧೆ ಬಗ್ಗೆಯೂ ಮಾತನಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಟಿಯರು ಇದ್ದಕ್ಕಿದ್ದಂತೆ ಬಿಳಿಯಾಗಿ ಕಾಣಲು ಕಾರಣವೇನು? ಎಂಬುದನ್ನೂ ವಿವರಿಸಿದ್ದಾರೆ.

"ಅನೇಕ ಜನರು ನನ್ನ ಚರ್ಮ ಬೆಳ್ಳಗಾಗಲು ಏನೇನೋ ಶಿಫಾರಸು ಮಾಡಿದರು. 2018ರಲ್ಲಿ ನನಗೆ ತಿಳಿದಿರುವ ಒಬ್ಬ ವ್ಯಕ್ತಿ, 'ಈ ಇಂಜೆಕ್ಷನ್ ಅನ್ನು ನನ್ನಿಂದ ತೆಗೆದುಕೊಳ್ಳಿ, ನಾನು ಇದನ್ನು 25 ಸಾವಿರ ಜನರಿಗೆ ನೀಡುತ್ತಿದ್ದೇನೆ. ನಿಮಗೆ ಇದರಿಂದ ಯಾವುದೇ ಮೋಸ ಆಗುವುದಿಲ್ಲ ಎಂದಿದ್ದರು. ನಾನು ಬಿಳಿಯಾಗಲು ಏಕೆ ಬಯಸುತ್ತೇನೆ? ನನಗೆ ಅದು ಬೇಡ ಎಂದಿದ್ದೆ. ಅದಕ್ಕೆ ಅವರು ಈಗ ಎಲ್ಲ ಹುಡುಗಿಯರು ಈ ಇಂಜೆಕ್ಷನ್ಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದ್ದರು. ಆದರೂ ನನಗೆ ಅದು ಬೇಡ ಎಂದು ನಿರಾಕರಿಸಿದ್ದೆ ಎಂದಿದ್ದಾರೆ.
ಮೂಗಿನ ಆಕಾರ ಬದಲಾಯಿಸಿಕೊಳ್ತಾರೆ!
ನಾನು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದೇನೆ. ಅಲ್ಲಿನ ಸಹ-ನಟಿಯೊಬ್ಬರು ಕೂಡ ವೈದ್ಯರು ಅವಳಿಗೆ ಚರ್ಮದ ಬಣ್ಣ ಬದಲಾಗುವ ಔಷಧಿ ನೀಡಿದ್ದಾರೆ ಎಂದು ಹೇಳಿದ್ದರು. ಟಿವಿ ಉದ್ಯಮದಲ್ಲಿಯೂ ಸಹ ಚೆನ್ನಾಗಿ ಕಾಣಿಸಿದರೆ ಮಾತ್ರ ಅವಕಾಶ ಸಿಗುತ್ತದೆ ಎಂಬ ಮನಸ್ಥಿತಿ ಜನರಿಗಿದೆ. ಆದ್ದರಿಂದ ಚಿಕಿತ್ಸೆಗೆ ಒಳಗಾಗುವ ಜನರು ಹೆಚ್ಚಾಗಿದ್ದಾರೆ. ಅಲ್ಲಿ ನಟಿಯರು ತಮ್ಮ ಚರ್ಮದ ಬಣ್ಣವನ್ನು ಬದಲಾಯಿಸುತ್ತಾರೆ, ಮೂಗಿನ ಆಕಾರವನ್ನು ಬದಲಾಯಿಸುತ್ತಾರೆ ಎಂದು ನಟಿ ತೃಪ್ತಿ ಸಾಹು ರಿವೀಲ್ ಮಾಡಿದ್ದಾರೆ.
ಟಿವಿ ಸ್ಟಾರ್ಗಳು ತಮಗೆ ಹೆಚ್ಚಾಗಿ ಅವಕಾಶ ಸಿಗಲಿ ಎಂದು ಬಿಳಿ ಚರ್ಮ ಪಡೆಯಲು ಬಯಸುವುದು ಸಾಮಾನ್ಯ. ಇದಕ್ಕಾಗಿ ಕೆಲವರು ಇಂಜೆಕ್ಷನ್ ಹಾಗೂ ಇನ್ನಿತರೆ ಚಿಕಿತ್ಸೆಗಳನ್ನು ಕೂಡ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ. ತ್ರಿಪ್ತಿ ಸಾಹು ಅವರ ಈ ಹೇಳಿಕೆ ಬಣ್ಣದ ಲೋಕದಲ್ಲಿ ಬೆಳ್ಳಗೆ ಕಾಣಲು ಅನುಸರಿಸುವ ಚಿಕಿತ್ಸೆಗಳ ಗಂಭೀರ ಸಮಸ್ಯೆ ಮತ್ತು ಒತ್ತಡವನ್ನು ಬಹಿರಂಗಪಡಿಸುತ್ತದೆ. ಜೊತೆಗೆ ಎಲ್ಲರೂ ತಮ್ಮ ನೈಜ ರೂಪವನ್ನೇ ಒಪ್ಪಿಕೊಳ್ಳಬೇಕು ಎಂಬ ಸಂದೇಶವನ್ನೂ ನಟಿ ನೀಡಿದ್ದಾರೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications