'ಕೆಲವೊಂದು ಸಲ ಎಲ್ಲಾ ನಮ್ಮ ಕಂಟ್ರೋಲ್ ತಪ್ಪಿ ಹೋಗುತ್ತಲ್ಲ': Metoo ಬಗ್ಗೆ ಮಾತನಾಡಿದ ಶ್ರುತಿ ಹರಿಹರನ್
ದಕ್ಷಿಣದ ಖ್ಯಾತ ನಟ ಅರ್ಜುನ್ ಸರ್ಜಾ ಮೇಲೆ ನಟಿ ಶ್ರುತಿ ಹರಿಹರನ್ ಮೀಟೂ (Metoo) ಆರೋಪ ಮಾಡಿದ್ದರು. ಈ ಪ್ರಕರಣ ಕನ್ನಡ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿತ್ತು. ಪ್ರಕರಣ ನಡೆದು ಹಲವು ವರ್ಷಗಳಾಗಿದ್ದು, ಇದೀಗ ನಟಿ ಶ್ರುತಿ ಹರಿಹರನ್ ಆ ಸಮಯದಲ್ಲಿ ಏನಾಯ್ತು..ಘಟನೆಯಿಂದ ಏನು ಬದಲಾಯಿತು ಎನ್ನುವುದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ರ್ಯಾಪಿಡ್ ರಶ್ಮಿ ಸಂದರ್ಶನದಲ್ಲಿ ಮಾತನಾಡಿರುವ ನಟಿ ಶ್ರುತಿ ಹರಿಹರನ್, ಮೀಟೂನಲ್ಲಿ ನನ್ನ ಕಥೆಯನ್ನು ಹೇಳೋದಕ್ಕೆ ನನಗೆ ಧೈರ್ಯ ಇತ್ತು ಎಂದು ಹೇಳಲು ನನಗೆ ಬಹಳ ಹೆಮ್ಮೆ ಇದೆ. ಗೌರವ ಇದೆ. ಅದನ್ನು ನಾನು ಯಾರಿಗೂ ಸಾಬೀತು ಪಡಿಸುವ ಅವಶ್ಯಕತೆ ಇಲ್ಲ. ಅದನ್ನು ಸಮರ್ಥನೆ ಮಾಡುವ ಅವಶ್ಯಕತೆ ಇಲ್ಲ. ಮೀಟೂ ನಮಗೆ ಏನು ಬೇಕೋ ಅದನ್ನು ಹೇಳಿಕೊಳ್ಳುವ ವೇದಿಕೆ. ನಮ್ಮ ನಿಜ, ನಮ್ಮ ಅನಿಸಿಕೆಗಳನ್ನು ನಾವು ಹೇಳಿಕೊಳ್ಳುತ್ತೇವೆ. ಇದು ಅದೇ ರೀತಿಯ ಅಭಿಯಾನವಾಗಿತ್ತು ಎಂದರು.

ನನ್ನ ಪ್ರಕಾರ ಈ ವೇದಿಕೆ ಮುಖ್ಯವಾಗಿದ್ದು ಕೂಡ. ಯಾಕೆಂದರೆ ಒಬ್ಬರಿಗೆ ತಪ್ಪು ಮಾಡಿದ್ದಾರೆ ಅಂತಾ ನಾವು ಹೇಳಲಿಲ್ಲ ಅಂದರೆ ಅದನ್ನು ಬದಿಗಿಡುತ್ತಾರೆ. ಆದರೆ ಅದನ್ನು ಸಾರ್ವಜನಿಕವಾಗಿ ಹೇಳುವುದು ಇದೆಯಲ್ಲಾ. ಅದರಲ್ಲೂ ಇಬ್ಬರೂ ಜನರಿಗೆ ಗೊತ್ತಿರುವವರಾದಾಗ ಎಲ್ಲಾ ಬದಲಾಗುತ್ತದೆ. ಚಿತ್ರರಂಗದಲ್ಲಿಯೂ ಅದೇ ಆಯ್ತು.
ಮೀಟೂ ಅಭಿಯಾನ ಚಿತ್ರರಂಗಕ್ಕೆ ಬಂದಾಗ ಚಿಕ್ಕ ಚಿಕ್ಕ ಸಣ್ಣ ಸಣ್ಣ ಕಥೆಗಳು ಕೂಡ ದೊಡ್ಡದಾಯಿತು. ನಾನು ಹಿಂತಿರುಗಿ ನೋಡಿದಾಗ ನನಗೆ ಅನಿಸೋದು ಇದನ್ನು ಸ್ವಲ್ಪ ಬೇರೆ ರೀತಿಯಾಗಿ ಹ್ಯಾಂಡಲ್ ಮಾಡಬಹುದಿತ್ತಾ ಅಂತಾ. ಯಾಕೆಂದರೆ ಕೆಲವೊಂದು ಸಲ ನಮ್ಮ ಕೈಯಿಂದ ಕಂಟ್ರೋಲ್ ತಪ್ಪಿ ಹೋಗುತ್ತಲ್ಲ. ಅಂದ್ರೆ ಏನು ಆಗುತ್ತಿದ್ದೆ ಅಂತಾನೂ ಗೊತ್ತಾಗಲ್ಲ ಹಾಗಾಗುತ್ತದೆ ಎಂದು ಹೇಳಿದರು.
ನಾನು ಹೇಳಿಕೊಂಡ ಸಮಯದಲ್ಲೂ ಕೂಡ ಕೆಲವರು ಕನ್ನಡ ಚಿತ್ರರಂಗ ಸೇಫ್ ಅಂದುಕೊಳ್ಳುತ್ತಿದ್ದರು. ಆದರೆ ಇದು ಚಿತ್ರರಂಗದ ವಿಚಾರ ಅಲ್ಲ..ವೈಯಕ್ತಿಕ ವಿಚಾರ. ಅದೊಂದು ದೊಡ್ಡ ಕಥೆ. ಆದರೆ ಕೊನೆಯಲ್ಲಿ ಹಿಂದೆ ತಿರುಗಿ ನೋಡಿದಾಗ ನನ್ನ ಮೇಲೆ ನನಗೆ ಹೆಮ್ಮೆ ಇದೆ. ನಾನು ಇದನ್ನು ಮಾಡಿರಲಿಲ್ಲ ಒಂದು ರೀತಿಯ ಬದಲಾವಣೆ ಆಗುತ್ತಿರಲಿಲ್ಲ. ಅಂದರೆ ಇವತ್ತು ನಮ್ಮ ಚಿತ್ರರಂಗದಲ್ಲಿ ಆದ ಬದಲಾವಣೆಯನ್ನು ಖಂಡಿತಾ ನಾನು ನೋಡುತ್ತಿದ್ದೇನೆ.

ತುಂಬಾ ಜನ ನಟಿಯರ ಜೊತೆ ಇದರ ಬಗ್ಗೆ ಮಾತನಾಡಿದ್ದೀನಿ. ಏನು ಬದಲಾವಣೆ ಆಗಿದೆ ಅಂದರೆ ಕೆಲವರು ಹೆಣ್ಣು ಮಕ್ಕಳ ಜೊತೆ ವರ್ತಿಸುವ ಮೊದಲು ಯೋಚನೆ ಮಾಡುತ್ತಾರೆ. ಮೀಟೂ ಅಂತಾ ತಮಾಷೆ ಮಾಡಿಕೊಂಡು ಹೋದರು ಸರಿ.. ಆದರೆ ಇದು ಸರಿನಾ ಎನ್ನುವ ಆ ಚಿಕ್ಕ ಹೆದರಿಕೆ ಇದೆಯಲ್ಲಾ ಅದು ಬಹಳ ಮುಖ್ಯ. ಇದು ಒಂದು ಬದಲಾವಣೆಯ ಆರಂಭ. ಈಗ ಯಾವುದೇ ಭಯ ಇಲ್ಲ. ಸತ್ಯ ಹೇಳಲು ಯಾಕೆ ಹೆದರಬೇಕು. ನಿನ್ನ ಸತ್ಯ ಹೇಳಿಕೊಳ್ಳಲು ನಿನಗೆ ಯಾಕೆ ಹೆದರಿಕೆ' ಎಂದು ಕೇಳಿದ್ದಾರೆ.
-
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ












Click it and Unblock the Notifications