Vasishta Simha: ಕನ್ನಡ ವೀರರ ಬಗ್ಗೆ ಪಠ್ಯಪುಸ್ತಕದಲ್ಲೇ ಹೆಚ್ಚಿನ ಪರಿಚಯ ಆಗಿಲ್ಲ: ನಟ ವಸಿಷ್ಠ ಸಿಂಹ
ನಟ ವಸಿಷ್ಠ ಸಿಂಹ ಅವರು ಕನ್ನಡ ರಾಜ್ಯೋತ್ಸವದ ಈ ಸುಸಂದರ್ಭದಲ್ಲಿ ಗಂಭೀರವಾದ ಪ್ರಶ್ನೆಯೊಂದನ್ನು ಎತ್ತಿದ್ದಾರೆ. ನಮಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಚಿಕ್ಕಂದಿನಿಂದಲೂ ಪುಸ್ತಕಗಳಲ್ಲಿ ಓದಿರುವ ಕಾರಣ ಅವರ ಮೇಲೆ ಅಭಿಮಾನ ಹುಟ್ಟಿಕೊಂಡಿದೆ. ಆದರೆ ಕನ್ನಡಕ್ಕಾಗಿ ಹೋರಾಡಿದ ಇಮ್ಮಡಿ ಪುಲಿಕೇಶಿ ಅವರಂತಹ ವೀರರ ಬಗ್ಗೆ ನಮ್ಮ ಪಠ್ಯಪುಸ್ತಕಗಳಲ್ಲಿ ಹೆಚ್ಚಿನ ಪರಿಚಯ ಇಲ್ಲ. ಕನ್ನಡವನ್ನು ಶ್ರೀಮಂತಗೊಳಿಸಿದವರ ಬಗ್ಗೆಯೂ ನಮ್ಮ ಮಕ್ಕಳು ತಿಳಿದುಕೊಳ್ಳಬೇಕು ಎಂದು ಧ್ವನಿ ಎತ್ತಿದ್ದಾರೆ.
ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು. ನಮ್ಮಲ್ಲಿ ಯಾವಾಗ ಶಾಲಾ ಶಿಕ್ಷಣ ವ್ಯವಸ್ಥೆ ಅಂತ ಬಂದಾಗಿನಿಂದಲೂ ಕೆಲವರ ಆಸಕ್ತಿ ಮೇರೆಗೆ, ಸಿದ್ಧಾಂತಗಳ ಓಲೈಕೆಗಾಗಿ ಅಥವಾ ಕೆಲವರನ್ನು ಮೆಚ್ಚಿಸಿಕೊಳ್ಳಲು ಆದಂತಹ ಹೇರಿಕೆ ಎಂದು ವಸಿಷ್ಠ ಸಿಂಹ ಖಂಡಿಸಿದ್ದಾರೆ. ನಾನು ಕನ್ನಡ ಮಾಧ್ಯಮದಲ್ಲೇ ಓದಿದ್ರೂ, ಕನ್ನಡ ಪಠ್ಯಪುಸ್ತಕ ಅಥವಾ ಚರಿತ್ರೆ ಪುಸ್ತಕದಲ್ಲೂ ಇಮ್ಮಡಿ ಪುಲಿಕೇಶಿ ಅವರಂತಹ ರಾಜರ ಬಗ್ಗೆ ನಾನು ಓದಿಲ್ಲ. ನನ್ನ ತಂದೆಯವರೂ ಓದಿಲ್ಲ ಎಂದಿದ್ದಾರೆ.

ಇಮ್ಮಡಿ ಪುಲಿಕೇಶಿ ಅವರಂತಹ ನಾಯಕರು ಕುರಿತು ಪಠ್ಯಪುಸ್ತಕದಲ್ಲಿ ಇಲ್ಲ. ಇದು ನನ್ನ ಪೀಳಿಗೆಯ ಪಠ್ಯದಲ್ಲೂ ಇರಲಿಲ್ಲ, ನನ್ನ ಹಿಂದಿನ ಜನರೇಷನ್ ಪುಸ್ತಕದಲ್ಲೂ ಇರಲಿಲ್ಲ. ಈಗ ಒಂದು ಸಿನಿಮಾ ನೋಡಬೇಕಾದರೆ ಒಂದು ಪಾತ್ರ ನೋಡಿದಾಗ ಅದರ ವೀರಾವೇಷಗಳು ನನಗೆ ಇಷ್ಟವಾಗುತ್ತೆ. ಆದರೆ ಸಿನಿಮಾನೇ ನೋಡಲ್ಲ ಅಂದ ಮೇಲೆ ಅವರ ಮೇಲೆ ಅಭಿಮಾನ ಅನ್ನೋದು ಹೇಗೆ ಹುಟ್ಟುತ್ತೆ? ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ.
ಇದಕ್ಕೇ ಅಭಿಮಾನ ಹುಟ್ಟಿಲ್ಲ
ಒಬ್ಬ ನಿಜವಾದ ನಾಯಕರ ಬಗ್ಗೆ ಓದಿದಾಗ ಅಭಿಮಾನ ಹುಟ್ಟುತ್ತೆ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಮಗೆಲ್ಲ ಗೊತ್ತಿದೆ. ಯಾಕಂದ್ರೆ ನಾವೆಲ್ಲ ಅವರ ಬಗ್ಗೆ ಓದಿದ್ದೀವಿ. ಚಿಕ್ಕವಯಸ್ಸಲ್ಲೇ ಅವರ ವಿಚಾರಗಳು ನಮ್ಮ ತಲೆಗೆ ಹೋಗಿದೆ. ಹಾಗಾಗಿ ಅಭಿಮಾನ ಬೆಳೆದಿದೆ. ಆದರೆ ಕನ್ನಡ ಕಲಿಗಳ ಬಗ್ಗೆ ಯಾಕೆ ಗೌರವ, ಪ್ರೀತಿ, ಅಭಿಮಾನ ಬಂದಿಲ್ಲ? ಅಂದ್ರೆ, ಆ ವಿಚಾರಗಳೇ ನಮಗೆ ತಿಳಿಸಲಿಲ್ಲ. ನಮಗೆ ಯಾರೋ ತುಂಬಾ ಚೆನ್ನಾಗಿ ಕನ್ನಡ ಚರಿತ್ರೆ ಓದಿದವರಿಗೆ ಮಾತ್ರವೇ ಇಂತಹ ವಿಚಾರಗಳು ಗೊತ್ತಿದೆ. ಬಾಕಿ ಬೇರೆಯವರಿಗೆ ಅಷ್ಟಾಗಿ ಗೊತ್ತೇ ಇಲ್ಲ ಎಂದಿದ್ದಾರೆ.
ನಮ್ಮ ಕನ್ನಡದ ಕೆಲಸದಲ್ಲಿ ಮೊದಲು ಆಗಬೇಕಿರುವುದು ಕರ್ನಾಟಕದಲ್ಲಿ, ಕನ್ನಡ ಪುಸ್ತಕಗಳಲ್ಲಿ ಮಕ್ಕಳಿಗೆ ನಮ್ಮ ಕನ್ನಡ ಕಲಿಗಳ ಪರಿಚಯ ಆಗಬೇಕು. ಕನ್ನಡದ ವೀರರು, ಕನ್ನಡಕ್ಕೋಸ್ಕರ ಪ್ರಾಣ ತೆತ್ತವರು, ಕನ್ನಡವನ್ನು ಶ್ರೀಮಂತಗೊಳಿಸಿದವರ ಬಗ್ಗೆಯೂ ನಮ್ಮ ಮಕ್ಕಳು ತಿಳಿದುಕೊಳ್ಳಬೇಕು. ಇದು ನಮ್ಮೆಲ್ಲರ ಧ್ವನಿಯಾಗಬೇಕು ಎಂದು ವಸಿಷ್ಠ ಸಿಂಹ ಕರೆ ನೀಡಿದ್ದಾರೆ.
-
Vijay Sethupathi: ರಿಷಬ್ ಶೆಟ್ಟಿ ಜೊತೆ ನಟಿಸುವ ದೊಡ್ಡ ಆಸೆ ನನಗಿದೆ: ಆಸೆ ಬಿಚ್ಚಿಟ್ಟ ನಟ ವಿಜಯ್ ಸೇತುಪತಿ -
Aditya Dhar: ರಣವೀರ್ ಸಿಂಗ್ ಹಿಂದಿಕ್ಕಿ IMDb ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ 'ಧುರಂಧರ್ 2' ನಿರ್ದೇಶಕ ಆದಿತ್ಯ ಧರ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು












Click it and Unblock the Notifications